ಮೈಸೂರು: ಮೈಸೂರು ಮಹಾನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಎರಡು ಅಧ್ಯಕ್ಷ ಸ್ಥಾನಗಳನ್ನು ಪಡೆದುಕೊಂಡಿವೆ. ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಗೆ ನಿರ್ಮಲಾ ಹರೀಶ್, ಸಾಮಾಜಿಕ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಜೆ.ಗೋಪಿ, ಪÀಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿಗೆ ಸಯ್ಯದ್ ಹಜರತ್ ಉಲ್ಲಾ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಪಲ್ಲವಿ ಬೇಗಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ…
ಫೆ. 9ರಂದು ಪಾಲಿಕೆ 18ನೇ ವಾರ್ಡಿನ ಉಪ ಚುನಾವಣೆ
January 26, 2020ಜ.28 ನಾಮಪತ್ರ ಸಲ್ಲಿಕೆಗೆ ಕಡೇ ದಿನ, ಬಿಜೆಪಿ, ಕಾಂಗ್ರೆಸ್ನಲ್ಲಿ ತಲಾ ಮೂವರು ಆಕಾಂಕ್ಷಿಗಳು ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಜೆಡಿಎಸ್ನ ರಾಜು ಮತ್ತೆ ಸ್ಪರ್ಧೆಗೆ ಚಿಂತನೆ ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್ ಸದಸ್ಯ ಸ್ಥಾನಕ್ಕೆ ಫೆಬ್ರವರಿ 9ರಂದು ಉಪ ಚುನಾವಣೆ ನಡೆಯಲಿದೆ. ಮೈಸೂರಿನ ಆಕಾಶವಾಣಿ ಸರ್ಕಲ್ನಲ್ಲಿರುವ ಪಾಲಿಕೆ ವಲಯ ಕಚೇರಿ-4ರಲ್ಲಿ ಚುನಾವಣಾಧಿಕಾರಿ ಕಚೇರಿ ಯಲ್ಲಿ ಜನವರಿ 1ರಿಂದ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ನಾಲ್ವರು ಮಾತ್ರ ನಾಮ ಪತ್ರಗಳ ಅರ್ಜಿ ನಮೂನೆಗಳನ್ನು ಪಡೆದುಕೊಂಡು ಹೋಗಿದ್ದಾರಾದರೂ ಇಂದು…
ತ್ಯಾಜ್ಯ ವಿಲೇವಾರಿ ಸಂಬಂಧ ನಾಗ್ಪುರದಲ್ಲಿ ಮೈಸೂರು ಪಾಲಿಕೆ ತಂಡ ಅಧ್ಯಯನ
December 31, 2019ಮೈಸೂರು,ಡಿ.30(ಎಂಕೆ)-ಸ್ವಚ್ಛ ಸರ್ವೇಕ್ಷಣಾ ಅಂಗವಾಗಿ ಜಿಲ್ಲಾಧಿಕಾರಿ ಗಳ ನೇತೃತ್ವದಲ್ಲಿ ನಾಗ್ಪುರಕ್ಕೆ ತೆರಳಿರುವ ಮೈಸೂರು ಮಹಾನಗರಪಾಲಿಕೆ ತಂಡ, ಅಲ್ಲಿ ಅತ್ಯಾಧುನಿಕ ರೀತಿ ಕಸ ವಿಲೇ ವಾರಿಯ ಕುರಿತು ಅಧ್ಯಯನ ನಡೆಸಿದೆ. ಸೋಮವಾರ ಜಿಲ್ಲಾಧಿಕಾರಿಗಳ ನೇತೃತ್ವ ದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಷಫಿ ಅಹಮದ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಆರೋಗ್ಯಾಧಿಕಾರಿ ನಾಗರಾಜು, ಪಾಲಿಕೆ ಆರೋಗ್ಯಾಧಿಕಾರಿ ಎಂ.ಎಸ್.ಜಯಂತ್ ಹಾಗೂ ಹಣಕಾಸು ಸಮಿತಿ ಅಧ್ಯಕ್ಷೆ ಶೋಭ ಒಳಗೊಂಡ ತಂಡ ನಾಗ್ಪುರಕ್ಕೆ ತೆರಳಿದೆ. ನಾಗ್ಪುರದ ಪಾಲಿಕೆ ಕಚೇರಿ, ವಿಲೇ ವಾರಿ…
ನಾಳೆ ಪಾಲಿಕೆ ಭ್ರಷ್ಟಾಚಾರ ವಿರುದ್ಧ ದಾಖಲೆ ಬಿಡುಗಡೆ ಮಾಡಿ ಪ್ರತಿಭಟನೆ
