ಮೈಸೂರು, ನ.೨-ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್, ಕನ್ನಡ ನೆಲ ಮತ್ತು ಭಾಷೆಗಾಗಿ ಉದ್ದೇಶಪೂರ್ವಕವಾಗಿ ಹಾಗೂ ನಿರಂ ತರವಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು. ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ೬೪ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ…
ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ
November 3, 2019ಮೈಸೂರು,ನ.೨-ಕನ್ನಡಕ್ಕಾಗಿ ಕೈ ಎತ್ತು, ಅದು ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಅದೇ ಗೋವರ್ಧನ ಗಿರಿಯಾಗುತ್ತದೆ. ಅಂತಹ ಶಕ್ತಿ ನಮ್ಮ ಕನ್ನಡ ಭಾಷೆಗಿದೆ ಎಂದು ರಾಮ ಕೃಷ್ಣ ವಿದ್ಯಾ ಸಂಸ್ಥೆಯ ಸಂಸ್ಕೃತ ಶಿಕ್ಷಕಿ ರಾಜಶ್ರೀ ಸುಧೀರ್ ಸೊನ್ನದ್ ತಿಳಿಸಿದರು. ಮೈಸೂರಿನ ರಾಮಕೃಷ್ಣ ನಗರದ ರಾಮ ಕೃಷ್ಣ ವಿದ್ಯಾಕೇಂದ್ರದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತ ನಾಡುತ್ತಾ, ಕನ್ನಡ ರಾಜ್ಯೋತ್ಸವವನ್ನು ಕೇವಲ ನವೆಂಬರ್ನಲ್ಲಿ ಆಚರಿಸದೆ, ಇಡೀ ವರ್ಷ ವೆಲ್ಲಾ…
ತಿಂಗಳಲ್ಲಿ ಮುಡಾ, ಖಾಸಗಿ ಬಡಾವಣೆ ನಿವೇಶನಗಳಿಗೆ ಖಾತೆ ಮಾಡಿ: ನಗರಪಾಲಿಕೆ ಆಯುಕ್ತರಿಗೆ ಸಚಿವ ವಿ.ಸೋಮಣ್ಣ ತಾಕೀತು
November 3, 2019ಮೈಸೂರು ನ.೨(ಎಸ್ಪಿಎನ್)- ಮೈಸೂರು ನಗರದ ರಿಂಗ್ ರೋಡ್(೪೨ ಕಿಮೀ) ವ್ಯಾಪ್ತಿಗೆ ಬರುವ ಮುಡಾ ಮತ್ತು ಖಾಸಗಿ ಬಡಾವಣೆಯ ನಿವೇಶನಗಳಿಗೆ ಇನ್ನೊಂದು ತಿಂಗಳಲ್ಲಿ ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಖಾತೆ ಮಾಡಿಕೊಡಬೇಕು ಎಂದು ವಸತಿ, ರೇಷ್ಮೆ, ತೋಟ ಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ನಗರ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಅಧಿಕಾರಿ ಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಮೈಸೂರು ಪ್ರವಾಸೋದ್ಯಮದಲ್ಲಿ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಹೊಂದಿದೆ.ಅದರAತೆ, ಮೈಸೂರು ನಗರ ದಿನೇ ದಿನೆ…
ಬ್ರೇಕ್ ವಿಫಲವಾಗಿ ೫೦ ಅಡಿ ಪ್ರಪಾತಕ್ಕೆ ಇಳಿದ ಕೆಎಸ್ಆರ್ಟಿಸಿ ಬಸ್
November 3, 2019ಮಡಿಕೇರಿ, ನ.೨- ಬ್ರೇಕ್ ವಿಫಲವಾದ ಕೆಎಸ್ ಆರ್ಟಿಸಿ ಬಸ್ ಚವರ್ಲೆಟ್ ಕಾರಿಗೆ ಡಿಕ್ಕಿ ಹೊಡೆದು ಸುಮಾರು ೫೦ ಅಡಿ ಆಳದ ಪ್ರಪಾತಕ್ಕೆ ಇಳಿದ ಘಟನೆ ಮಡಿಕೇರಿ ಹೊರವಲಯದ ಸ್ಯಾಂಡಲ್ಕಾಡ್ ಬಳಿ ನಡೆದಿದೆ. ಈ ಘಟನೆಯಲ್ಲಿ ಬಸ್ನಲ್ಲಿ ಪ್ರಯಾ ಣಿಸುತ್ತಿದ್ದ ೧೦ ಮಂದಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ. ಬಸ್ ಇಳಿದ ಕಾಫಿ ತೋಟದಲ್ಲಿ ಸಂಪೂರ್ಣ ನೀರಿ ನಿಂದ ಭರ್ತಿಯಾಗಿದ್ದ ದೊಡ್ಡ ಕೆರೆಯೂ ಇದ್ದು, ಬಸ್ ಬ್ರೇಕ್ ಫೇಲ್ ಆದ ಸಮಯದಲ್ಲೂ ಬಸ್ ಅನ್ನು ಕೆರೆಗೆ ಬೀಳದಂತೆ…
