ಮಡಿಕೇರಿ: ವಾಹನವನ್ನು ಹಿಂದಿಕ್ಕುವ ಭರದಲ್ಲಿ ಲಾರಿಯೊಂದು ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ನಗರದ ಶಾಂತಿ ಚರ್ಚ್ ಮುಂಭಾಗ ನಡೆದಿದ್ದು, ಬೈಕ್ ಸವಾ ರನ ಕಾಲಿಗೆ ಗಂಭೀರ ಗಾಯವಾ ಗಿದೆ. ಅಪಘಾತದಲ್ಲಿ ಬೈಕ್ನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ನಗರ ಸಂಚಾರಿ ಪೊಲೀ ಸರು ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಕೊರಿಯರ್ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿರುವ ಭರತ್ ಎಂಬಾತ ತನ್ನ ಬೈಕ್(ಕೆ.ಎ.12,ಎಸ್.0856)ನಲ್ಲಿ ಕೆಲಸ ನಿಮಿತ್ತ ಜನರಲ್ ತಿಮ್ಮಯ್ಯ ವೃತ್ತದಿಂದ ಸುದರ್ಶನ ವೃತ್ತದ ಕಡೆ…
ವ್ಯಕ್ತಿ ಹತ್ಯೆಗೆ ಯತ್ನಿಸಿದವನಿಗೆ 6 ವರ್ಷ ಜೈಲು
January 19, 2019ಮಡಿಕೇರಿ: ವ್ಯಕ್ತಿಯೋರ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ 6 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ನಾಪೋಕ್ಲು ಮೂಲದ ನಿವಾಸಿ ಬಿ.ಎ. ಸುಂದರ ಎಂಬಾತನೇ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ಆಸ್ತಿ ಹಂಚಿಕೆ ವಿಚಾರದಲ್ಲಿ 2016ರ ಏಪ್ರಿಲ್ 2 ರಂದು ರಾತ್ರಿ 8 ಗಂಟೆಯ ವೇಳೆಗೆ ಬಿ.ಎ.ಸುಂದರ ಕತ್ತಿ ಮತ್ತು ದೊಣ್ಣೆ ಸಹಿತ ನಾಪೋಕ್ಲು ಚೇಲಾವರ ಗ್ರಾಮದ ಬಿ.ಎ. ಮುತ್ತಮ್ಮಯ್ಯ ಎಂಬವರ…
ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
January 19, 2019ಸೋಮವಾರಪೇಟೆ: ಜೀವನದಲ್ಲಿ ಜಿಗುಪ್ಸೆಗೊಂಡು ಗನ್ಮ್ಯಾನ್ ಒಬ್ಬರು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ನಿವಾಸಿ ಚಿನ್ನಪ್ಪ(58) ಆತ್ಮಹತ್ಯೆಗೆ ಶರಣಾದವರು. ಕೃಷಿಕರಾಗಿದ್ದ ಚಿನ್ನಪ್ಪ ಇತ್ತೀಚೆಗೆ ಬೆಂಗಳೂರಿನಲ್ಲಿ ಗನ್ಮ್ಯಾನ್ ಆಗಿ ನೌಕರಿ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ಮನೆಗೆ ಬಂದವರು ತನಗೆ ಸೇರಿದ ಕೋವಿನಿಂದ ಮನೆಯೊಳಗೆ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಪತ್ನಿ ತಂಗಮ್ಮ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತರ ಇಬ್ಬರು…
ಕುರುಚಲು ಕಾಡಿಗೆ ಬೆಂಕಿ: ಕಾರಿಗೂ ಹಾನಿ
January 19, 2019ಮಡಿಕೇರಿ: ಕುರುಚಲು ಕಾಡಿಗೆ ಬೆಂಕಿ ಬಿದ್ದು, ಮನೆಯೊಂದರ ಮುಂದೆ ನಿಲ್ಲಿಸಲಾಗಿದ್ದ ಕಾರಿಗೆ ಬೆಂಕಿ ತಗುಲಿ ಕಾರಿನ ಒಂದು ಭಾಗ ಸುಟ್ಟು ಕರಕಲಾದ ಘಟನೆ ನಗರದ ಚೈನ್ಗೇಟ್ ಬಳಿ ಸಂಭವಿಸಿದೆ. ಚೈನ್ಗೇಟ್ ನಿವಾಸಿ ಗಿರಿ ಗಣೇಶ್ ಎಂಬವರ ಮನೆಯ ಪಕ್ಕ ದಲ್ಲಿದ್ದ ಕುರುಚಲು ಕಾಡಿಗೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಆಕ ಸ್ಮಿಕವಾಗಿ ಬೆಂಕಿ ತಗುಲಿತ್ತು. ಗಾಳಿಯ ತೀವ್ರತೆಗೆ ಸುತ್ತ ಮುತ್ತಲ ಪೊದೆಗೂ ಬೆಂಕಿ ಹರಡಿದ್ದಲ್ಲದೇ, ಗಿರಿ ಗಣೇಶ್ ಅವರ ಮನೆಯ ಆವರಣದಲ್ಲಿದ್ದ ಹುಲ್ಲಿನ ಮೆದೆಗೂ ಬೆಂಕಿ ಹರಡಿದೆ….
