ವಿರಾಜಪೇಟೆ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ
ಕೊಡಗು

ವಿರಾಜಪೇಟೆ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ

November 19, 2018

ಗೋಣಿಕೊಪ್ಪಲು:  ತುರ್ತು ಸಭೆಗೆ ಆಹ್ವಾನಿಸಿ ಗೈರು ಹಾಜರಾಗಿದ್ದ ವಿರಾಜ ಪೇಟೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರನ್ನು ವಿರಾಜಪೇಟೆ ತಾಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆ ತೆಗೆ ದುಕೊಂಡ ಘಟನೆ ನಡೆಯಿತು.

ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋ ಜಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷ ನೆಲ್ಲೀರ ಚಲನ್ ತರಾಟೆಗೆ ತೆಗೆದುಕೊಂಡರು. ನವೆಂಬರ್ ಮೊದಲ ವಾರದಲ್ಲಿ ಕರೆ ದಿದ್ದ ಸಭೆಗೆ ಜನಪ್ರತಿನಿಧಿ, ಅಧಿಕಾರಿಗಳನ್ನು ಆಹ್ವಾನಿಸಿ, ಇಓ ಗೈರಾಗಿರುವ ಬಗ್ಗೆ ಪ್ರಶ್ನಿ ಸಿದರು. ಅನಾರೋಗ್ಯ ಎಂದು ಜಾರಿಕೊ ಳ್ಳುವ ಉತ್ತರ ನೀಡಬೇಡಿ. ಅಭಿವೃದ್ಧಿ ಯೋಜ ನೆಗಳ ಕ್ರಿಯಾಯೋಜನೆ ರೂಪಿಸಲು ಅಂದು ಸಭೆ ಕರೆದಿದ್ದರೂ ಬಾರದಿರುವುದ ರಿಂದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಸದಸ್ಯರಿಗೆ ನೀಡಬೇಕಾದ ಗೌರವ ಧನ ವಿತರಣೆಯಲ್ಲೂ ವಿಳಂಭ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿ ಯತ್ತ ಗಮನ ಹರಿಸಿ ಎಂದು ಸೂಚಿಸ ಲಾಯಿತು. ತಾಲೂಕಿನಲ್ಲಿ ರಸ್ತೆ ಹದಗೆಟ್ಟಿ ದ್ದರೂ ಯೋಜನೆಗಳ ಮಾಹಿತಿ ನೀಡಲು ಅಧಿಕಾರಿಗಳು ಸಭೆಗೆ ಬಾರದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿದ್ದರು.

ಕಣ್ಣಂಗಾಲ ಗ್ರಾಮದಲ್ಲಿ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಅಳವಡಿ ಸಲು ಸ್ಥಳೀಯರೊಬ್ಬರು ಮರ ಕಡಿ ಯಲು ಅವಕಾಶ ನೀಡದಿರುವುದರಿಂದ ಯೋಜನೆ ಅಪೂರ್ಣಗೊಂಡಿದೆ. ಇದರಿಂ ದಾಗಿ ಕುಡಿಯುವ ನೀರು ನೀಡಲು ಆಗು ತ್ತಿಲ್ಲ ಎಂದು ಸೆಸ್ಕ್ ಅಧಿಕಾರಿಗಳು ಮಾಹಿತಿ ನೀಡಿದರು. ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಮರ ಕಡಿಯುವಂತೆ ಸೂಚಿಸಿದ್ದರು ಪ್ರಯೋಜನವಾಗುತ್ತಿಲ್ಲ ಎಂದು ಪಿಡಿಒ ಹೇಳಿದರು.

ತಾಲೂಕಿನ ನಿವೇಶನ ರಹಿತರಿಗೆ ವಿತ ರಿಸಲು ವಶಕ್ಕೆ ಪಡೆದಿರುವ ಒತ್ತುವರಿ ಜಾಗವನ್ನು ಫಲಾನುಭವಿಗಳಿಗೆ ಹಸ್ತಾಂ ತರ ಮಾಡಲು ಗ್ರಾಮ ಪಂಚಾಯ್ತಿ ಪಿಡಿಒ ಅವರಿಗೆ ಜವಬ್ದಾರಿ ನೀಡಲಾಗಿದೆ. ಅವರು ವಶಕ್ಕೆ ತೆಗೆದುಕೊಂಡು ಫಲಾನುಭವಿಗಳಿಗೆ ನೀಡಬೇಕಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು. ಕೆದಮು ಳ್ಳೂರುವಿನಲ್ಲಿರುವ ಮಧುವನ ಜಾಗವನ್ನು ವಶಕ್ಕೆ ಪಡೆಯುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು. ಬಿರುನಾಣಿ ವ್ಯಾಪ್ತಿಯಲ್ಲಿ ಮಳೆ ನಿಂತರೂ ಕೂಡ ವಿದ್ಯುತ್ ಸಮಸ್ಯೆ ಪರಿಹಾರ ಕಂಡಿಲ್ಲ. ಬಹುತೇಕ ದಿನಗಳಲ್ಲಿ ವಿದ್ಯುತ್ ದೊರಕುತ್ತಿಲ್ಲ. ಗೋಣಿಕೊಪ್ಪ ಪಟ್ಟಣದ ಲ್ಲಿಯೇ ವಿದ್ಯುತ್ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಸೆಸ್ಕ್ ಅಧಿಕಾರಿಗಳು ವಿಶೇಷ ಸಭೆ ಕರೆಯಬೇಕು ಎಂದು ಅಧಿಕಾರಿ ಗಳಿಗೆ ಸೂಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಜೆನಿಶ್ ಹಾಗೂ ವಿವಿಧ ಇಲಾಖೆ ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Translate »