ಮೈಸೂರು: ಗುರುವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಬಿರುಮಳೆಗೆ ನಗರದಲ್ಲಿ ವ್ಯಾಪಕವಾಗಿ ಧರೆಗುರುಳಿದ ಮರ, ರೆಂಬೆ -ಕೊಂಬೆಗಳನ್ನು ನಗರಪಾಲಿಕೆಯ ತೋಟ ಗಾರಿಕಾ ವಿಭಾಗದ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ತೆರವು ಕಾರ್ಯ ಆರಂಭಿಸಿದರು. ಆದರೆ ಇನ್ನು ಹಲವು ಕಡೆ ಮರದ ರೆಂಬೆ ಗಳ ತುಂಡರಿಸಿ ಗುಡ್ಡೆ ಹಾಕಲಾಗಿದ್ದು, ಅದನ್ನು ಯಾವಾಗ ಸಾಗಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಆಲಿಕಲ್ಲು ಸಹಿತ ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ಮೈಸೂರಿನ ಹಲವು ಕಡೆಗಳಲ್ಲಿ ದೊಡ್ಡ ಮರಗಳು, ಅಲ್ಲದೆ ವಿವಿಧ ರಸ್ತೆ, ವೃತ್ತಗಳಲ್ಲಿ…
ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಪುಡಿ ಪುಡಿಯಾದ ಇಟ್ಟಿಗೆಗೂಡಿನ ಪಶು ಆಸ್ಪತ್ರೆಯ ಶೀಟುಗಳು
May 25, 2019ಮೈಸೂರು: ಗುರುವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಭಾರೀ ಬಿರುಗಾಳಿ ಮಳೆಗೆ ಮೈಸೂರಿನ ಇಟ್ಟಿಗೆಗೂಡಿನ ಸರ್ಕಾರಿ ಪಶು ಚಿಕಿತ್ಸಾಲಯದ ಕಲ್ನಾರ್ ಶೀಟು ಗಳು ಒಡೆದು ಪುಡಿ ಪುಡಿಯಾಗಿವೆ. ಗಾಳಿಯ ರಭಸಕ್ಕೆ ಮೇಲೆದ್ದ ಶೀಟುಗಳು ಆಸ್ಪತ್ರೆಯ ಒಳಗೆ ಬಿದ್ದು ಪುಡಿಯಾದವು. ಮಳೆಯ ನೀರಿನಿಂದ ಆಸ್ಪತ್ರೆಯೊಳಗಿನ ಕುರ್ಚಿ, ಮೇಜು, ಬೀರು ತೋಯ್ದು ಹೋಗಿವೆ. ಟೇಬಲ್ ಮೇಲಿನ ಹಾಸು ಗಾಜು ಒಡೆದಿದೆ. ಮಳೆಯಿಂದ ತೊಯ್ದು ಔಷಧಿಗಳು ಹಾಳಾಗಿವೆ. ಈ ವೇಳೆ ಆಸ್ಪತ್ರೆ ಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯವಾಗಿಲ್ಲ. ಒಟ್ಟಾರೆ 50,000ಕ್ಕೂ ಹೆಚ್ಚಿನ…
ಒಣರೆಂಬೆ ತೆರವುಗೊಳಿಸದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ…!
May 25, 2019ಮೈಸೂರು: ಗಾಳಿ-ಮಳೆ ವೇಳೆ ಮರಗಳ ಒಣ ಕೊಂಬೆಗಳು ಧರೆಗುರುಳುವುದು ಸಾಮಾನ್ಯ. ಹಾಗೆಂದು ತಿಳಿದೂ ತಿಳಿದೂ ಎಚ್ಚರ ವಹಿಸದಿದ್ದರೆ, ಅನಾಹುತಕ್ಕೆ ಎಡೆ ಮಾಡಿದಂತೆಯೇ ಸರಿ. ಮಳೆ-ಗಾಳಿ ವೇಳೆ ಮರಗಳ ಒಣ ಕೊಂಬೆಗಳು ಬೀಳುವುದಿರಲಿ, ಬುಡ ಭದ್ರ ಇಲ್ಲವಾದರೆ ಮರಗಳೇ ನೆಲಕ್ಕುರುಳುತ್ತವೆ. ಮೈಸೂರಿನ ವಾಲ್ಮೀಕಿ ರಸ್ತೆಯ ಉದ್ದಕ್ಕೂ ಸೊಂಪಾಗಿ ಮರಗಳು ಬೆಳೆದು ನಿಂತಿವೆ. ಆ ಮೂಲಕ ಪ್ರಾಕೃತಿಕ ಸೌಂದರ್ಯ ಈ ರಸ್ತೆಗೆ ಒಲಿದು ಬಂದಿದೆ. ಉರಿಯುವ ಬಿಸಿಲಿನಲ್ಲೂ ಈ ರಸ್ತೆಯಲ್ಲಿ ತಂಪಾದ ವಾತಾವರಣ ಇರುತ್ತದೆ. ಹೌದು, ಇದು ನಿಜಕ್ಕೂ ಖುಷಿಯಾಗುವ…
ರಾಜ್ಯ ಮಟ್ಟದ `ಶಂಕರ ಕಪ್’ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
