ಪ್ರಕೃತಿ ವಿಕೋಪ ನಿಧಿಗೆ ಸಂಗ್ರಹಿಸಿದ ಹಣ ಸಂತ್ರಸ್ತರಿಗೆ ವಿನಿಯೋಗಕ್ಕೆ ಆಗ್ರಹ
ಕೊಡಗು

ಪ್ರಕೃತಿ ವಿಕೋಪ ನಿಧಿಗೆ ಸಂಗ್ರಹಿಸಿದ ಹಣ ಸಂತ್ರಸ್ತರಿಗೆ ವಿನಿಯೋಗಕ್ಕೆ ಆಗ್ರಹ

November 12, 2018
  • ಮುಖ್ಯಮಂತ್ರಿ ಪರಿಹಾರ ನಿಧಿ, ಮಾಧ್ಯಮಗಳು ಸಂಗ್ರಹಿಸಿದ ಹಣ ಪಾರದರ್ಶಕವಾಗಿ ಬಳಕೆಯಾಗಲಿ
  • ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಒತ್ತಾಯ

ಪೊನ್ನಂಪೇಟೆ:  ಪ್ರಕೃತಿ ವಿಕೋ ಪಕ್ಕೆ ತುತ್ತಾದ ಕೊಡಗಿನ ನೆರವಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಸಂದಾ ಯವಾಗಿರುವ ಹಣ ಹಾಗೂ ಹಲವು ದೃಶ್ಯ ಮಾಧ್ಯಮಗಳು, ಮುದ್ರಣ ಮಾಧ್ಯ ಮಗಳು ಕೊಡಗಿನ ದುರಂತಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಜನರಿಂದ ಹಣ ಸಂಗ್ರಹಿಸಿದ್ದು, ಇದನ್ನು ಸಂಪೂರ್ಣವಾಗಿ ಮತ್ತು ಪಾರ ದರ್ಶಕವಾಗಿ ದುರಂತದ ಫಲಾನುಭವಿ ಗಳಿಗೆ ನೀಡುವಂತಾಗಬೇಕೇಂದು ಕೊಡಗು ಮಾರಕ ಯೋಜನೆಗಳ ವಿರೋಧಿ ವೇದಿಕೆ ಒತ್ತಾಯಿಸಿದೆ.

ಪೊನ್ನಂಪೇಟೆಯಲ್ಲಿ ವೇದಿಕೆಯ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಕೊಡಗಿನಲ್ಲಿ ಪ್ರಕೃತಿ ದುರಂತಕ್ಕೆ ಜಿಲ್ಲೆಯ ಹಾಗೂ ರಾಜ್ಯದ ಜನತೆ ಸ್ಪಂದಿಸಿದ್ದಾರೆ. ಸಂಕಷ್ಟದಲ್ಲಿರುವ ಕೊಡಗಿನ ಜನರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಬಹಳಷ್ಟು ಅಗತ್ಯ ಸಾಮಾಗ್ರಿ ಗಳನ್ನು ಕಳುಹಿಸಿದ್ದಾರೆ. ಅದೇ ರೀತಿ ಮುಖ್ಯ ಮಂತ್ರಿ ಪರಿಹಾರ ನಿಧಿ ಹಾಗೂ ಕೊಡ ಗಿನ ಜನರಿಗೆ ಸಹಾಯ ಮಾಡುವ ನಿಟ್ಟಿ ನಲ್ಲಿ ಕೊಡಗಿನ ದುರಂತದ ಸಂಧರ್ಭ ಮಾಧ್ಯಮಗಳು ಸಹ ಸ್ಪಂದಿಸಿದ್ದು ಮಾಧ್ಯ ಮಗಳ ಮೂಲಕವು ಸಹ ನಿಧಿ ಸಂಗ್ರಹಕ್ಕೆ ಜನರು ಹಣ ನೀಡಿದ್ದಾರೆ. ಹೀಗೆ ಸಂಗ್ರ ಹವಾದ ಎಲ್ಲಾ ಹಣವನ್ನು ದುರಂತದ ಸಂತ್ರ ಸ್ತರಿಗೆ ಪುನರ್‍ವಸತಿ ಕಲ್ಪಿಸಲು ವಿನಿ ಯೋಗವಾಗಬೇಕು. ಕೊಡಗಿನ ದುರಂ ತದ ಹೆಸರಿನಲ್ಲಿ ಸಂಗ್ರಹವಾದ ಹಣ ಬೇರೆ ಯಾವುದೇ ವ್ಯವಹಾರಕ್ಕೆ ಮುಖ್ಯಮಂತ್ರಿ ಗಳಾಗಲಿ, ಸಂಬಂಧಿಸಿದ ಮಾಧ್ಯ ಮಗಳಾಗಲಿ ವಿನಿಯೋಗಿಸಿಕೊಳ್ಳಬಾರದು. ಈ ನಿಟ್ಟಿನಲ್ಲಿ ಸಾರ್ವಜನಿಕರೆದುರು ಪಾರ ದರ್ಶಕವಾದ ವಿವರವನ್ನು ನೀಡುವಂತಾಗ ಬೇಕೆಂದು ಒತ್ತಾಯಿಸಲಾಯಿತು.

