Tag: missing

ವಿದ್ಯಾರ್ಥಿ ನಾಪತ್ತೆ
ಮೈಸೂರು

ವಿದ್ಯಾರ್ಥಿ ನಾಪತ್ತೆ

August 11, 2019

ಮೈಸೂರು, ಆ.10-ಪ್ರೌಢಶಾಲಾ ವಿದ್ಯಾರ್ಥಿಯೋರ್ವ ನಾಪತ್ತೆ ಯಾದ ಬಗ್ಗೆ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚಾಮುಂಡಿ ಮಕ್ಕಳ ಮನೆಯಲ್ಲಿ ವಾಸವಿದ್ದು, ಬೃಂದಾವನ ಬಡಾ ವಣೆಯಲ್ಲಿರುವ ಕುವೆಂಪು ಸ್ಮಾರಕ ಶತಮಾನೋತ್ಸವ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಲ್.ಬಾಲಾಜಿ (15) ಜುಲೈ 31ರಂದು ಶಾಲೆಗೆ ತೆರಳುವುದಾಗಿ ಹೇಳಿ ಹೋದವನು ಈವರೆಗೆ ವಾಪಸ್ಸಾಗಿಲ್ಲ ಎಂದು ಮಕ್ಕಳ ಮನೆಯ ಕಾರ್ಯದರ್ಶಿ ವಿವಿ.ರಘೋತ್ತಮ ರಾವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈತನ ಬಗ್ಗೆ ಮಾಹಿತಿ…

ಗೃಹಿಣಿ ನಾಪತ್ತೆ
ಮೈಸೂರು

ಗೃಹಿಣಿ ನಾಪತ್ತೆ

May 6, 2019

ಮೈಸೂರು: ಜಯಪುರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಗೃಹಿಣಿಯೋರ್ವರು ನಾಪತ್ತೆಯಾಗಿದ್ದಾರೆ. ಮೈಸೂರು ತಾಲೂಕಿನ ಮಾರ್ಗಳ್ಳಿಹುಂಡಿ ನಿವಾಸಿ ಸಿದ್ದರಾಮ ಅವರ ಪತ್ನಿ ಲಕ್ಷ್ಮಿ ನಾಪತ್ತೆಯಾದವರು. ಈ ಹಿಂದೆ ಗಂಡ ಹೆಂಡತಿ ಸಂಸಾ ರದ ವಿಚಾರದಲ್ಲಿ ಸಣ್ಣಪುಟ್ಟ ಜಗಳ ನಡೆದು ಎರಡು ಮನೆಯವರು ಬುದ್ಧಿವಾದ ಹೇಳಿ ಸರಿಪಡಿಸಿದ್ದರು. ಆದರೆ ಏ.30ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಲಕ್ಷ್ಮಿ ಗಂಡನ ಮನೆಯಿಂದ ಯಾರಿಗೂ ಹೇಳದೆ ಹೋಗಿದ್ದು, ಹೋಗುವಾಗ ಒಡವೆ ಮತ್ತು ಹಣ ತೆಗೆದುಕೊಂಡು ಹೋಗಿದ್ದಾಳೆ ಎಂದು ಆಕೆಯ ತಂದೆ ಮರಿದೊಡ್ಡೇಗೌಡ ದೂರು…

