ಪೊನ್ನಂಪೇಟೆಯಲ್ಲಿ ಹರದಾಸ ಅಪ್ಪಚ್ಚ ಕವಿ 150ನೇ ಜನ್ಮ ದಿನಾಚರಣೆ
ಕೊಡಗು

ಪೊನ್ನಂಪೇಟೆಯಲ್ಲಿ ಹರದಾಸ ಅಪ್ಪಚ್ಚ ಕವಿ 150ನೇ ಜನ್ಮ ದಿನಾಚರಣೆ

September 22, 2018

ಗೋಣಿಕೊಪ್ಪಲು: ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಜನ್ಮ ದಿನೋತ್ಸವವನ್ನು ‘ಕೊಡವ ಸಾಹಿತ್ಯ ದಿನ’ ಎಂದು ಆಚರಣೆ ಮಾಡುವ ನಿರ್ಧಾ ರವನ್ನು ತೆಗೆದುಕೊಳ್ಳಲಾಯಿತು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪೊನ್ನಂಪೇಟೆ ಮಹಾವಿದ್ಯಾಲಯ ಹಾಗೂ ಕೊಡಗು ರಂಗಭೂಮಿ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ ಹರದಾಸ ಅಪ್ಪಚ್ಚ ಕವಿಯ 150 ನೇ ಜನ್ಮದಿನೋತ್ಸವದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಯಿತು.

ಅಪ್ಪಚ್ಚ ಕವಿ ಕೊಡವ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ವಿಶೇಷ ಸ್ಥಾನ ನೀಡಲು ಹಾಗೂ ಮುಂದಿನ ಪೀಳಿಗೆಗೆ ಅವರ ನೆನಪು ಸದಾಕಾಲ ಉಳಿಯುವಂತೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಘೋಷಿಸಲಾಯಿತು. ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಮಲಚೀರ ಆಶಾ ಮಂದಣ್ಣ ಸೆಪ್ಟೆಂಬರ್ 21 ದಿನವನ್ನು ಕೊಡವ ಸಾಹಿತ್ಯಾ ದಿನ ಎಂದು ಆಚರಿಸುವ ಘೋಷ ವಾಕ್ಯ ಘೋಷಣೆ ಬಿಡುಗಡೆ ಮಾಡಿದರು.

ಸಮಾಜ ಎಚ್ಚರಿಸಬೇಕಿತ್ತು: ಕೊಡಗಿನ ಆದಿಕವಿ ಹರದಾಸ ಅಪ್ಪನೆರ ವಂಡ ಅಪ್ಪಚ್ಚಕವಿ ಸಾಮಾಜಿಕವಾಗಿ ಕವನ, ಕಾವ್ಯ ರಚಿಸುವ ಮೂಲಕ ಸಾರ್ವಜನಿ ಕರಲ್ಲಿ ಮತ್ತಷ್ಟು ಸಾಮಾಜಿಕ ಜವಬ್ದಾರಿ ಯನ್ನು ಹೊರಹೊಮ್ಮುವಂತೆ ಮಾಡಬೇಕಿತ್ತು ಎಂದು ‘ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕಲ್ಯಾಟಂಡ ಬಿ. ಗಣಪತಿ ಅಭಿಪ್ರಾಯಪಟ್ಟರು.

ಅಪ್ಪಚ್ಚಕವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧ್ಯಾತ್ಮಿಕ ಹಾಗೂ ಬೌಗೋಳಿಕವಾಗಿ ಸಾಕಷ್ಟು ಕವನ ರಚಿಸಿದ್ದಾರೆ. ಇದರೊಂದಿಗೆ ಒಂದಷ್ಟು ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತಹ ಬಗ್ಗೆ ಕಾವ್ಯಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕಿತ್ತು. ಅಂತಹ ಶಕ್ತಿ ಅವರಿಗೆ ಇತ್ತು ಎಂದರು. ನಾಟಕ ಹಾಗೂ ಕವನ ಸಮಾಜ ತಿದ್ದುವ ಶಕ್ತಿಶಾಲಿ ಅಸ್ತ್ರವಾಗಿದೆ. ಕನ್ನಡ ಲಿಪಿ ಮೂಲಕ ಕೊಡವ ಭಾಷೆಗೆ ಒತ್ತು ನೀಡಿರುವುದು ವಿಶೇಷ ಎಂದರು.

ಕೊಡವ ಸಾಹಿತ್ಯಕ್ಕೆ ಒತ್ತು: ಅಖಿಲ ಕೊಡವ ಸಮಾಜ ಕಾರ್ಯಧ್ಯಕ್ಷ ಇಟ್ಟೀರ ಕೆ.ಬಿದ್ದಪ್ಪ ಕೊಡಗಿನ ಹರ ದಾಸ ಅಪ್ಪಚ್ಚಕವಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕೊಡವರ ಜನಸಂಖ್ಯೆ ತೀರಾ ಕಡಿಮೆ ಇದ್ದ ಸಂದರ್ಭ ನಾಟಕ, ಕಾವ್ಯಗಳ ಮೂಲಕ ಕೊಡವ ಸಾಹಿತ್ಯಕ್ಕೆ ಒತ್ತು ನೀಡಿರುವುದು ಕೊಡವ ಸಾಹಿತ್ಯಕ್ಕೆ ನಾಂದಿಯಾ ಯಿತು. ಸಾಮಾಜಿಕವಾಗಿ ಹೇಗೆ ಬದುಕಬೇಕು ಎಂಬುವುದನ್ನು ಕವನಗಳ ಮೂಲಕ ಹೇಳಿರುವುದು ಅವರಲ್ಲಿನ ದೂರದೃಷ್ಠಿಯನ್ನು ತೋರಿಸುತ್ತದೆ. ನಾಟಕದ ಮೂಲಕ ಎಲ್ಲಾ ಜನಾಂಗವನ್ನು ಒಂದಾಗಿಸುವ ಅವರ ಪ್ರಯತ್ನ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೊಡಗು ರಾಜ್ಯವಾಗಿದ್ದಾಗ ಅಂದಿನ ಮುಖ್ಯಮಂತ್ರಿ ಸಿ.ಎಂ.ಪೂಣಚ್ಚ ಅವರು ಅಪ್ಪಚ್ಚ ಕವಿಗೆ ವರಕವಿ ಎಂದು ಬಿರುದು ನೀಡಿ ಗೌರವಿಸಿದ್ದರು. ಅದರಂತೆ ಅವರು ಕೊಡಗಿನ ವರಕವಿ ಯಾಗಿ, ಆದಿಕವಿಯಾಗಿ, ಇಂಗ್ಲೀಷ್ ಭಾಷೆಯ ಶೇಕ್ಸ್‍ಪಿಯರ್‍ನಂತಹ ಕವಿಯಾಗಿದ್ದಾರೆ. ಲಿಪಿ ಇಲ್ಲದ ಕೊಡವ ಭಾಷೆಗೆ ಕನ್ನಡದ ಲಿಪಿ ಬಳಸಿಕೊಂಡು ಕಾವ್ಯ-ನಾಟಕ ರಚಿಸಿದ್ದಾರೆ. ಇದು ಕೊಡವ ಭಾಷೆಯ ಶ್ರೀಮಂತಿಕೆ. ಅವರು ಜನಮಾನಸದಲ್ಲಿ ಉಳಿಯುವಂತಾಗಬೇಕು. ಅವರ ಕಾವ್ಯ-ನಾಟಕ ಅಮರವಾಗಿ ಉಳಿಯಬೇಕು ಎಂದರು. ಕೊಡಗು ರಂಗಭೂಮಿ ಪ್ರತಿಷ್ಠಾನ ಪ್ರಧಾನ ಸಂಚಾಲಕಿ ಅನಿತಾ ಕಾರ್ಯಪ್ಪ ಸ್ವಾಗತಿಸಿದರು. ಚೇಂದೀರ ನಿರ್ಮಲ ಬೋಪಣ್ಣ ಅಪ್ಪಚ್ಚಕವಿ ಗೀತೆಯ ಮೂಲಕ ಪ್ರಾರ್ಥಿಸಿದರು. ಡಾ. ಶಿವಪ್ಪ ಅಪ್ಪಚ್ಚಕವಿ ಗೀತೆಯೊಂದಿಗೆ ಅಮರಕಾವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಮಹಾವಿದ್ಯಾಲಯ ಡೀನ್ ಡಾ. ಚೆಪ್ಪುಡೀರ ಕುಶಾಲಪ್ಪ ಉಪಸ್ಥಿತರಿದ್ದರು.

ಕಲಾವಿದರುಗಳಾದ ಅಡ್ಡಂಡ ಕಾರ್ಯಪ್ಪ ಸೇರಿದಂತೆ ಆಂಗೀರ ಕುಸುಮ್, ಮದ್ರೀರ ಸಂಜು, ವಿ. ಟಿ ಶ್ರೀನಿವಾಸ್, ಚಂದ್ರಶೇಖರ್ ತಂಡ ದಿಂದ ಅಮರಕಾವ್ಯ ಕಾರ್ಯಕ್ರಮದಲ್ಲಿ ಅಪ್ಪಚ್ಚಕವಿ ಗೀತೆಗಳು ಹೊರಹೊಮ್ಮಿತು.

Translate »