ಮೈಸೂರು,ಸೆ.21(ಎಂಟಿವೈ)- ಮರೆಗುಳಿ ಸಮಸ್ಯೆಗೆ ತುತ್ತಾದವ ರಿಗೆ ಸೂಕ್ತ ಚಿಕಿತ್ಸೆ ನೀಡಲು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಆಲ್ಜಿಮಿರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕ ವಿಶ್ವ ಮರೆಗುಳಿ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ `ಮೆಮೋರಿ ವಾಕ್’ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾ ಡಿದ ಅವರು, 1908ರಲ್ಲಿ ಮೊದಲ ಬಾರಿಗೆ ಮರೆಗುಳಿ ಸಮಸ್ಯೆ…
ಕನ್ನಡದಲ್ಲಿ ಅಧಿಕ ಚಿತ್ರಗಳು ನಿರ್ಮಾಣವಾದರೂ ಗುಣಮಟ್ಟ ಮಾತ್ರ ಕುಸಿತ
September 22, 2019ಮೈಸೂರು, ಸೆ.21(ಎಂಟಿವೈ)- ವಾಹಿನಿಗಳಲ್ಲಿ ಪ್ರಸಾರ ವಾಗುವ ಧಾರಾವಾಹಿಗಳ ಪರಿಣಾಮದಿಂದ ಸದಭಿ ರುಚಿಯ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂ ದಿರಕ್ಕೆ ಬರುವುದು ಕ್ಷೀಣಿಸಿದೆ. ಕೇವಲ ಸಿಳ್ಳೆ ಹೊಡೆದು ಕುಣಿಸುವ ಸನ್ನಿವೇಶವಿರುವ ಸಿನಿಮಾಗಳನ್ನಷ್ಟೇ ಯುವ ಸಮೂಹ ನೋಡುತ್ತಿರುವುದರಿಂದ 25 ದಿನದ ಪ್ರದ ರ್ಶನವೇ ದೊಡ್ಡ ಸಂಭ್ರಮವಾಗುತ್ತಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿರ್ದೇಶಕ ಪಿ.ಶೇಷಾದ್ರಿ ವಿಷಾದಿಸಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ಸಂವಾದದಲ್ಲಿ ಮಾತನಾಡಿದ ಅವರು, ಈ ಹಿಂದೆ ರಂಗಭೂಮಿ ಮತ್ತು ಸಿನಿಮಾ ಜನರಿಗೆ ಮನರಂಜನೆ ನೀಡುವ ದೃಶ್ಯ ಮಾಧ್ಯಮವಾಗಿದ್ದವು….
ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ಅವಶ್ಯ: ಶ್ರೀನಿವಾಸ ಪ್ರಸಾದ್
September 22, 2019ಮೈಸೂರು, ಸೆ.21(ಎಸ್ಬಿಡಿ)- ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯಿಸಿದರು. ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರು ಸಪ್ನ ಬುಕ್ ಹೌಸ್ ಸಹಯೋಗ ದಲ್ಲಿ ಮಾನಸಗಂಗೋತ್ರಿ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಶನಿವಾರ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಾರ್ಯ ಕ್ರಮದಲ್ಲಿ, ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್.ಮಾಲಿನಿ ಅವರ `ವೈದ್ಯಕೀಯ ವೈರುಧ್ಯಗಳು’ ಹಾಗೂ `ಆನುವಂಶೀಯ ಕಾಯಿಲೆಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. 4ದೇಶದ ಅಧಿಕೃತ…
ವಿವೇಕಾನಂದ ಚಿಕಾಗೋ ಭಾಷಣ ನಂತರ ಭಾರತೀಯ ಸಂತರಿಗೆ ವಿದೇಶಿ ನೆಲದಲ್ಲಿ ಪೂಜ್ಯನೀಯ ಸ್ಥಾನ