ಬಾಲಕಿ ಸೇರಿ ಮೂವರು ನಾಪತ್ತೆ
ಮೈಸೂರು

ಬಾಲಕಿ ಸೇರಿ ಮೂವರು ನಾಪತ್ತೆ

February 13, 2019

ಮೈಸೂರು: ಬಾಲಕಿ ಸೇರಿದಂತೆ ಮೂವರು ನಾಪತ್ತೆಯಾಗಿರುವ ಬಗ್ಗೆ ಮೈಸೂ ರಿನ ನಜರ್‍ಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿ ರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿದ್ದ 17 ವರ್ಷದ ಅಣ್ಣಮ್ಮ, ಫೆ.9ರಿಂದ ನಾಪತ್ತೆಯಾಗಿದ್ದಾಳೆ. ನಜರ್‍ಬಾದ್ ಪಾಪರಾಂ ರಸ್ತೆ ನಿವಾಸಿ ಕಮಲ(19) ಜ.3ರಂದು ಹಾಗೂ ವಿದ್ಯಾ ನಗರ, 5ನೇ ಕ್ರಾಸ್ ನಿವಾಸಿ ತ್ರಿವೇಣಿ(23) ಕಳೆದ ಜ.30ರಂದು ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ನಜರ್‍ಬಾದ್ ಠಾಣೆ…

ವೃದ್ಧೆ ನಾಪತ್ತೆ
ಮೈಸೂರು

ವೃದ್ಧೆ ನಾಪತ್ತೆ

October 5, 2018

ಮೈಸೂರು: ಕುಂಬಾರಕೊಪ್ಪಲು ನಿವಾಸಿ ಲಕ್ಷ್ಮಮ್ಮ ಎಂಬುವರು ನಾಪತ್ತೆಯಾದ ಬಗ್ಗೆ ಲಷ್ಕರ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸೆ.25ರಂದು ಠಾಣೆಗೆ ನೀಡಿರುವ ದೂರಿನಲ್ಲಿ ಲಕ್ಷ್ಮಮ್ಮ(80) ಫೆ.27ರಂದು ಕುಂಬಾರ ಕೊಪ್ಪಲಿನಿಂದ ಲಷ್ಕರ್ ಮೊಹಲ್ಲಾದ ಕುಂಬಾರಗೇರಿಗೆ ಬಂದ ವರು, ಮನೆಗೆ ವಾಪಸ್ ಹೋಗಿಲ್ಲ ಎಂದ ಮೊಮ್ಮಗ ಕಿರಣ್ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಾರಿಗಾ ದರೂ ಮಾಹಿತಿ ಇದ್ದಲ್ಲಿ, ಲಷ್ಕರ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2418107, 2418307 ಅಥವಾ 94480802232 ಸಂಪರ್ಕಿಸಬೇಕೆಂದು ಪೊಲೀಸ್ ಪ್ರಕಟಣೆ…

ಚಾಮರಾಜನಗರದ ಯುವಕ ಕೇರಳದಲ್ಲಿ ನಾಪತ್ತೆ
ಚಾಮರಾಜನಗರ

ಚಾಮರಾಜನಗರದ ಯುವಕ ಕೇರಳದಲ್ಲಿ ನಾಪತ್ತೆ

September 10, 2018

ಚಾಮರಾಜನಗರ:  ಕೇರಳದ ಪಾಲಿಕ್ಕಲ್ ಬಜಾರ್‍ನಲ್ಲಿನ ಮೈತ್ರಿ ಅರ್ಥ್ ಮೂವರ್ಸ್‍ನಲ್ಲಿ ಹಿಟಾಚಿ ಹಾಗೂ ಜೆಸಿಬಿ ಆಪರೇಟರ್ ಕೆಲಸ ಮಾಡುತ್ತಿದ್ದ ಯುವಕನೋರ್ವ ಒಂದು ತಿಂಗಳಿನಿಂದ ನಾಪತ್ತೆ ಆಗಿದ್ದು, ಆತನ ಪೋಷ ಕರು ಕಂಗಲಾಗಿದ್ದಾರೆ. ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಗ್ರಾಮದ ಮಂಟಯ್ಯ ಎಂಬುವವರ ಮಗ ಅಶೋಕ್ ಕುಮಾರ್ (25) ನಾಪತ್ತೆ ಆಗಿದ್ದು, ಈ ಬಗ್ಗೆ ಸಂತೇಮರಹಳ್ಳಿ ಹಾಗೂ ಕೇರಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಶೋಕ್ ಕುಮಾರ್ ಕಳೆದ ಏಳೆಂಟು ತಿಂಗಳಿನಿಂದ ಕೇರಳದ ಪಾಲಿಕ್ಕಲ್ ಬಜಾರ್ ನಲ್ಲಿ ಮೈತ್ರಿ ಅರ್ಥ್ ಮೂವರ್ಸ್‍ನಲ್ಲಿ…

