ಸರಕು ಸಾಗಾಣಿಕೆ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಶಿಕ್ಷಾರ್ಹ ಅಪರಾಧ
ಹಾಸನ

ಸರಕು ಸಾಗಾಣಿಕೆ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಶಿಕ್ಷಾರ್ಹ ಅಪರಾಧ

May 21, 2019

ಹಾಸನ: ಶಾಲಾ ವಿದ್ಯಾರ್ಥಿಗಳನ್ನು ಸರಕು ಸಾಗಾಣಿಕೆ ವಾಹನಗಳಲ್ಲಿ ಕರೆದೊಯ್ಯುವುದು ಶಿಕ್ಷಾರ್ಹ ಅಪರಾಧ ಹಾಗೂ ಈ ಸಂಬಂಧ ಎಲ್ಲಾ ಶಾಲೆಗಳು ಸೂಕ್ತ ಕ್ರಮವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ತಿಳಿಸಿದ್ದಾರೆ.

ನಗರದ ಗುರುಭವನದಲ್ಲಿ ಸೋಮವಾರ ಕ್ಯಾರಿ ಯಿಂಗ್ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಸಾಗಿಸು ವುದು ನಿಷೇಧ ಕುರಿತಂತೆ ಎಲ್ಲಾ ಶಾಲೆಯ ಮುಖ್ಯೋ ಪಾಧ್ಯಾಯರುಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ನಿಟ್ಟಿನಲ್ಲಿ ಅಗತ್ಯ ಸಂಸ್ಥೆ ವತಿಯಿಂದಲೇ ಸಾರಿಗೆ ವಾಹನ ನಿಯೋಜಿಸಬೇಕು. ಇತರ ಸಣ್ಣ ಪುಟ್ಟ ವಾಹನಗಳಲ್ಲಿ ಅತಿ ಹೆಚ್ಚು ಮಕ್ಕಳನ್ನು ತುಂಬಿಸಿಕೊಂಡು ಕರೆದೊ ಯ್ಯುವುದನ್ನು ಶಾಲೆಗಳು ಗಮನಿಸಿ ನಿಯಂತ್ರಣ ಹೇರಬೇಕು ಎಂದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ, ಬಿ.ಆರ್.ಸಿ. ಭಾನುಮತಿ ಮತ್ತಿತರರು ಹಾಜರಿದ್ದರು.

Translate »