ಅತ್ತಿಗೆ ಜೊತೆ ಅಕ್ರಮ ಸಂಬಂಧದ ಸಂಶಯ: ಅಣ್ಣನಿಂದಲೇ ತಮ್ಮನ ಕೊಲೆ
ಹಾಸನ

ಅತ್ತಿಗೆ ಜೊತೆ ಅಕ್ರಮ ಸಂಬಂಧದ ಸಂಶಯ: ಅಣ್ಣನಿಂದಲೇ ತಮ್ಮನ ಕೊಲೆ

December 9, 2018

ಹಾಸನ: ತನ್ನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಂಶಯದ ಹಿನ್ನೆಲೆ ಅಣ್ಣನೇ ತಮ್ಮನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಜಯಂತಿ ನಗರದಲ್ಲಿ ನಡೆದಿದೆ.

ರಘು ಕೊಲೆಯಾದ ಸೋದರ. ಆತನ ಅಣ್ಣ ಜಯಣ್ಣ ದೊಣ್ಣೆಯಿಂದ ರಘು ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಜಯಣ್ಣನ ಪತ್ನಿ ಜೊತೆ ರಘು ಅಕ್ರಮ ಸಂಬಂಧ ಹೊಂದಿದ್ದ ಎಂದು ಅನುಮಾನಗೊಂಡು ತಮ್ಮನೊಂದಿಗೆ ಜಗಳಕ್ಕಿಳಿದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಜಯಣ್ಣ, ದೊಣ್ಣೆಯಿಂದ ರಘು ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ರಘುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಆರೋಪಿ ಜಯಣ್ಣನನ್ನು ವಶಕ್ಕೆ ಪಡೆದಿರುವ ಆಲೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

Translate »