ಗುವಾಹಟಿ, ಡಿ.15- ಪೌರತ್ವ ತಿದ್ದುಪಡಿ ಮಸೂದೆ-2019 ಜಾರಿ ವಿರೋಧಿಸಿ ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಗುವಾಹಟಿಯಲ್ಲಿ ನಡೆದ ಹಿಂಸಾಕೃತ್ಯದಲ್ಲಿ ಬುಲೆಟ್ ದಾಳಿಗೆ ತುತ್ತಾಗಿದ್ದ ಈಶ್ವರ್ ನಾಯಕ್ ಇಂದು ಅಸುನೀಗಿದ್ದಾರೆ. 25 ವರ್ಷದ ಶಾಪಿಂಗ್ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಈಶ್ವರ್ ನಿಧನರಾಗಿದ್ದಾರೆ. ಕಳೆದ ಶುಕ್ರವಾರ ರಾತ್ರಿ 6 ಮಂದಿ ದುಷ್ಕರ್ಮಿಗಳ ತಂಡದಿಂದ ತೈಲ ಟ್ಯಾಂಕರ್ ಮೇಲೆ ಬೆಂಕಿ ಹತ್ತಿ ತೀವ್ರ ಸುಟ್ಟುಹೋಗಿದ್ದ ಮತ್ತೊಬ್ಬ ವ್ಯಕ್ತಿ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ದಿನಗಳ…
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ
December 16, 2019ಮುಂಬೈ, ಡಿ.15-`ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’ ಎಂದು ಹೇಳಿಕೆ ನೀಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವೀರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಎಚ್ಚರಿಕೆ ನೀಡಿದ್ದಾರೆ. ಮುಂಬೈನಲ್ಲಿ ಭಾನುವಾರ ಪ್ರತಿಭಟನಾ ಸಮಾವೇಶ ಆಯೋಜಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂ ಗಳು ದೇವರ ಸಮಾನವಾಗಿ ಪೂಜಿಸುವ ವೀರ್ ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಕೆಳ ಮಟ್ಟಕ್ಕೆ ಇಳಿಸುವ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಹುಲ್ ಗಾಂಧಿ…
ಮಾಗಿ ಉತ್ಸವದಲ್ಲಿ ಅರಮನೆ ಅಂಗಳದಲ್ಲಿ ತಲೆ ಎತ್ತಲಿದೆ `ಹೂವಿನ ಲೋಕ’
December 16, 2019ಡಿ.22ರಿಂದ 31ರವರೆಗೆ ಫಲಪುಷ್ಪ ಪ್ರದರ್ಶನ ಹೂವುಗಳಿಂದಲೇ ವಿವಿಧ ಆಕೃತಿ ರಚನೆ ಸಂಗೀತ ಕಾರ್ಯಕ್ರಮವೂ ಆಯೋಜನೆ ಪ್ರವಾಸಿಗರಿಗೆ ಮನರಂಜನೆಯ ಹಬ್ಬ ಮೈಸೂರು,ಡಿ.15- ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಗೆ ಹಾಗೂ ಪ್ರವಾಸಿಗರಿಗೆ ಅರಮನೆ ಆವರಣದಲ್ಲಿ ಡಿ.22ರಿಂದ 31ರವರೆಗೆ ನಡೆಯಲಿರುವ ಪಲಪುಷ್ಪ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಲಿವೆ. ಬೆಂಗಳೂರು ಅರಮನೆ, ಸಿಂಹಾಸನದ ಮೇಲೆ ಆಸೀನರಾಗಿರುವ ಜಯಚಾಮರಾಜ ಒಡೆಯರ್, ಸ್ವಾಮಿ ವಿವೇಕಾನಂದ ಹಾಗೂ ಕಾಳಿಂಗ ಸರ್ಪ ಸೇರಿದಂತೆ ವಿವಿಧ ಆಕೃತಿಗಳು ಬಣ್ಣ ಬಣ್ಣದ ಹೂವುಗಳಿಂದ…
ಮೈಸೂರಿನಲ್ಲಿ ವರ್ಷಾಂತ್ಯದಲ್ಲಿ ಉತ್ಸವಗಳ ಸಂಭ್ರಮ ವಿವಿಧ ಬಗೆಯ ಕಾರ್ಯಕ್ರಮ ಆಯೋಜನೆ
December 16, 2019ಮೈಸೂರು,ಡಿ.15(ಎಂಟಿವೈ)-ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ವರ್ಷಾಂತ್ಯದಲ್ಲಿ ಉತ್ಸವಗಳ ಸಂಭ್ರಮ ಮನೆ ಮಾಡಲಿದ್ದು, ನಗರದ ಜನತೆ ಹಾಗೂ ಪ್ರವಾಸಿಗರನ್ನು ರಂಜಿಸಲಿದೆ. ಜಿಲ್ಲಾಡಳಿತ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ವಿವಿಧೆಡೆ ಫಲಪುಷ್ಪ ಪ್ರದರ್ಶನ, ಕೇಕ್ ಹಾಗೂ ಪಕ್ಷಿ ಉತ್ಸವ ಆಯೋಜಿಸುವ ಮೂಲಕ ಸದಭಿರುಚಿಯ ಕಾರ್ಯಕ್ರಮದ ಸೊಗಡನ್ನು ಉಣಬಡಿಸಲಿದೆ. ಕಳೆದ ಎರಡು ವರ್ಷದಿಂದ ಮಾಗಿ ಉತ್ಸವವನ್ನು ವರ್ಷಾಂತ್ಯದಲ್ಲಿ ಮೈಸೂರಿನ ಜನತೆ ಹಾಗೂ ವಿವಿಧೆಡೆಯಿಂದ ನಗರಕ್ಕಾಗಮಿಸುವ ಪ್ರವಾಸಿಗರಿಗೆ ಮನ ತಣಿಸುವ ಕಾರ್ಯ ಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ. ಮೊದಲ ವರ್ಷವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ,…
ಸರ್ಕಾರದ ಕಾರ್ಮಿಕ ವಿರೋಧಿ ನೀತಿ: ಕೆಲಸ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಲಕ್ಷಾಂತರ ಕಾರ್ಮಿಕರು
December 16, 2019ಮೈಸೂರು,ಡಿ.15(ಆರ್ಕೆಬಿ)- ಸರ್ಕಾ ರದ ಕಾರ್ಮಿಕ ವಿರೋಧಿ ನೀತಿ ಮತ್ತು ಬಂಡವಾಳಶಾಹಿಗಳ ಪರ ನೀತಿಯಿಂದಾಗಿ ದೇಶದಲ್ಲಿಂದು ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಜೀವನ ನಡೆಸಲಾಗದ ಅತಂತ್ರ ಸ್ಥಿತಿಗೆ ದೂಡಲ್ಪಟ್ಟಿದ್ದಾರೆ ಎಂದು ಎಐಯು ಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮ ಶೇಖರ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಎಐಯು ಟಿಯುಸಿ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶ ಕಟ್ಟುವ ದುಡಿ ಯುವ ಜನ ಇಂದು ಮಾಲೀಕರ ಶೋಷ ಣೆಗೆ,…
ಹದಿಹರೆಯ ಸಮಸ್ಯಾಪೂರ್ಣ ವಯಸ್ಸು: ಪ್ರೊ.ಸೋಮಣ್ಣ
December 16, 2019ಮೈಸೂರು,ಡಿ.15(ಎಂಟಿವೈ)- `ಸಮಸ್ಯಾಪೂರ್ಣ ವಯಸ್ಸು’ ಎಂದು ಕರೆಯುವ ಹದಿಹರೆಯದಲ್ಲಿ ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಮನೋ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸೋಮಣ್ಣ ಕಿವಿಮಾತು ಹೇಳಿದ್ದಾರೆ. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪಿ.ಜಿ. ಬ್ಲಾಕ್ನಲ್ಲಿ ಜಿಲ್ಲಾ ಪಂಚಾ ಯಿತಿ, ಆಯುಷ್ ಇಲಾಖೆ ಹಾಗೂ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಯೋಗ ದೊಂದಿಗೆ ಶುಕ್ರವಾರ ‘ಹದಿ ಹರೆಯದ ಸಮಸ್ಯೆಗಳ ನಿವಾರಣೆ ಮತ್ತು ಮನೋಲ್ಲಾಸದ ಮಾರ್ಗಗಳು’ ವಿಷಯದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಳೆತನ ಹಾಗೂ ಹಿರಿಯತನದ ನಡುವಿನ ವಯಸ್ಸು…
ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಭ್ರಮ
December 16, 2019ಮೈಸೂರು,ಡಿ.15(ಆರ್ಕೆಬಿ)- ಮೈಸೂ ರಿನ ತಿಲಕ್ನಗರದ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿ ಭಾನುವಾರ ಶಾಲೆಯ ಹಳೆಯ ವಿದ್ಯಾರ್ಥಿ ಗಳು ಸಮ್ಮಿಲನಗೊಂಡು ಸಂಭ್ರಮಿಸಿದರು. ಅಪರೂಪಕ್ಕೆ ಒಂದೆಡೆ ಸೇರಿದ ತಮ್ಮ ಶಿಕ್ಷಕರು, ಗೆಳೆಯ, ಗೆಳತಿಯರನ್ನು ಕಂಡು ಹರ್ಷಗೊಂಡರು. ಸಂಕೇತ ಭಾಷೆಯಲ್ಲಿ ಪರಸ್ಪರ ಉಭಯಕುಶಲೋಪರಿ ನಡೆಸಿ ದರು. ಹತ್ತಾರು ವರ್ಷಗಳಿಗಿಂತ ಮುಂಚೆ ತಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ಕಂಡು ಕಾಲಿಗೆರಗಿ ನಮಸ್ಕರಿಸಿದರು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿ ಗಳ ಸಂಘ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿ ಗಳ ಸಮಾಗಮ- ಸಮ್ಮಿಲನ…
