ಮಾಜಿ ಮೇಯರ್ ಸಂದೇಶ್ಸ್ವಾಮಿ ಆರೋಪ ಅರ್ಹರಿಗೆ ಅನ್ಯಾಯವಾಗಲಿರುವ ಮೀಸಲಾತಿ ಸಂಸದ, ಶಾಸಕರ ಮೂಲಕ ಸರ್ಕಾರದ ಗಮನ ಸೆಳೆಯಲೆತ್ನ ಮೈಸೂರು: ಮೈಸೂರು ಮಹಾನಗರಪಾಲಿಕೆ ಪುನರ್ರಚಿತ ವಾರ್ಡ್ ಹಾಗೂ ಮೀಸಲಾತಿಯ ಬಗ್ಗೆ ಮೈಸೂರಿನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಾಜಿ ಮೇಯರ್ ಹಾಗೂ ನಗರಪಾಲಿಕೆ ಸದಸ್ಯ ಸಂದೇಶ್ ಸ್ವಾಮಿ ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ವಾರ್ಡ್ವಾರು ಮೀಸಲಾತಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಮೈಸೂರು ನಗರದ ವಾರ್ಡ್ವಾರು ಮೀಸಲಾತಿಯಲ್ಲಿ ಸಾಕಷ್ಟು ನ್ಯೂನತೆ ಇದೆ. ರಿಂಗ್ ರಸ್ತೆಯ ಒಳಗಿರುವ ಮುಡಾದಿಂದ ಪಾಲಿಕೆಗೆ ಹಸ್ತಾಂತರವಾಗಿರುವ ಹೊಸ…
ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿ ವರ್ಗ
June 18, 2018ಮೈಸೂರು: ಮೈಸೂರಿನ ರಿಂಗ್ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯದ ರಾಶಿ ಹೆಚ್ಚುತ್ತಿದ್ದರೂ ನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ನಗರದ ಪ್ರಮುಖ ರಸ್ತೆಗಳೂ ಇದಕ್ಕೆ ಗುರಿಯಾಗುತ್ತಿವೆ. ಕೆಆರ್ಎಸ್ ರಸ್ತೆಯಲ್ಲಿ ಇಎಸ್ಐ ಆಸ್ಪತ್ರೆ ಹಾಗೂ ಶಿವಮ್ಮ ಮಹದೇವಪ್ಪ ಕಲ್ಯಾಣ ಮಂಟಪದ ನಡುವೆ ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗಿದೆ. ಈ ರಸ್ತೆಯಲ್ಲಿ ಸದಾ ವಾಹನ ಸಂಚಾರವಿರುವ ಕಾರಣ ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಕಟ್ಟಡ ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಸುರಿದು ಹೋಗಿದ್ದಾರೆ. ಕೆಆರ್ಎಸ್ನಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ವಚ್ಛ ನಗರದ…
3ಕ್ಕಿಂತ ಹೆಚ್ಚು ನಾಯಿ ಸಾಕಬಾರದೇಕೆ?
June 16, 2018ಮೈಸೂರು: ನಾವು ಪ್ರಾಣಿಪ್ರಿಯರು. ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಬಾರದೆಂದರೆ ಹೇಗೆ? ಎಂದು ಎನ್ಜಿಓ ಪ್ರಮುಖರು ಇಂದಿಲ್ಲಿ ಮೈಸೂರು ಮಹಾನಗರ ಪಾಲಿಕೆ ಪಶು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಮನೆಗಳಲ್ಲಿ ನಾಯಿಗಳನ್ನು ಸಾಕಲು ಪಾಲಿಕೆಯಿಂದ ಪೂರ್ವಾನುಮತಿ ಪಡೆಯ ಬೇಕೆಂಬ ನಿಯಮ ಜಾರಿಗೆ ತರಲು ಮುಂದಾ ಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಬೋಗಾದಿ ಬಳಿ ಇರುವ ಪೀಪಲ್ ಫಾರ್ ಅನಿಮಲ್ (ಪಿಎಫ್ಎ) ಸಂಸ್ಥೆ ಆವರಣದಲ್ಲಿ ಏರ್ಪ ಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರಾಣಿಪ್ರಿಯ ಸರ್ಕಾರೇತರ ಸಂಘ-ಸಂಸ್ಥೆ ಪ್ರಮುಖರು ಪಾಲ್ಗೊಂಡು ನಾಯಿ ಗಳ ಸಾಗಾಣಿಕೆಗೆ ನಿಯಂತ್ರಣ ಹೇರು…
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ ಪಟ್ಟಿ
June 13, 2018ಮೈಸೂರು: ಮೈಸೂರು ನಗರ ಪಾಲಿಕೆಯ ವಾರ್ಡ್ಗಳ ಮೀಸಲಾತಿ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆದರ ವಿವರ ಕೆಳಕಂಡಂತ್ತಿದೆ. 1ನೇ ವಾರ್ಡ್- ಸಾಮಾನ್ಯ, 2ನೇ ವಾರ್ಡ್- ಹಿಂದುಳಿದ ವರ್ಗ ಎ, 3ನೇ ವಾರ್ಡ್- ಸಾಮಾನ್ಯ, 4ನೇ ವಾರ್ಡ್- ಸಾಮಾನ್ಯ, 5ನೇ ವಾರ್ಡ್- ಸಾಮಾನ್ಯ ಮಹಿಳೆ, 6ನೇ ವಾರ್ಡ್-ಸಾಮಾನ್ಯ, 7ನೇ ವಾರ್ಡ್- ಸಾಮಾನ್ಯ ಮಹಿಳೆ, 8ನೇ ವಾರ್ಡ್-ಸಾಮಾನ್ಯ, 9ನೇ ವಾರ್ಡ್- ಹಿಂದುಳಿದ ವರ್ಗ ಎ ಮಹಿಳೆ, 10ನೇ ವಾರ್ಡ್- ಹಿಂದುಳಿದ ವರ್ಗ ಎ, 11ನೇ ವಾರ್ಡ್- ಹಿಂದುಳಿದ ವರ್ಗ ಎ…
ಮೈಸೂರು ಮಹಾನಗರ ಪಾಲಿಕೆ ವಾರ್ಡ್ವಾರು ಮತದಾರರ ಪರಿಷ್ಕೃತ ಪಟ್ಟಿ ಸಿದ್ಧ
June 12, 2018ಮೈಸೂರು: ರಾಜ್ಯಾದ್ಯಂತ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮುಗಿದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿರುವ ಬೆನ್ನಲ್ಲೇ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಸೆಪ್ಟೆಂ ಬರ್ ಮಾಹೆಯಲ್ಲಿ ನಡೆಯಬೇಕಿರುವ ಚುನಾ ವಣೆಗೆ ಮೈಸೂರು ಮಹಾನಗರ ಪಾಲಿಕೆಯು ಸಿದ್ಧತೆ ಮಾಡುತ್ತಿದ್ದು, ಈಗಾಗಲೇ ಮೈಸೂರಿ ನಲ್ಲಿರುವ 65 ವಾರ್ಡ್ಗಳನ್ನು ಪುನರ್ ವಿಂಗ ಡಣೆ ಮಾಡಲಾಗಿದೆ. ಆ ಬಗ್ಗೆ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನೂ ಪ್ರಕಟಿಸಲಾಗಿದೆ. ಮೈಸೂರು ಮಹಾ ನಗರಪಾಲಿಕೆ ಸೇರಿದಂತೆ ರಾಜ್ಯದ 116 ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸೆಪ್ಟೆಂಬರ್…
ಮೈಸೂರು ಗ್ರಾಹಕರ ಪರಿಷತ್ನಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ: ಮೈಸೂರಿನ ಬಹುತೇಕರು ನೀಲನಕ್ಷೆಯಂತೆ ಕಟ್ಟಡ ನಿರ್ಮಿಸುತ್ತಿಲ್ಲ
June 11, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ನಿವಾಸಿಗಳು ನೀಲನಕ್ಷೆ ಪ್ರಕಾರ ಕಟ್ಟಡ ನಿರ್ಮಾಣ ಮಾಡಿಲ್ಲ. ಇದರಿಂ ದಾಗಿ `ಸಿಆರ್’ ಪಡೆಯಲು ಸಾಕಷ್ಟು ಗೊಂದಲಕ್ಕಿಡಾಗುತ್ತಿ ದ್ದಾರೆ ಎಂದು ವಲಯ ಕಚೇರಿ-2ರ ಆರ್ಓ ಅರಸು ಕುಮಾರಿ ಹಾಗೂ ವಲಯ ಕಛೇರಿ-4ರ ಎಆರ್ಓ ಪ್ರಸಾದ್ ಮೈಗ್ರಾಪ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಗರ ಪಾಲಿಕೆಯ ಪ್ರಾಪರ್ಟಿ ಬೈಲಾ ಪ್ರಕಾರ ಬಹುತೇಕರು ಕಟ್ಟಡಗಳನ್ನು ನಿರ್ಮಾಣ ಮಾಡುವುದಿಲ್ಲ….