ಮಾಜಿ ಸಚಿವ ವೈಜನಾಥ ಪಾಟೀಲ ನಿಧನ
November 3, 2019ಕಲಬುರ್ಗಿ: ಮಾಜಿ ಸಚಿವ ವೈಜನಾಥ ಪಾಟೀಲ ಬೆಂಗಳೂರಿನ ವೊಕಾರ್ಡ್ ಫೋರ್ಟೀಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ ೮೨ ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದ ವೈಜನಾಥ ಪಾಟೀಲರಿಗೆ, ಬೆಂಗ ಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಪಾಟೀಲ ನಿಧನರಾಗಿದ್ದಾರೆ. ಮೂಲತಃ ಬೀದರ್ ಜಿಲ್ಲೆಯವರಾಗಿದ್ದ ವೈಜನಾಥ ಪಾಟೀಲ, ಕಲಬುರ್ಗಿಯನ್ನು ತಮ್ಮ ರಾಜಕೀಯ ಕರ್ಮಭೂಮಿಯನ್ನಾಗಿಸಿ ಕೊಂಡಿದ್ದರು. ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ೧೯೯೪ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಜೆಡಿಎಸ್ನಿಂದ ೨೦೦೪ರಲ್ಲಿ ೨ನೇ ಬಾರಿಗೆ…
ಕನ್ನಡ ನಾಮಫಲಕಕ್ಕೆ ಆಗ್ರಹ; ಮೈಸೂರು ನಗರಪಾಲಿಕೆ ಎದುರು ಪ್ರತಿಭಟನೆ
November 3, 2019ಮೈಸೂರು,ನ.೨- ಮೈಸೂರಿನಲ್ಲಿರುವ ಅಂಗಡಿ ಮಳಿಗೆ, ಕಂಪನಿಗಳ ಹಾಗೂ ಖಾಸಗಿ ಶಾಲೆಗಳ ನಾಮಫಲಕಗಳನ್ನು ಶೇ.೬೦ ಭಾಗ ಕನ್ನಡದಲ್ಲಿ ಕಡ್ಡಾಯವಾಗಿ ಹಾಕುವಂತೆ ಸುತ್ತೋಲೆ ಹೊರಡಿಸ ಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಿತು. ಮಳಿಗೆ ಗಳ ನಾಮಪಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂಬ ಸರ್ಕಾರದ ನಿಯಮವನ್ನು ಜಿಲ್ಲಾಡ ಳಿತ ಹಾಗೂ ಮೈಸೂರು ಪಾಲಿಕೆ ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಿಬಿಎಂಪಿ ಮಾದರಿಯಲ್ಲಿ ಮೈಸೂರು ನಗರ ಪಾಲಿಕೆ ವಾಣಿಜ್ಯ ಪರವಾನಗಿ ನೀಡುವಾಗ, ಅಂಗಡಿ ಮಳಿಗೆ, ಕಂಪನಿಗಳ…
ನಾಳೆ ಚಾಮುಂಡಿಬೆಟ್ಟದ ನಂದಿಗೆ ಮಹಾರುದ್ರಾಭಿಷೇಕ
November 3, 2019ಮೈಸೂರು,ನ.೨(ಪಿಎಂ)- ಶ್ರೀಚಾಮುಂಡೇಶ್ವರಿ ಮೆಟ್ಟಿಲು ಹತ್ತುವ ಬಳಗದ ವತಿಯಿಂದ ನ.೪ರಂದು ಚಾಮುಂಡಿ ಬೆಟ್ಟದ ನಂದಿಗೆ ೯ನೇ ವರ್ಷದ ಮಹಾರುದ್ರಾ ಭಿಷೇಕ ಏರ್ಪಡಿಸಲಾಗಿದೆ ಎಂದು ಬಳಗದ ಮಹದೇವ್ ತಿಳಿಸಿ ದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ತಿಕ ಮಾಸದ ಮೊದಲ ಸೋಮವಾರವಾದ ಅಂದು ಚಾಮುಂಡಿಬೆಟ್ಟದ ದೊಡ್ಡ ಬಸವೇಶ್ವರ ದೇವರಿಗೆ (ನಂದಿ) ಮಹಾರುದ್ರಾಭಿಷೇಕ ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ೪೭ ರೀತಿಯ ಫಲಪುಷ್ಪ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ ಎಂದರು. ಬಳಗದ ಸುಬ್ಬರಾಜ ಅರಸ್, ಪ್ರವೀಣ್…
