ಶಾಸಕ ಕೆ.ಎಸ್.ಲಿಂಗೇಶ್‍ರಿಂದ ವಾರ್ಡ್ ಪ್ರದಕ್ಷಿಣೆ: ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಸಾರ್ವಜನಿಕರ ಪ್ರತಿಭಟನೆ
ಹಾಸನ

ಶಾಸಕ ಕೆ.ಎಸ್.ಲಿಂಗೇಶ್‍ರಿಂದ ವಾರ್ಡ್ ಪ್ರದಕ್ಷಿಣೆ: ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಸಾರ್ವಜನಿಕರ ಪ್ರತಿಭಟನೆ

December 3, 2018

ಬೇಲೂರು: ಪಟ್ಟಣದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವ ಶಾಸಕ ಕೆ.ಎಸ್.ಲಿಂಗೇಶ್ ಅವರು ಇಂದು 5ನೇ ವಾರ್ಡಿಗೆ ಭೇಟಿ ನೀಡಿದ ಸಂದರ್ಭ ನಾಗರಿಕರು ರಸ್ತೆಗೆ ಡಾಂಬರ್ ಹಾಕದೆ ಇರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ಈ ಸಂದರ್ಭ ಪುರಸಭಾ ಮುಖ್ಯಾಧಿಕಾರಿ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವ ಜನಿಕರು, ಕಳೆದ 8 ತಿಂಗಳ ಹಿಂದೆ ಕನ್ನಿಕಾ ಪರಮೇಶ್ವರಿ ರಸ್ತೆಗೆ ನಗರೋತ್ಥಾನ ಯೋಜನೆಯಡಿ ರಸ್ತೆಗೆ ಡಾಂಬರೀಕರಣ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳಲಾ ಯಿತು. ಆದರೆ ಈವರೆಗೆ ಕೆಲಸ ಪೂರ್ಣ ಗೊಂಡಿಲ್ಲ. ಇದೇ ರೀತಿ ಹಲವು ವಾರ್ಡ್ ಗಳಲ್ಲಿ ಕೆಲಸ ಮಂದಗತಿಯಲ್ಲಿ ನಡೆಯು ತ್ತಿದೆ. ನಮ್ಮ ಕನ್ನಿಕಾಪರಮೇಶ್ವರಿ ರಸ್ತೆಗೆ ಹಾಕಿರುವ ಜಲ್ಲಿ ಸಮರ್ಪಕವಾಗಿ ಹಾಕದೆ ಇರುವುದರಿಂದ ಮಳೆಗಾಲದಲ್ಲಿ ರಸ್ತೆಯ ನೀರು ಮನೆಗಳಿಗೆ ನುಗ್ಗುತ್ತದೆ. ಭಾಗಶಃ ಕೆಲಸ ಆಗಿರುವುದರಿಂದ ವಿಕಲಚೇತನರಿಗೆ ಹಾಗೂ ವೃದ್ಧರು ಓಡಾಡಲು ತೊಂದರೆ ಆಗುತ್ತಿದೆ ಎಂದು ದೂರಿದರು.