ಕರಾಟೆಯಲ್ಲಿ ವೀರಾಜಪೇಟೆ ವಿದ್ಯಾರ್ಥಿಗಳ ಸಾಧನೆ
January 19, 2019ವೀರಾಜಪೇಟೆ: ಕೇರಳದ ಕಣ್ಣೂರಿನಲ್ಲಿ ನಡೆದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಓಕಿನೊವ ಯುಚಿರಿಯೋ ಕರಾಟೆ ವಿದ್ಯಾರ್ಥಿಗಳು 2 ಚಿನ್ನದ ಪದಕ, 10 ಬೆಳ್ಳಿ ಪದಕ, ಹಾಗೂ 5 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರಾಹುಲ್, ಚಿಂತೇಶ್ ಭೀಮಯ್ಯ, ಮೋಹಿತ್, ಸಬೀನ್, ಬೆಳ್ಳಿಯಪ್ಪ, ಪೂವಯ್ಯ, ಉತ್ತಪ್ಪ, ಸೋನಿಕಾ, ಮೌನ, ಕಾವೇರಮ್ಮ, ಮತ್ತು ಅಲಿಸ್ ಡಿಸೋಜ ಇವರುಗಳು ವೀರಾಜಪೇಟೆ ಒಕಿನೋವಾ ಯುಚಿರಿಯೋ ಕರಾಟೆ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.
ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ತೊರೆಯುವ ಅಗತ್ಯವಿದೆ
January 18, 2019ಗೋಣಿಕೊಪ್ಪಲು: ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟು ಸಾಂವಿ ಧಾನಿಕ ಭದ್ರತೆಗೆ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಚಿಕ್ಕಅಳು ವಾರು ಸ್ನಾತಕೋತ್ತರ ಕೇಂದ್ರದ ಉಪನ್ಯಾ ಸಕ ಜಮೀರ್ ಅಹಮ್ಮದ್ ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜ ಪೇಟೆ ತಾಲೂಕು ಕಾರ್ಯನಿರತ ಪತ್ರಕ ರ್ತರ ಸಂಘದಿಂದ ಆಯೋಜಿಸಿದ್ದ ಸಂಘದ ಕಾರ್ಯಚಟುವಟಿಕೆ ಕಾರ್ಯಕ್ರಮದಲ್ಲಿ ಪತ್ರಕರ್ತರು ಸಾಮಾಜಿಕವಾಗಿ ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪತ್ರಕರ್ತರುಗಳು ಅವರದೇ ಆದ ಭಿನ್ನಾ ಭಿಪ್ರಾಯದಿಂದ ಕಾನೂನು ಚೌಕಟ್ಟಿನಲ್ಲಿ ಅವರಿಗೆ…
ವಿರಾಜಪೇಟೆಯಲ್ಲಿ ಬಿ.ಟಿ.ಪ್ರದೀಪ್ ಪುಣ್ಯ ಸ್ಮರಣೆ
January 18, 2019ವಿರಾಜಪೇಟೆ: ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ಬಿ.ಟಿ.ಪ್ರದೀಪ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ವಿರಾಜಪೇಟೆಯಲ್ಲಿ ಅವರ ಅಭಿಮಾನಿ ಬಳಗದಿಂದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಹಂಚಲಾಯಿತು. ಬಿ.ಟಿ.ಪ್ರದಿಪ್ ಅವರ ಅಭಿಮಾನಿಗಳು, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ರಂಜಿ ಪೂಣಚ್ಚ, ಡಿ.ಪಿ.ರಾಜೇಶ್, ಮಹ್ಮದ್ ರಫಿ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಅಬ್ದುಲ್ ಸಲಾಂ, ಜಿ.ಜಿ.ಮೋಹನ್, ಸಿ.ಬಿ.ರವಿ, ನರೇಂದ್ರ ಕಾಮತ್, ಎಜಾಜ್ ಅಹ್ಮದ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎಂ.ದೇಚಮ್ಮ ಕಾಳಪ್ಪ, ಎಸ್.ಹೆಚ್.ಮತಿನ್, ಸಿ.ಕೆ.ಪೃಥ್ವಿನಾಥ್, ಫಸಿಹ…
