ಇತ್ತೀಚೆಗೆ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ಆಕರ್ಷಕವಾಗಿರುತ್ತವೆ. ಅಂಥದೇ ಮತ್ತೊಂದು ಚಿತ್ರ ಸೆಟ್ಟೇರಲು ರೆಡಿಯಾಗಿದೆ. ಅದರ ಹೆಸರು ಇದು ಆಕಾಶವಾಣಿ ಬೆಂಗಳೂರು ನಿಲಯ. ಕಮಲಾನಂದ ಚಿತ್ರಾಲಯ ಸಂಸ್ಥೆಯಡಿ ಶಿವಾನಂದಪ್ಪ ಬಳ್ಳಾರಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಇತ್ತೀಚೆಗೆ ನಡೆಯಿತು. ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ ನಂತರ ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕ ಶಿವಾನಂದಪ್ಪ ಅವರು ತಿಳಿಸಿದ್ದಾರೆ. ಈ ಹಿಂದೆ ನಾವೇ ಭಾಗ್ಯವಂತರು ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ.ಹರಿಕೃಷ್ಣ ಅವರ ನಿರ್ದೇಶನದ ಎರಡನೇ ಚಿತ್ರವಿದು. ವಿಭಿನ್ನವಾದ ಹಾರರ್,…
`ಫ್ಯಾಂಟಮ್’ ಚಿತ್ರೀಕರಣ ಒಂದು ವಾರ ಮುಂದಕ್ಕೆ
July 10, 2020ಜಾಕ್ ಮಂಜು ಅವರ ನಿರ್ಮಾಣದಲ್ಲಿ ಕಿಚ್ಚ ಸುದೀಪ್ ಅಭಿನಯದಲ್ಲಿ ಅದ್ಧೂರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಫ್ಯಾಂಟಮ್ ಚಿತ್ರಕ್ಕೆ ಅದೇಕೋ ವಿಘ್ನದ ಮೇಲೆ ವಿಘ್ನಗಳು ಬಂದೊದಗುತ್ತಿವೆ. ಮಾರ್ಚ್ನಲ್ಲಿಯೇ ಚಿತ್ರೀಕರಣ ಆರಂಭಿಸಲು ಎಲ್ಲಾ ರೆಡಿ ಮಾಡಿಕೊಳ್ಳುತ್ತಿರುವಾಗಲೇ ಕೊರೊನಾ ವಕ್ಕರಿಸಿ ಶೂಟಿಂಗ್ ಪೋಸ್ಟ್ಪೋನ್ ಆಗಿತ್ತು, ಆನಂತರ ಈಗ ಮತ್ತೆ ಜುಲೈನಲ್ಲಿ ಚಿತ್ರೀಕರಣ ಮಾಡಲು ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ಸಕಲ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪ್ರತಿದಿನ ಎಲ್ಲಾ ಥರದ ಕೊರೊನಾ ಸೇಫ್ಟಿ ಪ್ರಿಕಾಶನ್ಸ್ ತೆಗೆದುಕೊಂಡು ಕೆಲಸ ಆರಂಭ ಮಾಡಬೇಕಾಗಿದ್ದರಿಂದ…
`ಒಂಬತ್ತನೇ ದಿಕ್ಕು’ ಟೀಸರ್ ಬಿಡುಗಡೆ
July 10, 2020ದುನಿಯಾ ಖ್ಯಾತಿಯ ಸೂರಿ ಅವರ ನಿರ್ದೇಶನದ ಚಿತ್ರದಲ್ಲಿ ಲೂಸ್ ಮಾದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಯೋಗಿ ವಿಭಿನ್ನ ಶೈಲಿಯ ಪಾತ್ರಗಳ ಮೂಲಕವೇ ಅಭಿಮಾನಿಗಳನ್ನು ಗಳಿಸಿದ್ದಾರೆ. ಮೊನ್ನೆ ಯೋಗಿ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ತಮ್ಮ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರದ ವಿಶೇಷ ಟೀಸರನ್ನು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷ ರಂಗನಾಯಕಿಯಂಥ ಮಹಿಳಾಪ್ರದಾನ ಚಿತ್ರ ನಿರ್ದೇಶಿಸಿದ್ದ ದಯಾಳ್ ಪದ್ಮನಾಭನ್ ಅವರು ಈ ಮಾಸ್ ಥ್ರಿಲ್ಲರ್…