ಇದೇ ವೇಳೆ ಸ್ಥಳಕ್ಕೆ ಶಾಸಕ ಕೆ.ಎಸ್. ಲಿಂಗೇಶ್ ಹಾಗೂ ಪುರಸಭಾ ಅಧ್ಯಕ್ಷೆ ಭಾರತಿ, ಮುಖ್ಯಾಧಿಕಾರಿ ಮಂಜುನಾಥ್ ಆಗಮಿಸಿದರು. ಈ ಸಂದರ್ಭ ಪುರಸಭೆ ಮಾಜಿ ಸದಸ್ಯ ಜಮಾಲುದ್ದೀನ್ ಮತ್ತು ಮುಖ್ಯಾಧಿಕಾರಿ ಮಂಜುನಾಥ್ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಶಾಸಕ ಲಿಂಗೇಶ್ ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಂದರ್ಭ ಮಾತನಾಡಿದ, ಮಾಜಿ ಪುರಸಭಾ ಉಪಾಧ್ಯಕ್ಷ ಶಕೀಲ್‍ಅಹ್ಮದ್, ಸದಸ್ಯ ಫಾರೂಖ್ ಅಹ್ಮದ್, ಅಲ್ಪಸಂಖ್ಯಾತರ ಘಟಕದ ತಾ.ಅಧ್ಯಕ್ಷ ಸಲೀಂಪಾಷಾ, ನಾಗೇಶ್, 8 ತಿಂಗಳ ಹಿಂದೆ ಆರಂಭಗೊಂಡ ಡಾಂಬರ್ ಕೆಲಸ ಇನ್ನೂ ಮುಗಿದಿಲ್ಲ. ಕಾಮಗಾರಿ ಬೇಕಾ ಬಿಟ್ಟಿ ಮಾಡಿದ್ದಾರೆ. ಹತ್ತಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ರಸ್ತೆಗೆ ಹಾಕಿದ ಜಲ್ಲಿಗಳು ವಾಹನ ಚಲಿಸುವ ವೇಳೆ ಮನೆಯ ಬಳಿ ನಿಂತಿದ್ದವರಿಗೆ ಬಡಿದು ಪೆಟ್ಟಾಗಿದೆ. ಇಂದು ಶಾಸಕರು ವಾರ್ಡ್ ಭೇಟಿ ನೀಡುವ ವಿಚಾರ ತಿಳಿದು ರಾತ್ರೋ ರಾತ್ರಿ ಡಾಂಬರ್ ಹಾಕಲು ಬಂದಿದ್ದರು. ಆದರೆ ಗುಣಮಟ್ಟದ ಕಾಮಗಾರಿ ಅಗತ್ಯ ಇದ್ದ ಕಾರಣ ನಾಗರಿಕರು ಡಾಂಬರ್ ಹಾಕಲು ಅವಕಾಶ ನೀಡಿಲ್ಲ. ಈಗ ಹಾಕಿ ರುವ ಜಲ್ಲಿಯನ್ನು ತೆಗೆದು ಹೊಸದಾಗಿ ಕಾಮ ಗಾರಿ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಹೊಳೆಬೀದಿಯ ಹೊಯ್ಸಳ ಶಾಲೆಯ ಪಕ್ಕದಲ್ಲಿರುವ ಮಲಮೂತ್ರ ಶೇಖರಣೆಯ ಭಸ್ಮೀಕರಣ ಹೊಂಡದಿಂದ ಗಬ್ಬು ವಾಸನೆ ಬರುತ್ತಿದ್ದು ನಾವುಗಳು ಶಾಲೆಯಲ್ಲಿ ಕುಳಿತು ಪಾಠ ಕೇಳಲು ಆಗು ತ್ತಿಲ್ಲ. ಆರೋಗ್ಯ ಕೆಡುತ್ತಿದೆ. ಭಸ್ಮೀಕರಣ ಹೊಂಡವನ್ನು ಬೇರೆಡೆಗೆ ಸ್ಥಳಾಂತರಿಸ ಬೇಕೆಂದು ವಿದ್ಯಾರ್ಥಿನಿ ಪೂಜಾ ಆಗ್ರಹಿಸಿ ದರು. ಶ್ರೀಧರ್ ಮಾತನಾಡಿ, ಭಸ್ಮೀಕರಣ ಹೊಂಡಕ್ಕೆ ಮಲಮೂತ್ರದ ನೀರು ನದಿಗೆ ಹರಿಯುತ್ತಿದೆ. ನಿಯಮದ ಪ್ರಕಾರ ಮಲ ಮೂತ್ರದ ನೀರನ್ನು ನದಿಗೆ ಬಿಡುವಂತಿಲ್ಲ. ಇದರಿಂದ ನದಿಯಲ್ಲಿನ ನೀರು ಕಲುಷಿತ ಗೊಂಡಿದ್ದು ಜನ ಜಾನುವಾರುಗಳು ಕುಡಿ ಯಲು ಆಗುತ್ತಿಲ್ಲ. ನದಿ ಪಾತ್ರದ ಗ್ರಾಮಗಳ ಜನ ಯಾತನೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರ ಅಹವಾಲು ಆಲಿ ಸಿದ ಶಾಸಕ ಕೆ.ಎಸ್.ಲಿಂಗೇಶ್ ಮಾತ ನಾಡಿ, ಭಸ್ಮೀಕರಣ ಹೊಂಡದಿಂದ ಆಗುತ್ತಿ ರುವ ಸಮಸ್ಯೆಯನ್ನು ಕೂಲಂಕುಷವಾಗಿ ತಿಳಿದು ಕೊಂಡಿದ್ದೇನೆ. ಭಸ್ಮೀಕರಣ ಹೊಂಡ ಸ್ಥಳಾಂ ತರಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದರು.
ಈ ಸಂದರ್ಭ ಪುರಸಭಾ ಅಧ್ಯಕ್ಷೆ ಭಾರತಿ, ಸದಸ್ಯ ಗಿರೀಶ್, ನಾಗರಿಕರಾದ ಪುನೀತ್, ನವೀದ್‍ಪಾಷ, ಅಬ್ದುಲ್ ನವಾಬ್ ಸಾಹೇಬ್, ವೆಂಕಟರಮಣ ಶೆಟ್ಟಿ, ಸುರೇಶ್, ದ್ರಾಕ್ಷಾ ಯಿಣಿ ಇತರರು ಇದ್ದರು.

Translate »