ಸುಳವಾಡಿ ಪ್ರಸಾದ ದುರಂತ ಮೈಸೂರಿನ ತ್ರಿಪುರ ಭೈರವಿ ಮಠದ  ಶ್ರೀ ಆಂಜನೇಯ ದೇವಸ್ಥಾನಕ್ಕೆ ಸಿಸಿ ಕ್ಯಾಮರಾ
ಮೈಸೂರು

ಸುಳವಾಡಿ ಪ್ರಸಾದ ದುರಂತ ಮೈಸೂರಿನ ತ್ರಿಪುರ ಭೈರವಿ ಮಠದ  ಶ್ರೀ ಆಂಜನೇಯ ದೇವಸ್ಥಾನಕ್ಕೆ ಸಿಸಿ ಕ್ಯಾಮರಾ

December 22, 2018

ಮೈಸೂರು:  ಸುಳವಾಡಿಯ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಪ್ರಾಶನ ಮಾಡಿ 16 ಮಂದಿ ಸಾವಿ ಗೀಡಾದ ಪ್ರಕರಣದಿಂದ ಎಚ್ಚೆತ್ತ ಮೈಸೂರಿನ ದೇವ ರಾಜ ಮೊಹಲ್ಲಾದಲ್ಲಿರುವ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಗುರುವಾರ ಸಿಸಿ ಕ್ಯಾಮರಾಗಳನ್ನು ಅಳವಡಿಸ ಲಾಯಿತು. ಹನುಮ ಜಯಂತಿ ಅಂಗವಾಗಿ ಇಂದು ಅನ್ನದಾನ ಏರ್ಪಡಿಸಿದ್ದ ರಿಂದ ಮಠದ ಆಡಳಿತ ಮಂಡಳಿಯು ಗುರುವಾರವೇ ಪ್ರಸಾದ ತಯಾರಿಸುವ ಅಡುಗೆ ಕೋಣೆಗೆ 3 ಕ್ಯಾಮರಾ ಸೇರಿದಂತೆ ದೇವಸ್ಥಾನದ ಆಯಕಟ್ಟಿನ ಸ್ಥಳಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಮುಂಜಾಗ್ರತಾ ಕ್ರಮಕೈಗೊಂಡಿದೆ. ಹನುಮ ಜಯಂತಿ ಪ್ರಯುಕ್ತ ಸುಮಾರು 3.000 ಮಂದಿಗೆ ಅನ್ನಸಂತರ್ಪಣೆ ನಡೆದಿದ್ದು, ಭಕ್ತರು ಯಾವುದೇ ಆತಂಕವಿಲ್ಲದೆ ಪ್ರಸಾದ ಸ್ವೀಕರಿಸಿದರು ಎಂದು ದೇವಸ್ಥಾನ ಟ್ರಸ್ಟ್‍ನ ಸದಸ್ಯರಾದ ಮಾಜಿ ಕಾರ್ಪೋರೇಟರ್ ಪ್ರಶಾಂತ್‍ಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »