ಮಡಿಕೇರಿ: ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬರುವ ಮೂಲಕ ಕೊಡಗಿನ ಯುವತಿಯೊಬ್ಬಳು ಸಾಧನೆಯ ಶಿಖರವನ್ನೇರಿ ಎಲ್ಲರ ಗಮನ ಸೆಳೆದಿದ್ದಾರೆ. ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ-ಪಾರ್ವತಿ ದಂಪತಿ ಪುತ್ರಿ ಭವಾನಿ ಎಂಬಾಕೆಯೇ ರಷ್ಯಾದ 5,642 ಮೀಟರ್ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತವನ್ನೇರಿ ಬಂದ ಪರ್ವತಾರೋಹಿಯಾಗಿದ್ದಾರೆ. ಮೆಕ್ಸಿಕೋ, ಫ್ರೆಂಚ್, ರೋಮಿನಿಯಾ ಪರ್ವ ತಾರೋಹಿಗಳ ನಡುವೆ ಭಾರತವನ್ನು ಭವಾನಿ ಪ್ರತಿನಿಧಿಸಿದ್ದರು. ನಾಲ್ವರು ಪರ್ವತಾರೋಹಿ ಗಳಿಗೆ ರಷ್ಯಾದಲ್ಲಿ ಮೂರು ದಿನಗಳ…
ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಪ್ರತಿಭಟನೆ
November 15, 2018ಮಡಿಕೇರಿ: ಪತ್ರಕರ್ತ, ಅಂಕಣಕಾರ ಸಂತೋಷ ತಮ್ಮಯ್ಯ ಅವರನ್ನು ಬಂಧಿಸಿದ ಕ್ರಮಕ್ಕೆ ಹಿಂದೂ ಸುರಕ್ಷಾ ವೇದಿಕೆ ಮತ್ತು ವಿವಿಧ ಹಿಂದೂ ಪರ ಸಂಘಟನೆ ಗಳು ಆಕ್ರೋಶ ವ್ಯಕ್ತಪಡಿಸಿ, ನಗರದ ಜನರಲ್ ತಿಮ್ಮಯ್ಯ ವೃತದಲ್ಲಿ ಪ್ರತಿಭಟನೆ ನಡೆಸಿದವು. ರಾಜ್ಯ ಸಮ್ಮಿಶ್ರ ಸರಕಾರ ಒಂದು ಕೋಮಿನ ಜನರನ್ನು ಸಂತೃಪ್ತಗೊಳಿಸುವ ಮೂಲಕ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಹಿಂದೂ ಸಮಾ ಜವನ್ನು ದಮನಿಸುವ ದೃಷ್ಠಿಯಿಂದಲೇ ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನಕ್ಕೆ ಒತ್ತಡ ಹೇರ ಲಾಗಿತ್ತು ಎಂದು ಆರೋಪಿಸಿದ ಪ್ರತಿಭಟನಾಕಾ ರರು, ಮಾಜಿ ಮುಖ್ಯಮಂತ್ರಿ…
ಧರ್ಮವೊಂದರ ಬಗ್ಗೆ ಅವಹೇಳನ ಹೇಳಿಕೆ ಆರೋಪ ಪತ್ರಕರ್ತನ ಬಂಧನ, ಬಿಡುಗಡೆ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
November 14, 2018ಗೋಣಿಕೊಪ್ಪಲು: ಧರ್ಮ ವೊಂದರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಡಿ ಪತ್ರಕರ್ತನೋರ್ವನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದು, ಇದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ನಾಳೆ (ನ.14) ಒಂದು ಗಂಟೆ ಕಾಲ ಕೊಡಗು ಬಂದ್ಗೆ ಕರೆ ನೀಡಿದೆ. ಗೋಣಿಕೊಪ್ಪದ ಅಂಕಣಕಾರ ಮಾಣಿಪಂಡ ಸಂತೋಷ್ ತಮ್ಮಯ್ಯ (37) ಬಂಧಿತರಾಗಿದ್ದು, ಮಂಗಳವಾರ ಮುಂಜಾನೆ ಸಂತೋಷ್ ಅವರ ಪತ್ನಿ ತವರು ಮನೆ ತುಮಕೂರಿನ ಮಧುಗಿರಿಯ ಮನೆಯಲ್ಲಿ ಬಂಧಿಸಿ ನಂತರ ಮಧ್ಯಾಹ್ನ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನವೆಂಬರ್ 5 ರಂದು ಗೋಣಿಕೊಪ್ಪದಲ್ಲಿ ಪ್ರಜ್ಞಾ…
ಮಡಿಕೇರಿಯಲ್ಲಿ ಮನಸೆಳೆದ ಕ್ಯಾಲಿಗ್ರಫಿ ಪ್ರದರ್ಶನ
