ಮೈಸೂರು: ಕೆಆರ್ಎಸ್ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ವಾಲ್ವ್ ತುಂಡರಿಸಿ ಅಪಾರ ಪ್ರಮಾಣದ ನೀರು ಪೋಲಾಗಲು ಕಾರಣರಾದ ಖಾಸಗಿ ಕಂಪನಿಗೆ 1.5 ಲಕ್ಷ ರೂ. ದಂಡ ಪಾವತಿಸುವಂತೆ ನಗರಪಾಲಿಕೆಯ ವಾಣಿ ವಿಲಾಸ ವಾಟರ್ ವಕ್ರ್ಸ್ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಪೈಪ್ ರಿಪೇರಿ ಖರ್ಚು, ಪೋಲಾಗಿರುವ ನೀರಿನ ದರ, ಸಾರ್ವಜನಿಕರಿಗೆ ಆದ ತೊಂದರೆ ಹೀಗೆ ಮೂರು ವರ್ಗ ಮಾಡಿ ಒಟ್ಟು 1,50,000 ರೂ. ದಂಡ ಪಾವತಿಸುವಂತೆ ಘಟನೆಗೆ ಕಾರಣವಾದ ಖಾಸಗಿ ಕಂಪನಿ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ದಂಡ…
ಮೈಸೂರು ತಾಪಂ ಇಓ ಛೇಂಬರ್ನಲ್ಲೇ ಜೆಡಿಎಸ್ ಸದಸ್ಯನ ಮೇಲೆ ಬಿಜೆಪಿ ಸದಸ್ಯನಿಂದ ಹಲ್ಲೆ
December 22, 2018ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಯ ಛೇಂಬರ್ನಲ್ಲೇ ಮೈಸೂರು ತಾಪಂ ಜೆಡಿಎಸ್ ಸದಸ್ಯನ ಮೇಲೆ ಬಿಜೆಪಿ ಸದಸ್ಯ ಹೆಲ್ಮೆಟ್ ಹಾಗೂ ಕುರ್ಚಿಯಿಂದ ತೀವ್ರ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ತಾಪಂನ ಶ್ರೀರಾಂಪುರ ಕ್ಷೇತ್ರದ ಜೆಡಿಎಸ್ ಸದಸ್ಯ ಹನುಮಂತು ಹಲ್ಲೆಗೊಳ ಗಾದವರಾಗಿದ್ದು, ಇವರ ಮೇಲೆ ವಾಜ ಮಂಗಲ ಕ್ಷೇತ್ರದ ಬಿಜೆಪಿ ಸದಸ್ಯ ಮಂಜು ನಾಥ್ ಹಲ್ಲೆ ನಡೆಸಿದ್ದು, ಈ ಸಂಬಂಧ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಲಿಂಗ ರಾಜು ನಜರ್ಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ…
ಇಂದು ‘ಕೌಟಿಲ್ಯ ಸಡಗರ’, ‘ಅಜ್ಜನೊಂದಿಗೆ ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮ
December 22, 2018ಮೈಸೂರು: ಮೈಸೂರಿನ ಕೌಟಿಲ್ಯ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಡಿ.22ರಂದು ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ವಾರ್ಷಿಕೋತ್ಸವದ ಅಂಗವಾಗಿ ಅಂದು ಮಧ್ಯಾಹ್ನ 3 ಗಂಟೆಗೆ ‘ಅಜ್ಜನೊಂದಿಗೆ ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹಿರಿಯರ ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿ ಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಐಜಿಪಿ ವಿಪುಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೈಸೂರು ಗ್ರಾಹಕರ ಪರಿಷತ್ತಿನ ಅಧ್ಯಕ್ಷ ಭಾಮಿ ವಿ.ಶೆಣೈ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕೌಟಿಲ್ಯ…
ಸುಳವಾಡಿ ಪ್ರಸಾದ ದುರಂತ ಮೈಸೂರಿನ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸಿಸಿ ಕ್ಯಾಮರಾ
December 22, 2018ಮೈಸೂರು: ಸುಳವಾಡಿಯ ಕಿಚ್ಗುತ್ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಪ್ರಾಶನ ಮಾಡಿ 16 ಮಂದಿ ಸಾವಿ ಗೀಡಾದ ಪ್ರಕರಣದಿಂದ ಎಚ್ಚೆತ್ತ ಮೈಸೂರಿನ ದೇವ ರಾಜ ಮೊಹಲ್ಲಾದಲ್ಲಿರುವ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಗುರುವಾರ ಸಿಸಿ ಕ್ಯಾಮರಾಗಳನ್ನು ಅಳವಡಿಸ ಲಾಯಿತು. ಹನುಮ ಜಯಂತಿ ಅಂಗವಾಗಿ ಇಂದು ಅನ್ನದಾನ ಏರ್ಪಡಿಸಿದ್ದ ರಿಂದ ಮಠದ ಆಡಳಿತ ಮಂಡಳಿಯು ಗುರುವಾರವೇ ಪ್ರಸಾದ ತಯಾರಿಸುವ ಅಡುಗೆ ಕೋಣೆಗೆ 3 ಕ್ಯಾಮರಾ ಸೇರಿದಂತೆ ದೇವಸ್ಥಾನದ ಆಯಕಟ್ಟಿನ ಸ್ಥಳಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಮುಂಜಾಗ್ರತಾ…
ತಿಂದಿದ್ದು ಎರಡೇ ತುತ್ತು, ತಲೆ ಸುತ್ತಲಾರಂಭಿಸಿತು!
