ಮೈಸೂರು, ಅ.28-ಮೈಸೂರಿನ ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ ತನ್ನ ಪ್ರತಿಷ್ಠಾನದ 2019ನೇ ಸಾಲಿನ `ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ’ ಹಾಗೂ ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 2ರಂದು ಸಂಜೆ 5 ಗಂಟೆಗೆ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಏರ್ಪಡಿಸಲಾಗಿದೆ. ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿಯನ್ನು ಖ್ಯಾತ ಆಂಗ್ಲ ಭಾಷಾ ತಜ್ಞ, ವಾಕ್ಯಾರ್ಥ ವಿಶೇಷಜ್ಞ ಡಾ.ಟಿ.ಆರ್.ಎಸ್. ಶರ್ಮಾ ಅವರಿಗೆ ಮತ್ತು…
ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಸಲಹೆ
October 29, 2019ಮೈಸೂರು ಅ.28- ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸುವ ಸಲುವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಭಾರತ ಸರ್ಕಾರವು ಪರಿಸರ ಸಂರಕ್ಷಣೆ ಕಾಯ್ದೆಯಡಿಯಲ್ಲಿ 1986 ತಿದ್ದುಪಡಿ, 1999 ಮತ್ತು 2000 ರನ್ವಯ ದೀಪಾವಳಿ ಹಬ್ಬದ ಸಂದರ್ಭ ದಲ್ಲಿ ಪಟಾಕಿ ಸಿಡಿತದಿಂದ ಉಂಟಾ ಗುವ ಶಬ್ದ ಹಾಗೂ ವಾಯುಮಾಲಿನ್ಯ ನಿಯಂತ್ರಣ ದಲ್ಲಿಡಲು ಕ್ರಮಗಳನ್ನು ಅನುಸರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟಾಕಿಗಳು ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125…
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ: ಇಬ್ಬರ ಅಮಾನತು
October 29, 2019ಹುಬ್ಬಳ್ಳಿ,ಅ.28-ಹುಬ್ಬಳ್ಳಿ ರೈಲ್ವೆ ನಿಲ್ದಾಣ ದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂ ಧಿಸಿದಂತೆ ಇಬ್ಬರನ್ನು ಅಮಾನತು ಮಾಡ ಲಾಗಿದೆ. ಅ.21ರಂದು ನಡೆದ ಲಘು ಸ್ಫೋಟ ದಲ್ಲಿ ಒಬ್ಬ ಪ್ರಯಾಣಿಕ ಗಾಯಗೊಂಡಿದ್ದ. ರೈಲ್ವೆ ನಿಲ್ದಾಣದ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನೈಋತ್ಯ ರೈಲ್ವೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್ಪಿಎಫ್ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್, ಸ್ಟೇಷನ್ ಮಾಸ್ಟರ್ ವರುಣ್ ಕುಮಾರ್ ದಾಸ್ ಅಮಾನತು ಆದವರು. “ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಏನೂ ಹೇಳಲು ಸಾಧ್ಯವಿಲ್ಲ. ತನಿಖೆ ನಡೆಸುತ್ತಿರುವ…
ಬೆಳೆ ಪರಿಹಾರದ ಹಣ ಸಾಲಕ್ಕೆ ಮುಟ್ಟುಗೋಲು ಹಾಕಿಕೊಂಡರೆ ಬ್ಯಾಂಕ್ಗಳಿಗೆ ನೋಟಿಸ್ಸರ್ಕಾರದ ಎಚ್ಚರಿಕೆ
