ಮೈಸೂರು: ಅತೀವ ಪ್ರೇಮ, ಕರುಣೆ ಮತ್ತು ನಿರಂತರ ಸೇವೆಯ ಉಜ್ವಲ ಪ್ರತೀಕವಾಗಿರುವ, ಜಗತ್ತಿನಾ ದ್ಯಂತ `ಅಮ್ಮ’ ಎಂದು ಅತ್ಯಂತ ಭಕ್ತಿ ಯಿಂದ ಕರೆಯಲ್ಪಡುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮ ನವರ ದರ್ಶನ ಮತ್ತು ಆಶೀರ್ವಾದವನ್ನು ಬುಧವಾರವೂ ಸಾವಿರಾರು ಮಂದಿ ಪಡೆದುಕೊಂಡರು. ನಿನ್ನೆ(ಫೆ.19) ಮೈಸೂರಿಗೆ ಆಗಮಿಸಿದ ಅಮ್ಮ, ನಗರದ ಬೋಗಾದಿಯ 2ನೇ ಹಂತದಲ್ಲಿರುವ ಮಾತಾ ಅಮೃತಾನಂದ ಮಯಿ ಮಠದ ಆವರಣದಲ್ಲಿ ಮಠದ ಬ್ರಹ್ಮಸ್ಥಾನ ದೇವಸ್ಥಾನದ 19ನೇ ವಾರ್ಷಿ ಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರವಚನ, ಭಜನೆ, ಧ್ಯಾನ, ಅಮ್ಮನ…
ಏ.30ರಿಂದ ಛತ್ತೀಸ್ಗಡ್ನ ಬಿಲಾಯ್ ರಾಷ್ಟ್ರೀಯ ಪಂಜಕುಸ್ತಿಗೆ ಮೈಸೂರು ವಿಶೇಷ ಚೇತನ
February 21, 2019ಮೈಸೂರು: ಕೆಲ ದಿನಗಳ ಹಿಂದಷ್ಟೆ ಉಡುಪಿಯಲ್ಲಿ ನಡೆದ ಪಂಜಕುಸ್ತಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದ ವಿಕಲಚೇತನನೋರ್ವ, ಛತ್ತೀಸ್ ಗಡ್ನ ಬಿಲಾಯ್ನಲ್ಲಿ ಏ.30ರಿಂದ ನಡೆಯುವ 43ನೇ ರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸುತ್ತಿದ್ದು, ಇದಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಮೈಸೂರು ಕೆ.ಆರ್.ಮೊಹಲ್ಲಾದ ನಿವಾಸಿಯಾದ ಎಂ.ರಾಜು(30) ಪಂಜ ಕುಸ್ತಿಯಲ್ಲಿ ಭಾಗವಹಿಸುತ್ತಿದ್ದು, ಇವರು ಸ್ವಲ್ಪಮಟ್ಟಿನ ಕಿವುಡುತನ ಮತ್ತು ಮಾತಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಾ ವುದನ್ನು ಲೆಕ್ಕಿಸದೆ ಹಲವು ವರ್ಷಗ ಳಿಂದ ಕುಸ್ತಿಯಲ್ಲಿ ಸಾಧಿಸುವ ಛಲ ಹೊಂದಿರುವ ರಾಜು, ಸತತ 7 ಬಾರಿ `ಕರ್ನಾಟಕ ಭೀಮ…
ಇಂದು ನಡೆಯುವುದನ್ನು 400 ವರ್ಷಗಳ ಹಿಂದೆಯೇ ಹೇಳಿದ್ದ ಕಾಲಜ್ಞಾನಿ ಸರ್ವಜ್ಞ
February 21, 2019ಮೈಸೂರು: 20-21ನೇ ಶತ ಮಾನದಲ್ಲಿ ಸಮಾಜ ಹೇಗಿರುತ್ತದೆ ಎಂಬುದನ್ನು 400 ವರ್ಷಗಳ ಹಿಂದೆಯೇ ಸರ್ವಜ್ಞ ಹೇಳಿದ್ದಾರೆಂದರೆ ನಿಜಕ್ಕೂ ಅವರು ಸರ್ವಜ್ಞಾನಿ, ಕಾಲಜ್ಞಾನಿ ಎಂದು ಅಂಕಣಕಾರ ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂತ ಕವಿ ಸರ್ವಜ್ಞ ಜಯಂತ್ಯೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಮೈಸೂರು ಕಲಾ ಮಂದಿರದ ಕಿರುರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮುಖ್ಯ ಭಾಷಣ ಮಾಡಿದರು. ಸರ್ವಜ್ಞ ತನ್ನನ್ನು…
ಪ್ರೊ. ಲಿಂಗರಾಜ ಗಾಂಧಿ ಮೈಸೂರು ವಿವಿ ನೂತನ ಕುಲಸಚಿವ