May 25, 2019ಮೈಸೂರು: ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ವಿಪ್ರ ಯುವ ಕರ ಸಂಘಟನೆಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಬ್ರಾಹ್ಮಣ ಸಮುದಾಯದ `ಶಂಕರ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ದೊರೆಯಿತು. ಮೈಸೂರಿನ ಬೋಗಾದಿ ರಸ್ತೆಯಲ್ಲಿ ರುವ ಮಾನಸ ಗಂಗೋತ್ರಿಯ ಕಾಫಿ ಬೋರ್ಡ್ ಮೈದಾನದಲ್ಲಿ ಏರ್ಪಡಿಸಿರುವ ಪಂದ್ಯಾವಳಿಗೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಬ್ಯಾಟ್ ಮಾಡುವ ಮೂಲಕ…
ಮಹಿಳೆಗೆ ವಂಚಿಸಲೆತ್ನಿಸಿದ ಗುಡ್ಡಪ್ಪನಿಗೆ ಗೂಸಾ
May 21, 2019ಮೈಸೂರು: ಮಕ್ಕಳಾಗುವಂತೆ ಮಂತ್ರ ಮಾಡುತ್ತೇನೆಂದು ನಂಬಿಸಿ ಮಹಿಳೆಯೊಬ್ಬರನ್ನು ವಂಚಿಸಲೆತ್ನಿಸಿದ ಶನಿದೇವರ ಗುಡ್ಡಪ್ಪನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಂಜನಗೂಡು ತಾಲೂಕು, ನಲ್ಲಿನಾಥ ಪುರ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ವೆಂಕಟೇಶ್ ನಾಯಕ(23) ಎಂಬುವರೇ ಮಹಿಳೆಗೆ ವಂಚಿಸಲೆತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದು ಜಯಪುರ ಪೊಲೀಸರ ಅತಿಥಿಯಾಗಿ ರುವ ಯುವಕ. ಪಿಯುಸಿ ಫೇಲಾಗಿ ರುವ ಈತ, ಶನಿದೇವರ ಗುಡ್ಡಪ್ಪನ ವೇಷ ಧರಿಸಿ ಅವತಾರ ತಾಳಿದ್ದ. ತನ್ನ ಮೇಲೆ ದೇವರು ಬರುತ್ತದೆ ಎಂಬಂತೆ ನಟಿಸಿ ಅಮಾಯಕರಿಂದ ದೇಣಿಗೆ ಸಂಗ್ರಹಿಸುತ್ತಿದ್ದ. ಆತನ ವರ್ತನೆಯಿಂದ ಮಾರುಹೋದ…
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆಗೆ ಕೇಂದ್ರ ಶಿಫಾರಸು
May 4, 2019ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ರಾತ್ರಿ ಸಂಚಾರ ನಿರ್ಬಂಧವನ್ನು ಮುಂದುವರಿಸಲು ಕೇಂದ್ರ ಸರ್ಕಾರ ಮತ್ತೆ ಶಿಫಾರಸು ಮಾಡಿದ್ದು ಕೇರಳ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಸರ ಮತ್ತು ಅರಣ್ಯ ಸಚಿವಾಲಯ ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿ-212ರಲ್ಲಿ ರಾತ್ರಿ ವೇಳೆ ಸಂಚಾರದ ನಿಷೇಧ ನಿರ್ಬಂಧದ ಯಥಾಸ್ಥಿತಿ ಕಾಯ್ದುಕೊಳ್ಳು ವಂತೆ ಕಾರ್ಯದರ್ಶಿಗಳ ಸಮಿತಿ ಮಾಡಿರುವ ಶಿಫಾರಸುಗಳನ್ನು ಒಪ್ಪಿಕೊಳ್ಳಲಾಗಿದೆ…
ಮುಂಗಾರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಲಭ್ಯ
May 4, 2019ಮೈಸೂರು: ವರ್ಷದ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಲಭ್ಯವಿದ್ದು, ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ಇನ್ನೂ ಕೃಷಿ ಚಟುವಟಿಕೆ ಚುರುಕುಗೊಂಡಿಲ್ಲ. ಪ್ರಸಕ್ತ ವರ್ಷದ ಜನವರಿಯಿಂದ ಈ ದಿನದವರೆಗೆ ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಕಳೆದ ವರ್ಷದ ಈ ದಿನದವರೆಗಿನ ಪ್ರಮಾಣಕ್ಕಿಂತ ಸುಮಾರು 21 ಮಿ.ಮೀ ಹೆಚ್ಚಾಗಿ ರುವುದು ಸಮಾಧಾನದ ಸಂಗತಿಯಾಗಿದೆ. ಪ್ರಸಕ್ತ ಜನವರಿಯಿಂದ ಮೇ 3ರ ವರೆಗೆ 92.3 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಜನವರಿಯಲ್ಲಿ 1.3,…
200 ಕಿ.ಮೀ. ವೇಗದಲ್ಲಿ ಒಡಿಶಾ ತೀರಕ್ಕೆ ಅಪ್ಪಳಿಸಿದ ‘ಫೊನಿ’ ಚಂಡಮಾರುತ
May 4, 2019ಭುವನೇಶ್ವರ: ನಿರೀಕ್ಷೆ ಯಂತೆಯೇ ಫೊನಿ ಚಂಡಮಾರುತ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಚಂಡಮಾರುತದ ವೇಗಕ್ಕೆ ಪುರಿ ಕಡಲ ತೀರದಲ್ಲಿನ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ಸೇವೆ ಸ್ಥಗಿತವಾಗಿದೆ. ಬರೋಬ್ಬರಿ ಪ್ರತೀ ಗಂಟೆಗೆ 200 ಕಿ.ಮೀ ವೇಗದಲ್ಲಿ ಫೊನಿ ಚಂಡಮಾರುತ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದು, ಅಲ್ಲಲ್ಲಿ ಭೂ ಕುಸಿತವಾದ ವರದಿಯಾಗಿದೆ. ಚಂಡ ಮಾರುತದಿಂದಾಗಿ ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಕೇರಳದಲ್ಲಿ ಮುಂಜಾನೆ ಯಿಂದಲೇ ಭಾರಿ ಪ್ರಮಾಣದ ಬಿರು ಗಾಳಿ ಸಹಿತ ಮಳೆ…
ಸರಗಳ್ಳರ ಬೇಟೆಗೆ ‘FAST TRACK’ ಕಾರ್ಯಾಚರಣೆ
May 4, 2019ಮೈಸೂರು: ಗುರುವಾರ ಬೆಳ್ಳಂಬೆಳಿಗ್ಗೆ 5 ಕಡೆ ಕೈಚಳಕ ತೋರಿದ್ದ ಖದೀಮರು ರಾತ್ರಿ ಮತ್ತೆ ಎರಡು ಕಡೆ ಮಹಿಳೆಯರ ಚಿನ್ನದ ಸರ ಎಗರಿಸಿ, ಮೈಸೂರಲ್ಲಿ ಭಯಭೀತ ವಾತಾವರಣ ಉಂಟು ಮಾಡಿದ್ದು, ಮೈಸೂರು ನಗರ ಪೊಲೀಸರು ಸರಗಳ್ಳರ ಬೇಟೆಗೆ `ಫಾಸ್ಟ್ ಟ್ರ್ಯಾಕ್’ ವಿನೂತನ ಕಾರ್ಯಾಚರಣೆ ಆರಂಭಿಸಿದ್ದಾರೆ. ನಿನ್ನೆ ಬೆಳಿಗ್ಗೆ ಘಟನೆಯಿಂದ ಎಚ್ಚೆತ್ತ ಮೈಸೂರು ನಗರ ಪೊಲೀಸರು ರಸ್ತೆಗಿಳಿದು, ಖದೀಮರ ಸೆರೆಗೆ ಕೋಳ ಹಿಡಿದು, ಶೋಧಿಸುತ್ತಿದ್ದರೆ, ರಾತ್ರಿ 8.40 ರಿಂದ 9.10 ಗಂಟೆಯೊಳಗೆ ವಿದ್ಯಾರಣ್ಯಪುರಂನ ಎರಡು ಕಡೆ ಸರಗಳ್ಳರು ಇಬ್ಬರ ಸರ…
ಪಾಲಿಕೆಯಲ್ಲಿ ಒಂದೇ ತಿಂಗಳಿಗೆ 56.50 ಕೋಟಿ ರೂ. ತೆರಿಗೆ ಸಂಗ್ರಹ
May 4, 2019ಮೈಸೂರು: ಸ್ವಯಂ ಪ್ರೇರಣೆಯಿಂದ ತೆರಿಗೆ ಪಾವತಿಸುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ ಏಪ್ರಿಲ್ ತಿಂಗಳಲ್ಲಿ ಶೇ.5 ರಿಯಾಯ್ತಿಯಡಿ ವಿಶೇಷ ಅಭಿಯಾನ ನಡೆಸಿದ ಫಲವಾಗಿ ಪಾಲಿಕೆಗೆ 56.50 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಮೈಸೂರು ನಗರ ಪಾಲಿಕೆಯ ಎಲ್ಲಾ ವಲಯ ಕಚೇರಿಗಳಲ್ಲಿಯೂ ಏ.1ರಿಂದ 30ರ ವರೆಗೆ ವಿಶೇಷ ಅಭಿಯಾನ ನಡೆಸಲಾಗಿತ್ತು. ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್ 1976ರ ಅನ್ವಯ ಈ ಅಭಿಯಾನದಲ್ಲಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡಲು ಪಾಲಿಕೆ ನಿರ್ಧರಿಸಿತ್ತು. ಪ್ರತಿ ವರ್ಷ ರಿಯಾ…