December 21, 2018ಮೈಸೂರು: ನಾವು ಸುಳವಾಡಿ ಮಾರಮ್ಮ ದೇವಾಲಯಕ್ಕೆ ಹೋಗಿದ್ದೋ. ಬಂದವರನೆಲ್ಲಾ ಸಾಲಾಗಿ ನಿಲ್ಲಿಸಿ, ಪಂಚಾಮೃತ ಹಾಗೂ ಟೊಮೆಟೊ ಬಾತ್ ನೀಡಲಾಯಿತು. ಪಚ್ಚೆ ಕರ್ಪೂರದ ವಾಸನೆ ಬರುತ್ತಿತ್ತು. ತಿನ್ನಲಾಗಲಿಲ್ಲ. ಎರಡೇ ತುತ್ತು ತಿಂದು ಬೀಸಾಡಿ ಬಿಟ್ಟೋ. ಸ್ವಲ್ಪ ಹೊತ್ತಿನ ನಂತರ ತಲೆ ತಿರುಗ ತೊಡಗಿತು. ವಾಂತಿ-ಭೇದಿ ಆರಂಭವಾಗಿ ಹೊಟ್ಟೆನೋವು ಆರಂಭವಾಯಿತು. ವಿಷ ಪ್ರಸಾದ ಸೇವಿಸಿ ಸಾವಿನ ದವಡೆಯಿಂದ ಪಾರಾಗಿ ಬಂದ ಮಕ್ಕಳ ನೋವಿನ ನುಡಿ ಇದು. ಮೈಸೂರಿನ ರಾಮ ಕೃಷ್ಣನಗರದಲ್ಲಿ ರುವ ಸುಯೋಗ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ…
ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಕ್ಕೆ ಪಂಪ ಪ್ರಶಸ್ತಿ ಪುರಸ್ಕøತ ಸಾಹಿತಿ ಪ್ರೊ.ಜಿ.ಹೆಚ್.ನಾಯಕ ವಿರೋಧ
December 21, 2018ಮೈಸೂರು: ಒಂದನೇ ತರಗತಿಯಿಂ ದಲೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಸರ್ಕಾ ರದ ಪ್ರಸ್ತಾಪಕ್ಕೆ ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿ, ಗೋಕಾಕ್ ಮಾದರಿ ಹೋರಾಟಕ್ಕೆ ಚಿಂತನೆ ನಡೆಸಿರುವ ಬೆನ್ನಲ್ಲೇ ಪಂಪ ಪ್ರಶಸ್ತಿ ಪುರಸ್ಕøತರೂ ಆದ ಹಿರಿಯ ವಿಮರ್ಶಕ ಪ್ರೊ.ಜಿ.ಹೆಚ್.ನಾಯಕ ಕನ್ನಡಪರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಘೋಷಣೆ ಮಾಡಿದ್ದಾರೆ. ನಿನ್ನೆಯಷ್ಟೇ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಬೆಂಗಳೂರಿನಲ್ಲಿ ಸಭೆ ನಡೆಸಿ ಅನಿ ವಾರ್ಯವಾದರೆ ಸರ್ಕಾರದ ವಿರುದ್ಧ ಗೋಕಾಕ್ ಮಾದರಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು….
ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕ ಸಾವು
December 21, 2018ಮೈಸೂರು: ಮನೆಯಲ್ಲಿ ಕುಸಿದು ಬಿದ್ದು ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕರೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮೈಸೂರಿನ ಬೋಗಾದಿ 2ನೇ ಹಂತದ ನಿವಾಸಿ ಬಿ.ಗುರುನಾಥರಾವ್ ಅವರ ಮಗ ಬಿ.ವಿಜಯ ರಘು (45) ಸಾವನ್ನಪ್ಪಿದವರು. ನಗುವನಹಳ್ಳಿ ಬಳಿಯ ಮಹಾ ರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯ ರಘು ಅವರು, ಬುಧವಾರ ಸಂಜೆ ಕಾಲೇಜಿನಿಂದ ಬಂದು ಪತ್ನಿಯನ್ನು ಸಂಗೀತ ಕ್ಲಾಸ್ಗೆ ಡ್ರಾಪ್ ಮಾಡಿ ಬಂದಿದ್ದರು. ರಾತ್ರಿ ಸುಮಾರು…
ಖದೀಮನ ಬಂಧನ: ಲಕ್ಷಾಂತರ ರೂ. ಚಿನ್ನಾಭರಣ ವಶ
December 21, 2018ಮೈಸೂರು: ಮೈಸೂರು ಹಾಗೂ ಹಾಸನದಲ್ಲಿ ಒಟ್ಟು 3 ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಖದೀಮನನ್ನು ಮೈಸೂರಿನ ಮಂಡಿ ಠಾಣೆ ಪೊಲೀ ಸರು ಬಂಧಿಸಿದ್ದಾರೆ. ನಂಜನಗೂಡು ಪಟ್ಟ ಣದ ರಾಜಾಜಿ ಕಾಲೋನಿ ನಿವಾಸಿ ನಂಜುಂಡ ಅಲಿ ಯಾಸ್ ಕರಿಯ(30) ಬಂಧಿತ ಆರೋಪಿ ಯಾಗಿದ್ದು, ಈತ ದೋಚಿದ್ದ ಸುಮಾರು 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ಅಶೋಕ ರಸ್ತೆಯ ಗಿರವಿ ಅಂಗಡಿಯೊಂದರ ಮುಂದೆ ಬುಧವಾರ ಮಧ್ಯಾಹ್ನ 3.30ರ ವೇಳೆಯಲ್ಲಿ ಆರೋಪಿ ನಂಜುಂಡ ಚಿನ್ನದ ಸರವೊಂದನ್ನು ಹಿಡಿದು…
ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ
December 21, 2018ಮೈಸೂರು: ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡರ 67ನೇ ಹುಟ್ಟುಹಬ್ಬವನ್ನು ಗುರುವಾರದಂದು ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಅಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ಪತ್ನಿ ಜಯಶ್ರೀಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಅಲ್ಲಿನ ಗ್ರಾಪಂ ಪೌರಕಾರ್ಮಿಕ ರಿಗೆ ಸೀರೆ ವಿತರಿಸಿದರು. ನಂತರ ಶಕ್ತಿಧಾಮ ದಲ್ಲಿ ಶ್ರೀ ಚಾಮುಂಡೇಶ್ವರಿ ಜನಸ್ಪಂದನಾ ಟ್ರಸ್ಟ್ ವತಿಯಿಂದ ಮಕ್ಕಳಿಗೆ ನೋಟ್ ಪುಸ್ತಕ, ಮಹಿಳೆಯರಿಗೆ ಸೀರೆ ಹಾಗೂ ಬೆಳಗಿನ…
ತಳವಾರ, ಪರಿವಾರವನ್ನು ಎಸ್ಟಿಗೆ ಸೇರಿಸಲು ಸಚಿವರಿಗೆ ಸಂಸದರ ಮನವಿ
December 21, 2018ನವದೆಹಲಿ: ಕಾಂಗ್ರೆಸ್ ಸಂಸದರ ನಿಯೋಗ ನವದೆಹಲಿಯಲ್ಲಿಂದು ಕೇಂದ್ರ ಬುಡಕಟ್ಟು ಖಾತೆ ಸಚಿವ ಜುಯಲ್ ಹೊರಮ್ ಅವರನ್ನು ಭೇಟಿಯಾಗಿ ಪರಿವಾರ ಮತ್ತು ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿತು. ಸಂಸದÀ ಆರ್.ಧ್ರುವನಾರಾಯಣ್, ವಿ.ಎಸ್.ಉಗ್ರಪ್ಪ, ಡಿಕೆ ಸುರೇಶ್, ಚಂದ್ರಪ್ಪ, ಶಾಸಕ ರಘುಮೂರ್ತಿ ನಿಯೋಗದಲ್ಲಿದ್ದರು. ಈ ಬಗ್ಗೆ ಮಾತನಾಡಿದ ಸಂಸದ ಧ್ರುವನಾರಾಯಣ್ ರಾಜ್ಯದಲ್ಲಿ 12 ಲಕ್ಷದಷ್ಟು ಜನಸಂಖ್ಯೆಯಿರುವ ಪರಿವಾರ ಮತ್ತು ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ 34 ವರ್ಷಗಳಿಂದ ಒತ್ತಾಯ ಮಾಡಲಾಗುತ್ತಿದೆ. ಇತರೆ ಸಮುದಾಯಗಳಿಗೆ…