ಕೊರೊನಾ ಪರಿಸ್ಥಿತಿ ಚಿತ್ರರಂಗದ ಮೇಲೆ ಭಾರೀ ಪರಿಣಾಮ ಬೀರಿದ್ದರೂ, ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರ ಖುಷಿಯಾಗಿದ್ದು, ಒಂದಲ್ಲಾ ಒಂದು ಸುದ್ದಿ ಕೊಡುತ್ತಲೇ ಇದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ರಚಿತಾರಾಮ್ ಅವತು ತಮ್ಮ ಅಭಿಮಾನಿಗಳಿಗೆ ಖುಷಿಕೊಡುವ ವಿಚಾರವನ್ನು ಹಂಚಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಸೂಪರ್ ಹಿಟ್ ಚಿತ್ರವೊಂದರ ಕನ್ನಡ ಅವತರಿಣಿಕೆಯಲ್ಲಿ ರಚಿತಾರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕೊಲಮಾವು ಕೋಕಿಲ ಚಿತ್ರದ ರಿಮೇಕ್ನಲ್ಲಿ ರಚಿತಾರಾಮ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ಬಿಡುಗಡೆಗೊಂಡಿರುವ ಕೊಲಮಾವು ಕೋಕಿಲ ಚಿತ್ರದಲ್ಲಿ ನಯನತಾರಾ ಅಭಿನಯಿಸಿದ್ದು,…
ಕೆಜಿಎಫ್, ಮದಗಜ, ಭಜರಂಗಿ ಚಿತ್ರೀಕರಣ ಸದ್ಯದಲ್ಲೇ ಆರಂಭ !
August 7, 2020ಕಳೆದ ನಾಲ್ಕೂವರೆ ತಿಂಗಳಿಂದ ಸ್ಥಗಿತವಾಗಿದ್ದ ಕನ್ನಡ ಚಿತ್ರರಂಗದ ಚಟುವಟಿಕೆಗಳು ನಿಧಾನಗತಿಯಲ್ಲಿ ಆರಂಭವಾಗುತ್ತಿವೆ. ಈ ಮೂಲಕ ಚಿತ್ರೋದ್ಯಮದಲ್ಲಿ ಚೇತರಿಕೆ ಕಂಡುಬಂದಿದೆ. ಈಗಾಗಲೇ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಜಾಕ್ಮಂಜು ಹೈದ್ರಾಬಾದ್ನಲ್ಲಿ ಕಳೆದ 20 ದಿನಗಳಿಂದಲೂ ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಸುತ್ತಿದ್ದಾರೆ. ಕೊರೊನಾ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ಮುಂಜಾಗ್ರತೆ ವಹಿಸಿರುವ ಕಾರಣ ಈವರೆಗೆ ಯಾವುದೇ ಒಂದು ಸಣ್ಣ ತೊಂದರೆ ಕೂಡ ಸಂಭವಿಸದೆ ಯಶಸ್ವಿಯಾಗಿ ಶೂಟಿಂಗ್ ಸಾಗಿದೆ. ಇವರನ್ನು ನೋಡಿ ಸ್ಫೂರ್ತಿ ಪಡೆದ ಬೇರೆ…
‘ರತ್ನನ್ ಪ್ರಪಂಚ’ದಲ್ಲಿ ಡಾಲಿ ಧನಂಜಯ್
August 7, 2020ನಿರ್ಮಾಪಕ ವಿಜಯ್ ಕಿರಗಂಡೂರ್ ಅವರು ಕೆಆರ್ಜೆ ಸ್ಟುಡಿಯೋಸ್ನ ಮೊದಲ ನಿರ್ಮಾಣವಾದ `ರತ್ನನ್ ಪ್ರಪಂಚ’ ಚಿತ್ರದ ಸಿದ್ಧತೆ ನಡೆಸಿದ್ದಾರೆ. ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ರೋಹಿತ್ ಪಡಕಿ ನಿರ್ದೇಶನದ ಕಾಮಿಡಿ ಡ್ರಾಮಾ ಆಗಿರಲಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಮೂರು ವರ್ಷಗಳಿಂದ ಚಿತ್ರ ವಿತರಣೆ ಕ್ಷೇತ್ರದಲ್ಲಿರುವ ಕೆಆರ್ ಜೆ ಸ್ಟುಡಿಯೋಸ್ ಕಂಪನಿಯು ಇತ್ತೀಚೆಗೆ ತಮ್ಮದೇ ಡಿಜಿಟಲ್ ಮಾರ್ಕೆಟಿಂಗ್ ಸೆಲ್ಯೂಷನ್ ಪ್ರಾರಂಭಿಸಿದೆ. ಕೆಆರ್ ಜೆ ಕನೆಕ್ಟ್ಸ್. ಎಂಬ ಹೆಸರಿನಲ್ಲಿ ಈ…
ಇಂಡಿಯನ್ ಫಿಲಂ ಮೇಕರ್ಸ್ಗೆ ಚಾಲನೆ