ದುರಂತಕ್ಕೀಡಾದ ಪ್ರದೇಶದ ಮಕ್ಕಳನ್ನು ಸೇನೆಗೆ ಭರ್ತಿ ಮಾಡಲು ಎಂ.ಇ.ಜಿ, ಕೊಡವ ಸಮಾಜದೊಂದಿಗೆ ವ್ಯವಹರಿಸಿ ಸೇನಾ ನೇಮಕಾತಿ ರ್ಯಾಲಿಯನ್ನು ಜಿಲ್ಲೆ ಯಲ್ಲಿ ನಡೆಸಲು ವ್ಯವಹರಿಸಲಾಗುತ್ತಿದೆ. ದುರಂತಕ್ಕೀಡಾದ ಜನರು ತಮ್ಮ ಗ್ರಾಮ ದಲ್ಲಿಯೆ, ಮನೆ ನಿರ್ಮಿಸಿಕೊಳ್ಳಲು ಬಯ ಸಿದರೆ, ಅಲ್ಲಿಯೆ ಸರ್ಕಾರ ಮನೆ ನಿರ್ಮಿಸಿ ಕೊಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಯ ವರು ಸಹ ಸಹಮತ ವ್ಯಕ್ತಪಡಿಸಿದ್ದು, ತಮ್ಮ ಸ್ವಂತ ಗ್ರಾಮದಲ್ಲಿ ಸಂತ್ರಸ್ತರು ಬಯಸುವ ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಕೊಡಗಿನ ಮೂಲಕ ರೈಲ್ವೆ ಮಾರ್ಗ ಮತ್ತು ಮೈಸೂರು ಮಡಿಕೇರಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆ ಯಿಂದ ಜಿಲ್ಲೆಗೆ ದೊಡ್ಡ ಮಟ್ಟದ ಹಾನಿ ಯಾಗಲಿದ್ದು, ಈ ಯೋಜನೆಯನ್ನು ವಿರೋ ಧಿಸಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಎಲ್ಲಾ ಜಿಲ್ಲೆಯ ಜನ ಪ್ರತಿನಿಧಿಗಳಿಗೆ ವಿವರ ವಾದ ಮನವಿ ಪತ್ರವನ್ನು ಕಳುಹಿಸಲೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭ ಸಭೆಯಲ್ಲಿ ವೇದಿಕೆಯ ಪ್ರಮುಖರಾದ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ, ಜಮ್ಮಡ ಗಣೇಶ್‍ಅಯ್ಯಣ್ಣ, ಬ್ರಿಗೇಡಿಯರ್ ಎಂ.ಎ.ದೇವಯ್ಯ, ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್‍ಅಪ್ಪಯ್ಯ, ಸಲ ಹೆಗಾರ ಚೆಪ್ಪುಡಿರ ಶೆರಿಸುಬ್ಬಯ್ಯ, ಯುಕೋ ಸಂಘಟನೆಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಮಲ್ಲಮಾಡ ಪ್ರಭುಪೂಣಚ್ಚ, ಮತ್ತು ಕೊಂಗಂಡ ಅಚ್ಚಯ್ಯ ಇತರರು ಹಾಜರಿದ್ದರು.

Translate »