ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವು
ಮೈಸೂರು

ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವು

May 10, 2019

ಮೈಸೂರು: ಸೋಮ ವಾರ ಸಂಜೆ ಮೈಸೂರು ತಾಲೂಕು ಕೂರ್ಗಳ್ಳಿ ಬಳಿ ಸಂಭವಿಸಿದ್ದ ಅಪಘಾತ ದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ಕೆ.ಆರ್. ಪೇಟೆ ತಾಲೂಕಿನ ಆಲಂಬಳ್ಳಿ ಕಾವಲ್ ನಿವಾಸಿ ಲೇಟ್ ಕರೀಗೌಡರ ಮಗ ಲೋಕೇಶ್ (48) ಸಾವನ್ನಪ್ಪಿದವರು. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಬೈಕ್‍ನಲ್ಲಿ ಹೂಟ ಗಳ್ಳಿಯಿಂದ ಕೂರ್ಗಳ್ಳಿ ಕಡೆಗೆ ಹೋಗು ತ್ತಿದ್ದಾಗ ಎದುರಿನಿಂದ ಗಾರ್ಮೆಂಟ್ಸ್ ಕೆಲಸಗಾರರನ್ನು ಕರೆ ತರುತ್ತಿದ್ದ ವಾಹನ ಸೋಮವಾರ ಸಂಜೆ ಡಿಕ್ಕಿ ಹೊಡೆದು ಉರುಳಿ ಬಿದ್ದಿತ್ತು. ಘಟನೆಯಲ್ಲಿ ಲೋಕೇಶ್ ಸೇರಿದಂತೆ ಒಟ್ಟು 18 ಮಂದಿ ಗಾಯ ಗೊಂಡಿದ್ದರು. ತೀವ್ರವಾಗಿ ಗಾಯಗಳಾ ಗಿದ್ದ ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ಪ್ರಕರಣ ದಾಖ ಲಿಸಿ ಕೊಂಡಿರುವ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

Translate »