2 ವರ್ಷಗಳಿಂದ ರಥೋತ್ಸವ ಸ್ಥಗಿತ ರಥ ನಿರ್ಮಾಣ ಕಾಮಗಾರಿ ವಿಳಂಭಕ್ಕೆ ಆಕ್ರೋಶ ಚಾಮರಾಜನಗರ: ಶ್ರೀ ಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥೋ ತ್ಸವದ ಕಾಮಗಾರಿಯನ್ನು ತಕ್ಷಣ ಪ್ರಾರಂ ಭಿಸಬೇಕು ಎಂದು ಒತ್ತಾಯಿಸಿ ನಾಗರಿ ಕರು, ಭಕ್ತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಶ್ರೀ ಚಾಮರಾಜೇಶ್ವರಸ್ವಾಮಿ ಸೇವಾ ಸಮಿ ತಿಯ ಆಶ್ರಯದಲ್ಲಿ ದೇವಸ್ಥಾನದ ಮುಂಭಾಗ ನೂರಾರು ಜನರು ಜಮಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಸಚಿ ವರು, ಜಿಲ್ಲಾಡಳಿತ,…
ತಮಿಳುನಾಡಿನ ದಿಂಬಂ ಬಳಿ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್
October 7, 2018ಚಾಮರಾಜನಗರ: – ತಮಿಳುನಾಡಿನ ದಿಂಬಂ ಬಳಿ ಖಾಸಗಿ ಬಸ್ವೊಂದು ಪ್ರಪಾತಕ್ಕೆ ಬಿದ್ದು, ಇಬ್ಬರು ಸ್ಥಳ ದಲ್ಲಿಯೇ ಸಾವನ್ನಪ್ಪಿ, 21 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತಮಿಳುನಾಡಿನ ಈರೋಡ್ನ ಗುರುಸ್ವಾಮಿ(56), ಮುತ್ತು(65) ಮೃತಪಟ್ಟವರು. ಘಟನೆಯ ವಿವರ: ಮೈಸೂರಿನಿಂದ ಮಧ್ಯಾಹ್ನ 3:30ಕ್ಕೆ ಸುಮಾರಿಗೆ ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಈರೋಡ್ಗೆ ತೆರಳುತ್ತಿದ್ದ ಖಾಸಗಿ ಬಸ್(ಆರ್ಪಿಎನ್) ಶುಕ್ರವಾರ ರಾತ್ರಿ 8.30ರ ಸಮಯದಲ್ಲಿ ತಮಿಳುನಾಡಿನ ದಿಂಬಂ ಬಳಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 80 ರಿಂದ 100 ಅಡಿಗಳ ಆಳದಷ್ಟು…
ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರರಿಬ್ಬರ ದುರ್ಮರಣ
October 6, 2018ಚಾಮರಾಜನಗರ: ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿ ಬ್ಬರು ದಾರುಣವಾಗಿ ಸ್ಥಳದಲ್ಲೇ ಸಾವನ್ನ ಪ್ಪಿದ ಘಟನೆ ಇಂದು ರಾತ್ರಿ ತಾಲೂಕಿನ ಬೆಂಡರವಾಡಿ ಗ್ರಾಮದ ಬಳಿ ನಡೆದಿದೆ. ಚಾಮರಾಜನಗರ ಪಟ್ಟಣ ಅಂಬೇ ಡ್ಕರ್ ಬಡಾವಣೆ ನಿವಾಸಿಗಳಾದ ರಾಜೇಂದ್ರ (28) ಹಾಗೂ ಇದೇ ಬಡಾವಣೆಯ ನಿವಾಸಿಯಾಗಿದ್ದು, ಹಾಲಿ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ವಾಸವಿದ್ದ ಪುನೀತ್ (27) ಮೃತಪಟ್ಟ ಬೈಕ್ ಸವಾರರು. ಪುನೀತ್ ಹಾಗೂ ರಾಜೇಂದ್ರ ಅವರು ಇಂದು ಬೆಳಿಗ್ಗೆ ತಮ್ಮ ಪಲ್ಸರ್ ಬೈಕ್ (ಕೆಎ.10 ಎಕ್ಸ್.8629)ನಲ್ಲಿ…
ಸಾಗುವಳಿ ಜಮೀನು ಬಿಟ್ಟುಕೊಡುವಂತೆ ಒತ್ತಡ: ಒಂದೇ ಕುಟುಂಬದ ಮೂವರಿಂದ ಆತ್ಮಹತ್ಯೆಗೆ ಯತ್ನಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
