ಮಡಿಕೇರಿ: ಮಹಾಮಳೆಯ ರಣಕೇಕೆಯಿಂದ ಜಿಲ್ಲೆಯ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬಿದ್ದಿದೆ. ಅಂಗಡಿ, ಮಳಿಗೆಗಳು, ಶಾಪಿಂಗ್ ಸೆಂಟರ್ಗಳೆಲ್ಲವೂ ಬಣಗುಡುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಇಂದಿಗೂ ಆರ್ಥಿಕತೆ ಚೇತರಿಕೆ ಕಂಡಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಸ್ತೆ ಧ್ವಂಸಗೊಂಡಿರುವುದು, ಭೂ ಕುಸಿತ ಮತ್ತಿತರ ಕಾರಣಗಳಿಂದ ಜನರು ಕೂಡ ನಗರ ಪಟ್ಟಣಗಳ ಕಡೆ ಮುಖ ಮಾಡು ತ್ತಿಲ್ಲ. ಭತ್ತ, ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳು ಕೂಡ ಭಾರಿ ಪ್ರಮಾಣದಲ್ಲಿ ನಾಶಗೊಂಡಿದ್ದು, ವ್ಯಾಪಾರ ವಹಿವಾಟು ಕ್ಷೀಣಗೊಳ್ಳಲು ಕಾರಣವಾಗಿದೆ. ಮಡಿ…
ಕೊಡಗಿಗೆ ಪ್ರವಾಸಿಗರ ನಿರ್ಬಂಧ ತೆರವಿಗೆ ಒತ್ತಾಯ
September 5, 2018ವಿರಾಜಪೇಟೆ: ಪ್ರಕೃತಿ ವಿಕೋಪ ವನ್ನು ಮುಂದಿಟ್ಟು ಹೊರ ಜಿಲ್ಲೆಯಿಂದ ಕೊಡ ಗಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಇಡೀ ಕೊಡಗಿನ ಪ್ರವಾಸ ತಾಣವನ್ನು ನಿರ್ಬಂಧಿಸುವ ಅವ ಶ್ಯಕತೆಯೂ ಇಲ್ಲ. ಕೊಡಗನ್ನು ಮರು ನಿರ್ಮಾಣ ಮಾಡಲು ಎಲ್ಲಾ ರೀತಿ ಯಲ್ಲೂ ಸಹಕರಿಸಲು ಬದ್ದರಾಗಿದ್ದು. ನಮಗೆ ಪ್ರವಾಸೋದ್ಯಮವನ್ನು ನಿಯಮಕ್ಕನು ಸಾರವಾಗಿ ಪ್ರಕೃತಿಗೆ ಯಾವುದೇ ಧಕ್ಕೆ ಇಲ್ಲದಂತೆ ಮುಂದುವರಿಸಬೇಕೆಂದು ಟೂರಿಸಂ ಅಧ್ಯಕ್ಷ ಸಾಗರ್ ಗಣಪತಿ ಒತ್ತಾಯಿಸಿದ್ದಾರೆ. ವಿರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ತಿಂಗಳು ಪ್ರಕೃತಿ ವಿಕೋಪಕ್ಕೆ ಮಡಿಕೇರಿ,…
ಕೊಡಗಿನ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ
September 5, 2018ಮಡಿಕೇರಿ: ಜಿಲ್ಲಾ ಮಟ್ಟದಲ್ಲಿ ಪ್ರಸಕ್ತ ವರ್ಷದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕ ಟಿಸಲಾಗಿದೆ. ತಾಲೂಕುವಾರು ವಿವರ ಇಂತಿದೆ. ಮಡಿಕೇರಿ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ವಿಭಾಗ(ಕಿರಿಯ)ದಲ್ಲಿ 2ನೇ ಮೊಣ್ಣಂಗೇರಿಯ ಮದೆ ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಸದಾನಂದ, ಪ್ರಾಥಮಿಕ ಶಾಲಾ ವಿಭಾಗ (ಹಿರಿಯ)ದಲ್ಲಿ ಕೋಟೆ ಪೆರಾಜೆ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಬಿ.ಶ್ರೀನಿವಾಸ್ರಾವ್ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಸಿ.ಎಂ.ಮುನೀರ್ ಅವರು ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ತಾಲೂ ಕಿನಲ್ಲಿ ಬಿಳಹ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ…
ಪರಿಹಾರ ಕೇಂದ್ರದಲ್ಲಿ 1666ಕ್ಕಿಳಿದ ಸಂತ್ರಸ್ತರ ಸಂಖ್ಯೆ
