ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರತಾಪ ಸಿಂಹ ಮಂಗಳವಾರ ರಾತ್ರಿ ಮೈಸೂರಿನ ಉತ್ತರಾದಿ ಮಠದ ಶ್ರೀ ಸತ್ಯಸಂಕಲ್ಪ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕೊಂಡರು. ಕೆಲ ಹೊತ್ತು ಮಠದಲ್ಲಿ ಸ್ವಾಮೀಜಿಯವರೊಂದಿಗೆ ಸಮಾ ಲೋಚನೆ ನಡೆಸಿದರು.
ಮೈಸೂರು-ಕೊಡಗು ಜಿಲ್ಲೆಯಲ್ಲಿ ತೀವ್ರ ಪ್ರಚಾರದಲ್ಲಿ ತೊಡಗಿರುವ ಪ್ರತಾಪಸಿಂಹ ಕಾರ್ಯ ಒತ್ತಡದ ನಡುವೆ ವಿವಿಧ ನಾಯಕರನ್ನು ಸಹ ಭೇಟಿ ಮಾಡಿ ಪಕ್ಷದ ಗೆಲುವಿಗೆ ಸಹಕಾರ ಕೋರುತ್ತಿದ್ದಾರೆ. ಅವರು ಹೋದ ಕಡೆಯೆಲ್ಲಾ ಹೆಚ್ಚು ಸಂಖ್ಯೆಯಲ್ಲಿ ಬೆಂಬಲಿಗರು ಸೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