ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಿಗೆ ಪ್ರತಾಪ್ ಸಿಂಹ ಸೂಚನೆ ಮೈಸೂರು, ಅ.30(ಪಿಎಂ)- ‘ಪ್ರಧಾನ ಮಂತ್ರಿ ಮುದ್ರಾ’ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾಲ ಮರುಪಾವತಿ ಸಂಬಂಧ ಜನರಿಗೆ ಸಮಗ್ರ ಮಾಹಿತಿ ನೀಡಲು ಮೇಳದ ಮಾದರಿ ಕಾರ್ಯಕ್ರಮ ರೂಪಿಸುವಂತೆ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಿಗೆ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಬ್ಯಾಂಕುಗಳ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ…
ಪೆಲಿಕಾನ್ ಸಾವಿಗೆ ಜಂತುಹುಳ ಬಾಧೆ ಕಾರಣ: ಡಿಸಿಎಫ್ ಅಲೆಗ್ಸಾಂಡರ್ಹಕ್ಕಿಜ್ವರದ ಆತಂಕ ಬೇಡ, ಪ್ರಾಥಮಿಕ ವರದಿಯಲ್ಲಿ ದೃಢ
October 31, 2019ಮೈಸೂರು,ಅ.30(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ (ಹೆಜ್ಜಾರ್ಲೆ) ಮೃತಪಟ್ಟ ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಜಂತುಹುಳದ ಮಿತಿ ಮೀರಿದ ಬಾಧೆ ಪಕ್ಷಿಗಳ ಸಾವಿಗೆ ಕಾರಣ ಎಂದು ದೃಢವಾಗಿದ್ದು, ಜನರಲ್ಲಿ ಮೂಡಿದ್ದ ಹಕ್ಕಿಜ್ವರ ಭೀತಿ ನಿವಾರಣೆಯಾದಂತಾಗಿದೆ. ವಾಯುವಿಹಾರಿಗಳಿಗೆ ಸ್ವರ್ಗ ಎನಿಸಿರುವ ಕುಕ್ಕರಹಳ್ಳಿ ಕೆರೆಯಲ್ಲಿ ಅ.25 ಮತ್ತು ಅ.28 ರಂದು ಎರಡು ಪೆಲಿಕಾನ್ ಮೃತಪಟ್ಟಿತ್ತು. ಮೂರು ದಿನದ ಅಂತರದಲ್ಲೇ ಎರಡು ಪೆಲಿ ಕಾನ್ ಸಾವಿಗೀಡಾಗಿದ್ದರಿಂದ ಪಕ್ಷಿ ಪ್ರಿಯರಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ ಪೆಲಿಕಾನ್ ಸಾವಿಗೆ ಹಕ್ಕಿಜ್ವರ ಕಾರಣವಿರಬಹುದು ಎಂಬ ಅನುಮಾನ…
ಸಾಲಕ್ಕೆ ಅರ್ಜಿ ಸಲ್ಲಿಸಿದವರನ್ನು ಸತಾಯಿಸಿದ ಬ್ಯಾಂಕ್ ಅಧಿಕಾರಿಗಳುತರಾಟೆ ತೆಗೆದುಕೊಂಡ ಜಿಪಂ ಸಿಇಓ ಕೆ.ಜ್ಯೋತಿ
October 31, 2019ಮೈಸೂರು, ಅ.30(ಪಿಎಂ)- ಸರ್ಕಾರಿ ಇಲಾಖೆ ಹಾಗೂ ಬ್ಯಾಂಕ್ ನಡುವೆ ಸಮನ್ವಯತೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜ್ಯೋತಿ, ಸಾಲಕ್ಕೆ ಅರ್ಜಿ ಸಲ್ಲಿಸಿದ್ದವರನ್ನು ಸತಾಯಿಸಿದ ಪ್ರಕರಣ ಪ್ರಸ್ತಾಪಿಸಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಲೀಡ್ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾವಾಗಲಿ, ನೀವಾಗಲಿ ಸೌಲಭ್ಯವನ್ನು ನಮ್ಮ ಜೇಬಿನ ಹಣದಿಂದೇನೂ ಕೊಡುವುದಿಲ್ಲ. ವೇತನ ಹೆಚ್ಚುವರಿ ಆಗದಿದ್ದರೆ, ಬಡ್ತಿ ಸಿಗದಿದ್ದರೆ ಎಷ್ಟು ಬೇಜಾರು ಮಾಡಿಕೊಳ್ಳುತ್ತೇ ವೆಯೋ ಜನಸಾಮಾನ್ಯರೂ ಹಾಗೆಯೇ ಅಲ್ಲವೇ? ಅವರನ್ನೇಕೆ…
ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ ಸಿದ್ದರಾಮಯ್ಯ ಗರಂ ಡಿಕೆಶಿ ಬೆಂಬಲಿಗರ ತಿರುಗೇಟು
October 29, 2019ಬೆಂಗಳೂರು, ಅ.28(ಕೆಎಂಶಿ)- ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ನ್ಯಾಯಾಂಗ ಬಂಧನ ದಿಂದ ಬಿಡುಗಡೆ ನಂತರ ದೆಹಲಿಯಿಂದ ಬೆಂಗಳೂ ರಿಗೆ ಬಂದಾಗ ಅವರ ಸ್ವಾಗತ ಮೆರವಣಿಗೆಯಲ್ಲಿ ಸ್ವತಃ ಅವರೇ ಜೆಡಿಎಸ್ ಬಾವುಟ ಹಿಡಿದಿ ರುವುದಕ್ಕೆ ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಿದ್ದರಾಮಯ್ಯನವರ ಈ ಗರಂಗೆ ಡಿಕೆಶಿ ಬೆಂಬಲಿಗರು ತಿರುಗೇಟು ನೀಡಿದ್ದು, ನಮ್ಮ ನಾಯಕನಿಗೆ ದೊರೆತ ಅದ್ಧೂರಿ ಸ್ವಾಗತ ಹಾಗೂ ಬೆಂಬಲಕ್ಕೆ ಅಸೂಯೆಪಟ್ಟಿದ್ದಾರೆ ಎಂದು ಛೇಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ರುವ ಶಿವಕುಮಾರ್, ಪ್ರತಿಪಕ್ಷದ ನಾಯಕ…
ಮೈಸೂರಿಂದ ಹೈದರಾಬಾದ್ಗೆ ಮತ್ತೊಂದು ವಿಮಾನ ಹಾರಾಟ
October 29, 2019ಮೈಸೂರು, ಅ. 28(ಆರ್ಕೆ)- ಮೈಸೂರು-ಹೈದರಾಬಾದ್ ನಡುವೆ ನಿತ್ಯ ಮೂರನೇ ವಿಮಾನ ಭಾನುವಾರದಿಂದ ಸೇವೆ ಆರಂಭಿಸಿದೆ. ಇಂಡಿಗೋ ಏರ್ಲೈನ್ಸ್ ಸಂಸ್ಥೆಯು ಮೈಸೂರಿನಿಂದ ಹೈದರಾಬಾದ್ಗೆ ನಿತ್ಯ ನೇರ ವಿಮಾನ ಹಾರಾಟ ಸೇವೆ ಆರಂಭಿಸಿದ್ದು, ಭಾನುವಾರ ಸಂಜೆ ಸಂಸದ ಪ್ರತಾಪ್ ಸಿಂಹ ಅವರು ಹಸಿರು ನಿಶಾನೆ ತೋರುವ ಮೂಲಕ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ಈಗಾಗಲೇ ಚೆನ್ನೈ ಮಾರ್ಗವಾಗಿ ಒಂದು ಹಾಗೂ ನೇರವಾಗಿ ಮತ್ತೊಂದು ಮೈಸೂರು-ಹೈದರಾಬಾದ್ ನಡುವೆ ಎರಡು ವಿಮಾನಗಳು ಹಾರಾಡುತ್ತಿದ್ದು, ಅವುಗಳ ಜೊತೆಗೆ ಇಂಡಿಗೋ ಮೂರನೇ ವಿಮಾನ ಸೇರ್ಪಡೆಯಾಗಿದೆ. 72…
