ಮೈಸೂರು, ಸೆ.23(ಎಸ್ಬಿಡಿ)- ಡಾ. ಲತಾ ರಾಜಶೇಖರ್ ಅವರು ಸರ್ವ ಧರ್ಮ ಮಹಾಕವಯತ್ರಿ ಎನಿಸಿಕೊಂಡಿ ದ್ದಾರೆ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಶ್ಲಾಘಿಸಿದರು. ಮೈಸೂರಿನ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಏರ್ಪಡಿಸಿದ್ದ ಮಹಾಕವಯಿತ್ರಿ ಡಾ.ಲತಾ ರಾಜಶೇಖರ್ ಅವರ 5ನೇ ಮಹಾಕಾವ್ಯ ಕುರಿತ `ಶ್ರೀ ರಾಮ ಮಹಾದರ್ಶನ-ಒಂದು ಅವ ಲೋಕನ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಡಾ.ಲತಾ ರಾಜಶೇಖರ್ ಅವರು ಎಲ್ಲ ಧರ್ಮಗಳ ಪರಕಾಯ ಪ್ರವೇಶ ಮಾಡಿ, ಗಾಢವಾದ…
ಕಲಾರಸಿಕರ ಕಣ್ಮನ ಸೆಳೆದ ಆರ್ಟಿಕ್ಯುಲೇಟ್ ನೃತ್ಯೋತ್ಸವ
September 24, 2019ಮೈಸೂರು, ಸೆ.23- ನಗರದ ವೀಣೆಶೇಷಣ್ಣ ಭವನದ ಗಾನಭಾರತಿ ಸಭಾಂಗಣದಲ್ಲಿ 40ನೇ ಆರ್ಟಿಕ್ಯುಲೇಟ್ ನೃತ್ಯೋತ್ಸವ ಯಶಸ್ವಿಯಾಗಿ ನಡೆಯಿತು. ಕಲಾವಿದರ ಸುಪ್ತ ಪ್ರತಿಭೆಯನ್ನು ಅನಾ ವರಣಗೊಳಿಸಲು ಆರ್ಟಿಕ್ಯುಲೇಟ್ ಟ್ರಸ್ಟ್ ಒಂದು ವೇದಿಕೆ ಯಾಗಿದೆ. ಜೂನ್ 2016ರಲ್ಲಿ ಪ್ರಾರಂಭ ವಾದ ಈ ವೇದಿಕೆ ಇಲ್ಲಿಯವರೆಗೆ 40 ನೃತ್ಯ ಮಹೋತ್ಸವಗಳ ಮೂಲಕ 250ಕ್ಕೂ ಅಧಿಕ ನೃತ್ಯ ಕಲಾವಿದರು ತಮ್ಮ ನಾಟ್ಯ ಪ್ರಾವೀಣ್ಯತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದೆ. ಶಾಸ್ತ್ರೀಯ ನೃತ್ಯದ ಹೊರತಾಗಿ, ಜಾನಪದ ಶೈಲಿ ಹಾಗೂ ಇನ್ನಿತರ ಪ್ರಕಾರದ ಪ್ರದರ್ಶನಕ್ಕೂ ವೇದಿಕೆಯಾಗಿ ರೂಪುಗೊಂಡಿದೆ. ಬೆಂಗಳೂರಿನ…
ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಲೆಮಾರಿಗಳ ಅನಿರ್ದಿಷ್ಟಾವಧಿ ಧರಣಿ
September 24, 2019ಮೈಸೂರು,ಸೆ.23(ಆರ್ಕೆ)- ನೆಲಮನೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಮೈಸೂ ರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಏಕಲವ್ಯ ನಗರದ ಅಲೆಮಾರಿ ಜನರು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿಯಲ್ಲಿ ನರ್ಮ್ ಯೋಜನೆಯಡಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿ ಯಿಂದ ಮೈಸೂರಿನ ಹಲವೆಡೆ ನಿರ್ಮಿಸಿ ರುವ ಗುಂಪು ಮನೆಗಳ ಕಾಮಗಾರಿ ಕಳಪೆ ಯಿಂದ ಕೂಡಿರುವುದರಿಂದ ಮಳೆ ನೀರು ಸೋರುತ್ತಿದ್ದು, ಆವರಣದಲ್ಲಿ ಮಳೆ ನೀರು ನಿಂತು ಕೆರೆಯಂತಾಗಿ ಸೊಳ್ಳೆಗಳ ತಾಣ ವಾಗಿದೆ ಎಂದು ಪ್ರತಿಭಟನಾಕಾರರು…
ನಂ.ಗೂಡು ತಹಶೀಲ್ದಾರ್ ವಿರುದ್ಧ ರೈತರ ಪ್ರತಿಭಟನೆ
