ಶಬರಿಮಲೆ ವಿವಾದ: ರೆಹಾನ ವಿರುದ್ಧ ಶಿಸ್ತುಕ್ರಮ ಸಾಧ್ಯತೆ
ಮೈಸೂರು

ಶಬರಿಮಲೆ ವಿವಾದ: ರೆಹಾನ ವಿರುದ್ಧ ಶಿಸ್ತುಕ್ರಮ ಸಾಧ್ಯತೆ

October 23, 2018

ಕೊಚ್ಚಿ: ಶಬರಿಮಲೆ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದ ಕೇರಳದ ಮಾನವ ಹಕ್ಕು ಹೋರಾಟಗಾರ್ತಿ ರೆಹಾನ ಫಾತಿಮಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿರುವ ಬಿಎಸ್‍ಎನ್‍ಎಲ್ ಇದೀಗ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವನ್ನು ನೀಡಿದೆ.

ಆಂತರಿಕ ತನಿಖೆ ಬಳಿಕ ಶಿಸ್ತು ಕ್ರಮ ಕೈಗೊಂಡಿರುವ ಬಿಎಸ್‍ಎನ್‍ಎಲ್ ಫಾತಿಮಾ ಅವರನ್ನು ಕೊಚ್ಚಿಯ ರವಿಪುರಂ ಬ್ರಾಂಚ್‍ಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ. ರೂಪದರ್ಶಿಯಾಗಿರುವ ಹೋರಾಟಗಾರ್ತಿ ರೆಹಾನ ಅವರು ಎರ್ನಾಕುಲಂ ಮೂಲದವರಾ ಗಿದ್ದು, ಕೊಟ್ಟಿ ಬೋಟ್ ಜೆಟ್ಟಿ ಬ್ರ್ಯಾಂಚ್‍ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿ ಸುತ್ತಿದ್ದರು. ಇದೀಗ ಅವರಿಗೆ ವರ್ಗಾವಣೆ ಮಾಡಲಾಗಿದ್ದು, ಸಾರ್ವಜನಿಕರೊಂದಿಗೆ ಸಂಪರ್ಕವಿಲ್ಲದ ಪೆÇೀಸ್ಟ್‍ವೊಂದನ್ನು ನೀಡಲಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವಂತಹ ಪೆÇೀಸ್ಟ್‍ವೊಂದನ್ನು ರೆಹಾನ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆಂದು ಕೇರಳ ಪೆÇಲೀಸರು ನಿನ್ನೆಯಷ್ಟೇ ರೆಹಾನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಲಕ್ಷಾಂತರ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಈ ಹಿಂದೆ ರೆಹಾನ ಅವರನ್ನು ಕೇರಳ ಮುಸ್ಲಿಂ ಮಮಾತ್ ಮಂಡಳಿಯಿಂದ ಉಚ್ಚಾಟನೆಗೊಳಿಸಿತ್ತು.

Translate »