ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಇಂದು ಹಿನಕಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಬೆಳಿಗ್ಗೆ ಹಿನಕಲ್ನ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್ಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಹೇಮಂತ ಕುಮಾರ್ ಗೌಡ ಅವರೊಂದಿಗೆ ಹುಣಸೂರು ರಸ್ತೆ, ನಾಯ ಕರ ಬೀದಿ, ಲಿಂಗಾಯಿತರ ಬೀದಿ ಸೇರಿ ದಂತೆ ಹಲವು ಕಡೆ ಪ್ರಚಾರ ನಡೆಸಿದರು.
ಪ್ರಮುಖ ಮುಖಂಡರನ್ನು ಭೇಟಿ ಮಾಡಿದ ಪ್ರತಾಪ್ ಸಿಂಹ, ಒಕ್ಕಲಿಗರ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಲು ತಾವು ಸಂಘಟಿತರಾಗಿ ಚುನಾ ವಣೆಯಲ್ಲಿ ಪ್ರಚಾರ ನಡೆಸಿ ತಮ್ಮ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ನಂತರ ಗ್ರಾಮದ ಮಾರಿಗುಡಿಯಲ್ಲಿ ಪೂಜೆ ನೆರವೇರಿಸಿದ ಅವರು, ಮಾರಮ್ಮ ದೇವಾಲಯದ ಬಳಿ ಹಬ್ಬದ ಅಂಗವಾಗಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿ, ತಾವು 5 ವರ್ಷದ ಅವಧಿಯಲ್ಲಿ ಸಂಸದ ನಾಗಿ ಮೈಸೂರಿನಲ್ಲಿ ಮಾಡಿದ ಅಭಿವೃದ್ಧಿ ಯೋಜನೆಗಳು ಹಾಗೂ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಳಿಗ್ಗೆ 8ರಿಂದ 10.30 ಗಂಟೆವರೆಗೆ ಚುನಾ ವಣಾ ಪ್ರಚಾರ ಮಾಡಿದ ಪ್ರತಾಪ್ ಸಿಂಹ, ನಂತರ ವಿಚಾರಣೆಯೊಂದರ ಸಲುವಾಗಿ ಕೋರ್ಟ್ಗೆ ತೆರಳಿದರು.
ಪೈ. ರವಿ, ಗೋಪಾಲಗೌಡ, ಶ್ರೀನಿ ವಾಸ, ರಾಜಕುಮಾರ್, ಮಂಜುನಾಥ, ಗಣೇಶ, ಸ್ನೆಹಾ, ಪಾಪಣ್ಣ, ಮಹೇಶ, ಹರೀಶಗೌಡ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಪ್ರಚಾರದ ವೇಳೆ ಪ್ರತಾಪ್ ಸಿಂಹರೊಂದಿಗಿದ್ದರು.