ಠಾಕ್ರೆ ಕನ್ನಡಕ್ಕೆ ಮ್ಯಾಕ್ಬೆತ್ ನಾಟಕ
July 3, 2020ಗುರು ದೇಶಪಾಂಡೆ ಇತ್ತೀಚೆಗೆ ಜಂಟಲ್ಮನ್ ಚಿತ್ರ ನಿರ್ಮಾಣ ಮಾಡಿದ್ದರು. ಇದರ ಜೊತೆಗೆ ಮೂರು ವರ್ಷಗಳ ಹಿಂದೆ ಷೇಕ್ಸ್ಪಿಯರ್ ಅವರ ನಾಟಕವನ್ನಾಧರಿಸಿದ ಠಾಕ್ರೆ ಚಿತ್ರವನ್ನು ಘೋಷಿಸಿದ್ದರು. 2017ರಲ್ಲಿಯೇ ಈ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ನಂತರ ನಾನಾ ಕಾರಣಗಳಿಂದಾಗಿ ಆ ಸಿನಿಮಾ ಮುಂದುವರಿಯಲಿಲ್ಲ. ಈಗ ಮತ್ತೆ ಆ ಚಿತ್ರಕ್ಕೆ ಗುರು ದೇಶಪಾಂಡೆ ಮರುಜೀವ ನೀಡಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿಬರಬೇಕಿದ್ದ ‘ಠಾಕ್ರೆ’ ಸಿನಿಮಾದಲ್ಲಿ ಈಗ ಕೊಂಚ ಬದಲಾವಣೆ ಮಾಡಲಾಗಿದೆ. ಪ್ರಜ್ವಲ್ ಮಾಡಬೇಕಿದ್ದ ಪಾತ್ರಕ್ಕೆ ಈಗ…
ಪ್ರದರ್ಶನ ಆರಂಭವಾದರೆ ಶೂಟಿಂಗ್ಗೆ ರೆಡಿ
July 3, 2020ನಟ ದರ್ಶನ್ ಸತತ ಮೂರು ತಿಂಗಳ ಕಾಲ ಮನೆ, ಪ್ರಾಣಿಗಳು ಅಂತ ಲಾಕ್ಡೌನ್ನಲ್ಲಿ ಕಾಲ ಕಳೆದಿದ್ದಾರೆ. ಒಪ್ಪಿಕೊಂಡಿದ್ದ ಚಿತ್ರಗಳ ಶೂಟಿಂಗ್ ಸ್ಥಗಿತಗೊಂಡಿದೆ. ಇದನ್ನು ಸ್ವತಃ ದರ್ಶನ್ ಅವರೇ ಒಪ್ಪಿಕೊಂಡಿz್ದÁರೆ. ಈಗ ನಿರ್ಮಾಪಕರು ಸಿನಿಮಾ ಶೂಟಿಂಗ್ ಆರಂಭಿಸಲು ರೆಡಿ ಇದ್ದರೂ ಶೂಟಿಂಗ್ಗೆ ಬರಲು ಸ್ಟಾರ್ಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಪವಾದ ಬಂದಿತ್ತು. ಈ ಸುದ್ದಿಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಕಿ ಉಳಿಸಿಕೊಂಡಿರುವ ಚಿತ್ರಗಳ ಶೂಟಿಂಗ್ ಮಾಡಿ ಕೊಳ್ಳಲು ಚಿತ್ರರಂಗಕ್ಕೆ ಸರ್ಕಾರ ಅನುಮತಿ ನೀಡಿದೆ. ಅದಕ್ಕೆ ದರ್ಶನ್ ಪ್ರತಿಕ್ರಿಯಿಸಿ…
‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಫಸ್ಟ್ಲುಕ್
July 3, 2020ಪುರುಷಪ್ರಧಾನ ಕಥಾನಕ ಇರುವ ಸಿನಿಮಾಗಳೇ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಮಹಿಳಾ ಕೇಂದ್ರೀಕೃತ ಕಥೆ ಹೊಂದಿದ ಚಿತ್ರಗಳು ಆಗಾಗ ನಿರ್ಮಾಣವಾಗಿ ತೆರೆಗೆ ಬರುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’. ಈ ಚಿತ್ರದಲ್ಲಿ ನಾಯಕ ಒಬ್ಬ ಹಿಂದೂ ಯುವಕ ನಾದರೆ, ನಾಯಕಿ ಒಬ್ಬ ಕ್ರಿಶ್ಚಿಯನ್ ಯುವತಿ. ಇವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಇಬ್ಬರ ನಡುವೆ ಆಕಸ್ಮಿಕವಾಗಿ ಹುಟ್ಟುವ ಪ್ರೀತಿ, ಇವರಿಬ್ಬರ ಪ್ರೀತಿಗೆ ಎದುರಾಗುವ ಹಲವಾರು ಅಡ್ಡಿ ಆತಂಕಗಳು, ನಂತರ ಯಾವುದೋ ಒಂದು ಕಾರಣದಿಂದ…
ಕಿರುತೆರೆಯಲ್ಲೀಗ ಕಾದಂಬರಿ ಆಧಾರಿತ ಕಥೆಗಳ ಗುಚ್ಛ
July 3, 2020ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಕನ್ನಡಿಗರದೇ ಆದ ವಾಹಿನಿಗಳು ಬೆರಳೆಣಿಕೆಯಷ್ಟು ಮಾತ್ರವೇ ಇವೆ. ಅಂಥವುಗಳಲ್ಲಿ ಸಿರಿಕನ್ನಡ ವಾಹಿನಿ ಕೂಡ ಒಂದು. ಇದು ಬರೀ ಕನ್ನಡಿಗರ ವಾಹಿನಿ ಮಾತ್ರವಲ್ಲ. ಈವರೆಗೆ ಯಾವುದೇ ರೀಮೇಕ್ ಅಥವಾ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡದೆ ಅಪ್ಪಟ ಕನ್ನಡದ ಸೊಗಡಿನ ಧಾರಾವಾಹಿಗಳನ್ನು ಮಾತ್ರವೇ ಪ್ರಸಾರ ಮಾಡುತ್ತಿದೆ. ಒಂದೂವರೆ ವರ್ಷದ ಹಿಂದಷ್ಟೇ ಕನ್ನಡಿಗರಿಂದ, ಕನ್ನಡಿಗರಿಗಾಗಿಯೇ ತನ್ನ ಪ್ರಸಾರ ಆರಂಭಿಸಿದ ಸಿರಿಕನ್ನಡ ವಾಹಿನಿಯು ಹಲವಾರು ಯಶಸ್ವಿ ಚಿತ್ರಗಳು ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುವ ಮೂಲಕ ಪ್ರೇಕ್ಷಕರಿಂದ ಪ್ರಶಂಸೆಗೆ…
ಸೂಪರ್ಮಚ್ಚಿಗಾಗಿ ಹೈದರಾಬಾದ್ಗೆ ತೆರಳಿದ ಡಿಂಪಲ್ಕ್ವೀನ್
June 26, 2020ಕೊರೊನಾ ಭೀತಿಯ ನಡುವೆಯೂ ಡಿಂಪಲ್ಕ್ವೀನ್ ರಚಿತಾರಾಮ್ ತೆಲುಗು ಸಿನಿಮಾ ಚಿತ್ರೀಕರಣಕ್ಕೆಂದು ಹೈದರಾಬಾದಿಗೆ ತೆರಳಿz್ದÁರೆ. ಇತ್ತೀಚೆಗಷ್ಟೇ ಟಿವಿ ಸೀರಿಯಲ್, ಸಿನಿಮಾಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ್ದು, ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿವೆ. ಕೆಲ ಕಲಾವಿದರು ಶೂಟಿಂಗ್ಗೆ ತೆರಳುತ್ತಿz್ದÁರೆ. ಸುಮಾರು ಮೂರು ತಿಂಗಳ ಕಾಲ ಚಿತ್ರದ ಶೂಟಿಂಗ್ ಇಲ್ಲದೇ ಮನೆಯ¯್ಲÉೀ ಕುಳಿತಿದ್ದ ರಚಿತಾ ರಾಮ್, ಸರ್ಕಾರ ಅನುಮತಿ ನೀಡಿದ ಕೂಡಲೇ ಸೂಪರ್ಮಚ್ಚಿ ಸಿನಿಮಾದ ಚಿತ್ರೀಕರಣಕ್ಕೆ ತೆರಳಿz್ದÁರೆ. ಶೂಟಿಂಗ್ ಸೆಟ್ನ ಫೆÇೀಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಶೂಟಿಂಗ್…
ಮದಗಜನಿಗೆ ಶೂಟಿಂಗ್ ಪ್ರಾರಂಭ !
