ಮೈಸೂರು,ಸೆ.24(ಎಂಟಿವೈ)- ದಸರಾ ಮಹೋತ್ಸವ ವೇಳೆ ಅರಮನೆಯಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಆಚರಣೆ ಯಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ಮಂಗಳವಾರ ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಸ್ಟ್ರಾಂಗ್ ರೂಮ್ನಿಂದ `ರತ್ನ ಖಚಿತ ಸಿಂಹಾಸನ’ದ ಬಿಡಿಭಾಗಗಳನ್ನು ಹೊರತಂದು ದರ್ಬಾರ್ ಹಾಲ್ ನಲ್ಲಿ ಹಾಗೂ ಕನ್ನಡಿ ತೊಟ್ಟಿಯಲ್ಲಿ `ಭದ್ರಾಸನ’ ಜೋಡಿಸಲಾಯಿತು. ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾ ಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಆಸೀನರಾಗಿ ಖಾಸಗಿ ದರ್ಬಾರ್ ನಡೆಸ…
ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಅಲಂಕರಿಸುವ ಸೀರೆ ರಾಜಕೀಯಕ್ಕೆ ತೆರೆ!
September 25, 2019ಮೈಸೂರು, ಸೆ.24(ಆರ್ಕೆಬಿ)- ಮೈಸೂರು ದಸರಾ ಜಂಬೂಸವಾರಿ ವೇಳೆ ಚಿನ್ನದ ಅಂಬಾರಿಯಲ್ಲಿ ಆಸೀನ ರಾಗುವ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅಲಂಕರಿಸುವ ಸೀರೆಯನ್ನು ಇನ್ನು ಮುಂದೆ ರಾಜ್ಯ ಸರ್ಕಾರ ಯಾರಿಂದಲೂ ದಾನ ಪಡೆಯದಿರಲು ನಿರ್ಧರಿಸಿದೆ. ಈ ಮೂಲಕ ದೇವರಿಗೆ ಅಲಂಕರಿಸುವ ಸೀರೆ ವಿಚಾರದಲ್ಲಿ ನಡೆಯುತ್ತಿದ್ದ ರಾಜಕೀಯ ಮೇಲಾಟಕ್ಕೆ ಸರ್ಕಾರ ತೆರೆ ಎಳೆದಿದೆ. ಈ ವಿಚಾರವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ಸ್ಪಷ್ಪಪಡಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ದಸರಾ ಕವಿಗೋಷ್ಠಿಯ ಪೋಸ್ಟರ್ ಬಿಡುಗಡೆ…
ಬಾಲಿವುಡ್ `ಬಿಗ್ ಬಿ’ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
September 25, 2019ಮುಂಬೈ/ನವದೆಹಲಿ, ಸೆ.24-ಬಾಲಿವುಡ್ ದಿಗ್ಗಜ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಟ್ವೀಟ್ ಮೂಲಕ ಮಾಹಿತಿ ಖಚಿತಪಡಿಸಿದ್ದಾರೆ. ಸಿನಿರಂಗದಲ್ಲಿ ಎರಡು ತಲೆ ಮಾರು ರಂಜಿಸಿ, ಸಾಕಷ್ಟು ಮಂದಿಗೆ ಸ್ಫೂರ್ತಿಯಾ ಗಿರುವ ಅಮಿತಾಭ್ ಬಚ್ಚನ್ ಅವರು ಸರ್ವಾನು ಮತದಿಂದ…
ಮಾಜಿ ಸಿಎಂಗಳಾದ ಕುಮಾರಸ್ವಾಮಿ-ಸಿದ್ದರಾಮಯ್ಯ ಪರಸ್ಪರ ವಾಕ್ಸಮರ:ಹದ್ದು-ಗಿಣಿ ಹೆಸರಲ್ಲಿ ಕುಕ್ಕಾಟ!