November 14, 2018ಮಡಿಕೇರಿ: ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ 15ರವರೆಗೆ ಕ್ಯಾಲಿಗ್ರಫಿ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.ಜ್ಯೋತಿ ಕ್ಯಾಲಿಗ್ರಫಿ ತರಗತಿ ವತಿಯಿಂದ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಆಯೋಜಿತವಾಗಿರುವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಸುಂದರ ಅಕ್ಷರ ನಮೂನೆಗಳನ್ನು ಪ್ರದರ್ಶಿಸಿದ್ದಾರೆ. ಪ್ರದರ್ಶನವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖಾ ಧಿಕಾರಿ ಮಮ್ತಾಜ್ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಎಚ್.ಎಂ. ಮಮ್ತಾಜ್, ಮಕ್ಕಳ ಏಕಾಗ್ರತೆಗೆ ಕ್ಯಾಲಿಗ್ರಫಿ ನೆರವಾಗುತ್ತದೆ. ಕೊಡಗಿನಲ್ಲಿ ಇಂಥ…
ಸಂತ್ರಸ್ತರಿಗೆ ಬಾಂಬೆ ಕೂರ್ಗ್ ನೆರವು
November 13, 2018ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನಗರದ ಭಾರತೀಯ ವಿದ್ಯಾಭವನ ಸಭಾಂಗಣ ದಲ್ಲಿ ‘ಬಾಂಬೆ ಕೂರ್ಗ್’ ಅಸೋಸಿಯೇಷನ್ ವತಿಯಿಂದ ಸಹಾಯ ಹಸ್ತ ನೀಡಲಾಯಿತು. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂಬೈನಿಂದ ಆಗಮಿಸಿದ ತಂಡ ತೀವ್ರ ಹಾನಿಗೊಳಗಾದ 39 ಸಂತ್ರಸ್ತ ಕುಟುಂಬಗಳಿಗೆ ತಲಾ 25 ಸಾವಿರದಂತೆ 12 ಲಕ್ಷ ರೂ.ಗಳ ನೆರವು ಹಸ್ತ ನೀಡಿದರು. ಈ ಸಂದರ್ಭ ಬಾಂಬೆ ಕೂರ್ಗ್ ಅಸೋಸಿಯೇಷನ್ ಟ್ರಸ್ಟಿ ಬಿದ್ದಂಡ ಜಗ ದೀಶ್ ನಂಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಲ ವಾರು…
ಪ್ರಕೃತಿ ವಿಕೋಪ ನಿಧಿಗೆ ಸಂಗ್ರಹಿಸಿದ ಹಣ ಸಂತ್ರಸ್ತರಿಗೆ ವಿನಿಯೋಗಕ್ಕೆ ಆಗ್ರಹ
November 12, 2018ಮುಖ್ಯಮಂತ್ರಿ ಪರಿಹಾರ ನಿಧಿ, ಮಾಧ್ಯಮಗಳು ಸಂಗ್ರಹಿಸಿದ ಹಣ ಪಾರದರ್ಶಕವಾಗಿ ಬಳಕೆಯಾಗಲಿ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಒತ್ತಾಯ ಪೊನ್ನಂಪೇಟೆ: ಪ್ರಕೃತಿ ವಿಕೋ ಪಕ್ಕೆ ತುತ್ತಾದ ಕೊಡಗಿನ ನೆರವಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಸಂದಾ ಯವಾಗಿರುವ ಹಣ ಹಾಗೂ ಹಲವು ದೃಶ್ಯ ಮಾಧ್ಯಮಗಳು, ಮುದ್ರಣ ಮಾಧ್ಯ ಮಗಳು ಕೊಡಗಿನ ದುರಂತಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಜನರಿಂದ ಹಣ ಸಂಗ್ರಹಿಸಿದ್ದು, ಇದನ್ನು ಸಂಪೂರ್ಣವಾಗಿ ಮತ್ತು ಪಾರ ದರ್ಶಕವಾಗಿ ದುರಂತದ ಫಲಾನುಭವಿ ಗಳಿಗೆ ನೀಡುವಂತಾಗಬೇಕೇಂದು ಕೊಡಗು ಮಾರಕ ಯೋಜನೆಗಳ ವಿರೋಧಿ…
ಕನ್ನಡ ಪರ ಹೋರಾಟ ನಿರಂತರ