September 5, 2018ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಸ್ಥಾಪಿಸಿದ ಪರಿಹಾರ ಕೇಂದ್ರಗಳಲ್ಲಿ ಆರಂಭಿಕ ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರು ನೆಲೆಸಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ವಾತಾವರ ಣದಲ್ಲಾದ ಬದಲಾವಣೆಯಿಂದ ಈ ಸಂಖ್ಯೆ ಪ್ರಸ್ತುತ 1,666ಕ್ಕೆ ಇಳಿದಿದೆ. ಬಹಳಷ್ಟು ಮಂದಿಯಲ್ಲಿ ತಮ್ಮ ಬದುಕಿನ ಹಾದಿಯನ್ನು ತಾವೇ ಕಂಡು ಕೊಳ್ಳುವ ಹುಮ್ಮಸ್ಸು ಸರಕಾರದ ಶಾಶ್ವತ ನೆರವಿಗೂ ಮೊದಲೇ ಚಿಗುರೊಡೆಯ ತೊಡಗಿದೆ. ಜಿಲ್ಲಾಡಳಿತ ಮತ್ತು ಶಾಸ ಕರುಗಳ ಪ್ರಯತ್ನಗಳ ಹಿನ್ನೆಲೆಯಲ್ಲಿ ಸಂಪರ್ಕ ಕಳೆದುಕೊಂಡಿರುವ…
ಎಂಎಲ್ಸಿ ಶರವಣದಿಂದ ಅಯ್ಯಂಗೇರಿ ಸರ್ಕಾರಿ ಶಾಲೆ ದತ್ತು
September 5, 2018ಮಡಿಕೇರಿ: ಭಾಗಮಂಡಲ ಸಮೀಪವಿರುವ ಅಯ್ಯಂಗೇರಿ ಸರಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆಯುವುದಾಗಿ ಜೆಡಿಎಸ್ ಎಂಎಲ್ಸಿ ಆರ್.ಶರವಣ ಘೋಷಿಸಿದ್ದಾರೆ. ಮಡಿಕೇರಿಗೆ ಆಗಮಿಸಿದ ಅವರು ಅತಿ ವೃಷ್ಟಿಯಿಂದ ಹಾನಿ ಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ಮಳೆಯಿಂದ ಹಾನಿಗೀಡಾದ ಅಯ್ಯಂಗೇರಿ ಸರಕಾರಿ ಶಾಲೆಯನ್ನು ದತ್ತು ಪಡೆದು ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸು ಹೊಂದಿದ್ದೇನೆ. ತನ್ನ ಹುಟ್ಟು ಹಬ್ಬದ ಸಂದರ್ಭ ಈ ಬಗ್ಗೆ ತೀರ್ಮಾನ ತೆಗೆದು ಕೊಂಡಿದ್ದೆ. ಹೆಚ್ಚುವರಿ ಕಟ್ಟಡ ವ್ಯವಸ್ಥೆ, ಪೀಠೋಪಕರಣ ಸೇರಿ ದಂತೆ ಶಾಲೆಗೆ…
ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಸೆ.7 ರಂದು ಸರಳ ಕೈಲ್ಪೊಳ್ದ್
September 5, 2018ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರಿಗೆ ಸಾರ್ವಜನಿಕ ಶ್ರದ್ದಾಂಜಲಿ ಶ್ರೀಮಂಗಲ: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಸಾರ್ವ ಜನಿಕ ಶ್ರೀ ಗೌರಿ ಗಣೇಶ ಸೇವಾ ಸಮಿತಿ ಟಿ.ಶೆಟ್ಟಿಗೇರಿ ಹಾಗೂ ಸಂಭ್ರಮ ಮಹಿಳಾ ಕ್ರೀಡೆ ಹಾಗೂ ಸಾಂಸ್ಕ್ರತಿಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡª ಸಮಾಜದಲ್ಲಿ ಸೆ.7 ರಂದು ಪೂರ್ವಾಹ್ನ 10 ಗಂಟೆಗೆ ಕೈಲ್ಪೊಳ್ದ್ ಆಚರಣೆಯನ್ನು ನಡೆಸಲಾಗುವುದು. ಪ್ರಕೃತಿ ವಿಕೋಪದಿಂದ ಉತ್ತರ ಕೊಡಗಿನ ಜನರು ಸಂತ್ರಸ್ಥರಾಗಿದ್ದು ಹಲವರು ಪ್ರಾಣ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿರುವುದರಿಂದ ಇಡೀ…
ಅತಿವೃಷ್ಟಿಯ ನಿರಾಶ್ರಿತ ಕುಟುಂಬಗಳಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರ
September 4, 2018ಮಡಿಕೇರಿ: ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪ್ರಥಮ ಆದ್ಯತೆಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಡಾ.ಜಯಮಾಲ ಅವರು ತಿಳಿಸಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು ಅತಿವೃಷ್ಟಿಯಿಂದಾಗಿ ಮಹಿಳೆಯರು, ಮಕ್ಕಳು ಮನೆ ಮಠ ಕಳೆದುಕೊಂಡಿದ್ದು, ಇಂತಹ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮವಹಿಸಲಾಗುವುದು ಎಂದು ಹೇಳಿದರು. ಅತಿವೃಷ್ಟಿಯಿಂದಾಗಿ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರಲ್ಲದೆ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 30…
ಪ್ರಕೃತಿ ಮುನಿಸಿಗೆ ಮರೆಯಾದ ಕೈಲ್ಪೊಳ್ದ್ ಸಂಭ್ರಮ
September 4, 2018ಮಡಿಕೇರಿ: ಕೊಡಗಿನ ಪ್ರಮುಖ ಕೈಲ್ಮುಹೂರ್ತ ಹಬ್ಬದ ಮೇಲೆ ಪ್ರಕೃತಿ ವಿಕೋಪದ ಕಾರ್ಮೋಡ ಕವಿದಿದ್ದು, ಜಿಲ್ಲೆಯ ಜನರು ಈ ಬಾರಿ ಕೈಲ್ ಮುಹೂರ್ತದ ಉತ್ಸವ ಆಚರಿಸಲು ಮನಸ್ಸಿಲ್ಲದೇ ಸಾರ್ವತ್ರಿಕ ಆಚರಣೆಯಿಂದ ದೂರ ಸರಿದಿದ್ದಾರೆ. ಮಕ್ಕಂದೂರು, ಶಾಂತಳ್ಳಿ, ಸಂಪಾಜೆ ಸೇರಿದಂತೆ 32 ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ನೂರಾರು ಮನೆಗಳು ಮಣ್ಣು ಪಾಲಾಗಿದ್ದರೆ, ಸಾವಿರಾರು ಮಂದಿ ಇನ್ನೂ ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. ಭೂಕುಸಿತದಿಂದಾಗಿ ಮನೆ, ತೋಟ, ಜಾನುವಾರುಗಳನ್ನೆಲ್ಲಾ ಕಳೆದುಕೊಂಡ ಗ್ರಾಮಸ್ಥರ ನೋವಿಗೆ ಇಡೀ ದೇಶವೇ ಸಹಾಯ ಹಸ್ತ ಚಾಚಿರುವಾಗ ಕೊಡಗಿನಲ್ಲಿ ಸಂಭ್ರಮದ ವಾತಾವರಣವೇ…
ತಂತಿಪಾಲದಲ್ಲಿ ಮಳೆ ಮೀಟಿದ ಮರಣ ಮೃದಂಗ
September 4, 2018ಮಡಿಕೇರಿ: ಭತ್ತದ ಗದ್ದೆಗಳು, ಕಾಫಿ ತೋಟಗಳ ನಡುವೆ ಕಂಗೊಳಿಸುತ್ತಿದ್ದ ಗ್ರಾಮವೇ ತಂತಿಪಾಲ. ಹಲವು ವರ್ಷ ಗಳ ಹಿಂದೆ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು. ಸರ್ವಋತುವಲ್ಲೂ ಹರಿಯುವ ಹೊಳೆಗೆ ಕಟ್ಟಿದ ತೂಗು ಸೇತುವೆಯಿಂದ ಈ ಗ್ರಾಮಕ್ಕೆ ತಂತಿಪಾಲ ಎಂಬ ಹೆಸರು ಬಂತು ಎನ್ನಲಾಗುತ್ತಿದೆ. ಅಧಿಕ ಮಳೆ, ಭೂ ಕುಸಿತ, ರಸ್ತೆ ಸಂಪರ್ಕ ಬಂದ್ ಆಗುವುದು ಈ ಗ್ರಾಮದ ನಿವಾಸಿಗಳಿಗೆ ಹೊಸದೇನಲ್ಲ. ಆದರೆ, ಪ್ರಕೃತಿ ಹರಸಿದ ಊರೇ ಇಂದು ಪ್ರಕೃತಿಯ ವಿಕೋಪಕ್ಕೆ ಭೂ ಸಮಾಧಿಯಾಗಿದೆ. ಕಾಫಿ…
ನೆಲಜಿ ಗ್ರಾಮದಲ್ಲಿ ಸುರಂಗ ಪತ್ತೆ
September 4, 2018ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದ ಮಣವಟ್ಟಿರ ಅರುಣ ಪಳಂಗಪ್ಪ ಅವರ ಕಾಫಿ ತೋಟದಲ್ಲಿ ಭೂಮಿಯೊಳಗೆ ಸುರಂಗ ನಿರ್ಮಾಣವಾಗಿರುವುದು ಗೋಚರಿಸಿದೆ. ಅರುಣ ಅವರ ಕಾಫಿ ತೋಟದಲ್ಲಿ ದೊಡ್ಡ ಗುಂಡಿಯೊಂದು ಮಳೆಗಾಲದ ಅವಧಿಯಲ್ಲಿ ನಿರ್ಮಾಣವಾಗಿದ್ದು, ಹಲವು ದಿನಗಳಿಂದ ಕಾಫಿ ತೋಟದ ಒಳಗೆ ಯಾರೂ ಹೋಗದೆ ಗುಂಡಿ ಗೋಚ ರಿಸಿರಲಿಲ್ಲ. ಇಂದು ಕೆಲಸಕ್ಕೆ ತೆರಳಿದಾಗ ಇದು ಕಂಡು ಬಂದಿದೆ. ಸುಮಾರು 30 ಅಡಿ ಆಳದ ಗುಂಡಿಯಾ ಗಿದ್ದು ಬಳಿಕ ಸುರಂಗ ಗೋಚರಿಸುತ್ತಿದ್ದು, ಗದ್ದೆ ಯೆಡೆಗೆ ತೆರೆದುಕೊಂಡಿದೆ….