June 26, 2020ಈಗಾಗಲೇ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಅಲ್ಲದೆ ಬಾಲಿವುಡ್ನ ಅಮಿರ್ಖಾನ್ ಜೊತೆಗೂ ನಟಿಸಿರುವ ನಟ ವಿಜಯ್ ಸೇತುಪತಿ ಅವರು ಸದ್ಯದಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಹೌದು, ಮಹೇಶ್ಕುಮಾರ್ ನಿರ್ದೇಶನದ `ಮದಗಜ’ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕೆಲ ನಟರ ಜೊತೆ ಮಾತುಕತೆ ನಡೆಸಿರುವ ನಿರ್ದೇಶಕ ಮಹೇಶ್, ತೆಲುಗಿನ ವಿಜಯ್ ಸೇತುಪತಿ ಅಥವಾ ತೆಲುಗಿನ ಜಗಪತಿಬಾಬು ಇಬ್ಬರಲ್ಲಿ ಒಬ್ಬರು ನಮ್ಮ ಚಿತ್ರದಲ್ಲಿ ವಿಲನ್ ಆಗಿ ನಟಿಸೋದು ಖಚಿತವಾಗಿದೆ ಎಂದು ಹೇಳಿದ್ದಾರೆ. ಇಬ್ಬರ ಜೊತೆಗೂ ಮಾತುಕತೆ ನಡೆಸಿz್ದÉೀವೆ. ಇಬ್ಬರಲ್ಲಿ…
`ಪ್ರಚಂಡ ಪುಟಾಣಿಗಳು’ ಚಿತ್ರಕ್ಕೆ ಮುಹೂರ್ತ
June 26, 2020ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭವಾಗಬೇಕಿದ್ದ “ಪ್ರಚಂಡ ಪುಟಾಣಿಗಳು” ಚಲನಚಿತ್ರವು ಕೊರೊನಾ ಸಮಸ್ಯೆಗಳಿಂದ ಚಿತ್ರೀಕರಣ ಮುಂದೂಡಿ ಕೊನೆಗೂ ಈಗ ಮುಹೂರ್ತವನ್ನು ಆಚರಿಸಿಕೊಂಡಿದೆ. ಶ್ರೀಮತಿ ಡಿ. ಸುನಿತ ಹಾಗೂ ಎನ್.ರಘು ಅವರ ಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಚಂಡ ಪುಟಾಣಿಗಳು ಚಲನಚಿತ್ರಕ್ಕೆ ಇದೇ ಸೋಮುವಾರ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಂಡಕೋಟ ಗ್ರಾಮದ ಶ್ರೀ ಸತ್ಯಮ್ಮದೇವಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು. ಜಿಲ್ಲಾ ಪಂಚಾಯತ್ ಸದಸ್ಯೆ ಸುನಂದಮ್ಮ ವೆಂಕಟೇಶ್ ಚಿತ್ರಕ್ಕೆ ಮೊದಲ ಕ್ಲಾಪ್…