ಕೆ.ಆರ್. ಆಸ್ಪತ್ರೆಯಿಂದ ವೃದ್ಧೆ ನಾಪತ್ತೆ
ಮೈಸೂರು

ಕೆ.ಆರ್. ಆಸ್ಪತ್ರೆಯಿಂದ ವೃದ್ಧೆ ನಾಪತ್ತೆ

August 31, 2018

ಮೈಸೂರು:  ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 85 ವರ್ಷದ ವೃದ್ಧೆಯೋರ್ವರು ಕೆಲವು ದಿನಗಳಿಂದ ನಾಪತ್ತೆಯಾಗಿ ರುವ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖ ಲಾಗಿದೆ. ಮೈಸೂರಿನ ರಾಜೀವ್‍ನಗರ 1ನೇ ಹಂತದ ನಿವಾಸಿ ಖತೀಜಾ ಬೀ ನಾಪತ್ತೆಯಾದವರು. ಇವರು ಆ.23ರಂದು ಬೆಳಿಗ್ಗೆ ಮನೆಯಿಂದ ಹೊರಟವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ. ಕ್ಯಾತಮಾರನಹಳ್ಳಿ ಚರ್ಚ್ ಬಳಿ ಅಸ್ವಸ್ಥರಾಗಿದ್ದ ಬಿದ್ದಿದ್ದ ಖತೀಜಾ ಬೀ ಅವರನ್ನು ಕೆ.ಆರ್. ಆಸ್ಪತ್ರೆಯಲ್ಲಿ ದಾಖಲು ಮಾಡ ಲಾಗಿದೆ ಎಂದು ತಿಳಿಯಿತು. ಬಳಿಕ ಖತೀಜಾ ಬೀ ಕೆ.ಆರ್….

ಮೈಸೂರಲ್ಲಿ ಯುವತಿ ನಾಪತ್ತೆ
ಮೈಸೂರು

ಮೈಸೂರಲ್ಲಿ ಯುವತಿ ನಾಪತ್ತೆ

July 24, 2018

ಮೈಸೂರು:  ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋದ ಯುವತಿ ನಾಪತ್ತೆಯಾಗಿರುವ ಪ್ರಕರಣ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹೆಬ್ಬಾಳು ಬಡಾವಣೆಯ ಮಹದೇವಮ್ಮ ಹಾಗೂ ಸೋಮಣ್ಣ ದಂಪತಿ ಪುತ್ರಿ ಎಸ್.ಸೌಮ್ಯಾ(23) ನಾಪತ್ತೆಯಾಗಿರುವ ಯುವತಿ. ಜು.20ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಕಾಲೇಜಿಗೆ ಹೋಗಿ, ಸ್ನೇಹಿತರಿಗೆ ಪುಸ್ತಕ ಕೊಟ್ಟು ಬರುವುದಾಗಿ ತಿಳಿಸಿ ಮನೆಯಿಂದ ಹೋದವಳು ವಾಪಸ್ಸಾಗಿಲ್ಲವೆಂದು ಆಕೆಯ ಪೋಷಕರು ದೂರು ನೀಡಿದ್ದು, ಪ್ರಿಯಕರ ಮಹೇಶ್‍ನೊಂದಿಗೆ ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸೌಮ್ಯಾ ಅವರನ್ನು ವಿವಾಹ ಮಾಡಿಕೊಡುವಂತೆ ಮಹೇಶ್ ಪೀಡಿಸುತ್ತಿದ್ದ. ಇದಕ್ಕೆ…