November 18, 2019ಮೈಸೂರು: ಮೈಸೂರು ನಗರಪಾಲಿಕೆಯಲ್ಲಿ ತೀವ್ರ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದನ್ನು ವಿರೋಧಿಸಿ ನ.19ರಂದು ನಗರಪಾಲಿಕೆಯ ರೆವಿನ್ಯೂ ಕಚೇರಿ ಎದುರು ದಾಖಲಾತಿ ಬಿಡುಗಡೆ ಮಾಡುವ ಮೂಲಕ ಪ್ರತಿಭಟನೆ ನಡೆಸ ಲಾಗುವುದು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ತೀವ್ರ ಭ್ರಷ್ಟಾಚಾರ ನಡೆಯತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕುವಂತಾಗಿದೆ ಎಂದು ದೂರಿದರು. ಇದೇ ವೇಳೆ ಮಾತನಾಡಿದ ಮತ್ತೊಬ್ಬ ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆಯ ಎಲ್ಲಾ ವಿಭಾಗದಲ್ಲೂ ಅಧಿಕಾರಿಗಳೇ ದರ್ಬಾರ್…
ಮೈಸೂರು ನಗರಪಾಲಿಕೆ ಇಂಜಿನಿಯರ್ಗಳಾದ ಸುನಿಲ್ ಬಾಬು, ಮೋಹನಕುಮಾರಿ ಅಮಾನತು
June 5, 2019– ಎಸ್.ಟಿ. ರವಿಕುಮಾರ್ ಮೈಸೂರು: ಮೈಸೂರಿನ ಪ್ರತಿ ಷ್ಠಿತ ಮಹಾತ್ಮ ಗಾಂಧಿ ರಸ್ತೆ ಕಾಮಗಾರಿ ಯಲ್ಲಿ ನಕಲಿ ಬಿಲ್ ತಯಾರಿಸಿ 1.40 ಕೋಟಿ ರೂ. ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಅಸಿಸ್ಟೆಂಟ್ ಎಗ್ಸಿ ಕ್ಯುಟಿವ್ ಇಂಜಿನಿಯರ್ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಎಂ.ವಿ. ಮೋಹನ ಕುಮಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ(ಮಹಾನಗರ ಪಾಲಿಕೆ-2) ನಾಗರಾಜ ಅವರು ಜೂನ್ 1 ರಂದು ಆದೇಶ (ಸಂಖ್ಯೆ : ನಇ 62…
ಮುರಿದು ಬಿದ್ದ ಮರ, ರೆಂಬೆ-ಕೊಂಬೆಗಳ ತೆರವು
May 25, 2019ಮೈಸೂರು: ಗುರುವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಬಿರುಮಳೆಗೆ ನಗರದಲ್ಲಿ ವ್ಯಾಪಕವಾಗಿ ಧರೆಗುರುಳಿದ ಮರ, ರೆಂಬೆ -ಕೊಂಬೆಗಳನ್ನು ನಗರಪಾಲಿಕೆಯ ತೋಟ ಗಾರಿಕಾ ವಿಭಾಗದ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ತೆರವು ಕಾರ್ಯ ಆರಂಭಿಸಿದರು. ಆದರೆ ಇನ್ನು ಹಲವು ಕಡೆ ಮರದ ರೆಂಬೆ ಗಳ ತುಂಡರಿಸಿ ಗುಡ್ಡೆ ಹಾಕಲಾಗಿದ್ದು, ಅದನ್ನು ಯಾವಾಗ ಸಾಗಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಆಲಿಕಲ್ಲು ಸಹಿತ ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ಮೈಸೂರಿನ ಹಲವು ಕಡೆಗಳಲ್ಲಿ ದೊಡ್ಡ ಮರಗಳು, ಅಲ್ಲದೆ ವಿವಿಧ ರಸ್ತೆ, ವೃತ್ತಗಳಲ್ಲಿ…
ಒಣರೆಂಬೆ ತೆರವುಗೊಳಿಸದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ…!
