ರಾಕಿಂಗ್ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಯಶ್ ಅಭಿನಯದ ಕೆಜಿಎಫ್ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದ ಚಿತ್ರ. ಈಗ ಆ ಚಿತ್ರದ ಸೀಕ್ವೇಲ್ ಕೂಡ ಅದಕ್ಕಿಂತ ಅದ್ಧೂರಿಯಾಗಿಯೇ ನಿರ್ಮಾಣವಾಗುತ್ತಿದೆ. ಇಲ್ಲಿ ಸಂಜಯ್ದತ್, ರವೀನಾ ಟಂಡನ್ ರಂಥ ಬಾಲಿವುಡ್ ಸ್ಟಾರ್ಸ್ ಕೂಡ ಅಭಿನಯಿಸಿ ದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅವರೇ ಬಣ್ಣ ಹಚ್ಚಿದ್ದಾರೆ. ಇನ್ನು ನಟ ಯಶ್ ಆರಂಭದ ದಿನಗಳಲ್ಲಿ ಕಿರುತೆರೆ ಸೀರಿಯಲ್ಗಳಲ್ಲಿ ಅಭಿನಯಿಸುತ್ತಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಪ್ರಿಯಾ ಹಾಸನ್ ನಾಯಕಿಯಾಗಿ…
‘ನಡುಗಲ್ಲು’ಗೆ ಹಿನ್ನೆಲೆ ಸಂಗೀತ
July 24, 2020ಪೂರ್ವಿಕಾಮೃತ ಕ್ರಿಯೇಷನ್ ಲಾಂಛನದಲ್ಲಿ ಹರಿಹರನ್ ಬಿ.ಪಿ. ಅವರ ನಿರ್ಮಾಣದ ಚಿತ್ರ `ನಡುಗಲ್ಲು’ ಗುರು ಶಿಷ್ಯರ ನಡುವಿನ ಸಂಬಂಧದ ಕಥಾಹಂದರ ಒಳಗೊಂಡಿದೆ. ಈ ಹಿಂದೆ ಬಂಗಾರಿ, ಬೆಟ್ಟದ ದಾರಿ, ತಮಿಳಿನ ಕಾದಲ್ ಪೈತ್ಯಂ, ಶಿವನಪಾದದಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾಚಂದ್ರು ಅವರ ನಿರ್ದೇಶನದ ಮತ್ತೊಂದು ಚಿತ್ರವೇ “ನಡುಗಲ್ಲು”. ನಡುಗಲ್ಲು ಎಂಬ ಊರಿನಲ್ಲಿ, ಸರ್ಕಾರಿ ಶಾಲೆಯಲ್ಲಿ ಗುರು ಶಿಷ್ಯರ ನಡುವೆ ನಡೆಯುವ ಸವಾಲುಗಳನ್ನು ಅವರು ಹೇಗೆ ಎದುರಿಸುತ್ತಾರೆ, ಗುರು ಶಿಷ್ಯರ ಸವಾಲ್ನಲ್ಲಿ ಯಾರು, ಯಾರಿಗೆ ಸೋಲೊಪ್ಪುತ್ತಾರೆ ಎಂಬುದು…
ಕೊರೊನಾ ನಂತರ `ರುದ್ರಿ’ಯ ದರ್ಶನ !
July 24, 2020ದೇವೇಂದ್ರ ಬಡಿಗೇರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ `ರುದ್ರಿ’ ಚಿತ್ರವು ಅಂದುಕೊಂಡ ಹಾಗೇ ಆಗಿದ್ದರೆ ಈಗಾಗಲೇ ಬಿಡುಗಡೆಯಾಗಿರಬೇಕಿತ್ತು, ಆದರೆ ಕೊರೊನಾ ಕಾರಣದಿಂದಾಗಿ ತಡವಾಗಿದೆ, ಚಿತ್ರಮಂದಿರ ಓಪನ್ ಆದಕೂಡಲೇ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಇದರ ಜೊತೆಗೆ ಚಿತ್ರಕ್ಕೆ ಮತ್ತೆರಡು ಪ್ರಶಸ್ತಿಗಳು ಲಭಿಸಿವೆ, ಇತ್ತೀಚೆಗಷ್ಟೇ ಇಟಲಿಯ ಓನಿರೋಸ್ನಲ್ಲಿ ನಡೆದ ಆನ್ಲೈನ್ ಚಲನಚಿತ್ರೋತ್ಸವದಲ್ಲಿ `ರುದ್ರಿ’ ಚಿತ್ರವೂ ಸಹ ಭಾಗವಹಿಸಿದ್ದು, ಉತ್ತಮ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಾಯಕಿ ಪಾವನಾಗೌಡ ಗಳಿಸಿದ್ದಾರೆ. ಅಲ್ಲದೆ ಟ್ಯಾಗೋರ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕೂಡ…
ನಿಧಿಮಾ ಪಾತ್ರದಲ್ಲಿ ತಮನ್ನಾ !
July 17, 2020ಈವರ್ಷ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ಹಾಗೂ ಪ್ರೇP್ಷÀಕರ ಮನಗೆದ್ದ ಕೆಲವೇ ಚಿತ್ರಗಳಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ‘ಲವ್ ಮಾಕ್ಟೇಲï’ ಚಿತ್ರ ಕೂಡ ಒಂದಾಗಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಚಿತ್ರದ ಕಲೆಕ್ಷನ್ಗೆ ಕೊರೋನಾ ಲಾಕ್ಡೌನ್ ದೊಡ್ಡ ಪೆಟ್ಟು ಕೊಟ್ಟಿತು. ನಂತರ ಆ ಚಿತ್ರ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾದಾಗ ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಪಡೆದುಕೊಂಡಿತು. ಪರಭಾಷಾ ಸ್ಟಾರ್ಗಳೂ ಚಿತ್ರವನ್ನು ನೋಡಿ ಮೆಚ್ಚಿಕೊಂಡರು. ಅಲ್ಲದೆ ಚಿತ್ರವನ್ನು ತಮ್ಮ ಭಾಷೆಯಲ್ಲಿ ರೀಮೇಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು….
ತಮಿಳು ತೆಲುಗು ಸೇರಿ 4 ಭಾಷೆಗಳಿಗೆ ಕನ್ನಡ್ ಗೊತ್ತಿಲ್ಲ