September 24, 2019ಮೈಸೂರು,ಸೆ.23(ಆರ್ಕೆ)-ರೈತರ ಜಮೀನುಗಳ ಖಾತೆ-ಕಂದಾಯ ಮಾಡಿಕೊಡಲು ನಂಜನಗೂಡು ತಾಲೂಕು ತಹಶೀಲ್ದಾರರು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಆರೋಪಿಸಿ ರೈತರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು. ಕಂದಾಯ ಇಲಾಖೆ ಸಂಬಂಧ ಭೂ ದಾಖಲೆ, ಇನ್ನಿತರ ಸೌಲಭ್ಯ, ಸೇವೆಗಳನ್ನು ಪಡೆಯಲು ಕಚೇರಿಗೆ ಹೋಗುವ ರೈತರನ್ನು ಹಿಯ್ಯಾಳಿಸಿ ಮನಸ್ಸಿಗೆ ಬಂದಂತೆ ಮಾತ ನಾಡುವ ಮೂಲಕ ನಂಜನಗೂಡು ತಹಶೀಲ್ದಾರ್ ಕೆ.ಎಂ.ಮಹೇಶ್ ಉದ್ಧಟತನ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದಾಖಲೆಗಳು ಸರಿ ಇದ್ದರೂ ಭೂಮಿಗೆ ಸಂಬಂಧಪಟ್ಟ ಖಾತೆ ಮಾಡಲು ನಿರಾಕರಿಸುತ್ತಿರುವ ಅವರನ್ನು ರೈತ ಮುಖಂಡರು…
ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ
September 23, 2019ಮೈಸೂರು/ಹುಣಸೂರು, ಸೆ.22(ಕೆಕೆ)- ಹುಣಸೂರು, ಕೆ.ಆರ್.ಪೇಟೆ ಸೇರಿದಂತೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ (ಸೆ.23)ಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಸೆ.30 ಕಡೇ ದಿನವಾಗಿದ್ದು, ಚುನಾ ವಣಾಧಿಕಾರಿಗಳಾಗಿರುವ ಆಯಾಯ ತಾಲೂಕು ವ್ಯಾಪ್ತಿಯ ಉಪವಿಭಾಗಾಧಿಕಾರಿಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಅ.1ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.3ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ. ಅ.21ರಂದು ಮತದಾನ ನಡೆಯಲಿದ್ದು, ಅ.24ಕ್ಕೆ ಫಲಿತಾಂಶ ಹೊರಬೀಳಲಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಹುಣಸೂರು ಉಪವಿಭಾ ಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವ…
ಅಮಿತ್ ಶಾ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ
September 23, 2019ನವದೆಹಲಿ, ಸೆ.22- ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ಪುನರ್ವಸತಿ ಪರಿ ಹಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪರಿಹಾರ ಕಾರ್ಯ ಆರಂಭಿಸಲು ಹಣ ಬಿಡುಗಡೆ ಮಾಡು ವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿಯ ನಾಯಕರು ಮನವಿ ಮಾಡಿದ್ದಾರೆ. ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿ ರುವ ಅಮಿತ್ ಶಾ ನಿವಾಸದಲ್ಲಿ ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರವಾಹ ಪೀಡಿತರ…
ಉಪ ಚುನಾವಣೆ ಮುಂದೂಡಲು ಸುಪ್ರೀಂ ಕೋರ್ಟ್ಗೆ ಅನರ್ಹ ಶಾಸಕರಿಂದ ಅರ್ಜಿ ಸಾಧ್ಯತೆ
September 23, 2019ಬೆಂಗಳೂರು, ಸೆ.22-ಚುನಾವಣಾ ಆಯೋಗ ಘೋಷಣೆ ಮಾಡಿರುವ ಉಪಚುನಾವಣೆ ವೇಳಾಪಟ್ಟಿಗೆ ಕರ್ನಾ ಟಕದ ಅನರ್ಹ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಉಪಚುನಾವಣೆಯನ್ನು ಮುಂದೂಡುವಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಅನರ್ಹಗೊಂಡ ಕರ್ನಾ ಟಕದ ಒಟ್ಟು 15 ಶಾಸಕರು ಉಪಚುನಾ ವಣೆಯನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಮುಂದಾ ಗಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ತುರ್ತು ಭೇಟಿ ಮಾಡಿ ಚರ್ಚೆ ನಡೆಸಿ ದ್ದಾರೆ ಎನ್ನಲಾಗಿದೆ. ಚರ್ಚೆ ಬಳಿಕ…