September 22, 2019ಮೈಸೂರು,ಸೆ.21(ಎಸ್ಪಿಎನ್)-ಸ್ವಾಮಿ ವಿವೇಕಾನಂದರು ಚಿಕಾಗೋ (1893ರ ಸೆ.11ರಂದು) ಸರ್ವಧರ್ಮ ಸಮ್ಮೇಳನ ದಲ್ಲಿ ಭಾಷಣ ಮಾಡಿದ ನಂತರ ಭಾರತ ಆಧ್ಯಾತ್ಮದ ಬಗ್ಗೆ ಯೂರೋಪಿಯನ್ನ ರಲ್ಲಿದ್ದ ತಾತ್ಸಾರ ಮನೋಭಾವನೆ ಕಡಿಮೆ ಯಾಗಿ, ಅಂದಿನಿಂದ ವಿದೇಶಿ ನೆಲದಲ್ಲಿ ಭಾರತ ಸಂತರ ಬಗ್ಗೆ ಪೂಜ್ಯನೀಯ ಸ್ಥಾನ ದೊರಕಿದೆ ಎಂದು ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣದ ಸೆನೆಟ್ ಭವನದಲ್ಲಿ ಮೈಸೂರು ವಿವಿ ಮತ್ತು ಶ್ರೀ ರಾಮಕೃಷ್ಣಾ ಶ್ರಮದ ಸಹಯೋಗದೊಂದಿಗೆ ಜರುಗಿದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ…
ಸೆ.23, 24ರಂದು ವಿದ್ಯುತ್ ನಿಲುಗಡೆ
September 22, 2019ಮೈಸೂರು, ಸೆ.21- ನಂಜನಗೂಡು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತ ವತಿಯಿಂದ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ. ಸೆ.23ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬನ್ನೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಬನ್ನೂರು ಪಟ್ಟಣ, ಕೊಡಗಳ್ಳಿ, ಬೀಸೀಹಳ್ಳಿ, ಹೆಗ್ಗೂರು, ಅತ್ತಳ್ಳಿ, ಕೇತುಪುರ, ರಂಗಸಮುದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶ, ಸೆ.24ರಂದು ಮಲಿಯೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಚಿದ್ರವಳ್ಳಿ ಮತ್ತು ದೊಡ್ಡಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶ, ಸುತ್ತೂರು,…
ಯುವ ಜನತೆಯೇ ಪ್ರಗತಿಪರ ಭಾರತ ನಿರ್ಮಾಣಕ್ಕೆ ಪ್ರೇರಕಶಕ್ತಿ
September 22, 2019ಮೈಸೂರು, ಸೆ.21(ಪಿಎಂ)- ಯುವ ಜನತೆಯೇ ಪ್ರಗತಿಪರ ಭಾರತ ನಿರ್ಮಾ ಣಕ್ಕೆ ಪ್ರೇರಕಶಕ್ತಿ ಎಂದು ಮುಂಬೈನ ಇಲ್ಯೂಮ್ನೆ ನಾಲೆಡ್ಜ್ ರಿಸೋರ್ಸ್ನ ಸಂಸ್ಥಾ ಪಕ ಹಾಗೂ ಸಿಇಓ ಶ್ರೀನಿವಾಸ್ ವೆಂಕಟ ರಾಮ್ ಅವರು ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸ್ವಾಮಿ ವಿವೇಕಾ ನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು ವಿವಿ ಜಂಟಿ ಆಶ್ರಯ ದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣದ 3ನೇ ವಿಚಾರ ಗೋಷ್ಠಿ ಯಲ್ಲಿ ಶನಿವಾರ `ಪ್ರಗತಿಪರ ಭಾರತ…
ಮೈಸೂರಿನ ಪ್ರೊ. ಬಿ.ಎಸ್. ವಿಜಯರಾಘವನ್ ಅವರಿಗೆರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ
September 22, 2019ಮೈಸೂರು, ಸೆ.21(ಆರ್ಕೆ)- 2019ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶ ಸ್ತಿಗೆ ಮೈಸೂರಿನ ಖ್ಯಾತ ಸಂಗೀತ ವಿದ್ವಾಂಸ ರಾದ ಪ್ರೊ.ಬಿ.ಎಸ್.ವಿಜಯರಾಘವನ್ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣ ದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮ ಗಳ ಪೋಸ್ಟರ್ ಬಿಡುಗಡೆ ಮಾಡಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು 2019ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಪ್ರೊ. ಬಿ.ಎಸ್.ವಿಜಯರಾಘವನ್ ಆಯ್ಕೆ ಯಾಗಿದ್ದಾರೆ ಎಂದು ಪ್ರಕಟಿಸಿದರು. ದಸರಾ ಮಹೋತ್ಸವದ ಉದ್ಘಾಟನೆ ದಿನ ಸೆಪ್ಟೆಂಬರ್…