July 17, 2020ರೇಡಿಯೋ ಜಾಕಿ ಆಗಿದ್ದ ಮಯೂರ ರಾಘವೇಂದ್ರ ಅವರ ನಿರ್ದೇಶನದ ಮೊದಲ ಚಿತ್ರ ಕನ್ನಡ್ ಗೊತ್ತಿಲ್ಲ. ಈ ಚಿತ್ರ ಚಿತ್ರಮಂದಿರಗಳಲ್ಲಿ ಅಷ್ಟಾಗಿ ಯಶಸ್ವಿಯಾಗದಿದ್ರೂ ಓಟಿಟಿಯಲ್ಲಿ ಬಿಡುಗಡೆಯಾಗಿ 20 ಮಿಲಿಯನ್ಗೂ ಹೆಚ್ಚು ವೀಕ್ಷಣೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಕನ್ನಡ್ ಗೊತ್ತಿಲ್ಲ ಈಗ ದಕ್ಷಿಣ ಭಾರತದ 4 ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್ಫಾರ್ಮನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆದು ಯಶಸ್ವಿಯಾದ ನಂತರ, ಬಾಲಿವುಡ್ನ ಸಂಜಯ್ ಲಾಲ್ವಾನಿ ಪೆÇ್ರಡP್ಷÀನ್ಸ್ ಚಿತ್ರದ ಡಬ್ಬಿಂಗ್ ಹಕ್ಕನ್ನು ಖರೀದಿಸಿದೆ. ಅವರು ಈ ಚಿತ್ರವನ್ನು…
ಆ ಕರಾಳ ರಾತ್ರಿ ಈಗ ಪುಸ್ತಕ ರೂಪದಲ್ಲಿ
July 17, 2020ದಯಾಳ್ ಪದ್ಮನಾಭನ್ ಅವರ ನಿರ್ದೇಶನದ ಆ ಕರಾಳ ರಾತ್ರಿ ಚಲನಚಿತ್ರ ಬಿಡುಗಡೆಯಾಗಿ ಕಳೆದ ಜೂನ್ ಒಂದಕ್ಕೆ ಎರಡು ವರ್ಷಗಳನ್ನು ಪೂರೈಸಿದೆ. ಆ ನೆನಪಿಗಾಗಿ ನಿರ್ದೇಶಕ ದಯಾಳ್ ಮತ್ತು ಅವರ ತಂಡ ಆ ಕರಾಳ ರಾತ್ರಿ ಸಿನಿಮಾವನ್ನು ಪುಸ್ತಕ ರೂಪದಲ್ಲಿ ತಂದು ಬಿಡುಗಡೆ ಮಾಡಿz್ದÁರೆ. ಆ ಕರಾಳ ರಾತ್ರಿ ಚಿತ್ರದಲ್ಲಿ ಜೈರಾಮ್ ಕಾರ್ತಿಕ್ ನಾಯಕನಾಗಿ ಮತ್ತು ಅನುಪಮಾ ಗೌಡ ನಾಯಕಿಯ ಪಾತ್ರದಲ್ಲಿ ನಟಿಸಿದ್ದರು. ರಂಗಾಯಣ ರಘು, ವೀಣಾ ಸುಂದರ್ ಹಾಗೂ ನವೀನ್ ಕೃಷ್ಣ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು…
`ಫ್ರೆಂಚ್ ಬಿರಿಯಾನಿ’ ಟ್ರೇಲರ್ ಬಿಡುಗಡೆ
July 17, 2020ಪುನೀತ್ ರಾಜ್ಕುಮಾರ್ ನಿರ್ಮಾಣದ ಇನ್ನೊಂದು ಸಿನಿಮಾ ‘ಫ್ರೆಂಚ್ ಬಿರಿಯಾನಿ ಟ್ರೇಲರ್ ಜುಲೈ 16 ರಂದು ಬಿಡುಗಡೆ ಆಯಿತು. ಈ ಸಂಬಂಧ ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದು, ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫ್ರೆಂಚ್ ಬಿರಿಯಾನಿ ಜುಲೈ 24ರಿಂದ ಅಮೇಜಾನ್ ಪ್ರೈಮ್ನಲ್ಲಿ ಪ್ರಸಾರ ಆರಂಭಿಸಲಿದೆ. ಪುನೀತ್ ಅವರ ಪಿಆರ್ಕೆ ಪೆÇ್ರಡಕ್ಷನ್ಸ್ ಸಂಸ್ಥೆ. ಈ ಹಿಂದೆ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗೆ ನಿರ್ದೇಶನ ಮಾಡಿದ್ದ ಪನ್ನಗಭರಣ, ‘ಫ್ರೆಂಚ್ ಬಿರಿಯಾನಿ’ಗೆ ನಿರ್ದೇಶನ ಮಾಡಿದ್ದಾರೆ. ಶಿವಾಜಿನಗರದ ಆಟೋ ಡ್ರೈವರ್ ಹಾಗೂ…
ಭಜರಂಗಿ 2 ಟೀಸರ್ಗೆ ಭರ್ಜರಿ ರೆಸ್ಪಾನ್ಸ್ !