ಖೋಟಾ ನೋಟು ಚಲಾವಣೆಗೆ ಯತ್ನ: ಮೂವರ ಸೆರೆ
November 3, 2019ಮೈಸೂರು, ನ. ೨(ಆರ್ಕೆ)- ಖೋಟಾ ನೋಟುಗಳ ಚಲಾವಣೆ ಮಾಡಲೆತ್ನಿಸಿದ ಮೂವರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕು, ಕುರುಬಗೇರಿ ನಿವಾಸಿ ಎಸ್.ಗುರುಸ್ವಾಮಿ, ರವಿಶಂಕರ್ ಅಲಿಯಾಸ್ ಶಂಕರ್ ಹಾಗೂ ಪಾಂಡವಪುರ ತಾಲೂಕು ಚಿನಕುರಳಿ ನಿವಾಸಿ ಮಹೇಶ್ ಬಂಧಿತ ಆರೋಪಿಗಳು. ನ.೧ರಂದು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯ ಎಸ್.ಬಿ. ವೈನ್ಸ್ ಎದುರು ಖೋಟಾ ನೋಟು ಚಲಾವಣೆ ಮಾಡಲು ಹೊಂಚು ಹಾಕುತ್ತಿದ್ದ ಅವರನ್ನು ಬಂಧಿ ಸಿದ ಪೊಲೀಸರು, ೨,೦೦೦ ರೂ. ಮುಖಬೆಲೆಯ ೧೬ ಹಾಗೂ ೫೦೦ ರೂ. ಮುಖ ಬೆಲೆಯ…
ಹೊಸ ಕೈಗಾರಿಕೆಗಳಲ್ಲಿ ಮೂರು, ನಾಲ್ಕನೇ ದರ್ಜೆ ಎಲ್ಲಾ ಹುದ್ದೆ ಕನ್ನಡಿಗರಿಗೆ ಮೀಸಲು
November 1, 2019ಬೆಂಗಳೂರು,ಅ.31(ಕೆಎಂಶಿ)-ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಹೊಸ ಕೈಗಾರಿಕೆ ಆರಂಭಗೊಂಡರೂ, ಮೂರನೇ ಮತ್ತು ನಾಲ್ಕನೇ ದರ್ಜೆಯ ಎಲ್ಲಾ ಹುದ್ದೆಗಳನ್ನು ಕನ್ನಡಿ ಗರಿಗೆ ಮೀಸಲಿಡುವ ಹೊಸ ನೀತಿಯನ್ನು ರಾಜ್ಯ ಸರ್ಕಾರ ಇಂದಿಲ್ಲಿ ಘೋಷಣೆ ಮಾಡುವುದರೊಂದಿಗೆ ನಿರುದ್ಯೋಗಿ ಗಳಿಗೆ ರಾಜ್ಯೋತ್ಸವ ಉಡುಗೊರೆ ನೀಡಿದೆ. ಇದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಿದ್ಧ ಉಡುಪು ಕಾರ್ಖಾನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಪುನಶ್ಚೇತನ ಗೊಳಿಸುವ ಹಾಗೂ ಹೊಸ ಕೈಗಾರಿಕೆ ಆರಂಭಕ್ಕೆ ಮತ್ತೊಂದು ನೀತಿಗೆ ಇಂದಿಲ್ಲಿ ಸೇರಿದ್ದ ರಾಜ್ಯ ಸಚಿವ ಸಂಪುಟ ಅನು ಮತಿ ನೀಡಿದ್ದು, ಇದರಿಂದ 5…
ಯಡಿಯೂರಪ್ಪ ಸರ್ಕಾರದಿಂದ `ಮದುವೆ ಭಾಗ್ಯ’
November 1, 2019ಬೆಂಗಳೂರು, ಅ. 31(ಕೆಎಂಶಿ)- ಸಿದ್ದರಾಮಯ್ಯನ ವರಿಗಿಂತ ತಾವು ಕಡಿಮೆ ಇಲ್ಲವೆನ್ನುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಭಾಗ್ಯ ಯೋಜನೆಗಳ ಜಾರಿಗೆ ತಂದಿದ್ದಾರೆ. ಯಡಿಯೂರಪ್ಪ ಇದೀಗ ಮೊದ ಲನೇ ದರ್ಜೆಯ ಮುಜರಾಯಿ ದೇವಸ್ಥಾನಗಳ ಸನ್ನಿಧಿ ಯಲ್ಲಿ ಸರಕಾರಿ ಮದುವೆ ಭಾಗ್ಯ ಘೋಷಿಸಿದ್ದಾರೆ. ರಾಜ್ಯದಲ್ಲಿ ಕ್ಷೀರ, ಅನ್ನಭಾಗ್ಯ, ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ಈಗಾಗಲೇ ಜಾರಿಯಲ್ಲಿವೆ. ಇದರ ಜೊತೆಗೆ ಹಿಂದೂ ಗಳಿಗೂ ಉಚಿತ ಮದುವೆ ಭಾಗ್ಯ ದೊರೆಯುತ್ತದೆ. ಈ ದೇವಸ್ಥಾನದ ಆವರಣಗಳಲ್ಲಿ ಮದುವೆ ಮಾಡಿ ಕೊಳ್ಳುವ ಪ್ರತಿ ವಧು-ವರನಿಗೆ 65 ಸಾವಿರ ರೂ….