ಜಂಬೂಸವಾರಿ ವೀಕ್ಷಣೆಗೆ ವಿದೇಶಿ ಪ್ರವಾಸಿಗರಿಗೆ ಉಚಿತ ಪಾಸ್
September 22, 2019ಮೈಸೂರು, ಸೆ.21-ಪ್ರತೀ ವರ್ಷದಂತೆ ಈ ವರ್ಷವೂ ಕಲ್ಪವೃಕ್ಷ ಟ್ರಸ್ಟ್ ಮತ್ತು ಜನ ಚೇತನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ, ಅ.8ರಂದು ನಡೆಯುವ ದಸರಾ ಮೆರವಣಿಗೆ ವೀಕ್ಷಿಸಲು ವಿದೇಶಿ ಪ್ರವಾಸಿಗರಿಗೆ, ಸಯ್ಯಾಜಿರಾವ್ ರಸ್ತೆಯ ಆರ್ಯುವೇದ ಕಾಲೇಜಿನ ಮುಂಭಾಗ ಫುಟ್ಪಾತ್ನಲ್ಲಿ ಟ್ರಸ್ಟ್ಗಳ ಸ್ವಂತ ಖರ್ಚಿನಲ್ಲಿ, ಶಾಮಿಯಾನ ಅಳವಡಿಸಿ, 1500 ಕುರ್ಚಿಗಳನ್ನು ಅಳವಡಿಸಿ ಉಚಿತವಾಗಿ ವಿದೇಶಿ ಪ್ರವಾಸಿಗರಿಗೆ ಪಾಸುಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ ಅವರಿಗೆ ಬಿಸ್ಲೆರಿ ನೀರಿನ ಬಾಟಲ್, ಬಿಸ್ಕತ್ತುಗಳನ್ನು ನೀಡಿ, ಇಂಗ್ಲಿಷ್ನಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಮೈಸೂರು ದಸರಾ-2019ರ ವಿದೇಶಿ ಪ್ರವಾಸಿಗರ…
ನಾಳೆ `ಕಾಯಕ ತಪಸ್ವಿ’ ದೃಶ್ಯ-ನಾಟ್ಯ-ಸಂಗಮ ಪ್ರದರ್ಶನ
September 22, 2019ಮೈಸೂರು, ಸೆ.21- ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿಗಳಾದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳವರ ಜೀವನಾಧಾರಿತ ಕಥಾನಕ `ಕಾಯಕ ತಪಸ್ವಿ’ ದೃಶ್ಯ-ನಾಟ್ಯ-ಸಂಗಮ ಪ್ರದರ್ಶನವನ್ನು ಸೆ.23ರಂದು ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ. ಶ್ರೀಗಳ ವರ ಜೀವನ ದರ್ಶನವನ್ನು ಸಂಗೀತ, ನೃತ್ಯ ಹಾಗೂ ನಾಟಕದ ಮೂಲಕ ಧ್ವನಿ ಬೆಳಕಿನ ವಿಶಿಷ್ಟ ರಂಗವಿನ್ಯಾಸದೊಡನೆ ಬೆಂಗಳೂ ರಿನ ಅರ್ಥ ಅಕಾಡೆಮಿಯವರು ಪ್ರಸ್ತುತಪಡಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ…
ಶಿಲ್ಪ ಕಲಾವಿದರ ಕಡೆಗಣನೆ
September 22, 2019ಮೈಸೂರು, ಸೆ. 21(ಆರ್ಕೆ)- ದಸರಾ ಮಹೋತ್ಸವದಲ್ಲಿ ಅರಮನೆ ಸೌಂದರ್ಯಕ್ಕೆ ಹಗಲಿರುಳು ದುಡಿದ ಚಿತ್ರ ಮತ್ತು ಶಿಲ್ಪ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ಮೈಸೂರು ಆರ್ಟ್ ಗ್ಯಾಲರಿಯ ಹಿರಿಯ ಶಿಲ್ಪ ಕಲಾವಿದ ಎಲ್. ಶಿವ ಲಿಂಗಪ್ಪ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಸರಾ ಸಂದರ್ಭದಲ್ಲಿ ಸರ್ಕಾರವು ಆಸ್ಥಾನ್ ವಿದ್ವಾನ್ ಪ್ರಶಸ್ತಿ ನೀಡುತ್ತಿದೆ. ಈ ವರ್ಷದಿಂದ ಲಾದರೂ ಚಿತ್ರ ಮತ್ತು ಶಿಲ್ಪ ಕಲಾವಿದರಿಗೂ ಈ ಪ್ರಶಸ್ತಿಯನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.