October 29, 2019ಬೆಂಗಳೂರು, ಅ.28(ಕೆಎಂಶಿ)- ಬೆಳೆ ಪರಿಹಾರಕ್ಕೆ ನೀಡಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲ ಮನ್ನಾಕ್ಕೆ ಮುಟ್ಟುಗೋಲು ಹಾಕಿಕೊಂಡರೆ ಅಂತಹ ಆಡಳಿತ ಮಂಡಳಿಗಳಿಗೆ ಸರ್ಕಾರ ನೋಟಿಸ್ ನೀಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಹಾರ ಧನವನ್ನು ಯಾವುದೇ ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ಈ ಸಂಬಂಧ ಎಲ್ಲಾ ಬ್ಯಾಂಕ್ಗಳಿಗೆ ನೋಟಿಸ್ ನೀಡಲು ಡಿಸಿಗಳಿಗೆ ಸೂಚಿಸಲಾಗಿದೆ. ಬೆಳೆ ಪರಿಹಾರ ಧನವನ್ನು ಬ್ಯಾಂಕ್ಗಳು ಸಾಲದ ಬಾಕಿ ಹಣಕ್ಕೆ ಮುಟ್ಟುಗೋಲು ಹಾಕಿಕೊಳ್ಳುತ್ತಿವೆ ಎಂಬ ದೂರುಗಳು…
ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ವೇಳೆ ಹೆಲ್ತ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ
October 29, 2019ಮೈಸೂರು, ಅ.28(ಎಸ್ಪಿಎನ್)-ನಿಷೇಧಿತ ಪ್ಲಾಸ್ಟಿಕ್ ಲೋಟ ಮತ್ತು ಕ್ಯಾರಿಬ್ಯಾಗ್ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ ಹೆಲ್ತ್ ಇನ್ಸ್ಪೆಕ್ಟರ್ ಮೇಲೆ ಪನ್ಸಾರಿ ಅಂಗಡಿ ಸಿಬ್ಬಂದಿ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ವಾರ್ಡ್ ನಂ.26ರಲ್ಲಿ ನಡೆದಿದೆ. ಮೈಸೂರು ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಅಶ್ವಥ್ ಎಂಬು ವವರೇ ಹಲ್ಲೆಗೊಳಗಾದವರು. ಪನ್ಸಾರಿ ಅಂಗಡಿಯ ಸಿಬ್ಬಂದಿ ಸೈಫುಲ್ಲಾ ಖಾನ್ ಹಲ್ಲೆ ಮಾಡಿದ ವ್ಯಕ್ತಿ. ಅ.25ರಂದು ಬೆಳಿಗ್ಗೆ 8.30ರ ವೇಳೆಗೆ ವಾರ್ಡ್ ನಂ.26ರ ವ್ಯಾಪ್ತಿಯಲ್ಲಿ ಕಾರ್ಯಾ ಚರಣೆ ನಡೆಸಿ, ಪ್ಲಾಸ್ಟಿಕ್ ಲೋಟ ಮತ್ತು ಕ್ಯಾರಿ ಬ್ಯಾಗ್…
ಡಿಕೆಶಿಗೆ ಭವ್ಯ ಸ್ವಾಗತ
October 27, 2019ಬೆಂಗಳೂರು,ಅ.26(ಕೆಎಂಶಿ)- ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಗಾಗಿ 48 ದಿನ ದೆಹಲಿಯ ತಿಹಾರ್ ಜೈಲಿ ನಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಅಭಿ ಮಾನಿಗಳು, ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ, ಬರ ಮಾಡಿಕೊಂಡರು. ರಾಜಕೀಯ ನಾಯಕನೊಬ್ಬನನ್ನು ರಾಜ್ಯದ ಇತಿಹಾಸದಲ್ಲೇ ವಿಮಾನ ನಿಲ್ದಾಣ ದಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಸ್ವಾಗತ ಕೋರಿ ಬರ ಮಾಡಿಕೊಂಡಿದ್ದು, ಇದೇ ಮೊದಲಾಗಿದೆ. ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೇ ಕಾದು…
ದೀಪಾವಳಿ ಹಬ್ಬಕ್ಕೆ ಮೈಸೂರಲ್ಲಿ ಸಡಗರದ ಸಿದ್ಧತೆ
October 27, 2019ಮೈಸೂರು,ಅ.26(ಆರ್ಕೆ)-ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಮೈಸೂರಲ್ಲಿ ಮನೆ-ಮನೆಗಳಲ್ಲಿ ಸಡಗರದಿಂದ ಸಿದ್ಧತೆ ನಡೆದಿದ್ದರೆ, ಸತತ ಮಳೆಯಿಂದಾಗಿ ಪಟಾಕಿ ವ್ಯಾಪಾರ ನೆಲಕಚ್ಚಿದೆ. ಮಾರಾಟಗಾರರು ಪರಿತಪಿಸುವಂತಾಗಿದೆ. ಹೂ, ಹಣ್ಣು, ಕಾಯಿ ಸೇರಿದಂತೆ ಪೂಜಾ ಸಾಮಗ್ರಿ, ಹೊಸ ಬಟ್ಟೆ ಖರೀದಿಸಲು ಜನರು ಮಾರುಕಟ್ಟೆಗೆ ಮುಗಿ ಬಿದ್ದಿದ್ದರೂ, ಜೆ.ಕೆ.ಮೈದಾನ, ಪುರಭವನ ಹಾಗೂ ಹೆಬ್ಬಾಳಿನ ರಾಣೆ ಮಡ್ರಾಸ್ ರಸ್ತೆ ಸೇರಿದಂತೆ ಮೈಸೂರಿನ ವಿವಿಧೆಡೆ ಆರಂಭಗೊಂಡಿರುವ ಪಟಾಕಿ ಅಂಗಡಿಗಳು ಮಾತ್ರ ಬಿಕೋ ಎನ್ನುತ್ತಿವೆ. ಭಾನುವಾರ ಮತ್ತು ಮಂಗಳವಾರ ನಡೆಯುವ ನರಕ ಚತುರ್ದಶಿ ಮತ್ತು ಬಲಿಪಾಡ್ಯಮಿಯ ಧಾರ್ಮಿಕ ಕೈಂಕರ್ಯ…