`ಕಾವೇರಿ’ ಕಾಲಿಗೆ ಚುಚ್ಚಿದ ಮೊಳೆ
September 23, 2019ಮೈಸೂರು, ಸೆ.22(ಆರ್ಕೆಬಿ)- ಮೈಸೂರು ದಸರಾ ಆನೆಗಳ ಉಸ್ತುವಾರಿ ಹೊತ್ತವರ ಅಜಾಗರೂಕತೆಯಿಂದಾಗಿ ಭಾನುವಾರ ಪ್ರತಿದಿನದಂತೆ ಮೆರವಣಿಗೆ ತಾಲೀಮು ಹೊರಟಿದ್ದ ದಸರಾ ಗಜಪಡೆಯ ಕಾವೇರಿ ಆನೆಯ ಕಾಲಿಗೆ ಚೂಪಾದ ಮೊಳೆ ಯೊಂದು ಚುಚ್ಚಿದ ಘಟನೆ ನಡೆಯಿತು. ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ ಏಳು ದಿನಗಳಷ್ಟೇ ಬಾಕಿ ಇವೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಗಜಪಡೆಯ ಮೆರವಣಿಗೆ ತಾಲೀಮು ನಡೆಸಲಾಗುತ್ತಿದೆ. ಅಂತೆಯೇ ಭಾನುವಾರವೂ ಬೆಳಿಗ್ಗೆ 7.25ರ ವೇಳೆಗೆ ಅರಮನೆ ಯಿಂದ ಬನ್ನಿಮಂಟಪದ ಕಡೆಗೆ ಗಜಪಡೆ ತಾಲೀಮು ಹೊರಟಿತ್ತು. ಈ ಸಂದರ್ಭದಲ್ಲಿ ಕೋಟೆ…
ಉಪಚುನಾವಣೆ: 15 ಕ್ಷೇತ್ರದಲ್ಲೂ ಜೆಡಿಎಸ್ ಏಕಾಂಗಿ ಸ್ಪರ್ಧೆ
September 22, 2019ಮೈಸೂರು, ಸೆ.21(ಪಿಎಂ)- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾ ವಣೆ ಯಲ್ಲಿ ಹುಣಸೂರು ಸೇರಿದಂತೆ 8ರಿಂದ 10 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸ ಲಿದೆ ಎಂದು ಮಾಜಿ ಮುಖ್ಯಮಂತ್ರಿಗಳೂ ಆದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಸಾರಾ ಸಭಾಂಗಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಶನಿವಾರ ಹಮ್ಮಿ ಕೊಂಡಿದ್ದ ಮೈಸೂರು ನಗರ ಹಾಗೂ ಜಿಲ್ಲಾ ಚುನಾಯಿತ ಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳು ಹಾಗೂ ಮುಖಂಡರ ಚಿಂತನ-ಮಂಥನ ಸಭೆ ಉದ್ಘಾ ಟಿಸಿ ಮಾಧ್ಯಮದವರೊಂದಿಗೆ ಮಾತನಾ ಡಿದ…
ಸಹೋದರ ರೇವಣ್ಣನನ್ನೇ ಡಿಸಿಎಂ ಮಾಡದವರು ನನ್ನ ಸಿಎಂ ಮಾಡುತ್ತಾರಾ…
September 22, 2019ಮೈಸೂರು, ಸೆ.21(ಎಸ್ಬಿಡಿ)- ಸಹೋದರ ರೇವಣ್ಣನನ್ನೇ ಡಿಸಿಎಂ ಮಾಡದವರು ನನ್ನನ್ನು ಸಿಎಂ ಮಾಡ್ತಾರಾ? ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯನವರ ಸೋಲಿಸಿದ್ದಕ್ಕೆ ಜಿಟಿಡಿ ಯನ್ನು ಸಿಎಂ ಮಾಡಬೇಕಿತ್ತೇ? ಎಂಬ ಕುಮಾರ ಸ್ವಾಮಿ ಅವರ ಹೇಳಿಕೆಗೆ ಶನಿವಾರ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಜಿಟಿಡಿ, ಅವರು ಮೈಸೂರು ಬಿಡೋಲ್ಲ. ನೀವು ನನ್ನ ಬಿಡೋಲ್ಲ. ದಿನ ಇದೆ ಆಗಿದೆ ಎಂದು ಛೇಡಿಸಿದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವ ರನ್ನು ಸೋಲಿಸಿದರೆ ಸಿಎಂಗೆ ಸಮಾನವಾದ ಖಾತೆ ನೀಡುತ್ತೇನೆ….