Tag: Hunsur

ಅಕ್ರಮ ಮರಳು ಸಾಗಣೆ: ಟಿಪ್ಪರ್ ವಶ, ಚಾಲಕ ಪರಾರಿ
ಮೈಸೂರು ಗ್ರಾಮಾಂತರ

ಅಕ್ರಮ ಮರಳು ಸಾಗಣೆ: ಟಿಪ್ಪರ್ ವಶ, ಚಾಲಕ ಪರಾರಿ

June 3, 2020

ಹುಣಸೂರು,ಮೇ 8(ಕೆಕೆ)-ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಅನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ. ಶುಕ್ರವಾರ ಸಂಜೆ ಕಾರ್ಯ ನಿಮಿತ್ತ ತಹಶೀಲ್ದಾರ್ ಬಸವರಾಜು ಅವರು ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ, ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಪಿರಿಯಪಟ್ಟಣ ಕಡೆಯಿಂದ ನಗರ ಪ್ರವೇಶಿಸಿ ಮೈಸೂರಿನಯತ್ತ ಮರಳು ಸಾಗಿಸುತ್ತಿದ್ದ ಟಿಪ್ಪರ್ (ಕೆಎ18 ಬಿ5668) ಅನ್ನು ನಗರದ ಅರಸು ಪ್ರತಿಮೆ ಬಳಿ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದೆ. ಸ್ಥಳದಲ್ಲೇ ವಾಹನ ನಿಲ್ಲಿಸಿ, ಚಾಲಕ ಪರಾರಿಯಾಗಿ ದ್ದಾನೆ….

ಉದ್ಯೋಗ ಖಾತರಿಯಿಂದ ಆರ್ಥಿಕ ಸಂಕಷ್ಟ ದೂರ
ಮೈಸೂರು ಗ್ರಾಮಾಂತರ

ಉದ್ಯೋಗ ಖಾತರಿಯಿಂದ ಆರ್ಥಿಕ ಸಂಕಷ್ಟ ದೂರ

June 3, 2020

ಹುಣಸೂರು, ಮೇ 8(ಕೆಕೆ)-ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಖಾತರಿಯೊಂದೇ ಆರ್ಥಿಕ ಸಂಕಷ್ಟ ದೂರ ಮಾಡುವ ಏಕೈಕ ಮಾರ್ಗವಾಗಿದ್ದು, ಎಲ್ಲಾ ಗ್ರಾಪಂ ಪಿಡಿಓಗಳು ವಾರಿಯರ್ಸ್ ರೀತಿ ಉದ್ಯೋಗ ಖಾತರಿ ಯಶಸ್ವಿಗೆ ಶ್ರಮಿಸಬೇಕೆಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ನಗರದ ತಾಪಂ ಸಭಾಂಗಣದಲ್ಲಿ ತಾಲೂಕಿನ ಗ್ರಾಪಂ ಪಿಡಿಓಗಳ ಸಭೆ ಯಲ್ಲಿ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬರುವುದಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ರೈತರ ಕೃಷಿ ಅಭಿವೃದ್ಧಿಗಾಗಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿ, ರೈತರಿಗೆ ಸೂಕ್ತ…

ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ  12,200 ರೂ.ದಂಡ ವಸೂಲು
ಮೈಸೂರು ಗ್ರಾಮಾಂತರ

ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ 12,200 ರೂ.ದಂಡ ವಸೂಲು

June 3, 2020

ಹುಣಸೂರು, ಮೇ8(ಕೆಕೆ)-ನಗರದ ವಿವಿಧಡೆ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು ದಂಡ ವಿಧಿಸಿದರು. ಅಂದಾಜು 122 ಮಂದಿಯಿಂದ 12,200 ರೂ.ದಂಡ ವಸೂಲಿಯಾಗಿದೆ. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸಲಾ ಗುತ್ತದೆ ಎಂದು ತಹಶೀಲ್ದಾರ್ ಬಸವರಾಜು ಎಚ್ಚರಿಸಿದ್ದರು. ಇದನ್ನು ಲೆಕ್ಕಿಸದೆ ಜನತೆ ಮಾಸ್ಕ್ ಧರಿಸದೆ ರಸ್ತೆಗಿಳಿದ್ದಿದ್ದರು. ಇಂದು ಕಾರ್ಯಾ ಚರಣೆಗಿಳಿದ ನಗರಸಭೆ…

