ಎಣ್ಣೆ ಸಿಗದಿದ್ದಕ್ಕೆ ನದಿಗೆ ಹಾರಿ ಕಾರ್ಮಿಕ ಆತ್ಮಹತ್ಯೆ
ಮೈಸೂರು

ಎಣ್ಣೆ ಸಿಗದಿದ್ದಕ್ಕೆ ನದಿಗೆ ಹಾರಿ ಕಾರ್ಮಿಕ ಆತ್ಮಹತ್ಯೆ

March 28, 2020

ಮೈಸೂರು: ಕುಡಿಯಲು ಮದ್ಯ ಸಿಗದ ಕಾರಣಬೇಸರಗೊಂಡ ಕಾರ್ಮಿಕ ನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಇಂದು ನಡೆದಿದೆ.

ರಾಜು (೪೦) ಆತ್ಮಹತ್ಯೆ ಮಾಡಿಕೊಂಡವ. ಈತ ಕಾರ್ಖಾನೆ ಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕುಡಿತದ ಚಟ ಅಂಟಿಸಿಕೊಂಡಿದ್ದ. ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಮದ್ಯ ಮಾರಾಟ ವನ್ನು ನಿಷೇಧಿಸಲಾಗಿದೆ. ಇದರಿಂದ ಕುಡಿಯಲು ಮದ್ಯ ಸಿಗದೆ ತೀವ್ರ ವಾಗಿ ಬೇಸರಗೊಂಡು, ಲಕ್ಷಣ ತೀರ್ಥ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Translate »