ನಾಯಿ ಸಾಕಲು ಪರವಾನಗಿ ಅವಶ್ಯ
June 8, 2018ಮೈಸೂರು: ಬೆಂಗಳೂರು ಬೃಹತ್ ನಗರ ಪಾಲಿಕೆ ಮಾದರಿಯಲ್ಲಿ ನಾಯಿ ಸಾಕಲು ಪರವಾನಗಿ ಪಡೆಯುವ ನಿಯಮಾವಳಿ ರೂಪಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.ನಾಯಿ ಸಾಕಲು ಅನುಮತಿ ಪಡೆಯಬೇಕೆಂಬ ಕಾನೂನನ್ನು ರಾಜ್ಯ ಸರ್ಕಾರ ಜೂನ್ 4ರಂದು ರೂಪಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು, ಅದರಲ್ಲಿ ಒಂದು ಅಪಾರ್ಟ್ಮೆಂಟ್ಗೆ ಒಂದು ನಾಯಿ ಸಾಕಲು ಮಾತ್ರ ಅವಕಾಶವಿರುವ ನಿಯಮವೂ ಸೇರಿದೆ. ಸರ್ಕಾರದ ಈ ನಿಯಮದ ಪ್ರಸ್ತಾವನೆಯನ್ನು ಕೌನ್ಸಿಲ್ ಮುಂದಿಟ್ಟು ಅನುಮೋದನೆ ಪಡೆದುಕೊಂಡ ನಂತರ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ. ಅದೇ ನಿಯಮವನ್ನು…
ಕಟ್ಟಡ ಮಾಲೀಕರೇ ಎಚ್ಚರ: ಮೈಸೂರಲ್ಲಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ
June 5, 2018ಮೈಸೂರು: ಮಾಲೀಕರೇ ಎಚ್ಚರ! ನಕ್ಷೆ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ಮೈಸೂರು ಮಹಾನಗರ ಪಾಲಿಕೆಯು ದುಪ್ಪಟ್ಟು ದಂಡ ವಿಧಿಸುತ್ತದೆ. ಸ್ಥಳೀಯ ಸಂಸ್ಥೆಯಿಂದ ಅನುಮೋದಿಸಿದ ನಕ್ಷೆಗೂ ನೀವು ಕಟ್ಟಿದ ಮನೆ ಅಥವಾ ವಾಣ ಜ್ಯ ಕಟ್ಟಡದ ವಿಸ್ತೀರ್ಣಕ್ಕೂ ವ್ಯತ್ಯಾಸ ಕಂಡು ಬಂದಲ್ಲಿ ಆಸ್ತಿ ತೆರಿಗೆ ಜೊತೆಗೆ ಎರಡು ಪಟ್ಟು ದಂಡ ತೆರಬೇಕಾಗುತ್ತದೆ. ಕಟ್ಟಡದ ವಿಸ್ತೀರ್ಣ ಅಳತೆ ಮಾಡಿ ನಿಯಮ ಹಾಗೂ ನಕ್ಷೆ ಉಲ್ಲಂಘಿಸಿರುವ ಆಸ್ತಿಗಳ ಸರ್ವೆ ಕಾರ್ಯಕ್ಕೆ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ ವಲಯಾಧಿಕಾರಿಗಳು ಚಾಲನೆ ನೀಡಿದ್ದಾರೆ. ಈ…
ಸ್ವಚ್ಛ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಸ್ಥಾಪನೆಗೆ ಕ್ರಮ
June 4, 2018ಕಳೆದ ವರ್ಷ 15 ಇ-ಶೌಚಾಲಯ ನಿರ್ಮಿಸಲಾಗಿತ್ತು ಬಯಲು ಶೌಚಮುಕ್ತಕ್ಕೆ ಕ್ರಮ ಬಹು ಬೇಡಿಕೆಯ ಸ್ಥಳಗಳಲ್ಲಿ ಜೋಡಣೆ – ಎಂ.ಟಿ.ಯೋಗೇಶ್ ಕುಮಾರ್ ಮೈಸೂರು: ಮೂರನೇ ಬಾರಿಯೂ ಸ್ವಚ್ಛನಗರಿಯ ಬಿರುದು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಅಳವಡಿಸುವುದಕ್ಕೆ ನಗರ ಪಾಲಿಕೆ ಉದ್ದೇಶಿಸಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಸ್ವಚ್ಛ ಸರ್ವೇಕ್ಷಣೆಯ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಪಟ್ಟ ದೊರಕಿಸುವುದಕ್ಕಾಗಿ ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯ ನಿಯಮಕ್ಕನುಸಾರವಾಗಿ ಮೈಸೂರಿನ ವಿವಿಧೆಡೆ 15 ಇ-ಟಾಯ್ಲೆಟ್ ನಿರ್ಮಿಸಲಾಗಿತ್ತು. ಕಳೆದು…
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಾಲಿಕೆಯಿಂದ ಕಾಟಾಚಾರಕ್ಕೆ ಸ್ವಚ್ಛತಾ ಕಾರ್ಯಕ್ರಮ
June 2, 2018ಸ್ವಚ್ಛತಾ ರಾಯಭಾರಿ ರಾಜಮಾತೆ ಪ್ರಮೋದಾದೇವಿ ಒಡೆಯರ್ಗೆ ಪಾಲಿಕೆ ಅಗೌರವ ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಮೂಡಿಸಲು ಮೈಸೂರು ನಗರಪಾಲಿಕೆ ಮೈಸೂರಿನ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮ ಬರೀ ಕಾಟಾಚಾರಕ್ಕೆ ಎಂಬಂತೆ ನಡೆಯಿತು. ಸ್ವಚ್ಛತಾ ರಾಯಭಾರಿಯಾಗಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಪ್ರಕಟಣೆ ನೀಡಿದ್ದರು. ಆದರೆ ನಿಜಸ್ಥಿತಿ ಎಂದರೆ ಪಾಲಿಕೆ ಅಧಿಕಾರಿಗಳು…