ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜಿಪಂ  ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ
ಮೈಸೂರು

ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ

December 21, 2018

ಮೈಸೂರು:  ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡರ 67ನೇ ಹುಟ್ಟುಹಬ್ಬವನ್ನು ಗುರುವಾರದಂದು ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಅಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ಪತ್ನಿ ಜಯಶ್ರೀಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಅಲ್ಲಿನ ಗ್ರಾಪಂ ಪೌರಕಾರ್ಮಿಕ ರಿಗೆ ಸೀರೆ ವಿತರಿಸಿದರು. ನಂತರ ಶಕ್ತಿಧಾಮ ದಲ್ಲಿ ಶ್ರೀ ಚಾಮುಂಡೇಶ್ವರಿ ಜನಸ್ಪಂದನಾ ಟ್ರಸ್ಟ್ ವತಿಯಿಂದ ಮಕ್ಕಳಿಗೆ ನೋಟ್ ಪುಸ್ತಕ, ಮಹಿಳೆಯರಿಗೆ ಸೀರೆ ಹಾಗೂ ಬೆಳಗಿನ ಉಪಹಾರ ವಿತರಿಸುವ ಮೂಲಕ ಆಚರಿಸ ಲಾಯಿತು. ರಮಾಬಾಯಿನಗರದಲ್ಲಿ ನಾರಾ ಯಣ್‍ರವರಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್‍ಪುಸ್ತಕ ಸಿಹಿ ವಿತರಣೆ ಮತ್ತು ಸನ್ಮಾನ ಸಮಾರಂಭ ನಡೆಯಿತು.

ರಾಮಕೃಷ್ಣಗರದ ವೃದ್ಧಾಶ್ರಮದಲ್ಲಿ ಎಪಿ ಎಂಸಿ ಅಧ್ಯಕ್ಷ ಕೆ.ಪ್ರಭುಸ್ವಾಮಿ ಹಣ್ಣು -ಹಂಪಲು ವಿತರಿಸಿದರು. ಕೇರ್ಗಳ್ಳಿಯಲ್ಲಿ ಗ್ರಾಮಸ್ಥರು ಹಾಗೂ ಶಾಲಾಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶ್ರೀರಾಂಪುರದ ಅಶ್ವಿನಿ ಕಲ್ಯಾಣ ಮಂಟಪ ದಲ್ಲಿ ಸುಮಿತ್ರ ಸ್ಟೀಲ್ ಮಾಲೀಕ ಕೃಷ್ಣ ಕುಮಾರ್ ಸಾಗರ್ ಅವರಿಂದ ಸೀರೆ ವಿತರಣೆ, ಬುಲೆಟ್ ಮಹದೇವ್ ರೇವಣ್ಣ ಅವರಿಂದ ಕೇಕ್ ಕತ್ತರಿಸಿ ಅಭಿಮಾನಿಗಳು ಅಭಿ ನಂದಿಸಿದರು. ಬಂಬೂಬeóÁರ್‍ನಲ್ಲಿರುವ ಅಂಧರ ಶಾಲೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ದೇವಯ್ಯನಹುಂಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಟಿ-ಶರ್ಟ್ ಹಾಗೂ ಸಿಹಿ ವಿತರಿಸಲಾಯಿತು. ಸಂಜೆ ಶಿವಣ್ಣರವರ ನೇತೃತ್ವದಲ್ಲಿ ಬೀರಿಹುಂಡಿ ಯಲ್ಲಿ ಚಲನಚಿತ್ರ ನಟರಾದ ರೇಖಾ ದಾಸ್ ಹಾಗೂ ಡಿಂಗ್ರಿ ನಾಗರಾಜ್ ತಂಡ ದವರಿಂದ “ನನ್ನ ಗಂಡ ಬಲು ಭಂಡ” ಸಾಮಾಜಿಕ ನಾಟಕ ಹಾಗೂ ಅಭಿನಂ ದನಾ ಸಮಾರಂಭ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ಪ್ರಭುಸ್ವಾಮಿ, ತಾ.ಪಂ. ಸದಸ್ಯ ಸಿ.ಎಂ. ಸಿದ್ದರಾಮೇಗೌಡ, ಮಾರ್ಬಳ್ಳಿ ಕುಮಾರ್, ಕಾಂಗ್ರೆಸ್ ಮುಖಂಡರಾದ ಕೃಷ್ಣಕುಮಾರ್ ಸಾಗರ್, ಪಟೇಲ್ ಜವರೇಗೌಡ, ಕೂರ್ಗಳ್ಳಿ ಮಹದೇವ್, ಜವರಪ್ಪ, ಹೂಟಗಳ್ಳಿ ಮಹೇಶ್, ಕೆ. ಹೆಬ್ಬಾಳೆಗೌಡ, ಸ್ಲಂ ಬೋರ್ಡ್ ಮಾಜಿ ನಿರ್ದೇಶಕ ಜಯರಾಮೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬುಲೆಟ್ ಮಹದೇವ್, ಗುರುಸ್ವಾಮಿ, ಮಾಕಿ ಮಹದೇವ್, ದೊಡ್ಡ ಹುಂಡಿ ಸ್ವಾಮಣ್ಣ, ಜಿ.ಕೆ.ಬಸವಣ್ಣ, ಧನಗಳ್ಳಿ ಬಸವರಾಜು, ಗ್ರಾ.ಪಂ. ಅಧ್ಯಕ್ಷ ಬಸವ ರಾಜು, ನಾಡನಹಳ್ಳಿ ರವಿ, ಶೇಖರ್, ಮೀನು ಬಸವಣ್ಣ, ನಾಗರತ್ನ ಮಹದೇವ್, ಬಸವ ರಾಜು, ಕೆ.ಪಿ.ಮಹದೇವ, ನಂದ ಕುಮಾರ್, ಉಮಾಶಂಕರ್, ಹಂಚ್ಯಾ ಸಣ್ಣಸ್ವಾಮಿ, ನಾರಾಯಣ್, ಹಿನಕಲ್ ಪ್ರಕಾಶ್, ವಿಜಯ್, ಬಸವೇಗೌಡ, ಅರ್ಕೇ ಶ್ವರಯ್ಯ, ಬೆಟ್ಟದ ಕಾಳಯ್ಯ, ದೂರ ನಾಗ ರಾಜ್, ಲಕ್ಷ್ಮಣ ಪ್ರಭು, ಚಿಕ್ಕಣ್ಣ, ಶಿವಣ್ಣ, ಭರತ್‍ಕಾಳಯ್ಯ ಹಾಜರಿದ್ದರು.

Translate »