ರೈಲಿಗೆ ಸಿಲುಕಿ ಎರಡು ಆನೆ ಮರಿ ಸಾವು
ಹಾಸನ

ರೈಲಿಗೆ ಸಿಲುಕಿ ಎರಡು ಆನೆ ಮರಿ ಸಾವು

June 5, 2018

ಸಕಲೇಶಪುರ: ಬೆಂಗಳೂರು- ಮಂಗಳೂರು ನಡುವೆ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ಎರಡು ಆನೆ ಮರಿಗಳು ಸಾವಿಗೀಡಾಗಿರುವ ಘಟನೆ ತಾಲೂಕಿನ ಯಡಕುಮರಿ ಬಳಿ ನಡೆದಿದೆ.

ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಹಾದು ಹೋಗಿರುವ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಭಾನು ವಾರ ರಾತ್ರಿ ಅವಘಡ ಸಂಭವಿಸಿದೆ. ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಆನೆ ಮರಿಗೆ ರೈಲು ಡಿಕ್ಕಿ ಹೊಡೆರುವ ಸಾಧ್ಯತೆ ಇದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಶಿವರಾಮ್ ಬಾಬು ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಪರಿಶೀಲನೆ ನಡೆಸಿದರು.

Translate »