ಹಾಡಹಗಲೇ ಕತ್ತುಕೊಯ್ದು ಮಹಿಳೆ ಹತ್ಯೆ
ಮೈಸೂರು

ಹಾಡಹಗಲೇ ಕತ್ತುಕೊಯ್ದು ಮಹಿಳೆ ಹತ್ಯೆ

July 26, 2019

ಮೈಸೂರು, ಜು. 25(ಆರ್‍ಕೆ)- ಹಾಡ ಹಗಲೇ ಕತ್ತು ಕೊಯ್ದು ಮಹಿಳೆಯನ್ನು ಹತ್ಯೆಗೈದಿರುವ ಘಟನೆ ಮೈಸೂರಿನ ಗಾಯತ್ರಿ ಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಗಾಯಿತ್ರಿಪುರಂ 2ನೇ ಹಂತ, 2ನೇ ಕ್ರಾಸ್ ನಿವಾಸಿ ನದೀಮ್ ಅವರ ಪತ್ನಿ ಶ್ರೀಮತಿ ರೇಶ್ಮಾ(25) ಎಂಬುವರೇ ಬರ್ಬರವಾಗಿ ಹತ್ಯೆಯಾದವರಾಗಿದ್ದು, ಪತಿಯೇ ಈ ಕೃತ್ಯ ಎಸಗಿದ್ದಾನೆಂದು ಸ್ಥಳೀಯ ನಿವಾಸಿ ಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ 11-30 ಗಂಟೆ ವೇಳೆಗೆ ರೇಶ್ಮಾ ಅವರು ರಕ್ತದ ಮಡುವಿನಲ್ಲಿ ಶವ ವಾಗಿ ಬಿದ್ದಿದ್ದನ್ನು ಕಂಡ ನೆರೆ ಹೊರೆಯ ವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಜರ್‍ಬಾದ್ ಠಾಣೆ ಇನ್‍ಸ್ಪೆಕ್ಟರ್ ಮಹ ದೇವಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು.

ಕಳೆದ 5 ವರ್ಷಗಳ ಹಿಂದೆ ಮದುವೆ ಯಾಗಿದ್ದ ನದೀಮ್, ನಲ್ಲಿ ರಿಪೇರಿ ಕೆಲಸ ಮಾಡಿಕೊಂಡು ಕ್ಯಾತಮಾರನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದೂವರೆ ತಿಂಗಳ ಹೆಣ್ಣು ಮಗುವಿದೆ. ಪತ್ನಿಯೊಂದಿಗೆ ಪ್ರತೀ ದಿನ ಜಗಳವಾಡು ತ್ತಿದ್ದರಿಂದ ಮನೆ ಮಾಲೀಕರು ಮನೆ ಖಾಲಿ ಮಾಡಿಸಿದ್ದರು ಎಂಬುದು ಮಹ ಜರು ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ಮೂರು ದಿನಗಳ ಹಿಂದಷ್ಟೇ ಗಾಯಿತ್ರಿ ಪುರಂನ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಾಗಿದ್ದ ದಂಪತಿ ಇಲ್ಲಿಯೂ ಜಗಳವಾಡುತ್ತಿದ್ದರು. ಬುಧವಾರ ರಾತ್ರಿ ಜಗಳ ತಾರಕಕ್ಕೇರಿ ರೇಶ್ಮಾ ಆತ್ಮಹತ್ಯೆಗೆ ಮುಂದಾ ದಾಗ ನೆರೆಹೊರೆಯವರೇ ಬಂದು ಚಿಕ್ಕ ಚಿಕ್ಕ ಮಕ್ಕಳು ಅನಾಥರಾಗುತ್ತಾರೆ ಎಂದು ಬುದ್ಧಿವಾದ ಹೇಳಿ ಸುಮ್ಮನಿರಿಸಿದ್ದರು.

ಜಗಳದಿಂದ ಬೇಸತ್ತ ಪತಿ ನದೀಮ್ ರಾತ್ರಿಯೇ ಹೊರಹೋದವನು ಬಂದಿರ ಲಿಲ್ಲ. ಇಂದು ಬೆಳಿಗ್ಗೆ ರೇಶ್ಮಾಳನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದ್ದು, ಮಕ್ಕಳು ಅನಾಥವಾಗಿವೆ ಎಂದು ನೆರೆ ಹೊರೆ ಯವರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಿದರು. ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿ ಕೊಂಡಿರುವ ನದೀಮ್ ಪತ್ತೆಗೆ ಪೊಲೀ ಸರು ಶೋಧ ನಡೆಸುತ್ತಿದ್ದಾರೆ.

 

 

Translate »