September 25, 2019ಬೆಂಗಳೂರು, ಸೆ.24(ಕೆಎಂಶಿ)- ಒಂದೆಡೆ ಉಪ ಚುನಾವಣೆ ಸಮರ ಕಾವೇರುತ್ತಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ತಾರಕಕ್ಕೇರುತ್ತಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ `ಸಿದ್ದರಾಮಯ್ಯ ಆಡಳಿತ ಅಂತರಂಗ-ಬಹಿರಂಗ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿದ ಮಾತೊಂದು ಮಾಜಿ ಸಿಎಂಗಳ ಜಂಗಿ ಕುಸ್ತಿಗೆ ಕಾರಣವಾಗಿದೆ. `ಚಾಮುಂಡೇಶ್ವರಿ ಸೋಲು ಒಂದು ಆಕಸ್ಮಿಕ ಗಾಯ. ಅದನ್ನು ಒಂದು ಕೆಟ್ಟ ಕನಸ್ಸೆಂದು ಮರೆಯಿರಿ’ ಎಂದು ಸಿದ್ದರಾಮಯ್ಯ ನವರಿಗೆ ಸಮಾಧಾನ ಹೇಳಿದ್ದ…
ಮರಳು ಸುಲಭ ಲಭ್ಯ
September 25, 2019ಬೆಂಗಳೂರು, ಸೆ.24(ಕೆಎಂಶಿ)- ಮರಳು ನೀತಿ ಸಡಿಲಗೊಳಿಸಲು ರಾಜ್ಯ ಸರ್ಕಾರ ಮುಂದಾ ಗಿದ್ದು, ಮುಂದಿನ ಎರಡು ಮೂರು ತಿಂಗಳಲ್ಲಿ ಎಲ್ಲೆಡೆ ಮರಳು ಸುಲಭವಾಗಿ ದೊರೆ ಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್, ಇಲಾಖಾ ವತಿಯಿಂದ ವಾರ್ಷಿಕ ಆದಾಯವನ್ನು 3200 ರಿಂದ 3700 ಕೋಟಿ ರೂ.ಗೆ ಹೆಚ್ಚಿಸುವ ಉದ್ದೇಶ ದಿಂದ ಮರಳು ಮತ್ತು ಗ್ರಾನೈಟ್ ಮೇಲಿನ ಬಿಗಿ ಕಾನೂನನ್ನು ಸಡಿಲಗೊಳಿಸಲಾಗುತ್ತಿದೆ. ಮರಳು ದಂಧೆಗೆ ಕಡಿವಾಣ ಹಾಕಿ ಗ್ರಾಹಕರಿಗೆ ಕಡಿಮೆ ದರದಲ್ಲಿ…
ಅನರ್ಹಗೊಂಡಿರುವ 17 ಶಾಸಕರ ಅರ್ಜಿ ವಿಚಾರಣೆ: ನಾಳೆಗೆ ವಿಚಾರಣೆ ಮುಂದೂಡಿಕೆ
September 24, 2019ನವದೆಹಲಿ, ಸೆ. 23-ಅನರ್ಹಗೊಂಡಿ ರುವ 17 ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಬುಧವಾರಕ್ಕೆ ಮುಂದೂಡಿದೆ. ನ್ಯಾಯ ಮೂರ್ತಿ ಎಸ್.ವಿ. ರಮಣ ಅವರನ್ನೊಳ ಗೊಂಡ ತ್ರಿಸದಸ್ಯ ಪೀಠ ಇಂದು ವಿಚಾರಣೆ ಯನ್ನು ಕೈಗೆತ್ತಿಕೊಂಡು ವಾದ ಪ್ರತಿವಾದ ಆಲಿಸಿ, ಈ ಬಗ್ಗೆ ಸುದೀರ್ಘ ಚರ್ಚೆ ಅವಶ್ಯವಿದೆ ಎಂದು ಸೆ. 25ಕ್ಕೆ ವಿಚಾರಣೆ ಯನ್ನು ಮುಂದೂಡಿದರು. ಇದಕ್ಕೂ ಮುನ್ನ ಅನರ್ಹ ಶಾಸಕರ ಪರ ವಾಗಿ ಮುಕುಲ್ ರೋಹಟಗಿ ವಾದ ಮಂಡಿ ಸಿದರೆ, ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್…
ಒಂದೇ ಐಡಿ ಕಾರ್ಡ್ನಲ್ಲಿ ಆಧಾರ್, ಡಿಎಲ್, ಪಾಸ್ಪೋರ್ಟ್
September 24, 2019ನವದೆಹಲಿ, ಸೆ. 23- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮ ವಾರ ಆಧಾರ್ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದು, ಆಧಾರ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಂಕ್ ಖಾತೆ ಒಳಗೊಂಡ ಬಹು ಉಪಯೋಗಿ ಕಾರ್ಡ್ ಅನ್ನು ಭಾರತೀಯರಿಗೆ ನೀಡುವ ಬಗ್ಗೆ ಮಾತನಾಡಿದ್ದಾರೆ. 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ಸಹ ಅಮಿತ್ ಶಾ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತ ನಾಡಿದ ಅಮಿತ್ ಶಾ,…
