ಕುಶಾಲನಗರ: ಪಟ್ಟಣದ ರಾಧಾಕೃಷ್ಣ ಬಡಾವಣೆಯಲ್ಲಿರುವ ಮುಳ್ಳುಸೋಗೆ ಗ್ರಾಮ ದೇವತೆ ಶ್ರೀ ಕೋಣ ಮಾರಿಯಮ್ಮ ದೇವಿಯ 14ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಇತ್ತೀಚೆಗೆ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಶ್ರೀ ಕೋಣ ಮಾರಿಯಮ್ಮ ದೇವತಾ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ದಂತೆ ಸಾರ್ವಜನಿಕರ ಹಾಗೂ ದಾನಿಗಳ ಸಹಕಾರದೊಂದಿಗೆ ಶಕ್ತಿ ದೇವಿಯ ಹಬ್ಬ ವನ್ನು ವೈಶಿಷ್ಟಪೂರ್ಣವಾಗಿ ಆಚರಿಸಲಾಯಿತು. ಮುಳ್ಳುಸೋಗೆ ಗ್ರಾಮದ ಪಟೇಲ್ ಎಂ.ಎನ್. ಬಸಪ್ಪ ಅವರ ಮನೆಯಲ್ಲಿರುವ ದೇವಿಯ ವಿಗ್ರ ಹಗಳನ್ನು ತಂದು ಅಂದು ಬೆಳಿಗ್ಗೆ 5 ಗಂಟೆಗೆ…
ಕೂಡಿಗೆ ಬಳಿ ಯುವಕನಿಗೆ ಚೂರಿ ಇರಿತ
November 11, 2018ಕುಶಾಲನಗರ: ಸಮೀಪದ ಕೂಡಿಗೆ ಗ್ರಾ.ಪಂ.ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕೇವಲ ಶನಿವಾರ ಸಂಜೆ ಯುವಕನೋರ್ವನಿಗೆ ಚೂರಿಯಿಂದ ಇರಿದ ಪ್ರಕರಣ ವರದಿಯಾಗಿದೆ. ಹುದುಗೂರು ಗ್ರಾಮದ ನಿವಾಸಿ ಕಿರಣ್ (26 ವರ್ಷ)ಹಲ್ಲೆಗೆ ಒಳಗಾದ ಯುವಕ. ಈತ ಸಿದ್ದಾಪುರ ಬಳಿಯ ರೇಸಾರ್ಟ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರಜೆ ಮೇಲೆ ತವರೂರಿಗೆ ಬಂದಿದ್ದ. ಶನಿವಾರ ಸಂಜೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಕಿರಣ್ ಹೊಟ್ಟೆ ಭಾಗಕ್ಕೆ…
ಕುಶಾಲನಗರದಲ್ಲಿ ಮಾಂಗಲ್ಯ ಸರ ಕಳವು
November 10, 2018ಕುಶಾಲನಗರ: ಇಲ್ಲಿನ ರಾಧಾಕೃಷ್ಣ ಬಡಾವಣೆಯ ಗೌಡ ಸಮಾಜ ರಸ್ತೆಯಲ್ಲಿರುವ ಶ್ರೀ ಕೋಣಮಾರಿ ಯಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಅಪಹರಣ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ದೇವಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಗುಮ್ಮನಕೊಲ್ಲಿ ಗ್ರಾಮದ ಮಹಿಳೆ ಪೂವಮ್ಮ ಮಾಂಗಲ್ಯ ಸರ ಕಳೆದುಕೊಂಡವರು. 25 ಗ್ರಾಂ ತೂಕವುಳ್ಳ ಈ ಸರದ ಬೆಲೆ ರೂ.85 ಸಾವಿರ ಮೌಲ್ಯದ್ದಾಗಿದೆ. ಪೊಲೀಸ್ ಭದ್ರತೆಯ ನಡುವೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂದ…
ಕುಶಾಲನಗರ ಪಪಂ ಚುನಾವಣೆ: 16 ವಾರ್ಡ್ಗೆ 66 ಅಭ್ಯರ್ಥಿ
October 17, 2018ಕುಶಾಲನಗರ: ಕುಶಾಲನಗರ ಪಪಂ 16 ವಾರ್ಡ್ಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 66 ಮಂದಿ ಅಭರ್ಥಿಗಳು 68 ನಾಮ ಪತ್ರಗಳನ್ನು ಮಂಗಳವಾರ ಚುನಾವಣಾ ಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅ.16 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆವರೆಗೆ ನಾಮ ಪತ್ರ ಸಲ್ಲಿಸಲು ಏಕ ದಿನವನ್ನು ಮಾತ್ರ ಚುನಾವಣಾ ಆಯೋಗ ನಿಗದಿ ಪಡಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ಸಲ್ಲಿಸಿದ ಇಬ್ಬರ ನಾಮಪತ್ರ ಹೊರತು ಪಡಿಸಿ ಉಳಿದ 65 ಮಂದಿ ಒಂದೇ ದಿನ…
ಕುಶಾಲನಗರ ಬಳಿ ಮೀನು ಅಂಗಡಿಗೆ ನುಗ್ಗಿ 1.5 ಲಕ್ಷ ದರೋಡೆ
October 16, 2018ಅಂಗಡಿ ಮಾಲೀಕ ಸೇರಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಕುಶಾಲನಗರ: ಮೀನು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ 1.5 ಲಕ್ಷ ರೂ. ದರೋಡೆ ಮಾಡಿದ ಘಟನೆ ಇಂದು ಸಂಜೆ ಇಲ್ಲಿಗೆ ಸಮೀಪದ ಗಂಧದ ಕೋಟೆಯಲ್ಲಿ ನಡೆದಿದೆ. ಗಂಧದಕೋಟೆಯ ಮೀನು ಅಂಗಡಿ ಮಾಲೀಕ ದೀರಾರ್ ಮತ್ತು ನೌಕರ ರಜಾಕ್ ಮೇಲೆ ದರೋಡೆ ಕೋರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಅವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ 7ಗಂಟೆ ಸುಮಾರಿನಲ್ಲಿ ಮಾದಪಟ್ಟಣದ ಸುಬ್ಬು, ಬೈಲ್ಕುಪ್ಪೆಯ ಆನಂದ್ ಸೇರಿದಂತೆ ಐವರ ತಂಡ…
ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆ; ಕಾಂಗ್ರೆಸ್ ಪಟ್ಟಿ ಪ್ರಕಟ
October 16, 2018ಕುಶಾಲನಗರ: ಪಟ್ಟಣ ಪಂಚಾಯಿತಿ ಚುನಾವಣೆಗೆ 16 ವಾರ್ಡ್ಗಳಿಂದ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್ ಬಿಡುಗಡೆಗೊಳಿಸಿದರು. ಪಟ್ಟಿ ಈ ಹೀಗಿದೆ: ಪಟ್ಟಿಯಲ್ಲಿ ಹಾಲಿ ಪಪಂ ಇಬ್ಬರು ಸದಸ್ಯರು ಟಿಕೆಟ್ ಪಡೆದವರಾಗಿದ್ದು, ಉಳಿದ ಎಲ್ಲ ಅಭ್ಯರ್ಥಿಗಳು ಹೊಸ ಮುಖಗಳಾಗಿವೆ . 1ನೇ ವಾರ್ಡ್ ಶೇಖ್ ಕಲೀಮುಲ್ಲಾ : 2ನೇ ವಾರ್ಡ್ – ಪುಟ್ಟಲಕ್ಷ್ಮಿ ; 3ನೇ ವಾರ್ಡ್ – ಪ್ರಮೋದ್ ಮುತ್ತಪ್ಪ ; 4ನೇ ವಾರ್ಡ್- ಮೆಹರುನ್ನೀಸಾ :5ನೇ ವಾರ್ಡ್ –…
ಅಕ್ರಮ ಶ್ರೀಗಂಧ ಸಾಗಾಟ; ಮಾಲು ಸಮೇತ ಆರೋಪಿಗಳ ಬಂಧನ
October 10, 2018ಕುಶಾಲನಗರ: ಉತ್ತರ ಕೊಡಗಿನ ಬಾಣವಾರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿ ಯಲ್ಲಿ ಕಾನೂನು ಬಾಹಿರವಾಗಿ ಶ್ರೀಗಂಧದ ನಾಟ ಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಮಾಲು ಸಮೇತ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದರು. ಆರೋಪಿಗಳಿಂದ ರೂ.10 ಲಕ್ಷ ಮೌಲ್ಯದ ಶ್ರೀಗಂಧ ನಾಟ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ತೊರೆನೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಅಳು ವಾರದಲ್ಲಿ ಶ್ರೀಗಂಧದ ನಾಟಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚಿಕ್ಕ ಅಳುವಾರ ಗ್ರಾಮದ ಶಿವರಾಜ್ ಕುಮಾರ್ ಹಾಗೂ…
ನಾಲೆಗೆ ಹಾರಿ ನಿರಾಶ್ರಿತ ಆತ್ಮಹತ್ಯೆ
October 9, 2018ಕುಶಾಲನಗರ: ಮನನೊಂದ ಸಂತ್ರಸ್ತನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲ ನಗರ ಸಮೀಪದ ಗುಡ್ಡೆ ಹೊಸೂರಿನಲ್ಲಿ ಜರುಗಿದೆ. ಮೂಲತಃ ಸೋಮವಾರಪೇಟೆ ಸಮೀಪದ ಸೂರ್ಲಬ್ಬಿ ನಿವಾಸಿಯಾದ ವಿಜು ಭೀಮಯ್ಯ(42) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಈತನ ಮನೆಯು ಹಾನಿಯಾಗಿದ್ದು, ಆ ಕಾರಣದಿಂದಾಗಿ ಇತ್ತೀಚೆಗೆ ಗುಡ್ಡೆಹೊಸೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದ್ದು ಗುಡ್ಡೆ ಹೊಸೂರಿನ ಬಿಎಂ ರಸ್ತೆಯ ರಾಜೇಶ್ ಹಲೋ ಬ್ರಿಕ್ಸ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ….
ಉತ್ತಮ ಶಿಕ್ಷಣ ನೀಡುವ ಮೂಲಕ ಯುವ ಜನಾಂಗವನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯ
September 28, 2018ಕುಶಾಲನಗರ: ಉತ್ತಮ ಶಿಕ್ಷಣ ನೀಡುವ ಮೂಲಕ ಯುವ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯ ಎಂದು ವಿರಾಜಪೇಟೆಯ ಅರಮೇರಿ ಕಳಂ ಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾ ರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ರಾಮ್ ಫೌಂಡೇಶನ್ ಪ್ರಯೋಜಕ ತ್ವದಲ್ಲಿ ಶ್ರೀ ರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪನಿ ಆಶ್ರಯದಲ್ಲಿ ಸ್ಥಳೀಯ ರೈತ ಸಹ ಕಾರ ಭವನದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ವಿದ್ಯಾರ್ಥಿಗಳಿಗೆ ಸಮಾಜ ಮುಖಿ ಶಿಕ್ಷಣ…
ಕಾರು ಚಾಲಕರ ಮತ್ತು ಮಾಲಿಕರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ
September 27, 2018ರೂ.1.13 ಕೋಟಿ ಅವ್ಯವಹಾರ ಲೆಕ್ಕ ಪರಿಶೋಧನೆಯಲ್ಲಿ ಪತ್ತೆ ಹಿಂದಿನ ಅಧ್ಯಕ್ಷರು, ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್, ಸಿವಿಲ್ ಮೊಕದ್ದಮೆ ದಾಖಲಿಸಲು ನಿರ್ಣಯ ಕುಶಾಲನಗರ: ಇಲ್ಲಿನ ಕಾರು ಚಾಲಕರು ಮತ್ತು ಮಾಲೀಕರ ವಿವಿ ದೋದ್ದೇಶ ಸಹಕಾರ ಸಂಘದಲ್ಲಿ ರೂ. 1.13 ಕೋಟಿ ಅವ್ಯವಹಾರ ನಡೆಸಿರುವ ಬಗ್ಗೆ ಲೆಕ್ಕಪರಿಶೋಧನೆ ವರದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅವ್ಯವಹಾರ ನಡೆಸಿರುವ ಸಂಘದ ಹಿಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿರುದ್ಧ ಕ್ರಿಮಿ ನಲ್, ಸಿವಿಲ್ ಮೊಕದ್ದಮೆ ದಾಖಲಿಸುವ ಮೂಲಕ ಕಾನೂನು ಹೋರಾಟ ನಡೆಸಲು ಮಂಗಳವಾರ ನಡೆದ ವಾರ್ಷಿಕ…