ಈ ಬಾರಿ 64 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
October 29, 2019ಬೆಂಗಳೂರು,ಅ.28(ಕೆಎಂಶಿ)- ಮೈಸೂ ರಿನ ಶಿಕ್ಷಣದಲ್ಲಿ ಡಾ. ಚಿದಾನಂದಗೌಡ, ಶಿಲ್ಪಕಲೆ ವಿ.ಎ.ದೇಶಪಾಂಡೆ, ಯೋಗ ಪಟು ಖುಷಿ, ರಂಗಭೂಮಿ ಡಾ. ಹೆಚ್.ಕೆ. ರಾಮನಾಥ್, ಚಾಮರಾಜನಗರ ಜಾನ ಪದ ದೊಡ್ಡಗವಿ ಬಸಪ್ಪ, ಕೊಡಗಿನ ಕ್ರೀಡೆ ಯಲ್ಲಿ ಚೇನಂಡ ಎ. ಕುಟ್ಟಪ್ಪ, ಸಂಕೀರ್ಣ ದಲ್ಲಿ ಲೆ.ಜ. ವಿ.ಎನ್. ಪ್ರಸಾದ್, ನ್ಯಾಯ ಮೂರ್ತಿ ಎನ್. ಕುಮಾರ್, ಪ್ರೊಫೆಸರ್ ಟಿ.ಶಿವಣ್ಣ, ಡಾ.ಮುದ್ದುಮೋಹನ್, ಭಾರ್ಗವಿ ನಾರಾಯಣ್, ಪ್ರೊಫೆಸರ್ ಬಿ. ರಾಜಶೇಖರಪ್ಪ, ಸಾಲುಮರದ ವೀರಾ ಚಾರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 64 ಗಣ್ಯರು ಮತ್ತು…
3.30 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳ್ಳುತ್ತಿದೆ ತಿ.ನ.ಪುರದ ಪುರಾತನ ಶ್ರೀ ಅಗಸ್ತ್ಯೇಶ್ವರ ದೇವಾಲಯ
October 29, 2019ಮೈಸೂರು, ಅ.28-ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಪುರಾತನ ದೇವಾಲಯ, ಪ್ರವಾಸಿ ತಾಣ ಹಾಗೂ ಪಾರಂಪರಿಕ ಕಟ್ಟಡ ಮತ್ತು ಸ್ಮಾರಕಗಳು ದೇಶ-ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅವುಗಳನ್ನು ಸಂರಕ್ಷಿಸಿ ನಿರ್ವಹಣೆ ಮಾಡುವ ಜತೆಗೆ ಅಭಿವೃದ್ಧಿಗೊಳಿಸುವುದು ಜಿಲ್ಲಾಡಳಿ ತಕ್ಕೆ ಸವಾಲಾಗಿದೆ. ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಮೂಲ ಸ್ವರೂಪಕ್ಕೆ ಧಕ್ಕೆ ಯಾಗದಂತೆ ಈ ಪುರಾತನ ಸ್ಮಾರಕಗಳನ್ನು ಪುನರು ಜ್ಜೀವನಗೊಳಿಸಿ ಸಂರಕ್ಷಿಸಲು ಮುಂದಾಗಿವೆ. ಮೈಸೂರು ಜಿಲ್ಲೆಯ ತಿ.ನರಸೀಪುರವೆಂದು ಕರೆ ಯುವ ತಿರಮಕೂಡಲು ನರಸೀಪುರವು…
ದೀಪಾವಳಿ ಪ್ರಯುಕ್ತ 10 ಲಕ್ಷ ರೂ. ನೋಟುಗಳಿಂದ ಬಾಲ ತ್ರಿಪುರಸುಂದರಿ ಅಮ್ಮನಿಗೆ ಅಲಂಕಾರ