ವ್ಯಕ್ತಿ ನಾಪತ್ತೆ
ಚಾಮರಾಜನಗರ

ವ್ಯಕ್ತಿ ನಾಪತ್ತೆ

July 12, 2018

ಹನೂರು: ಯುವಕನೊರ್ವ ಕಾಣೆಯಾಗಿರುವ ಬಗ್ಗೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹನೂರು ಸಮೀಪದ ಉದ್ದನೂರು ಗ್ರಾಮದ ಮಹೇಶ್ (25 ವರ್ಷ) ಕಾಣೆಯಾದ ಯುವಕ. ಈ ಬಗ್ಗೆ ಅವರ ತಂದೆ ಮಹದೇವಪ್ಪ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿ ಬಗ್ಗೆ ತಿಳಿದು ಬಂದರೆ 08224-268803, 0821-2445168, ದೂರವಾಣಿ ಮೂಲಕ ಮಾಹಿತಿ ನೀಡುವಂತೆ ಇನ್ಸ್‍ಪೆಕ್ಟರ್ ಪರಶುರಾಮ್ ತಿಳಿಸಿದ್ದಾರೆ.

ವ್ಯಕ್ತಿ ನಾಪತ್ತೆ
ಮೈಸೂರು

ವ್ಯಕ್ತಿ ನಾಪತ್ತೆ

July 9, 2018

ಮೈಸೂರು: ನಗರದ ವಿವಿ ಪುರಂನ ನಿವಾಸಿ ಎಲ್.ಮೋಹನ್‍ಕುಮಾರ್ ಅವರ ತಂದೆ ಜೆ.ಲಕ್ಷ್ಮೀ ನಾರಾಯಣ(64) ಅವರು ಜು.3 ರಂದು ನಗರದ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ಮೋಹನ್ ಕುಮಾರ್ ಅವರು ವಿವಿ ಪುರಂನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದರವರ ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಮಿಶ್ರಿತ ಕಪ್ಪು ಕೂದಲು, ದಪ್ಪ ಮೂಗು ಮೀಸೆ ಬಿಟ್ಟಿರುತ್ತಾರೆ. ಕನ್ನಡ, ತಮಿಳು ಭಾಷೆ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ…

ನಾಪತ್ತೆಯಾಗಿದ್ದ ಬಾಲಕಿ ಮೈಸೂರಿನಲ್ಲಿ ಪತ್ತೆ
ಚಾಮರಾಜನಗರ

ನಾಪತ್ತೆಯಾಗಿದ್ದ ಬಾಲಕಿ ಮೈಸೂರಿನಲ್ಲಿ ಪತ್ತೆ

July 4, 2018

ಹನೂರು: ತಾಲೂಕಿನ ಚಿಗತಾಪುರ ಗ್ರಾಮದಿಂದ ಜೂ. 30ರಂದು ಕಾಣೆಯಾಗಿದ್ದ ಬಾಲಕಿ ಮಂಗಳವಾರ ಮೈಸೂರಿನಲ್ಲಿ ಪತ್ತೆಯಾಗಿದ್ದಾಳೆ. ಸಮೀಪದ ಬಸಪ್ಪನದೊಡ್ಡಿ ಗ್ರಾಮದ ತನ್ವೀರ್‍ಪಾಷಾ ಹಾಗೂ ಚಿಗತಾಪುರ ಗ್ರಾಮ ಬಾಲಕಿಯೊಬ್ಬಳು ಒಟ್ಟಿಗೆ ಕಾಣೆಯಾಗಿದ್ದರು. ಈ ಸಂಬಂಧ ಬಾಲಕಿ ತಂದೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಪಹರಣ ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದರು. ಕಾಣೆ ಯಾಗಿದ್ದ ಬಾಲಕಿ ಸಂಬಂಧಿಕರೊಬ್ಬರ ಮನೆಯಲ್ಲಿರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ತನ್ವೀರ್‍ಪಾಷಾ ಪರಾರಿಯಾಗಿದ್ದಾನೆ. ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

1 2
Translate »