ಮೈಸೂರು: ಮೈಸೂರಿನ ಮಹಾರಾಜ ಹಾಗೂ ಯುವರಾಜ ಕಾಲೇಜು ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ಜೂ.5ರಿಂದ ಆರಂಭಗೊಂಡಿರುವ ಎನ್ಸಿಸಿ ಕ್ಯಾಂಪ್ನಲ್ಲಿ ಮಂಗಳವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಎನ್ಸಿಸಿ ಮೈಸೂರು ಗ್ರೂಪ್ ಆಶ್ರಯ ದಲ್ಲಿ `ಹಾಸನದ ಎನ್ಸಿಸಿ 15ನೇ ಕರ್ನಾಟಕ ಬೆಟಾಲಿಯನ್’ ವತಿಯಿಂದ ಕ್ಯಾಂಪ್ ಏರ್ಪಡಿಸಲಾಗಿದೆ. ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶ ನಾಲಯದ ಅಡಿಯಲ್ಲಿ ಈ ಬಿಎಲ್ಸಿ/ಸಿಎಟಿಸಿ ಕ್ಯಾಂಪ್ (ಬೇಸಿಕ್ ಲೀಡರ್ಶಿಪ್ ಕ್ಯಾಂಪ್/ಕಂಬೈನ್ಡ್ ಆನ್ಯೂಯಲ್ ಟ್ರೈನಿಂಗ್ ಕ್ಯಾಂಪ್) ಆಯೋಜಿಸಲಾಗಿದೆ. ಜೂ.14ರವರೆಗೆ ನಡೆಯುವ ಈ ಕ್ಯಾಂಪ್ನಲ್ಲಿ ವಿವಿಧ ಚಟುವಟಿಕೆಗಳು ಜರುಗಲಿದ್ದು, ಇಂದು…
ಶ್ರೀರಾಂಪುರ ನಿವಾಸಿಗಳ ಭಯ ಇನ್ನೂ ಹೋಗಿಲ್ಲ ರಿಂಗ್ ರಸ್ತೆ ಬಳಿ ದೊಡ್ಡ ಚರಂಡಿ ಒತ್ತುವರಿ
June 12, 2019ಮೈಸೂರು: ಎರಡು ವರ್ಷಗಳ ಹಿಂದೆ ಜಲಪ್ರಳಯ ದಿಂದಾಗಿ ನಲುಗಿದ್ದ ಮೈಸೂರಿನ ಶ್ರೀರಾಂ ಪುರ ಬಡಾವಣೆಯ ನಿವಾಸಿಗಳಿಗೆ ಇನ್ನೂ ಭಯ ಹೋಗಿಲ್ಲ. ಆಗಸದಲ್ಲಿ ಭಾರೀ ಮೋಡ ಕಂಡರೆ ಈಗಲೂ ಭಯ ಕಾಡುತ್ತಿದೆ. ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಬಿದ್ದ ಸಾಮಾನ್ಯ ಮಳೆಗೆ ಶ್ರೀರಾಂಪುರ 2ನೇ ಹಂತದ ಶ್ರೀರಾಂಪುರ ಮಧ್ಯೆ ಹಾದು ಹೋಗಿರುವ ದೊಡ್ಡ ಮೋರಿ ಮುಕ್ಕಾಲು ಭಾಗ ತುಂಬಿ ಭಾರೀ ಸದ್ದಿ ನೊಂದಿಗೆ ನೀರು ನುಗ್ಗಿತ್ತು. ಭಾರೀ ಸದ್ದು ಕೇಳಿ ಬೆಚ್ಚಿ ಬಿದ್ದ ಜನ ಹೊರ ಬಂದು ಮೋರಿಯಲ್ಲಿ…
ಮೈಸೂರಲ್ಲಿ 35ಕ್ಕೂ ಹೆಚ್ಚು ಟಾಂಗಾ ಕುದುರೆಗಳ ಆರೋಗ್ಯ ತಪಾಸಣೆ
June 12, 2019ಮೈಸೂರು: ಪೀಪಲ್ ಫಾರ್ ಅನಿಮಲ್ (ಪಿಎಫ್ಎ), ವಲ್ರ್ಡ್ ವೆಟ್ ಇಂಟರ್ನ್ಯಾಷನಲ್ ಸೊಸೈಟಿ (ಡಬ್ಲ್ಯೂ ವಿಎಸ್) ವತಿಯಿಂದ ಸೋಮವಾರ ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ಟಾಂಗಾ ಕುದುರೆಗಳ ಆರೋಗ್ಯ ತಪಾಸಣಾ ಶಿಬಿರದ ವೇಳೆ ಬಹುತೇಕ ಕುದುರೆಗಳ ಆರೋಗ್ಯದಲ್ಲಿ ಏರುಪೇರು ಇರುವುದು ಹೆಚ್ಚಾಗಿ ಕಂಡು ಬಂದಿತು. ಶಿಬಿರದಲ್ಲಿ ಪೀಪಲ್ ಫಾರ್ ಅನಿಮಲ್ ಮತ್ತು ವಲ್ರ್ಡ್ ವೆಟ್ ಇಂಟರ್ನ್ಯಾಷನಲ್ನ ನುರಿತ ಪಶು ವೈದ್ಯರು 35ಕ್ಕೂ ಹೆಚ್ಚು ಕುದುರೆಗಳ ಆರೋಗ್ಯ ಪರೀಕ್ಷಿಸಿದರು. ಈ ವೇಳೆ ಕೆಲವು ಕುದುರೆಗಳು ಗಾಯಗೊಂಡಿದ್ದು,…
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ 12 ಸಾವಿರ ಸಹಾಯ ಧನಕ್ಕೆ ಆಗ್ರಹ