ಹುಲಿ ದಾಳಿಗೆ ಹಸು ಬಲಿ
ಮೈಸೂರು ಗ್ರಾಮಾಂತರ

ಹುಲಿ ದಾಳಿಗೆ ಹಸು ಬಲಿ

June 3, 2020

ಹುಣಸೂರು, ಮೇ 8(ಕೆಕೆ)- ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೋಣನಹೊಸಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ನಿವಾಸಿ, ಜಿಪಂ ಸದಸ್ಯ ಕಟ್ಟನಾಯಕ ಅವರಿಗೆ ಸೇರಿದ ಹಸು ಮೃತಪಟ್ಟಿದೆ. ಕಟ್ಟನಾಯಕ ಅವರು ತಮ್ಮ ತೋಟದಲ್ಲಿ ಹಸುವನ್ನು ಮೇಯಲು ಬಿಟ್ಟದ್ದರು. ಈ ವೇಳೆ ಹುಲಿ ಹಸುವಿನ ಮೇಲೆ ಏಕಾಏಕಿ ದಾಳಿ ನಡೆಸಿ, ಕೊಂದು ಹಾಕಿದೆ. ಹುಲಿ ದಾಳಿ ಕಣ್ಣಾರೆ ಕಂಡ ಕಟ್ಟನಾಯಕ ಹಾಗೂ ಪಕ್ಕದ ಜಮೀನಿನÀವರ ಕೂಗಾಟದಿಂದ ಹಸುವಿನ ಕಳೇಬರ ಬಿಟ್ಟು ಹುಲಿ ಅರಣ್ಯದತ್ತ ಓಡಿದೆ.

ಎಣ್ಣೆ ಸಿಗದಿದ್ದಕ್ಕೆ ನದಿಗೆ ಹಾರಿ ಕಾರ್ಮಿಕ ಆತ್ಮಹತ್ಯೆ
ಮೈಸೂರು

ಎಣ್ಣೆ ಸಿಗದಿದ್ದಕ್ಕೆ ನದಿಗೆ ಹಾರಿ ಕಾರ್ಮಿಕ ಆತ್ಮಹತ್ಯೆ

March 28, 2020

ಮೈಸೂರು: ಕುಡಿಯಲು ಮದ್ಯ ಸಿಗದ ಕಾರಣಬೇಸರಗೊಂಡ ಕಾರ್ಮಿಕ ನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಇಂದು ನಡೆದಿದೆ. ರಾಜು (೪೦) ಆತ್ಮಹತ್ಯೆ ಮಾಡಿಕೊಂಡವ. ಈತ ಕಾರ್ಖಾನೆ ಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕುಡಿತದ ಚಟ ಅಂಟಿಸಿಕೊಂಡಿದ್ದ. ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಮದ್ಯ ಮಾರಾಟ ವನ್ನು ನಿಷೇಧಿಸಲಾಗಿದೆ. ಇದರಿಂದ ಕುಡಿಯಲು ಮದ್ಯ ಸಿಗದೆ ತೀವ್ರ ವಾಗಿ ಬೇಸರಗೊಂಡು, ಲಕ್ಷಣ ತೀರ್ಥ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹುಣಸೂರು ಪೊಲೀಸ್…