ಮೋರಿಗೆ ಬೈಕ್ ಡಿಕ್ಕಿ; ಮೂವರಿಗೆ ಗಾಯ
January 18, 2019ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ ಬದಿಯ ಮೋರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕೊಡಗರ ಹಳ್ಳಿ ಸಮೀಪ ನಡೆದಿದೆ. ಗರಗಂದೂರಿನ ಚಾಮುಂಡ್ವೇಶ್ವರಿ ಕಾಲೋನಿ ನಿವಾಸಿ ಶಿವನ್, ಗುಂಡುಗುಟ್ಟಿ ನಿವಾಸಿ ಪುನೀತ್(ಮುನ್ನ), ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಮಣಿಕಂಠ ಗಾಯಗೊಂ ಡವರು. ಈ ಮೂವರು ಬೈಕಿನಲ್ಲಿ ಗುರು ವಾರ ಕುಶಾಲನಗರದಲ್ಲಿ ವಿವಾಹ ಸಮಾ ರಂಭಕ್ಕೆ ತೆರಳಿ ರಾತ್ರಿ 11.15ರ ಸಮ ಯದಲ್ಲಿ ಹಿಂದಿರುಗುತ್ತಿದ್ದರು. ಈ ಸಂದರ್ಭ ಕೊಡಗರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯ ಮೋರಿಗೆ ಬೈಕು…
ವಿರಾಜಪೇಟೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ
January 18, 2019ವಿರಾಜಪೇಟೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಚುನಾಯಿತ ಶಾಸಕರಿಗೆ ಹಣದ ಆಮಿಷ ತೋರಿಸಿ ಮೈತ್ರಿ ಸರ್ಕಾ ರವನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ವಿರಾಜ ಪೇಟೆ ತಾಲೂಕು ಕಾಂಗ್ರೆಸ್ ಸಮಿತಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ತಹಶಿಲ್ದಾರ್ ಆರ್.ಗೋವಿಂದ ರಾಜ್ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು…
ಇಂದು ಸೆಸ್ಕಾಂ ಜನಸಂಪರ್ಕ ಸಭೆ
January 18, 2019ಮಡಿಕೇರಿ: ಸೋಮವಾರಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ಜನಸಂಪರ್ಕ ಸಭೆಯು ಜ.19 ರಂದು ಬೆಳಗ್ಗೆ 10 ರಿಂದ 11.30 ಗಂಟೆ ವರೆಗೆ ಸೋಮವಾರಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ಅಧೀಕ್ಷಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಜನ ಸಂಪರ್ಕ ಸಭೆಯು ಜನವರಿ 19 ರಂದು ಮಧ್ಯಾಹ್ನ 12.30 ಗಂಟೆಯಿಂದ 2 ಗಂಟೆವರೆಗೆ ಕುಶಾಲನಗರ ಉಪ ವಿಭಾಗ ಕಚೇರಿ ಆವರಣದಲ್ಲಿ ನಡೆಯಲಿದೆ. ಸೋಮವಾರಪೇಟೆ ಮತ್ತು…