October 29, 2019ಮೈಸೂರು, ಅ.28(ಆರ್ಕೆಬಿ)- ಬೆಳಕಿನ ಹಬ್ಬ ದೀಪಾ ವಳಿ ಅಂಗವಾಗಿ ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನದಲ್ಲಿ ಬಾಲ ತ್ರಿಪುರ ಸುಂದರಿ ಅಮ್ಮನವರಿಗೆ ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದ್ದು, ಇದಕ್ಕಾಗಿ 10 ಲಕ್ಷ ರೂ.ಗಳ ನೋಟುಗಳನ್ನು ಬಳಸಲಾಗಿದೆ. ಪ್ರತಿ ದೀಪಾವಳಿ ಸಂದರ್ಭದಲ್ಲಿ ತ್ರಿಪುರಸುಂದರಿ ಅಮ್ಮ ನವರಿಗೆ ಹಣದಿಂದ ಅಲಂಕಾರ ಮಾಡುವುದು ಹಿಂದಿ ನಿಂದ ಬಂದಿರುವ ಸಂಪ್ರದಾಯ. ಭಕ್ತರು ನೀಡಿದ ಹಣದಲ್ಲಿ ದೇವಿಯನ್ನು ಅಲಂಕರಿಸಲಾಗುತ್ತದೆ. ಅಂತೆಯೇ ಈ ಬಾರಿಯೂ ತ್ರಿಪುರಸುಂದರಿ ದೇವಿಯನ್ನು 10 ಲಕ್ಷ ರೂ. ಕರೆನ್ಸಿ ನೋಟುಗಳಿಂದ…
ಮೈಸೂರು ನೈರುತ್ಯ ರೈಲ್ವೆಯಲ್ಲಿ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ
October 29, 2019ಮೈಸೂರು, ಅ.28(ಪಿಎಂ)- ಕೇಂದ್ರೀಯ ಜಾಗೃತ ಆಯೋಗದ (ಸಿವಿಸಿ) ನಿರ್ದೇ ಶನದಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಇಂದಿನಿಂದ ನ.2ರವರೆಗೆ `ಜಾಗೃತಿ ಅರಿವು ಸಪ್ತಾಹ-2019’ ಆಚರಿ ಸಲಾಗುತ್ತಿದೆ. ಆಯೋಗವು `ಪ್ರಾಮಾಣಿ ಕತೆ: ಜೀವನದ ಒಂದು ಮಾರ್ಗ’ ವಿಷಯ ಕುರಿತಂತೆ ಅ.28ರಿಂದ ನ.2ರವರೆಗೆ ಜಾಗೃತಿ ಸಪ್ತಾಹ ಆಚರಿಸುತ್ತಿದೆ. ಇದನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ (ಅ.31) ಬರುವ ವಾರದಲ್ಲಿ ಪ್ರತಿ ವರ್ಷ ಆಚರಿಸಲಾಗುವುದು ವಿಶೇಷ. ಮೈಸೂರಿನ ಇರ್ವಿನ್ ರಸ್ತೆಯ ರೈಲ್ವೆ ವಿಭಾಗೀಯ ಕಚೇರಿ ಹೊರಾಂಗಣದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು…
ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪ ನಮನ
October 29, 2019ಮೈಸೂರು, ಅ.28(ಪಿಎಂ)- ಮಹಿಷ ಮಂಡಲ ಇಂಟರ್ನ್ಯಾಷನಲ್ ಬುದ್ಧಿಸ್ಟ್ ಕಲ್ಚರಲ್ ಟ್ರಸ್ಟ್, ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ಮೈಸೂರಿನ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಭಾನುವಾರ ಪುಷ್ಪ ನಮನ ಸಲ್ಲಿಸಲಾಯಿತು. ಆ ಮೂಲಕ ಪ್ರತಿ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು, ಮಹಿಷ ಮಂಡಲದ ಇತಿ ಹಾಸದಲ್ಲಿ ಮಾತ್ರವಲ್ಲದೆ, ಬೌದ್ಧ ಧರ್ಮದ ಇತಿಹಾಸ ಹಾಗೂ ಇಡೀ ಭರತಖಂಡದ ಇತಿಹಾಸದಲ್ಲಿ ಮಹಿಷ…