February 21, 2019ಪರೀಕ್ಷಾಂಗ ಕುಲಸಚಿವರಾಗಿ ಡಾ. ಕೆ.ಎಂ.ಮಹದೇವನ್ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರನ್ನಾಗಿ ಬೆಂಗ ಳೂರು ಕೇಂದ್ರ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಲಿಂಗರಾಜ ಗಾಂಧಿ ಅವರನ್ನು ನೇಮಿಸಲಾಗಿದೆ. ಪರೀಕ್ಷಾಂಗ ಕುಲಸಚಿವರನ್ನಾಗಿ ಕಡೂರಿನಲ್ಲಿರುವ ಕುವೆಂಪು ವಿವಿ ಪಿ.ಜಿ. ಸೆಂಟರ್ ನಿರ್ದೇಶಕ ಡಾ.ಕೆ.ಎಂ.ಮಹದೇವನ್ ಅವರನ್ನು ನೇಮಿಸಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎನ್.ವೀರಬ್ರಹ್ಮಚಾರಿ ಇಂದು ಅಧಿಸೂಚನೆ ಹೊರಡಿಸಿದ್ದಾರೆ. ಈವರೆಗೆ ಮೈಸೂರು ವಿವಿಯಲ್ಲಿ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಆರ್.ರಾಜಣ್ಣ ಹಾಗೂ ಪರೀಕ್ಷಾಂಗ ಕುಲ ಸಚಿವ ಪ್ರೊ.ಜೆ.ಸೋಮಶೇಖರ್ ಅವರನ್ನು ವಿಶ್ವವಿದ್ಯಾನಿಲ ಯದ ಮಾತೃ ಸ್ಥಾನಗಳಲ್ಲಿ…
ಮೈಸೂರಲ್ಲಿ ಇಂದು ಸಿದ್ಧಗಂಗಾ ಶ್ರೀಗಳಿಗೆ ನುಡಿ ನಮನ
February 21, 2019ಮೈಸೂರು: ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತೋ ತ್ಸವ ಭವನದಲ್ಲಿ ನಾಳೆ(ಫೆ.21) ಸಂಜೆ 5ಕ್ಕೆ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಗುರುನಮನ ಸಲ್ಲಿಸ ಲಾಗುವುದು ಎಂದು ಸಿದ್ಧಲಿಂಗೇಶ್ವರಸ್ವಾಮಿ ಯುವಕ ಮಂಡಲ್ ಅಧ್ಯಕ್ಷ ಪಿ.ಎಂ.ಮಂಜುನಾಥ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಲಿಂಗೇಶ್ವರಸ್ವಾಮಿ ಸಮಿತಿ ಟ್ರಸ್ಟ್ ಮತ್ತು ಸಿದ್ಧಲಿಂಗೇಶ್ವರಸ್ವಾಮಿ ಯುವಕ ಮಂಡಲ್ ವತಿಯಿಂದ ಸಿದ್ಧಗಂಗಾ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಬೇಬಿಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ…
ರಸ್ತೆ ಸಂಚಾರ ಸಮೀಕ್ಷೆ ಆರಂಭ
February 21, 2019ಮೈಸೂರು: ಲೋಕೋಪಯೋಗಿ ಇಲಾಖೆಯಿಂದ 2019-20ನೇ ಸಾಲಿನ 2 ದಿನಗಳ ರಸ್ತೆ ಸಂಚಾರ ಸಮೀಕ್ಷಾ ಕಾರ್ಯ ಇಂದಿನಿಂದ ಆರಂಭವಾಗಿದೆ. ಇಲಾಖೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ನಂಜನ ಗೂಡು ಹಾಗೂ ತಿ.ನರಸೀಪುರ ತಾಲೂಕುಗಳ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 137 ಕಡೆ ಟೆಂಟ್ ಹಾಕಿಕೊಂಡು ಪ್ರತೀ ಕೇಂದ್ರ ಗಳಲ್ಲಿ ಇಬ್ಬರು ಗಣತಿಕಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ರಸ್ತೆಗಳಲ್ಲಿ ಸಂಚರಿ ಸುವ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಕಾರು, ವ್ಯಾನು, ಟ್ರಕ್, ಲಾರಿ, ಬಸ್ಸು ಹಾಗೂ…
ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್ ಕಾರ್ಪೊರೇಟರ್ ಗುರುವಿನಾಯಕ ಸದಸ್ಯತ್ವ ರದ್ದಿಗೆ ಆಗ್ರಹ
