ಕಾರು ಅಪಘಾತ: ಸಚಿವ ಜಿಟಿಡಿ ಪಾರು
ಮೈಸೂರು

ಕಾರು ಅಪಘಾತ: ಸಚಿವ ಜಿಟಿಡಿ ಪಾರು

April 3, 2019

ಮೈಸೂರು: ರಸ್ತೆ ಅಪಘಾತದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಅಪಾಯದಿಂದ ಪಾರಾಗಿ ದ್ದಾರೆ. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ.

ಸಚಿವರು ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇ ಶ್ವರಿ ದರ್ಶನ ಪಡೆದು, ಪುತ್ರ ಜಿ.ಡಿ. ಹರೀಶ್ ಗೌಡ, ಆಪ್ತ ಸಹಾಯಕ ಹನುಮೇಶ್ ಹಾಗೂ ಗನ್‍ಮ್ಯಾನ್ ಜೊತೆ ಇನ್ನೋವಾ ಕಾರಿನಲ್ಲಿ ರಿಂಗ್ ರಸ್ತೆ ಮೂಲಕ ಚುನಾವಣಾ ಪ್ರಚಾರಕ್ಕೆಂದು ಮಂಡ್ಯಕ್ಕೆ ತೆರಳುತ್ತಿದ್ದರು.

ಬೆಂಗಳೂರು-ಮೈಸೂರು ರಸ್ತೆಗೆ ತಿರುವು ತೆಗೆದುಕೊಂಡು ಮಂಡ್ಯದತ್ತ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಲಾರಿ, ಕಾರು ಹಿಂದಿಕ್ಕಲು ಹೋಗಿ ಸಚಿವರ ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಸಚಿವರ ಇನ್ನೋವಾ ಕಾರಿನ ಎಡ ಭಾಗÀದ ಮುಂದಿನ ಬಾಗಿಲು ಹಾಗೂ ಬಾನೆಟ್ ಜಖಂಗೊಂಡಿತಾದರೂ, ಅದರಲ್ಲಿದ್ದ ಜಿ.ಟಿ.ದೇವೇಗೌಡರು, ಪುತ್ರ ಜಿ.ಡಿ. ಹರೀಶ್ ಗೌಡ, ಹನುಮೇಶ್, ಗನ್‍ಮ್ಯಾನ್ ಹಾಗೂ ಕಾರು ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾದರು.

ವಿಷಯ ತಿಳಿಯುತ್ತಿದ್ದಂತೆಯೇ ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್, ಎನ್.ಆರ್.ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಯೋಗೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡರು. ನಂತರ ಸಚಿ ವರು ಅಪಘಾತಕ್ಕೀಡಾದ ಇನ್ನೋ ವಾವನ್ನು ರಿಪೇರಿಗೆ ಕಳುಹಿಸಿ, ಬೇರೊಂದು ಕಾರನ್ನು ತರಿಸಿಕೊಂಡು ಮಂಡ್ಯಕ್ಕೆ ತೆರಳಿದರು.

Translate »