ನ.17ಕ್ಕೆ ಮೈಸೂರು ಮೇಯರ್, ಉಪ ಮೇಯರ್ ಅಧಿಕಾರಾವಧಿ ಅಂತ್ಯ
October 27, 2019ಮೈಸೂರು, ಅ. 26(ಆರ್ಕೆ)- ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಅಧಿಕಾರಾವಧಿ ನವೆಂಬರ್ 17ಕ್ಕೆ ಅಂತ್ಯಗೊಳ್ಳಲಿದೆ. ಪಾಲಿಕೆ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಅಧಿಕಾರ ಹಿಡಿದಿದ್ದು, ಮೊದಲ ಅವಧಿಗೆ ಕಾಂಗ್ರೆಸ್ನ ಪುಷ್ಪಲತಾ ಜಗನ್ನಾಥ್ ಮೇಯರ್ ಆಗಿ ಹಾಗೂ ಜೆಡಿಎಸ್ನ ಶಫಿ ಅಹಮದ್ ಅವರು ಉಪ ಮೇಯರ್ ಆಗಿ 2018ರ ನವೆಂಬರ್ 17ರಂದು ಅಧಿಕಾರ ವಹಿಸಿಕೊಂಡಿದ್ದರು. ಅವರ ಒಂದು ವರ್ಷದ ಅಧಿಕಾರಾವಧಿಯು 2019ರ ನವೆಂಬರ್ 17ರಂದು ಸಂಜೆ 5 ಗಂಟೆಗೆ ಅಂತ್ಯಗೊಳ್ಳುವುದರಿಂದ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್…
ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಪೆಲಿಕಾನ್ ಸಾವು: ಹಕ್ಕಿ ಜ್ವರ ಭೀತಿ
October 27, 2019ಮೈಸೂರು,ಅ.26(ಎಂಟಿವೈ)- ಮೈಸೂ ರಿನ ಕುಕ್ಕರಹಳ್ಳಿಕೆರೆಯಲ್ಲಿ ಶುಕ್ರವಾರ ಅಸ್ವಸ್ಥಗೊಂಡಿದ್ದ ಸ್ಪಾಟ್ಬಿಲ್ಡ್ ಪೆಲಿಕಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹಕ್ಕಿ ಜ್ವರದ ಭೀತಿ ಎದುರಾಗಿದೆ. ಪಕ್ಷಿಗಳಲ್ಲಿ ಅದರಲ್ಲೂ ಪೆಲಿಕಾನ್ನಲ್ಲಿ ಕಾಣಿಸಿಕೊಳ್ಳುವ ಹಕ್ಕಿಜ್ವರ ಅತ್ಯಂತ ಮಾರಕ ವಾಗಿದ್ದು, ಭಯ ಹುಟ್ಟಿಸಿದೆ. ಪ್ರತಿ ವರ್ಷ ಪಕ್ಷಿಗಳು ವಲಸೆ ಬರುವ ಸಂದರ್ಭ ದಲ್ಲಿಯೇ ಹಕ್ಕಿಜ್ವರ ಕಾಣಿಸಿಕೊಳ್ಳುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಶುಕ್ರವಾರ (ಅ.25) ಮೈಸೂರಿನ ಕುಕ್ಕರ ಹಳ್ಳಿ ಕೆರೆ ದಡದಲ್ಲಿ ಪೆಲಿಕಾನ್ ಅಸ್ವಸ್ಥವಾಗಿ ಬಿದ್ದಿದ್ದು, ವಾಯುವಿಹಾರಿಗಳ ಗಮನಕ್ಕೆ ಬಂದಿತ್ತು. ಹುಣಸೂರು ರಸ್ತೆಗೆ ಹೊಂದಿ ಕೊಂಡಂತಿರುವ…
ಬಿಜೆಪಿಯಿಂದ ಆಫರ್ ಬಂದಿರುವುದು ನಿಜ: ಒಂದು ವಾರದಲ್ಲಿ ನಿರ್ಧಾರಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್
October 27, 2019ಮೈಸೂರು,ಅ.26(ಎಂಟಿವೈ)-ಬಿಜೆಪಿಯಿಂದ ನನಗೆ ಪಕ್ಷ ಸೇರುವಂತೆ ಆಹ್ವಾನ ಬಂದಿರುವುದು ನಿಜ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆ ನನ್ನ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇನ್ನೊಂದು ವಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಹೊರ ಹೋಗಲು ಸಿದ್ಧಗೊಂಡಿರುವು ದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಇತ್ತೀಚೆಗೆ ಬಿಜೆಪಿ ನಾಯಕರು ನನಗೆ ನೀಡಿರುವ ಆಹ್ವಾನ ಕುರಿತಂತೆ ಈಗಾಗಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ…