July 17, 2020ಮೊನ್ನೆ ನಡೆದ ಹ್ಯಾಟ್ರಿಕ್ಹೀರೋ ಶಿವರಾಜ್ಕುಮಾರ್ ಅವರ ಹುಟ್ಟುಹಬ್ಬವನ್ನು ವರ್ಣರಂಜಿತವಾಗಿಸಿರುವುದು ಅವರ ಅಭಿನಯದ ಹೊಸ ಸಿನಿಮಾಗಳ ಘೋಷಣೆ ಮತ್ತು ಬಿಡುಗಡೆಯಾಗಿರುವ ಭಜರಂಗಿ-2 ಚಿತ್ರದ ಟೀಸರ್. ಶಿವಣ್ಣ ಅವರ ಬರ್ತ್ಡೇ ಪ್ರಯುಕ್ತ ರಿಲೀಸಾದ ಹರ್ಷ ಅವರ ನಿರ್ದೇಶನದ ಭಜರಂಗಿ-2 ಸಿನಿಮಾದ ಟೀಸರ್ ನೋಡುಗರನ್ನು ಭರ್ಜರಿಯಾಗಿ ಆಕರ್ಷಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆಯುವುದರ ಮೂಲಕ ದಾಖಲೆ ಮಾಡಿದೆ. ಈ ಹಿಂದೆ ಹರ್ಷ ಸಾರಥ್ಯದಲ್ಲಿ ತಯಾರಾಗಿದ್ದ ಭಜರಂಗಿ ಚಿತ್ರ ಕೂಡ ಸೂಪರ್ಹಿಟ್ ಆಗಿತ್ತು. ಅತಿಮಾನುಷ ಶಕ್ತಿಯ ಕಥಾಹಿನ್ನೆಲೆಯನ್ನು ಹೊಂದಿದ್ದ ಆ ಚಿತ್ರವು…
ಹೊಂಗೇಮರದ ಬೆಡಗಿ ಸೋನಾಲ್ ಈಗ ನಿರ್ಮಾಪಕಿ….!
July 10, 2020ಭಟ್ಟರ ನಿರ್ದೇಶನದಲ್ಲಿ ಮೂಡಿಬಂದಿದ್ದ ಪಂಚತಂತ್ರ ಚಿತ್ರದ ಹೊಂಗೇಮರದ ಹಾಡಿನಲ್ಲಿ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದ ನಟಿ ಸೋನಾಲ್ ಮಾಂತೆರೋ ಈಗ ನಿರ್ಮಾಪಕಿಯಾಗುತ್ತಿದ್ದಾರೆ. ಈವರೆಗೆ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸುತಿದ್ದ ಸೋನಾಲ್ ಮಾಂತೆರೋ ಇದ್ದಕ್ಕಿದ್ದಂತೆ ಈಗ ತನ್ನ ವರಸೆ ಬದಲಿಸಿಬಿಟ್ಟಿz್ದÁರೆ. ಪಂಚತಂತ್ರ ಚಿತ್ರದ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿ, ನಂತರ ಬಾಲಿವುಡ್ಗೂ ಅಡಿಯಿಟ್ಟು ಬಂದ ಸೋನಾಲ್ ಆಕ್ಟಿಂಗ್ ಜೊತೆಗೆ ಮಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಸಹ ನಡೆಸುತ್ತಿರುವ ಸೋನಾಲ್, ಇದರ ಜೊತೆಗೆ ತಮ್ಮದೇ ಆದ ಸೋಚ್…
‘ದಾರಿ ಯಾವುದಯ್ಯಾ ವೈಕುಂಠಕ್ಕೆ’ ಮುಗಿದ ಶೂಟಿಂಗ್
July 10, 2020ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ. ಕೊಟಗಿ ಅವರು ನಿರ್ಮಿಸಿರುವ ‘ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಲಾಕ್ಡೌನ್ ತೆರವಿನ ನಂತರ ಸರ್ಕಾರ ಅರ್ಧ ಭಾಗ ಚಿತ್ರೀಕರಣವಾಗಿರುವ ಚಿತ್ರಗಳ ಚಿತ್ರೀಕರಣ ಪೂರ್ಣ ಮಾಡಲು ಅನುಮತಿ ನೀಡಿದ್ದರಿಂದ ಸರ್ಕಾರದ ನಿಯಮಗಳನ್ನು ಪಾಲಿಸಿ ಬೆಂಗಳೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಪೂರ್ಣಗೊಳಿಸಲಾಯಿತು. ವರ್ಧನ್, ಅನುಷ, ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ನಂತರದ ಚಟುವಟಿಕೆ ಪ್ರಾರಂಭವಾಗಲಿದೆ. ಈ ಹಿಂದೆ…