May 25, 2019ಮೈಸೂರು: ಗಾಳಿ-ಮಳೆ ವೇಳೆ ಮರಗಳ ಒಣ ಕೊಂಬೆಗಳು ಧರೆಗುರುಳುವುದು ಸಾಮಾನ್ಯ. ಹಾಗೆಂದು ತಿಳಿದೂ ತಿಳಿದೂ ಎಚ್ಚರ ವಹಿಸದಿದ್ದರೆ, ಅನಾಹುತಕ್ಕೆ ಎಡೆ ಮಾಡಿದಂತೆಯೇ ಸರಿ. ಮಳೆ-ಗಾಳಿ ವೇಳೆ ಮರಗಳ ಒಣ ಕೊಂಬೆಗಳು ಬೀಳುವುದಿರಲಿ, ಬುಡ ಭದ್ರ ಇಲ್ಲವಾದರೆ ಮರಗಳೇ ನೆಲಕ್ಕುರುಳುತ್ತವೆ. ಮೈಸೂರಿನ ವಾಲ್ಮೀಕಿ ರಸ್ತೆಯ ಉದ್ದಕ್ಕೂ ಸೊಂಪಾಗಿ ಮರಗಳು ಬೆಳೆದು ನಿಂತಿವೆ. ಆ ಮೂಲಕ ಪ್ರಾಕೃತಿಕ ಸೌಂದರ್ಯ ಈ ರಸ್ತೆಗೆ ಒಲಿದು ಬಂದಿದೆ. ಉರಿಯುವ ಬಿಸಿಲಿನಲ್ಲೂ ಈ ರಸ್ತೆಯಲ್ಲಿ ತಂಪಾದ ವಾತಾವರಣ ಇರುತ್ತದೆ. ಹೌದು, ಇದು ನಿಜಕ್ಕೂ ಖುಷಿಯಾಗುವ…
ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ
May 18, 2019ಮೈಸೂರು: ಮೈಸೂರು ನಗರ ಹಾಗೂ ಹೊರ ವಲಯಗಳಲ್ಲಿ ಮಳೆ ನೀರು ಕೊಯ್ಲು ಅಳ ವಡಿಸಿಕೊಳ್ಳದೇ 50*80 ಹಾಗೂ ಅದಕ್ಕೂ ಮೇಲ್ಪಟ್ಟ ಅಳತೆಯಲ್ಲಿ ನಿರ್ಮಿ ಸಿರುವ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ ವಿಧಿಸಲು ಮೈಸೂರು ಮಹಾನಗರಪಾಲಿಕೆ ಆಯುಕ್ತ ರಾದ ಶಿಲ್ಪಾನಾಗ್ ಆದೇಶಿಸಿದ್ದಾರೆ. ಈ ಅಳತೆಯ ಅಪಾರ್ಟ್ಮೆಂಟ್ಗಳು, ವಾಣಿಜ್ಯ ಕಟ್ಟಡಗಳು, ಹೋಟೆಲ್ಗಳು, ಸರ್ಕಾರಿ ಕಚೇರಿಗಳು, ನಗರಪಾಲಿಕೆ ಉದ್ಯಾ ನವನಗಳು ಹಾಗೂ ಮನೆಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದೇ ಇರುವ ಕಟ್ಟಡಗಳಿಗೆ ಈ ತಿಂಗಳಿನಿಂದ 5 ತಿಂಗಳ…
ಪ್ರಾಣಿ ತ್ಯಾಜ್ಯದಿಂದ ಮೀನಿನ ಆಹಾರ, ಬಯೋಗ್ಯಾಸ್, ಕಾಂಪೋಸ್ಟ್ ತಯಾರಿಕೆ
May 9, 2019ಮೈಸೂರು: ಕಸದಿಂದ ಕಾಸು ಮಾಡುವ ಮಹತ್ವದ ಯೋಜನೆಗೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಮೈಸೂರು ನಗರದ ಮಾಂಸ, ಕೋಳಿ ಹಾಗೂ ಮೀನಿನ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯ ಬಳಸಿ ಬಯೋಗ್ಯಾಸ್, ಕಾಂಪೋಸ್ಟ್ ಹಾಗೂ ಅಕ್ವಾಫೀಡ್ (ಮೀನಿನ ಆಹಾರ) ತಯಾರಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿ ಸಲು ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಮೈಸೂರು ನಗರದಲ್ಲಿರುವ ಸಾವಿರಾರು ಮಾಂಸ, ಕೋಳಿ ಹಾಗೂ ಮೀನು ಮಾರಾಟ ಮಳಿಗೆಗಳಿಂದ ಪ್ರತೀ ದಿನ ಸುಮಾರು 10 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು…
ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಮೈಸೂರು ಪಾಲಿಕೆ ಹೊಸ ಉಪಾಯ `ಗ್ರೀನ್ ವೆಡ್ಡಿಂಗ್’
March 8, 2019ಮೈಸೂರು: ಮೈಸೂರು ನಗರಪಾಲಿಕೆ ವತಿಯಿಂದ `ಗ್ರೀನ್ ವೆಡ್ಡಿಂಗ್’ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದರು. ನಗರಪಾಲಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದರೂ ಮದುವೆ, ಅಪಾರ್ಟ್ ಮೆಂಟ್ ಮತ್ತಿತರ ಕಾಂಪ್ಲೆಕ್ಸ್ಗಳಲ್ಲಿ ಹೆಚ್ಚಾಗಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಾಗಾಗಿ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿ `ಗ್ರೀನ್ ವೆಡ್ಡಿಂಗ್’ಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಗ್ರೀನ್ ವೆಡ್ಡಿಂಗ್ ಆದವರಿಗೆ ಪ್ರಮಾಣ ಪತ್ರ ನೀಡಿ ಪ್ರಶಂಸಿಸ ಲಾಗುವುದು ಎಂದು…