February 21, 2019ಮೈಸೂರು: ಪರಿಶಿಷ್ಟ ಪಂಗಡಕ್ಕೆ ಮೀಸ ಲಿದ್ದ ಕ್ಷೇತ್ರದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಮೈಸೂರು ನಗರಪಾಲಿಕೆಗೆ 18ನೇ ವಾರ್ಡ್ನಿಂದ ಆಯ್ಕೆಯಾಗಿರುವ ಗುರು ವಿನಾಯಕ ವಿರುದ್ಧ ಕಠಿಣ ಕ್ರಮ ಜರುಗಿಸಿ, ಪಾಲಿಕೆ ಸದಸ್ಯತ್ವ ರದ್ದು ಗೊಳಿಸಬೇಕೆಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ಅಧ್ಯಕ್ಷ ಎಸ್.ಹೆಚ್.ಸುಭಾಷ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಪರಿವಾರ, ಬೆಸ್ತ ಜಾತಿಗೆ ಸೇರಿದವರು ಅಧಿಕಾರಿಗಳಿಗೆ ಲಂಚ ನೀಡಿ `ನಾಯಕ’ ಎಂಬ ಸುಳ್ಳು ಜಾತಿ ಪ್ರಮಾಣ…
ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ
February 21, 2019ಮೈಸೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ವೆಸಗಿದ ವ್ಯಕ್ತಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 31 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ. ಜೆಪಿ ನಗರದ ನಾಚನಹಳ್ಳಿ ಪಾಳ್ಯದ ನಿವಾಸಿ ಮಣಿ(35) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಮನೆಯೊಂದರಲ್ಲಿ ವಾಸವಿದ್ದ ಅಪ್ರಾಪ್ರೆಯನ್ನು ಹೆದರಿಸಿ, ಪ್ರತಿ ದಿನ ರಾತ್ರಿ ಅತ್ಯಾಚಾರವೆಸಗುತ್ತಿದ್ದ. ಕಳೆದ 2017ರ ನ.7 ರಂದು ಬಾಲಕಿಯು ಸರ್ಕಾರಿ ಬಾಲ ಮಂದಿರ ದಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ…
ಕೊಡಗು ಪುನರ್ ನಿರ್ಮಾಣಕ್ಕೆ ಕೈಜೋಡಿಸಲು ಮನವಿ
February 19, 2019ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಯಿತು. ಆದ್ದರಿಂದ ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸ ಬೇಕಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇ ಜಿನಲ್ಲಿ ಮಂಗಳವಾರ ‘ಪ್ರಕೃತಿ ವಿಕೋಪ ನಿರ್ವಹಣೆ’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಹೆಚ್ಚಿನ ಅನಾಹುತ ಸಂಭವಿಸ ದಂತೆ ಜಾಗೃತಿ…
ಲೋಕಸಭಾ ಸಮರದತ್ತ ಬಿಜೆಪಿ, ಕಾಂಗ್ರೆಸ್ ಚಿತ್ತ
February 19, 2019ಬೆಂಗಳೂರು: ಆಪರೇಷನ್ ಕಮಲದ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಳಗಿಳಿಸುವ ಕಾರ್ಯ ಕೈಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ, ಲೋಕಸಭಾ ಚುನಾವಣೆಯತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ ಆಪರೇಷನ್ ಕಮಲ ವಿಫಲಗೊಂಡ ಸಂತಸ ದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಕೇಂದ್ರ ದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ತರಲು ಇಂದು ಇಡೀ ದಿನ ಸಭೆಗಳನ್ನು ನಡೆಸಿದರು. ಏಪ್ರಿಲ್ 2ನೇ ಇಲ್ಲವೇ 3ನೇ ವಾರದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ ಎಂಬ ಮಾಹಿ ತಿಯ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ…