Tag: Mandya

3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್
ಮಂಡ್ಯ

3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್

July 13, 2018

ಮಂಡ್ಯ:  ಜೀವನದಿ ಕಾವೇರಿ ಉಗಮತಾಣ ಕೊಡಗಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಇನ್ನೆರಡು ದಿನಗಳಲ್ಲೇ ಅಣೆಕಟ್ಟೆ ಭರ್ತಿಯಾಗುವ ಸಾಧ್ಯತೆ ಇದೆ.! ಕಳೆದ 3 ವರ್ಷಗಳಿಂದ ಬರದಿಂದಾಗಿ ಜಲಾಶಯ ಭರ್ತಿಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗುತ್ತಿರುವುದು ಕಾವೇರಿಕೊಳ್ಳದ ರೈತರಲ್ಲಿ ಸಂತಸ ತಂದಿದೆ. ಇದರಿಂದಾಗಿ ಜಲಾಶಯ ತುಂಬುವ ಶುಭ ಘಳಿಗೆಗಾಗಿ ಜನರು ಕಾತರರಾಗಿದ್ದಾರೆ. 124.80 ಅಡಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ…

ನಾಳೆ ಲೋಕ ಅದಾಲತ್: ನ್ಯಾ.ಜಿ.ತಿಮ್ಮಯ್ಯ
ಮಂಡ್ಯ

ನಾಳೆ ಲೋಕ ಅದಾಲತ್: ನ್ಯಾ.ಜಿ.ತಿಮ್ಮಯ್ಯ

July 13, 2018

ಮಂಡ್ಯ: ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಜು.14 ರಂದು ಲೋಕ ಅದಾಲತ್ ನಡೆಯಲಿದ್ದು, ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಲಯದ ಕಕ್ಷಿದಾರರು ಇತ್ಯರ್ಥ ಪಡಿಸಿಕೊಳ್ಳ ಬಹುದಾದ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾ ಧೀಶೆ ಎಂ.ಭಾರತಿ ಹಾಗೂ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ ತಿಳಿಸಿದರು. ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯ ಸಭಾಂಗಣದಲ್ಲಿ ಈ ಕುರಿತು ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಾಧೀಶರು, ರಾಜೀ ಸಂಧಾನದ ಮೂಲಕ ಎರಡೂ ಕಡೆಯ…

ದೂರುದಾರನ ವಿರುದ್ಧವೇ ತಿರುಗಿಬಿದ್ದ ಪಡಿತರದಾರರು: ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಆರೋಪ, ಅಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ
ಮಂಡ್ಯ

ದೂರುದಾರನ ವಿರುದ್ಧವೇ ತಿರುಗಿಬಿದ್ದ ಪಡಿತರದಾರರು: ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಆರೋಪ, ಅಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ

July 13, 2018

ನಾಗಮಂಗಲ: ತಾಲೂಕಿನ ಬಳಪದ ಮಂಟಿಕೊಪ್ಪಲು ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂಬ ದೂರಿನ ಮೇರೆಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸುಜಾತ ಹುಲ್ಮನಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಬಳಪದಮಂಟಿಕೊಪ್ಪಲು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಗದ್ದೇಬೂವನಹಳ್ಳಿ ಗ್ರಾಪಂ ಸದಸ್ಯ ಅಮ್ಮನಕಟ್ಟೆ ಬಸವರಾಜು ಎಂಬುವರು ಪಡಿತರ ಅಂಗಡಿಯಲ್ಲಿ ಹಲವು ಡಬಲ್ ಕಾರ್ಡ್‍ಗಳಿವೆ. ನಿಗದಿತ ಬೆಲೆಗಿಂತ ಹೆಚ್ಚು ದರ ಪಡೆಯುತ್ತಿದ್ದಾರೆ. ಮರಣ ಹೊಂದಿರುವವರ ಹೆಸರಿನಲ್ಲೂ ಪಡಿತರ ಲಪಟಾಯಿಸಿದ್ದಾರೆ. ತಿಂಗಳಿಗೆ 4…

ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ
ಮಂಡ್ಯ

ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ

July 12, 2018

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದ ಗ್ರಾಮಲೆಕ್ಕಿ ಗರ (ವಿಎ) ವರ್ಗಾವಣೆಗೆ ಒತ್ತಾಯಿಸಿ ನಗರದ ವಿಶ್ವೇಶ್ವ ರಯ್ಯ ಪ್ರತಿಮೆ ಎದುರು ಬುಧ ವಾರ ವೃತ್ತಗಳ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧಿ ಕಾರಿ ಅವರಿಗೆ ಮನವಿ ಸಲ್ಲಿ ಸಿದ ಪ್ರತಿಭಟನಾಕಾರರು, ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದಲ್ಲಿ ಕಳೆದ 4 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿ ನಿಂಗಪ್ಪಾಜಿ ಲಂಚಕೋರರಾಗಿದ್ದಾರೆಂದು ಆರೋಪಿಸಿದರು. ಲಂಚ ನೀಡದಿದ್ದರೆ ಸಬೂಬು ಹೇಳುತ್ತಾರೆ. ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ…

ಕೃಷಿ ಸಾಲ ಮನ್ನಾಕ್ಕೆ ಒತ್ತಾಯಿಸಿ ರಸ್ತೆ ತಡೆ
ಮಂಡ್ಯ

ಕೃಷಿ ಸಾಲ ಮನ್ನಾಕ್ಕೆ ಒತ್ತಾಯಿಸಿ ರಸ್ತೆ ತಡೆ

July 12, 2018

ಭಾರತೀನಗರ:  ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಬುಧವಾರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿನ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಯನ್ನು ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರು ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಬರಗಾಲಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಹಾಗೂ ಕೃಷಿಗಾಗಿ ಸಾಲ ಸಿಗದಿದ್ದ ಸಂದರ್ಭದಲ್ಲಿ ಚಿನ್ನಾ ಭರಣ…

ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ
ಮಂಡ್ಯ

ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ

July 12, 2018

ಮಂಡ್ಯ: ‘ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರದೇಶದಲ್ಲಿರುವ ಎಲ್ಲಾ ಕೆರೆಗಳಿಗೆ ನಾಲೆಗಳ ನೇರ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಧಿಕಾರಿ ಗಳು ಶೀಘ್ರವೇ ಸಿದ್ಧಪಡಿಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಕಾವೇರಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಿ.ಎಸ್. ಪುಟ್ಟರಾಜು ಹೇಳಿದರು. ಬೆಂಗಳೂರಿನ ವಿಧಾನ ಸೌಧದ ಕೊಠಡಿ ಸಂಖ್ಯೆ 303ರಲ್ಲಿ ಬುಧವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರ ವ್ಯವಸಾಯಕ್ಕೆ ಸಹಕಾರಿಯಾಗು ವಂತಹ ಬಹಳಷ್ಟು…

ಹಾಲು ಶೀತಲೀಕರಣ ಘಟಕಕ್ಕೆ ಚಾಲನೆ: ಶೀಘ್ರದಲ್ಲಿಯೇ ಮನ್‍ಮುಲ್ ಕ್ಯಾನ್‍ಮುಕ್ತ ಒಕ್ಕೂಟ
ಮಂಡ್ಯ

ಹಾಲು ಶೀತಲೀಕರಣ ಘಟಕಕ್ಕೆ ಚಾಲನೆ: ಶೀಘ್ರದಲ್ಲಿಯೇ ಮನ್‍ಮುಲ್ ಕ್ಯಾನ್‍ಮುಕ್ತ ಒಕ್ಕೂಟ

July 12, 2018

ಮಂಡ್ಯ: ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಹಾಲು ಉತ್ಪಾ ದಕರ ಸಹಕಾರ ಸಂಘದಲ್ಲಿ ನಿರ್ಮಿಸಿರುವ ಹಾಲು ಶೀತಲೀಕರಣ ಘಟಕವನ್ನು ಬುಧವಾರ ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗಾ ಗಲೇ 190 ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ. ಇನ್ನು 105 ಬಿಎಂಸಿ ಕೇಂದ್ರಗಳು ಆಗಬೇಕಿದ್ದು, ಒಟ್ಟು ಜಿಲ್ಲೆಯಲ್ಲಿ 200 ಬಿಎಂಸಿ ಕೇಂದ್ರಗಳು ಆರಂಭಿಸಲಾಗು ವುದು. ಎಲ್ಲವೂ ಪೂರ್ಣಗೊಂಡಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಕ್ಯಾನ್‍ಮುಕ್ತ ಒಕ್ಕೂಟ ವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಮನ್‍ಮುಲ್ ಕೇವಲ…

ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ
ಮಂಡ್ಯ

ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ ಅಂಗನವಾಡಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

July 11, 2018

ಮಂಡ್ಯ: ಅನುದಾನ ಕಡಿತ, ಖಾಸಗೀಕರಣಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರ ದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಮತ್ತು ಸಿಐಟಿಯು ನೇತೃತ್ವದಲ್ಲಿಂದು ಬೆಳಿಗ್ಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಸಮಾವೇಶಗೊಂಡ ಬೃಹತ್ ಸಂಖ್ಯೆ ಯಲ್ಲಿದ್ದ ಪ್ರತಿಭಟನಾಕಾರರು ಬೆಂಗಳೂರು -ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ನಡೆಸಿದರು. ಬಳಿಕ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ನಡೆಸಿದರು. ಅಂಗನವಾಡಿ ನೌಕರರ ಬೇಡಿಕೆ ಈಡೇ ರಿಸದೆ ದಿಕ್ಕು…

ಆಟೋ ಪಲ್ಟಿ: ಶಿಕ್ಷಕಿ ಸಾವು, 8 ಮಂದಿಗೆ ಗಾಯ
ಮಂಡ್ಯ

ಆಟೋ ಪಲ್ಟಿ: ಶಿಕ್ಷಕಿ ಸಾವು, 8 ಮಂದಿಗೆ ಗಾಯ

July 11, 2018

ಮಂಡ್ಯ:  ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಪ್ಯಾಸೆಂಜರ್ ಆಟೋ ಪಲ್ಟಿಯಾಗಿ ಶಿಕ್ಷಕಿಯೊಬ್ಬರು ಮೃತಪಟ್ಟು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಜಲಸೂರ್ -ಹುಲಿಯೂರು ದುರ್ಗ ರಾಜ್ಯ ಹೆದ್ದಾರಿಯ ಧರ್ಮಸ್ಥಳ ಗೇಟ್ ಬಳಿ ಇಂದು ಸಂಜೆ ನಡೆದಿದೆ. ಕೆ.ವಿ.ಇಂದ್ರಮ್ಮ (42) ಸಾವಿಗೀಡಾದ ಶಿಕ್ಷಕಿ. ಘಟನೆ ವಿವರ: ಇಂದ್ರಮ್ಮ ಅವರು ಮಂಗಳವಾರ ಸಂಜೆ ತಾನು ಕೆಲಸ ಮಾಡು ತ್ತಿದ್ದ ತಟ್ಟೇಕೆರೆಯ ಸರ್ಕಾರಿ ಶಾಲೆಯಿಂದ ಸ್ವಗ್ರಾಮ ಕೆ.ಮಲ್ಲೇನಹಳ್ಳಿ ಗ್ರಾಮಕ್ಕೆ ತೆರಳಲು ಪ್ಯಾಸೆಂಜರ್ ಆಪೆ ಆಟೋ(ಕೆ.ಎ.54, 2095)ದಲ್ಲಿ ಬರುತ್ತಿದ್ದರು. ಮಾರ್ಗ…

ಸಂಪೂರ್ಣ ಸಾಲ ಮನ್ನಾಕ್ಕಾಗಿ ರೈತರಿಂದ ವಿವಿಧೆಡೆ ಪ್ರತಿಭಟನೆ
ಮಂಡ್ಯ

ಸಂಪೂರ್ಣ ಸಾಲ ಮನ್ನಾಕ್ಕಾಗಿ ರೈತರಿಂದ ವಿವಿಧೆಡೆ ಪ್ರತಿಭಟನೆ

July 10, 2018

ಮಂಡ್ಯ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಹಲವೆಡೆ ಸೋಮವಾರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ಮಂಡ್ಯ, ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮಂಡ್ಯ: ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಂಡ್ಯ ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಮಾ ವೇಶಗೊಂಡ ಪ್ರತಿಭಟನಾಕಾರರು, ಧರಣಿ ನಡೆಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡದಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ…

1 43 44 45 46 47 56
Translate »