ಹುಣಸೂರಲ್ಲಿ ಮನೆ ಕುಸಿದು ಮಹಿಳೆ ಸಾವು
ಮೈಸೂರು

ಹುಣಸೂರಲ್ಲಿ ಮನೆ ಕುಸಿದು ಮಹಿಳೆ ಸಾವು

August 11, 2019

ಹುಣಸೂರು,ಆ.10(ಕೆಕೆ)-ಕೆಲ ದಿನಗಳಿಂದ ನಿರಂತರವಾಗಿ ಸುರಿಯು ತ್ತಿರುವ ಮಳೆ ಆರ್ಭಟಕ್ಕೆ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಬನ್ನಿಕುಪ್ಪೆ ಸಮೀಪದ ಆಸ್ಪತ್ರೆ ಕಾವಲ್ ಗ್ರಾಪಂ ವ್ಯಾಪ್ತಿಯ ಬಲ್ಲೆನಹಳ್ಳಿಯಲ್ಲಿ ಇಂದು ಸಂಜೆ ಸಂಭವಿಸಿದೆ. ಗ್ರಾಮದಲ್ಲಿನ ಲೇಟ್ ಮಹಮದ್ ಅಲಿ ಪುತ್ರಿ ಮುಬಿನಾ(34) ಮೃತಪಟ್ಟ ವರಾಗಿದ್ದು, ತಂದೆ- ತಾಯಿ ತೀರಿಹೋದ ಬಳಿಕ ಒಬ್ಬರೇ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಿರಂತರ ಮಳೆಯಿಂದ ಇಂದು ಸಂಜೆ ಮನೆ ಗೋಡೆಗಳು ಕುಸಿದು ಬಿದ್ದು, ಮುಬೀನಾ ಸಿಲುಕಿಕೊಂಡಿದ್ದಾರೆ. ತಕ್ಷಣ…

ಎಂಸಿಡಿಸಿಸಿ ಬ್ಯಾಂಕ್ ನ 40.75 ಕೋಟಿ ಹಗರಣ: ಬ್ಯಾಂಕ್‍ನ ಹುಣಸೂರು ಶಾಖೆಯ ಹಿಂದಿನ ಮ್ಯಾನೇಜರ್ ರಾಮಪ್ಪ ಪೂಜಾರ್ ಬಂಧನ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ನ 40.75 ಕೋಟಿ ಹಗರಣ: ಬ್ಯಾಂಕ್‍ನ ಹುಣಸೂರು ಶಾಖೆಯ ಹಿಂದಿನ ಮ್ಯಾನೇಜರ್ ರಾಮಪ್ಪ ಪೂಜಾರ್ ಬಂಧನ

August 8, 2019

ಹುಣಸೂರು: ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಸಹಕಾರ ಬ್ಯಾಂಕ್‍ನ (ಎಂಸಿ ಡಿಸಿಸಿ) ಹುಣಸೂರು ಮತ್ತು ಬಿಳಿಕೆರೆ ಶಾಖೆಗಳಲ್ಲಿ 40.75 ಕೋಟಿ ರೂ. ದುರುಪ ಯೋಗಪಡಿಸಿಕೊಂಡು ಕಳೆದ 11 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಹುಣಸೂರು ಬ್ಯಾಂಕ್ ಶಾಖೆಯ ಹಿಂದಿನ ವ್ಯವಸ್ಥಾಪಕ ರಾಮಪ್ಪ ಪೂಜಾರ್‍ನನ್ನು ಸಿಐಡಿ ಪೊಲೀಸರು ಕಳೆದ ಮೂರು ದಿನಗಳ ಹಿಂದೆ ಬೆಂಗ ಳೂರಿನಲ್ಲಿ ಬಂಧಿಸಿದ್ದಾರೆ. ಬಡ ರೈತರಿಗೆ ವಿತರಿಸಬೇಕಾಗಿದ್ದ ಕೋಟ್ಯಾಂತರ ರೂ. ಸಾಲದ ಹಣವನ್ನೇ ದುರುಪಯೋಗ ಪಡಿಸಿಕೊಂಡಿದ್ದ ರಾಮಪ್ಪ ಪೂಜಾರ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿ ಸುತ್ತಾ…

ಹುಣಸೂರು ತಾಲೂಕಲ್ಲಿ ಗುಡುಗು-ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ
ಮೈಸೂರು