November 12, 2018ವಿರಾಜಪೇಟೆ : ಕರ್ನಾಟಕ ರಕ್ಷಣಾ ವೇದಿಕೆಯು (ಹೆಚ್.ಶಿವರಾಮೇಗೌಡ ಬಣ) ಕೊಡಗು ಜಿಲ್ಲೆಯಲ್ಲಿ ಕಳೆದ 13 ವರ್ಷ ಗಳಿಂದಲೂ ಕನ್ನಡಪರ ನ್ಯಾಯಕ್ಕಾಗಿ ಹೋರಾ ಟಗಳನ್ನು ನಡೆಸಿಕೊಂಡು ಬಂದಿದ್ದು ಮುಂದೆಯು ಕನ್ನಡ ಉಳಿವಿಗಾಗಿ ಹೋರಾಟ ನಡೆಸಲಾಗುವುದು ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಪಿ.ಕೆ.ಜಗದೀಶ್ ಹೇಳಿದರು. ವಿರಾಜಪೇಟೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಕಟ್ಟಡದ ಕರ್ನಾ ಟಕ ರಕ್ಷಣಾ ವೇದಿಕೆಯ ತಾಲೂಕು ಮಟ್ಟದ ನೂತನ ಕಛೇರಿಯನ್ನು ಉದ್ಘಾ ಟಿಸಿ ಮಾತನಾಡಿದ ಪಿ.ಕೆ.ಜಗದೀಶ್, ಕನ್ನಡ ಪರ ಕೆಲಸಗಳನ್ನು ಮಾಡಲು ಬೆಂಗಳೂ…
ಟಿಪ್ಪು ಜಯಂತಿ ವಿರುದ್ಧ ಕೊಡಗಲ್ಲಿ ಕರಾಳ ದಿನಾಚರಣೆ
November 11, 2018ಮಡಿಕೇರಿ: ರಾಜ್ಯ ಸರಕಾರದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದ ಕೊಡಗು ಬಂದ್ಗೆ ನಗರದಲ್ಲಿ ಉತ್ತಮ ಸ್ಪಂದನೆ ಕಂಡು ಬಂತು. ಜನರು ಕೂಡ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಕರಾಳ ದಿನ ಆಚರಿಸುವ ಮೂಲಕ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿದರು. ಕುಟ್ಟಪ್ಪ ಸ್ಮರಣೆ-ಬಂಧನ: 2015ರಲ್ಲಿ ಮಡಿಕೇರಿಯಲ್ಲಿ…
ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಜ್ಜು: ಇಂದು ಸ್ವಯಂ ಪ್ರೇರಿತ ಕೊಡಗು ಬಂದ್ಗೆ ಕರೆ
November 10, 2018ಮಡಿಕೇರಿ: ವ್ಯಾಪಕ ವಿರೋಧದ ನಡುವೆಯೂ ರಾಜ್ಯ ಸರಕಾರದ ಆದೇಶದಂತೆ ನಾಳೆ (ಶನಿವಾರ) ಕೊಡಗು ಜಿಲ್ಲೆಯ 3 ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಮುಂಜಾಗೃತಾ ಕ್ರಮವಾಗಿ ಕೋಟೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಯಂತಿ ವಿರೋಧಿಸಿ ಸ್ವಯಂ ಪ್ರೇರಿತ ಕೊಡಗು ಬಂದ್ಗೆ…
ಮೈಸೂರಿನಲ್ಲಿ ಕೊಡಗಿನ ಜನತೆಗೆ ಪಾಸ್ಪೋರ್ಟ್ ಸೇವೆ
November 10, 2018ಮಡಿಕೇರಿ: ಜಿಲ್ಲೆಯ ಪಾಸ್ಪೋರ್ಟ್ ಅಪೇಕ್ಷಿತರಿಗೆ ಮೈಸೂರು ಮೇಟಗಳ್ಳಿ ಅಂಚೆ ಕಚೇರಿಯಲ್ಲಿ ತೆರೆಯಲಾಗಿರುವ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್ಪೋರ್ಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಮಂದಿ ಪಾಸ್ಪೋರ್ಟ್ಗಾಗಿ ಮಂಗ ಳೂರು ಅಥವಾ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದರಿಂದ ತೊಂದರೆಯಾಗುತ್ತಿದ್ದುದನ್ನು ಗಮನಿಸಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರಿಗೆ ಮೈಸೂರಿನ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಕೊಡಗಿನ ಮಂದಿಗೆ ಅವಕಾಶ ನೀಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವರು…