ವಿರಾಜಪೇಟೆ ಗಾಂಧಿನಗರದ ಕಾಂಕ್ರೀಟ್ ರಸ್ತೆ ಸಂಚಾರ ಮುಕ್ತ
ಕೊಡಗು

ವಿರಾಜಪೇಟೆ ಗಾಂಧಿನಗರದ ಕಾಂಕ್ರೀಟ್ ರಸ್ತೆ ಸಂಚಾರ ಮುಕ್ತ

January 31, 2019

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರ ನಗರೋತ್ಥಾನ ಯೋಜನೆಯಡಿಯಲ್ಲಿ 2017-18ನೇ ಸಾಲಿಗೆ ಬಂದ ರೂ. 1.70 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮ ಗಾರಿಗಳನ್ನು ಮಾಡಲಾಗುತ್ತಿದೆ ಎಂದು ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಪಟ್ಟಣದ ಗಾಂಧಿನಗರದ ಕರ್ನಲ್ ಓಣಿಗೆ ರೂ,13 ಲಕ್ಷದಲ್ಲಿ ನಡೆದ ಕಾಂಕ್ರೀಟ್ ರಸ್ತೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ಕೆ.ಜಿ.ಬೋಪಯ್ಯ ಬಳಿಕ ಮಾತನಾಡಿ, ವಿರಾಜಪೇಟೆ ಪಟ್ಟಣದಲ್ಲಿ ಈಗಾಗಲೇ ಎರಡು ರಸ್ತೆಗಳ ಕಾಮಗಾರಿ ಮುಗಿದಿದ್ದು, ಇನ್ನು ಉಳಿದ ಕಾಮಗಾರಿಗಳನ್ನು ಕೆಲವು ದಿನಗಳಲ್ಲಿ ಸಂಪೂರ್ಣಗೊಳಿಸಲಾಗುವುದು ಎಂದರು.
ರಸ್ತೆ ಉದ್ಘಾಟನೆ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಶಶಿ ಸುಬ್ರಮಣಿ, ಸ್ಥಳೀಯ ರಾದ ಕೆ.ಸುರೇಶ್, ಬಿ.ಮಂದಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಟಿ.ಎಂ.ಜೂನ, ಆಶಾ ಸುಬ್ಬಯ್ಯ, ಹರ್ಷವರ್ಧನ್, ಪೂರ್ಣಿಮಾ, ಮಾಜಿ ಅಧ್ಯಕ್ಷ ಇ.ಸಿ.ಜೀವನ್, ಮಾಜಿ ಸದಸ್ಯೆ ರತಿಬಿದ್ದಪ್ಪ, ಬಿಜೆಪಿ ಜಿಲ್ಲಾ ಸಮಿತಿಯ ಪಿ.ರಘುನಾಣಯ್ಯ, ಮಲ್ಲಂಡ ಮಧುದೇವಯ್ಯ, ಜೋಕಿಂ ರಾಡ್ರಿಗಾಸ್, ಗುತ್ತಿಗೆದಾರ ಸಂಪತ್, ಗಾಂಧಿನಗರದ ನಿವಾಸಿಗಳು ಉಪಸ್ಥಿತರಿದ್ದರು.

Translate »