ತಾಯಿ, ಮಕ್ಕಳು ನಾಪತ್ತೆ
ಮೈಸೂರು

ತಾಯಿ, ಮಕ್ಕಳು ನಾಪತ್ತೆ

June 12, 2019

ಮೈಸೂರು: ನಂಜನಗೂಡಿಗೆ ಹೋಗುವುದಾಗಿ ಹೇಳಿ ಹೋದ ತಾಯಿ ಮಕ್ಕಳಿಬ್ಬರು ನಾಪತ್ತೆ ಯಾಗಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖ ಲಾಗಿದೆ. ನಂಜನಗೂಡಿನ ತೋಪಿನ ಬೀದಿ ನಿವಾಸಿ ಗಳಾದ ಜ್ಯೋತಿ(31), ಶಶಾಂಕ್(9), ಕಿರ್ತನಾ(6) ನಾಪತ್ತೆಯಾದವರು. ಜ್ಯೋತಿಯವರು ನಂಜನಗೂಡಿನ ಮಹದೇವಸ್ವಾಮಿ ಎಂಬುವವರೊಂದಿಗೆ ವಿವಾಹವಾಗಿದ್ದು, ಇವರಿಗೆ ಶಶಾಂಕ್ ಮತ್ತು ಕೀರ್ತನಾ ಎಂಬ ಮಕ್ಕಳಿದ್ದರು. ಇಬ್ಬರೂ ಮೈಸೂರು ಕುವೆಂಪುನಗರದಲ್ಲಿನ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಜ್ಯೋತಿ ಕಾನ್ವೆಂಟ್‍ನಲ್ಲಿ ಓದುತ್ತಿದ್ದರು. ಆದರೆ, ಜೂ.8 ರಂದು ಜ್ಯೋತಿ ಮಕ್ಕಳಿಬ್ಬರನ್ನು ಕರೆದುಕೊಂಡು ನಂಜನಗೂಡಿನಲ್ಲಿಯೇ ಶಾಲೆಗೆ ಸೇರಿಸುವು ದಾಗಿ ಹೇಳಿ ಹೋಗಿದ್ದು, ಅಲ್ಲಿಗೂ ಹೋಗದೆ ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ. ಈ ಸಂಬಂಧ ಪರಿಚಯಸ್ಥರನ್ನು ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ಜ್ಯೋತಿ ತಾಯಿ ಜಯಮ್ಮ ಕುವೆಂಪು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ಸಂ.0821-2418324/9480802247 ಸಂಪರ್ಕಿಸುವಂತೆ ಕೋರಲಾಗಿದೆ.

Translate »