June 12, 2019ಮೈಸೂರು:ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡುವ ವಾರ್ಷಿಕ 6 ಸಾವಿರ ರೂ. ಸಹಾಯಧನ ವನ್ನು 12 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಯೋಜನ ಯಾವುದೇ ಆದಾಯ ಮಿತಿ ಇಲ್ಲದೆ ಎಲ್ಲಾ ರೈತರಿಗೂ ದೊರೆಯುವಂತೆ ಆಗಬೇಕು ಎಂದರು. ಕೇಂದ್ರ ಸರ್ಕಾರ…
ಹೂಟಗಳ್ಳಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
June 12, 2019ಮೈಸೂರು: ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಹೂಟಗಳ್ಳಿ ನಿವಾಸಿ ಶಿವು ತೀವ್ರವಾಗಿ ಗಾಯಗೊಂಡಿರುವ ಯುವಕ ನಾಗಿದ್ದು, ಆತನನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಮವಾರ ರಾತ್ರಿ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಬಳಿ ಸರ್ಕಲ್ನಲ್ಲಿ ಕುಳಿತಿದ್ದಾಗ ಏಕಾಏಕಿ ನಾಲ್ವರು ಯುವಕರ ಗುಂಪು ದಾಳಿ ನಡೆಸಿ ಮಚ್ಚು, ಡ್ರ್ಯಾಗನ್ನಿಂದ ಹಲ್ಲೆ ನಡೆಸಿ ಪರಾರಿಯಾಯಿತು ಎಂದು ಶಿವು ಪೊಲೀಸರಿಗೆ ತಿಳಿಸಿದ್ದಾನೆ. ಘಟನೆಯಲ್ಲಿ ಶಿವು ಕೊರಳಲ್ಲಿದ್ದ 23…
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
June 12, 2019ಮೈಸೂರು: ವಿಷ ಸೇವಿಸಿ ವ್ಯಕ್ತಿಯೊರ್ವ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಟೌನ್ ನಿವಾಸಿ ವಿಶ್ವನಾಥ(50) ಎಂಬುವವರೇ ಆತ್ಮಹತ್ಯೆ ಮಾಡಿ ಕೊಂಡವರಾಗಿದ್ದು, ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕೆ.ಆರ್. ಠಾಣೆ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿ ಸಂಬಂಧಿಕರಿಗೆ ಮಾಹಿತಿ ನೀಡಿ ಕರೆಸಿಕೊಂಡು ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವಿವಾದದಿಂದ ಬೇಸತ್ತು ವಿಶ್ವನಾಥ ವಿಷ…
ತಾಯಿ, ಮಕ್ಕಳು ನಾಪತ್ತೆ
June 12, 2019ಮೈಸೂರು: ನಂಜನಗೂಡಿಗೆ ಹೋಗುವುದಾಗಿ ಹೇಳಿ ಹೋದ ತಾಯಿ ಮಕ್ಕಳಿಬ್ಬರು ನಾಪತ್ತೆ ಯಾಗಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖ ಲಾಗಿದೆ. ನಂಜನಗೂಡಿನ ತೋಪಿನ ಬೀದಿ ನಿವಾಸಿ ಗಳಾದ ಜ್ಯೋತಿ(31), ಶಶಾಂಕ್(9), ಕಿರ್ತನಾ(6) ನಾಪತ್ತೆಯಾದವರು. ಜ್ಯೋತಿಯವರು ನಂಜನಗೂಡಿನ ಮಹದೇವಸ್ವಾಮಿ ಎಂಬುವವರೊಂದಿಗೆ ವಿವಾಹವಾಗಿದ್ದು, ಇವರಿಗೆ ಶಶಾಂಕ್ ಮತ್ತು ಕೀರ್ತನಾ ಎಂಬ ಮಕ್ಕಳಿದ್ದರು. ಇಬ್ಬರೂ ಮೈಸೂರು ಕುವೆಂಪುನಗರದಲ್ಲಿನ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಜ್ಯೋತಿ ಕಾನ್ವೆಂಟ್ನಲ್ಲಿ ಓದುತ್ತಿದ್ದರು. ಆದರೆ, ಜೂ.8 ರಂದು ಜ್ಯೋತಿ ಮಕ್ಕಳಿಬ್ಬರನ್ನು ಕರೆದುಕೊಂಡು ನಂಜನಗೂಡಿನಲ್ಲಿಯೇ ಶಾಲೆಗೆ ಸೇರಿಸುವು ದಾಗಿ ಹೇಳಿ…