October 6, 2018ಚಾಮರಾಜನಗರ: ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ಬಿಟ್ಟುಕೊಡು ವಂತೆ ಒತ್ತಡ ಹೇರುತ್ತಿರುವುದರಿಂದ ಬೇಸತ್ತು ಒಂದೇ ಕುಟುಂಬದ ಮೂವರು ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ನಗರದ ಜಿಲ್ಲಾಡ ಳಿತ ಭವನದ ಮುಂಭಾಗ ಶುಕ್ರವಾರ ನಡೆಯಿತು. ಚಾಮರಾಜನಗರ ತಾಲೂಕಿನ ಬೇಡರ ಪುರ ಗ್ರಾಮದ ಮಲ್ಲಯ್ಯ, ಅವರ ಪತ್ನಿ ದೊಡ್ಡಮ್ಮ, ಮಗ ಎಂ.ಕುಮಾರ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಸಂಭವಿಸಬಹು ದಾದ ದೊಡ್ಡ ದುರಂತವೊಂದು ತಪ್ಪಿತು. ಘಟನೆ ವಿವರ: ಬೇಡರಪುರ ಗ್ರಾಮದ ಬಳಿ…
ಇಂದು ರಥ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ
October 6, 2018ಚಾಮರಾಜನಗರ: ನಗರದ ಶ್ರೀ ಚಾಮ ರಾಜೇಶ್ವರಸ್ವಾಮಿ ಸೇವಾ ಸಮಿತಿಯ ಶ್ರೀ ಚಾಮ ರಾಜೇಶ್ವರಸ್ವಾಮಿ ಬ್ರಹ್ಮ ರಥೋತ್ಸವದ ಕಾಮಗಾರಿ ಯನ್ನು ತಕ್ಷಣ ಪ್ರಾರಂಭಿಸುವಂತೆ ಒತ್ತಾಯಿಸಿ ನಾಳೆ (ಅ.6) ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ರವರೆಗೂ ಜಿಲ್ಲಾಡಳಿತ ಮತ್ತು ಮುಜಾರಾಯಿ ಇಲಾಖೆಯ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಭಕ್ತರು ಆಗಮಿಸುವಂತೆ ಸಮಿತಿ ಕೋರಿದೆ.
ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಹೆಸರು ನೋಂದಣಿ
October 6, 2018ಚಾಮರಾಜನಗರ: ಭಾರತೀಯ ಸೇನೆಗೆ ಸೋಲ್ಜರ್ ಜಿಡಿ, ಸೋಲ್ಜರ್ ಟೆಕ್, ಸೋಲ್ಜರ್ ನರ್ಸಿಂಗ್, ಸೋಲ್ಜರ್ ಅಸಿಸ್ಟೆಂಟ್, ಸೋಲ್ಜರ್ ಟ್ರೇಡ್ಸ್ಮ್ಯಾನ್ ಮತ್ತು ಸೋಲ್ಜರ್ ಕ್ಲರ್ಕ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅ.13 ರಿಂದ 19ರವರೆಗೆ ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ. ಅಭ್ಯರ್ಥಿಗಳು 17 1/2 ರಿಂದ 23 ವರ್ಷ ವಯೋಮಿತಿಯ ಒಳಗಿರಬೇಕು. ಎಸ್ಎಸ್ ಎಲ್ಸಿ, ಪಿಯುಸಿ (ಪಿಸಿಎಂ, ಪಿಸಿಬಿ ಮತ್ತು ಇಎನ್ಜಿ), ಡಿಪ್ಲೊಮಾ ಇನ್ ಎಂಜಿನಿ ಯರಿಂಗ್ (ಎಂಇ, ಇಎಲ್ಇ, ಎಯು, ಸಿಎಸ್, ಇ ಅಂಡ್…
ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ
October 5, 2018ಚಾಮರಾಜನಗರ: ಅಕ್ರಮ ಗಣಿಗಾರಿಕೆ ಚಟುವಟಿಕೆ ಹಾಗೂ ಪರ ವಾನಗಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ರೈತ ಕೂಲಿ ಸಂಗ್ರಾಮ ಸಮಿತಿ ಜಿಲ್ಲಾ ಘಟಕ ದಿಂದ ಚಾ.ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಾಕಾರರು ಧರಣಿ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ ಅವ ರಿಗೆ ಮನವಿ ಸಲ್ಲಿಸಿದರು.ಅಕ್ರಮ ಗಣಿಗಾರಿಕೆ ಸಮಾಜಘಾತುಕ ಚಟುವಟಿಕೆಯಿಂದ ರೈತರಿಗೆ ಹಾಗೂ ಪರಿ ಸರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಗಣಿಗಾರಿಕೆಯನ್ನು ನಿಷೇಧಿಸಬೇಕು…
