ಕೊಡಗು ಸಂತ್ರಸ್ತರಿಗೆ ನೆರವು
ಕೊಡಗು

ಕೊಡಗು ಸಂತ್ರಸ್ತರಿಗೆ ನೆರವು

November 19, 2018

ವಿರಾಜಪೇಟೆ:  ಕೊಡಗು ಸಂತ್ರಸ್ತರಿಗಾಗಿ ವಿದ್ಯಾರ್ಥಿಗಳು ಇತರರಿಂದ ಸಂಗ್ರಹ ಮಾಡಿದ ರೂ. ಒಂದು ಲಕ್ಷ ಹಣವನ್ನು ಮಳೆಯಿಂದ ಆಸ್ತಿ ಮನೆ ಕಳೆದು ಕೊಂಡ 12 ನಿರಾಶ್ರಿತರಿಗೆ ನೀಡಿದ್ದಾರೆ. ವಿರಾಜಪೇಟೆಯ ಮಂಡೆಪಂಡ ಸುಜಾ ಕುಶಾಲಪ್ಪ ಅವರ ಕಿರಿಯ ಪುತ್ರ ನಿಶಾಂಕ್ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ಅಜ್ಜಮಾಡ ತಿಮ್ಮಯ್ಯ ಅವರ ಪುತ್ರ ಚಂಗಪ್ಪ, ಚಾರಿಮಂಡ ಕಾವೇರಪ್ಪ ಅವರ ಪುತ್ರ ಬಿದ್ದಪ್ಪ, ಕೊಲ್ಲಿರ ಭರತ್, ಗಗನ್ ಮುತ್ತಪ್ಪ, ಪಟ್ಟಡ ರಕ್ಷಿತ್ ಹಾಗೂ ಜಾನ್ಹವಿ ಅವರುಗಳು ಇತರರಿಂದ ಸಂಗ್ರಹಿಸಿದ್ದ ಒಂದು ಲಕ್ಷ ಹಣವನ್ನು ಆಸ್ತಿ ಮನೆ ಕಳೆದುಕೊಂಡ ಮಾದಾಪುರದ ಮುಕ್ಕಟ್ಟಿರ ತಂಗಮ್ಮ ಉತ್ತಯ್ಯ, ನಿಡುಗಣೆಯ ಸೋಮಣ್ಣ, ಹೆಬ್ಬಟ್ಟಗೇರಿಯ ಬೊಟ್ಟೊಳಂಡ ಅಪ್ಪಿ, ಮಡಿಕೇರಿಯ ಮುಂಡಂಡ ಬೇಬಿ, ಕಾಲೂರು ಗ್ರಾಮದ ಹರೀಶ್, ಅಯ್ಯಣ್ಣ ಮತ್ತು ಪೂವಯ್ಯ, ಮೇಗತಾಳುವಿನ ಶಾರದ ಮತ್ತು ಪೂವಯ್ಯ, ಹೆಮ್ಮೆತಾಳು ನೀಲಮ್ಮ, ನಿಡುಗಣೆಯ ಬೊಳ್ಳೆರ ಸೋಮಣ್ಣ, ಮತ್ತು ಕಾರೇರ ಸುನಿ ಚೋಂದಮ್ಮ ಅವರಿಗೆ ನೀಡಿರುವುದಾಗಿ ನಿಶಾಂಕ್ ಪೊನ್ನಪ್ಪ ತಿಳಿಸಿದರು.

Translate »