ಚಾಮುಂಡಿಬೆಟ್ಟ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
September 24, 2019ಮೈಸೂರು,ಸೆ.23(ಆರ್ಕೆ)- ದಶಕಗಳ ಚಾಮುಂಡಿ ಬೆಟ್ಟ ಗ್ರಾಮಸ್ಥರ ಬೇಡಿಕೆ ಅಂತೂ ಸಾಕಾರಗೊಳ್ಳು ತ್ತಿದೆ. ಪ್ರತಿದಿನ ಸಾವಿರಾರು ಮಂದಿ ಭಕ್ತಾದಿಗಳು ಹಾಗೂ ಪ್ರವಾಸಿಗರು ಭೇಟಿ ನೀಡುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನವೂ ಆದ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ವಿದೆ. ಹಲವು ಸರ್ಕಾರ ಬಂದು ಹೋದರೂ, ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇ ಗೌಡ ಈ ಗಂಭೀರ ವಿಷಯವನ್ನು ದಸರಾ ಉದ್ಘಾ ಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿ ತಕ್ಷಣವೇ ಕುಡಿ ಯುವ…
ಕೆಜಿಗೆ 60 ರೂ.: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ
September 24, 2019ಮೈಸೂರು,ಸೆ.23(ಪಿಎಂ)-ಈರುಳ್ಳಿ ಹಚ್ಚಿ ದರಷ್ಟೇ ಅಲ್ಲ, ಇದೀಗ ಅದರ ಬೆಲೆ ಕೇಳಿದರೆ ಸಾಕು ಕಣ್ಣಲ್ಲಿ ನೀರು ಬರಲಿದೆ. ಅಷ್ಟರಮಟ್ಟಿಗೆ ಈರುಳ್ಳಿ ಬೆಲೆ ಗಗನಕ್ಕೇರು ತ್ತಿದೆ. ಸದ್ಯ ಕೆಜಿಗೆ 60 ರೂ. ದುಬಾರಿ ಬೆಲೆ ಇರುವ ಈರುಳ್ಳಿ ಮುಂದಿನ ದಿನಗಳಲ್ಲಿ ಮತ್ತೂ ಏರುವ ಸಾಧ್ಯತೆಯೂ ಅಧಿಕವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಯುವ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಳೆ ನಿರೀಕ್ಷೆ ಯಂತೆ ಕೈಗೆ ಸಿಗದಂತಾಗಿದೆ. ಪರಿಣಾಮ ಈರುಳ್ಳಿ ಕೊರತೆ ಉಂಟಾಗಿ ಸಹಜವಾ ಗಿಯೇ ಬೆಲೆ ಗಗನಮುಖಿಯಾಗಿದೆ….
ಲಂಡನ್ ಬುಕ್ ಆಫ್ ರೆಕಾಡ್ರ್ಸ್ಗಾಗಿ ಮೈಸೂರಲ್ಲೂ ವಾಸವಿ ಮಹಿಳೆಯರಿಂದ ಸಾಮೂಹಿಕ ಗಾಯನ
September 24, 2019ಮೈಸೂರು, ಸೆ.23(ಆರ್ಕೆಬಿ)- `ವಾಸವಿ ವಾಸವಿ ವಂದನಮುಲು ವಾಸವಿ…’ ಲಂಡನ್ ಬುಕ್ ಆಫ್ ರೆಕಾಡ್ರ್ಸ್ಗಾಗಿ ವಿಶ್ವ ಆರ್ಯ ವೈಶ್ಯ ಮಹಾಸಭಾ ಕರ್ನಾ ಟಕ ಮಹಿಳಾ ವಿಭಾಗದಿಂದ ಬೆಂಗಳೂ ರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿ ಸಿದ್ದ ಯೂನಿವರ್ಸಲ್ ವಾಸವಿ ಮಾತಾ ಪ್ರಾರ್ಥನಾ ಗಾಯನದ ಸಂದರ್ಭದಲ್ಲಿ ಮೈಸೂರಿನಲ್ಲಿಯೂ ಏಕಕಾಲದಲ್ಲಿ ಸಾಮೂ ಹಿಕ ಪ್ರಾರ್ಥನಾ ಗಾಯನ ನಡೆಸಲಾಯಿತು. ಮೈಸೂರಿನ ಅಶೋಕ ರಸ್ತೆ ಕನ್ನಿಕಾ ಮಹಲ್ನಲ್ಲಿ ಮಧ್ಯಾಹ್ನ ನಡೆದ ಪ್ರಾರ್ಥನಾ ಗಾಯನದಲ್ಲಿ ಮೈಸೂರು ವಿಭಾಗದ ಮೈಸೂರು, ನಂಜನಗೂಡು, ಚಾಮ ರಾಜನಗರ, ಹಾಸನ, ತಿ.ನರಸೀಪುರ, ಹೊಳೆನರಸೀಪುರ…