ಮೈಸೂರಿನಲ್ಲಿ ಕೊಡಗಿನ ಜನತೆಗೆ ಪಾಸ್‍ಪೋರ್ಟ್ ಸೇವೆ
ಕೊಡಗು

ಮೈಸೂರಿನಲ್ಲಿ ಕೊಡಗಿನ ಜನತೆಗೆ ಪಾಸ್‍ಪೋರ್ಟ್ ಸೇವೆ

November 10, 2018

ಮಡಿಕೇರಿ: ಜಿಲ್ಲೆಯ ಪಾಸ್‍ಪೋರ್ಟ್ ಅಪೇಕ್ಷಿತರಿಗೆ ಮೈಸೂರು ಮೇಟಗಳ್ಳಿ ಅಂಚೆ ಕಚೇರಿಯಲ್ಲಿ ತೆರೆಯಲಾಗಿರುವ ಪಾಸ್‍ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್‍ಪೋರ್ಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಮಂದಿ ಪಾಸ್‍ಪೋರ್ಟ್‍ಗಾಗಿ ಮಂಗ ಳೂರು ಅಥವಾ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದರಿಂದ ತೊಂದರೆಯಾಗುತ್ತಿದ್ದುದನ್ನು ಗಮನಿಸಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರಿಗೆ ಮೈಸೂರಿನ ಪಾಸ್‍ಪೋರ್ಟ್ ಸೇವಾ ಕೇಂದ್ರದಲ್ಲಿ ಕೊಡಗಿನ ಮಂದಿಗೆ ಅವಕಾಶ ನೀಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವರು ಮೈಸೂರಿನಲ್ಲಿ ಪಾಸ್‍ಪೋರ್ಟ್ ಸೇವೆಯನ್ನು ಒದಗಿಸಿಕೊಟ್ಟಿದ್ದು, ಜನತೆ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರತಾಪ್ ಸಿಂಹ ಕೋರಿದ್ದಾರೆ.

Translate »