ನಾರಾಯಣ ಮುಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಮಗ್ರ ತೂಕ ಇಳಿಸುವಿಕೆಯ ಕ್ಲಿನಿಕ್ ಆರಂಭ
December 16, 2019ಮೈಸೂರು, ಡಿ. 15- ವಿಶ್ವ ಬೊಜ್ಜು ಒಕ್ಕೂಟದ ವರದಿಯ ಪ್ರಕಾರ, ಸ್ಥೂಲಕಾಯ ದಿಂದ ಬಳಲುತ್ತಿರುವ ಜನರ ವಿಷಯದಲ್ಲಿ ಭಾರತವು ವಿಶ್ವದಲ್ಲೇ ಎರಡನೇಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಜನರು ಅಸ್ವಸ್ಥಗೊಳ್ಳಲು ಸ್ಥೂಲಕಾಯತೆ ಮುಖ್ಯ ಕಾರಣವಾಗಿದೆ. ಈ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆ ಹಾಗೂ ಪರಿಹಾರವಿದ್ದರೂ ಸಹ ಜನರಲ್ಲಿ ಅರಿವಿನ ಸಮಸ್ಯೆ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಗಳಿಗೆ ಸರಿಯಾದ ಮಾರ್ಗಗಳು ಸಿಗದ ಕಾರಣದಿಂದಾಗಿ ಹಲವಾರು ಪ್ರಕರಣಗಳು ಸೂಕ್ತ ವೈದ್ಯಕೀಯ ರೋಗ ನಿರ್ಣಯ ಕೈಗೊಳ್ಳಲಾಗದೆ ಚಿಕಿತ್ಸೆಗಳು ಬಾಕಿ ಉಳಿದೆವೆ. ಈ ಅಂತರವನ್ನು ನಿವಾರಿಸುವ ಪ್ರಯತ್ನ…
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಸಂಕಲ್ಪ
December 16, 2019ಮೈಸೂರು, ಡಿ.15(ಎಸ್ಬಿಡಿ)- ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಮೈಸೂರು ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಳೆದ 2018-19ನೇ ಸಾಲಿನಲ್ಲಿ ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿತ್ತು. ಪ್ರಸಕ್ತ 2019-20ನೇ ಸಾಲಿನಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆಯಬೇಕೆಂಬ ಗುರಿ ಯೊಂದಿಗೆ ಇದೇ ಮೊದಲ ಬಾರಿಗೆ `ಆಕಾಶವಾಣಿ ಫೋನ್ ಇನ್’ ಸೇರಿದಂತೆ 20 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು(ಡಿಡಿಪಿಐ), ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಡಿ.17ರಿಂದ ಫೋನ್ ಇನ್:…
ಬಿಎಸ್ವೈ ಮುಂದೆ ಸವಾಲುಗಳ ಸಾಲು ಸಾಲು…
December 15, 2019ಸಂಪುಟದಿಂದ ಯಾರನ್ನು ಕೈಬಿಡುವುದು, ಯಾರ ‘ಕೈ’ ಹಿಡಿದು ಸಂಪುಟಕ್ಕೆ ಸೇರಿಸಿಕೊಳ್ಳುವುದು ಎಂಬುದೆಲ್ಲ ಯಕ್ಷಪ್ರಶ್ನೆಯಂತೆ ಕಾಣುತ್ತಿದೆ. ಸಚಿವರಾಗುವ ಕನಸು ಕಾಣುತ್ತಿರುವವರಿಗೆ ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನ ಬೇಕಾಗಿಲ್ಲ. ಗೂಟದ ಕಾರು, ವಿಧಾನಸೌಧದ ಕೊಠಡಿ ಬೇಕೇಬೇಕು. ಈಗ ವಿಧಾನಸೌಧದಲ್ಲಿ ಕೊಠಡಿಗಳೂ ಖಾಲಿ ಇಲ್ಲ. ಏಕೆಂದರೆ ಎಲ್ಲವನ್ನೂ ಮುಖ್ಯಮಂತ್ರಿಗಳ ಸಲಹೆಗಾರರೇ ಆಕ್ರಮಿಸಿಕೊಂಡಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ಕೊಡಲಾಗದಿದ್ದರೆ, ಪ್ರತಿ ಸಚಿವರಿಗೆ ಒಬ್ಬೊಬ್ಬ ಸಲಹೆಗಾರರನ್ನು ನೇಮಿಸಿ ಅವರಿಗೂ ಸಚಿವ ಸ್ಥಾನಮಾನ ಕೊಟ್ಟರೂ ಆಶ್ಚರ್ಯವಿಲ್ಲ. ಹಿಂದಿನ ಸರ್ಕಾರದಲ್ಲಿ ಈ ಪ್ರಯೋಗ ಸ್ವಲ್ಪಮಟ್ಟಿಗೆ ನಡೆದಿದೆ. ಒಟ್ಟಾರೆ…