ಕಮರವಾಡಿ ಕಬಿನಿ ನಾಲೆಯಲ್ಲಿ ಯುವಕನ ಶವ ಪತ್ತೆ
October 5, 2018ಚಾಮರಾಜನಗರ: ಅವಿವಾಹಿತ ಯುವಕನೊಬ್ಬನ ಶವ ಸಂತೇಮರಹಳ್ಳಿ ಸಮೀಪದ ಕಮರವಾಡಿ ಬಳಿಯ ಕಬಿನಿ ನಾಲೆಯಲ್ಲಿ ಗುರುವಾರ ಪತ್ತೆಯಾಗಿದೆ. ನಂಜನಗೂಡು ತಾಲೂಕಿನ ತಗಡೂರು ಸಮೀಪದ ಕೊಂತ್ತಯ್ಯನಹುಂಡಿ ಗ್ರಾಮದ ಕೆ.ಸಿ.ರಾಜಪ್ಪ ಎಂಬುವರ ಪುತ್ರ ಆರ್.ಮಧುಕರ್ (27) ಸಾವನ್ನಪ್ಪಿದವನು. ವಿವರ: ಕೊಂತ್ತಯ್ಯನಹುಂಡಿಯ ಆರ್.ಮಧುಕರ್ ಅ.2ರಂದು ತನ್ನ ಸ್ನೇಹಿತನೊಂದಿಗೆ ಅಳಗಂಚಿ ಸಮೀಪ ಇರುವ ಬೆಂಡಗಳ್ಳಿ ಬಳಿಯ ಕಬಿನಿ ನಾಲೆಗೆ ತೆರಳಿದ್ದಾನೆ. ಚಪ್ಪಲಿ, ಬಟ್ಟೆಯನ್ನು ನಾಲೆಯ ದಡದಲ್ಲಿ ಇಟ್ಟು ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಮಧುಕರ ನೀರಿನಲ್ಲಿ ಕೊಚ್ಚಿ ಹೋದ. ಆತನ ಸ್ನೇಹಿತ ಬೈಕ್ನೊಂದಿಗೆ…
ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ವಿನೂತನ ಸತ್ಯಾಗ್ರಹ
October 5, 2018ಚಾಮರಾಜನಗರ: ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರು ರಕ್ತದಾನ ಮಾಡುವ ಮೂಲಕ ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಎಂಬ ಸತ್ಯಾಗ್ರಹ ನಡೆಸಿದರು.ನಗರದ ರೋಟರಿ ಭವನದಲ್ಲಿ ಜಿಲ್ಲಾಸ್ಪ ತ್ರೆಯ ರಕ್ತ ನಿಧಿ ಕೇಂದ್ರದ ನೆರವಿನೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಹೆಚ್ಚು ನೌಕರರು ರಕ್ತದಾನ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು. ರಕ್ತದಾನ ಮಾಡುವ ಶಿಬಿರಕ್ಕೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರ ವಾಧ್ಯಕ್ಷ ರಂಗಸ್ವಾಮಿ ಮೂಲಕ ಚಾಲನೆ ನೀಡಿ, ಎನ್ಪಿಎಸ್ ನೌಕರರ…
ಅಥ್ಲೆಟಿಕ್ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
October 5, 2018ಚಾಮರಾಜನಗರ: ಇಲ್ಲಿನ ಸೇವಾಭಾರತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹೈದರಾಬಾದ್ನಲ್ಲಿ ಇತ್ತೀ ಚಿಗೆ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೇವಾಭಾರತಿ ಪ್ರೌಢ ಶಾಲೆ ವಿದ್ಯಾರ್ಥಿಗಳಾದ ಅವಿನಾಶ್, ಯಶವಂತ್ ಕೆ.ಎಮ್, ಲಿಖಿತ ಎಂ.ಜಿ ಅಥ್ಲೆ ಟಿಕ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಉತ್ತರ ಪದ್ರೇ ಶದ ಲಕ್ನೋವಿನಲ್ಲಿ ನಡೆ ಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಈ ವಿದ್ಯಾರ್ಥಿಗಳಿಗೆ ಸೇವಾಭಾರತಿ ಶಾಲೆಯ ಆಡಳಿತಾಧಿಕಾರಿ ರಮೇಶ್, ಕಾರ್ಯದರ್ಶಿ ವಾಸುದೇವರಾವ್, ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಹೇಮಂತ್, ಮುಖ್ಯೋಪಾಧ್ಯಾಯ ರವಿಪ್ರಸಾದ್, ದೈಹಿಕ ಶಿಕ್ಷಕ…