August 7, 2020ಕನ್ನಡ ಚಿತ್ರರಂಗ ಈಗ ಉದ್ಯಮವಾಗಿ ಬೆಳೆದುನಿಂತಿದೆ. ಫಿಲಂ ಚೇಂಬರ್, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ ಸೇರಿದಂತೆ ಉದ್ಯಮಕ್ಕೆ ಸಂಬಂಧಪಟ್ಟ ಬಹುತೇಕ ವಿಭಾಗಗಳಿಗೆ ಅದರದೇ ಆದ ಸಂಘ, ಸಂಸ್ಥೆಗಳಿವೆ. ಅವೆಲ್ಲ ಸದಸ್ಯರ ಕಷ್ಟ, ನಷ್ಟಗಳಿಗೆ ಸ್ಪಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅದೇರೀತಿ ಚಿತ್ರರಂಗದ 27 ವಿಭಾಗಗಳನ್ನು ಗಮನದಲ್ಲಿಟ್ಟುಕೊಂಡು “ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್” ಎನ್ನುವ ಸಂಸ್ಥೆ ಆರಂಭವಾಗಿದೆ. ಇದು ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಇದರ ನೇತೃತ್ವವನ್ನು ನಿರ್ಮಾಪಕ ಪಿ.ಮೂರ್ತಿ…
ಕೆಜಿಎಫ್ ಚಾಪ್ಟರ್-2 ತಂಡದಿಂದ `ಅಧೀರ’ನ ಫಸ್ಟ್ ಲುಕ್ ಬಿಡುಗಡೆ!
July 31, 2020ಚಿತ್ರದ ಶೂಟಿಂಗ್ ಆರಂಭಗೊಂಡ ದಿನದಿಂದಲೂ ಕೆಜಿಎಫ್ ಚಾಪ್ಟರ್ 2 ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕುತ್ತಲೇ ಇದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಅಲ್ಲಿಯವರೆಗೆ ಚಿತ್ರದ ಬಗ್ಗೆ ಹೊಸ ಹೊಸ ವಿಷಯಗಳನ್ನು ಚಿತ್ರತಂಡ ಚಿತ್ರಪ್ರೇಮಿಗಳಿಗೆ ನೀಡಲಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿ ಬಾಯ್ಗೆ ಎದುರಾಗಿ ವಿಲನ್ ಪಾತ್ರದಲ್ಲಿ ಮಿಂಚುತ್ತಿರುವವರು ಬಾಲಿವುಡ್ನ ಖಳನಾಯಕ ಸಂಜುಬಾಬಾ ಅಲಿಯಾಸ್ ಸಂಜಯ್ ದತ್. ಅವರ ಹುಟ್ಟುಹಬ್ಬ. ಸಂದರ್ಭದಲ್ಲಿ ಉಡುಗೊರೆಯಾಗಿ ಚಿತ್ರತಂಡ ಅವರ ಫಸ್ಟ್ ಲುಕ್ನ್ನು ಬಿಡುಗಡೆ ಮಾಡಿದೆ. ಕ್ರೂರ ಮಾರ್ಗದಿಂದ…
ವರಮಹಾಲಕ್ಷ್ಮಿ ಹಬ್ಬದಲ್ಲಿ ಕಾಲಚಕ್ರ ಹಾಡು
July 31, 2020ವಸಿಷ್ಠ ಸಿಂಹ ನಾಯಕರಾಗಿರುವ ರಶ್ಮಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ರಶ್ಮಿ ಕೆ. ನಿರ್ಮಿಸಿರುವ ಕಾಲಚಕ್ರ ಚಿತ್ರದ ‘ತರಗೆಲೆ’ ಎಂಬ ಹಾಡನ್ನು ಚಿತ್ರತಂಡ ವರಮಹಾಲಕ್ಷ್ಮಿ ಹಬ್ಬದ ಈದಿನ ಸಂಜೆ 6 ಗಂಟೆಗೆ ಆನಂದ್ ಆಡಿಯೋದಲ್ಲಿ ಬಿಡುಗಡೆ ಮಾಡಲಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡಿಗೆ ಕೈಲಾಷ್ ಕೇರ್ ದನಿಯಾಗಿz್ದÁರೆ. ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿz್ದÁರೆ. ಸುಮಂತ್ ಕ್ರಾಂತಿ ಅವರ ರಚನೆ ಹಾಗೂ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ…
ರಾಕ್ಸ್ಟಾರ್ ಅವತಾರದಲ್ಲಿ ರಾಬರ್ಟ್
July 31, 2020ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಚಿತ್ರ ರಾಬರ್ಟ್ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ತರುಣ್ ಸುಧೀರ್ ಅವರ ನಿರ್ದೇಶನವಿ4ರುವ ಈ ಚಿತ್ರದ ಹೊಸ ಪೆÇೀಸ್ಟರನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿದೆ. ಇದರಲ್ಲಿ ನಟ ದರ್ಶನ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿz್ದÁರೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಈ ಹೊಸ ಪೆÇೀಸ್ಟರನ್ನು ಬಿಡುಗಡೆ ಮಾಡಲಾಗಿದ್ದು, ಇದರ ವಿಶೇಷತೆ ಏನೆಂದರೆ ಕೈನಲ್ಲಿ ಸಿಗಾರ್ ಹಿಡಿದಿರುವ ದರ್ಶನ್…
ಮತ್ತೆ ಬರ್ತಿದ್ದಾರೆ ಕಾವ್ಯಾಂಜಲಿ ಸಹೋದರಿಯರು
July 31, 2020ಕಿರುತೆರೆಯಲ್ಲಿ ಇತ್ತೀಚೆಗೆ ಡಬ್ಬಿಂಗ್ ಧಾರಾವಾಹಿಗಳ ಅಬ್ಬರವೇ ಜೋರಾಗಿರುವಾಗ ಇದೀಗ ಅಪ್ಪಟ ಕನ್ನಡತನ ಇರುವ ಧಾರಾವಾಹಿ ಯೊಂದು ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಎಲ್ಲಾ ವರ್ಗದ ಜನರ ಅಭಿರುಚಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನೂತನ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಾ ಬಂದಿರುವ ಉದಯ ವಾಹಿನಿ ಈಗ `ಕಾವ್ಯಾಂಜಲಿ’ ಎಂಬ ಅಪ್ಪಟ ಕನ್ನಡತನ ಹೊಂದಿರುವ ಧಾರಾವಾಹಿ ಯನ್ನು ಆಗಸ್ಟ್ 3ರಂದು ಆರಂಭಿಸುತ್ತಿದೆ. ಈಗಾಗಲೇ ನಂದಿನಿ, ಕಸ್ತೂರಿ ನಿವಾಸ, ಸೇವಂತಿ, ಮನಸಾರೆಯಂತಹ ಕೌಟುಂಬಿಕ ಸಂಬಂಧಗಳ ಮಹತ್ವ ಹೇಳುವ ಧಾರಾವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಉದಯ ವಾಹಿನಿ…
ಶಿವಣ್ಣ ನೂತನ ಚಿತ್ರದ ಪೋಸ್ಟರ್ ಬಿಡುಗಡೆ
July 24, 2020ಸೆಂಚುರಿಸ್ಟಾರ್ ಶಿವರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ನಟನೆಯ ನೂತನ ಚಿತ್ರದ ಪೆÇೀಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪೆÇ್ರಡP್ಷÀನ್ ನಂ 1 ಎಂಬ ಶೀರ್ಷಿಕೆಯಿರುವ ಈ ಚಿತ್ರವನ್ನು ರಾಮ್ ದುಲಿಪುಡಿ ಅವರು ನಿರ್ದೇಶಿಸುತ್ತಿz್ದÁರೆ. ತೆಲುಗಿನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಇವರಿಗೆ, ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ. ಎಮೋಷನಲ್ ಹಾಗೂ ಮಿಲಿಟರಿ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತೆಲುಗಿನ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನರಳ ಶ್ರೀನಿವಾಸ ರೆಡ್ಡಿ ಅವರು ನಿರ್ಮಿಸುತ್ತಿz್ದÁರೆ. ಕುಡಿಪುಡಿ ವಿಜಯಕುಮಾರ್ ಈ…
`ಕಂಸ’ನ ಬೆಡಗಿಯಾಗಿ ಸಾಯಿಪಲ್ಲವಿ
July 24, 2020ಟಾಲಿವುಡ್ನ ಪ್ರೇಮಂ, ಕಲಿ, ಮಾರಿ 2 ಸೇರಿದಂತೆ ಹಲವಾರು ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸಿದ ಮಲಯಾಳಿ ಕುಟ್ಟಿ ಸಾಯಿಪಲ್ಲವಿ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆಕೆ ಈಗ ಲೂಸ್ಮಾದ ಯೋಗಿ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ರಂಜಿತ್ ಕುಮಾರ್ಗೌಡ ಅವರ ನಿರ್ದೇಶನದ `ಕಂಸ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ಸಾಯಿಪಲ್ಲವಿ ಅವರನ್ನು ಈಗಾಗಲೇ ಸಂಪರ್ಕಿಸಿ ಕಥೆ ಒಪ್ಪಿಸಲಾಗಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಈ ಚಿತ್ರದಲ್ಲಿ ನಾಯಕಿಯದ್ದು ತುಂಬಾನೇ ಸಿಂಪಲ್ ಕ್ಯಾರೆಕ್ಟರ್, ಆಕೆಯ ಪಾತ್ರ ಇಡೀ ಚಿತ್ರದ ಕಥೆಗೆ ಹೊಸ ಟ್ವಿಸ್ಟ್…