ಹುಣಸೂರು ತಾಲೂಕಲ್ಲಿ ಗುಡುಗು-ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ

April 24, 2019

ಹುಣಸೂರು: ಗುಡುಗು-ಸಿಡಿಲು, ಬಿರುಗಾಳಿ ಸಹಿತ ಮಂಗಳವಾರ ಸುರಿದ ಭಾರೀ ಮಳೆಗೆ ಹುಣಸೂರು ತಾಲೂಕು ತತ್ತರಿಸಿ ಹೋಗಿದ್ದು, ಮನೆಯೊಂದರ ಮೇಲೆ ಮರ ಉರುಳಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ತಾಲೂಕಿನಾದ್ಯಂತ ಇಂದು ಸಂಜೆ 6 ಗಂಟೆ ಯಿಂದ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಭಾರೀ ಬಿರುಗಾಳಿ-ಮಳೆ ಹಾಗೂ ಮಿಂಚು-ಗುಡುಗಿನ ಆರ್ಭಟಕ್ಕೆ ತಾಲೂಕಿನ ಹಲವೆಡೆ ಮನೆಗಳು ಜಖಂಗೊಂಡು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿರುವ ಪರಿಣಾಮ ಬೆಂಗಳೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಹುಣಸೂರು-ಪಿರಿಯಾಪಟ್ಟಣ ನಡುವೆ ಹಾಗೂ ಆನೆಚೌಕೂರು ರಸ್ತೆಯಲ್ಲಿ ಪಚವಳ್ಳಿ ಬಳಿ 2…

ಕಳಪೆ ಕಾಮಗಾರಿ: ಹುಣಸೂರಲ್ಲಿ ವಿದ್ಯುತ್ ಕಂಬಗಳ ತೆರವು
ಮೈಸೂರು

ಕಳಪೆ ಕಾಮಗಾರಿ: ಹುಣಸೂರಲ್ಲಿ ವಿದ್ಯುತ್ ಕಂಬಗಳ ತೆರವು

February 11, 2019

ಹುಣಸೂರು: ಹುಣಸೂರು ನಗರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಅನುದಾನ 7.20 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ಸಮಗ್ರ ವಿದ್ಯುತ್ ಅಭಿವೃದ್ಧೀಕರಣ ಕಾಮಗಾರಿ ಕಳಪೆ ಎಂದು ಪರಿಶೀಲನೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಕ್ವಾಲಿಟಿ ಕಂಟ್ರೋಲ್ ಸಿಬ್ಬಂದಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಹುಣಸೂರು ನಗರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ 7.20 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧೀಕರಣ ಕಾಮಗಾರಿ ಕಳಪೆಯಾಗಿದ್ದು, ವಿದ್ಯುತ್ ಕಂಬಗಳನ್ನು 5.6 ಅಡಿ ಅಳಕ್ಕೆ ನೆಡುವ ಬದಲು ಕೇವಲ 2…

ಎಲ್ಲಾ ಕುಟುಂಬಕ್ಕೂ ಸೂರು ಕಲ್ಪಿಸುವುದು ಮೋದಿ ಕನಸು
ಮೈಸೂರು

ಎಲ್ಲಾ ಕುಟುಂಬಕ್ಕೂ ಸೂರು ಕಲ್ಪಿಸುವುದು ಮೋದಿ ಕನಸು

February 2, 2019

ಹುಣಸೂರು: ಎರಡು ಸಾವಿರದ ಇಪ್ಪತ್ತೆರಡಕ್ಕೆÉ್ಕ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುವ ವಜ್ರ ಮಹೋತ್ಸವದ ಅಚರಣೆ ಸಂದರ್ಭದಲ್ಲಿ ದೇಶದಲ್ಲಿನ ಯಾವುದೇ ಕುಟುಂಬಗಳು ಸ್ವಂತ ಸೂರಿನಿಂದ ವಂಚಿತರಾಗಿರಬಾರದು ಎಂಬುದು ಪ್ರಧಾನಿ ಮೋದಿ ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ನಗರದ ಪೌರಕಾರ್ಮಿಕರ ಕಾಲೋನಿಯಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಲಿಯಿಂದ ನಗರದ ಪೌರಕಾರ್ಮಿಕರ ಕಾಲೋನಿ, ಸರಸ್ವತಿಪುರಂ, ರೆಹಮತ್ ಮೊಹಲ್ಲಾ…

1 2 3 8
Translate »