ಜಲಸಂವರ್ಧನೆ ಪರಿಣಾಮಕಾರಿ ಅನುಷ್ಠಾನ
June 12, 2019ಸ್ವಚ್ಛಮೇವ ಜಯತೆ, ಜಲಾಮೃತ ಯೋಜನೆಗಳಿಗೆ ಜಿಪಂ ಅಧ್ಯಕ್ಷೆ, ಡಿಸಿ, ಸಿಇಓರಿಂದ ಕೃಷಿ ಮಹಾವಿದ್ಯಾಲಯದಲ್ಲಿ ಚಾಲನೆ ಹಾಸನ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ `ಸ್ವಚ್ಛ ಮೇವ ಜಯತೆ’ ಮತ್ತು `ಜಲಾಮೃತ’ ಅನು ಷ್ಠಾನಕ್ಕೆ ತಾಲೂಕಿನ ಶಾಂತಿ ಗ್ರಾಮ ಬಳಿಯ ಮಡೆನೂರಿನ ಕೃಷಿ ಮಹಾ ವಿದ್ಯಾಲಯ ದಲ್ಲಿ ಮಂಗಳವಾರ ಚಾಲನೆ ದೊರೆಯಿತು. ಕೃಷಿ ಮಹಾವಿದ್ಯಾಲಯದ ಸಂಶೋ ಧನಾ ಕೇಂದ್ರದ ಆವರಣದಲ್ಲಿ ಮಂಗಳ ವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ಜಿಲ್ಲಾಧಿ ಕಾರಿ ಅಕ್ರಂ…
ಗಿರೀಶ್ ಕಾರ್ನಾಡ್ ಇನ್ನಿಲ್ಲ
June 11, 2019ಬೆಂಗಳೂರು: ಖ್ಯಾತ ಸಾಹಿತಿ, ರಂಗಭೂಮಿ, ಸಿನಿಮಾ ನಟರೂ ಆಗಿದ್ದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ (81) ಸೋಮವಾರ ಬೆಳಿಗ್ಗೆ ಅಸುನೀಗಿದ್ದಾರೆ. ಎಲ್ಲಾ ಸೀಮೆಗಳನ್ನು ಮೀರಿದ್ದ ಮಹಾನ್ ಪ್ರತಿಭೆ ಗಿರೀಶ್ ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ ಹೆಸರಾಗಿದ್ದವರು. ಗಿರೀಶ್ ಕಾರ್ನಾಡರ ನಿಧನದ ಹಿನ್ನೆಲೆ ಯಲ್ಲಿ ಇಂದು ರಾಜ್ಯ ಸರ್ಕಾರ ರಜೆ ಘೋಷಿಸ ಲಾಗಿತ್ತು. ಮೂರು ದಿನ ಸರ್ಕಾರಿ ಶೋಕಾ ಚರಣೆ ಘೋಷಿಸಿದೆ. ಕಾರ್ನಾಡರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು…
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಯುವರಾಜ್ಸಿಂಗ್ ವಿದಾಯ
June 11, 2019ಮುಂಬೈ: ಭಾರತೀಯ ಕ್ರಿಕೆಟ್ನ `ಸಿಕ್ಸರ್ ಕಿಂಗ್’ ಎಂದೇ ಹೆಸರಾಗಿದ್ದ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸೋಮವಾರ ವಿದಾಯ ಹೇಳಿದ್ದಾರೆ. ಭಾರತ ತಂಡದಲ್ಲಿ ಖಾಯಂ ಸದಸ್ಯ ನಾಗಿ, ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದ 37 ವರ್ಷದ ಎಡಗೈ ಆಟಗಾರ ಯುವರಾಜ್ ಸಿಂಗ್ಗೆ ಯುವಿಯೇ ಸಾಟಿ. 2000ರಲ್ಲಿ ಕೀನ್ಯಾ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಸುಮಾರು 19 ವರ್ಷಗಳಲ್ಲಿ (2000-2019) ದೇಶ-ವಿದೇಶಗಳಲ್ಲಿ ಭಾರತ ತಂಡವನ್ನು…










