ಸೋಮವಾರಪೇಟೆ: ತಾಲೂಕು ಪತ್ರಕರ್ತರ ಸಂಘದ 2ನೇ ವರ್ಷದ ಕ್ರೀಡಾಕೂಟಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಕೋಶಾಧ್ಯಕ್ಷ ಎ.ಪಿ.ವೀರರಾಜು ಚಾಲನೆ ನೀಡಿದರು. ನಂತರ ಮಾತ ನಾಡಿದ ಅವರು, ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪತ್ರಕರ್ತರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಎ.ಮುರಳೀಧರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ…
ಆಗಸ್ಟ್ 6ಕ್ಕೆ ಕಾನೂರಿನಲ್ಲಿ “ಬೇಲ್ ನಮ್ಮೆ-2018”
July 24, 2018ಗೋಣಿಕೊಪ್ಪ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯ ದಲ್ಲಿ ಆಗಸ್ಟ್ 6 ರಂದು ದಕ್ಷಿಣಕೊಡಗಿನ ಕಾನೂರಿನಲ್ಲಿ “ಬೇಲ್ ನಮ್ಮೆ -2018” ನಡೆಸಲು ಸೋಮವಾರ ಇಂದು ನಡೆದ ಪೂರ್ವಬಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಲ್ ನಮ್ಮೆ ಕಾರ್ಯಕ್ರಮಕ್ಕೆ ಕಾನೂರು ಕೊಡವ ಸಮಾಜ, ಕೋತೂರು ಅಮ್ಮ ಕೊಡವ ಸಮಾಜ, ಕಾನೂರು-ಕೋತೂರು ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಬೇಲ್ ನಮ್ಮೆ ಕಾರ್ಯಕ್ರಮವು ಕಾನೂರಿನ ಮನ್ನಕ್ಕಮನೆ ಕಿರಣ್-ವಾಸು ಅವರ…
ಹಗ್ಗ ಜಗ್ಗಾಟದಲ್ಲಿ ಹಾನಗಲ್ ಶೆಟ್ಟಳ್ಳಿ ತಂಡಕ್ಕೆ ಪ್ರಶಸ್ತಿ
July 24, 2018ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಡೆದ ತಾಕೇರಿಯಲ್ಲಿ ನಡೆದ 5ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹಾನಗಲ್ ಶೆಟ್ಟಳ್ಳಿ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಅರೆಯೂರು ಈಶ್ವರಿ ಮಹಿಳಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್ನಲ್ಲಿ ತಾಕೇರಿ ಮಲ್ಲಾ ಜಿರ ಪ್ರಥಮ, ಪ್ರಕೃತಿ ಯುವತಿ ಮಂಡಳಿ ಕಿರಗಂದೂರು ದ್ವಿತೀಯ, ಪುರುಷರ ವಾಲಿಬಾಲ್ ಪಂದ್ಯದಲ್ಲಿ ತಾಕೇರಿ(ಪಥಮ), ತಾಕೇರಿ ಯಂಗ್ಸ್ಟಾರ್(ಬಿ) ದ್ವಿತೀಯ, ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಬ್ಬೂರುಕಟ್ಟೆ ಒಕ್ಕಲಿಗರ ತಂಡ ಪ್ರಥಮ ಸ್ಥಾನ ಪಡೆಯಿತು….
ವಿರಾಜಪೇಟೆಯಲ್ಲಿ ಶ್ರೀ ಗುರು ಪೂಜಾ ಉತ್ಸವ
July 23, 2018ವಿರಾಜಪೇಟೆ: ದೇಶದಲ್ಲಿ ಲಕ್ಷದ ಅರವತ್ತು ಸಾವಿರ ಸೇವಾ ಚಟು ವಟಿಕೆಗಳು ಕಾರ್ಯನಿರ್ವಹಿಸುತ್ತಿದ್ದು ಸ್ವಯಂಸೇವಕ ಸಂಘಗಳು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿವೆ. ಹಿಂದೂಗಳು ನಾವೆಲ್ಲರೂ ಒಂದು ರಾಷ್ಟ್ರದ ಮಕ್ಕಳೆಂಬ ನಂಬಿಕೆಯಿಂದ ಬದುಕು ನಡೆಸುವಂತಾಗಬೇಕು ಎಂದು ಬೆಂಗಳೂರು ಸಂಸ್ಕೃತ ಭಾರತಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ದತ್ತಾ ತ್ರೇಯ ವಜ್ರಳ್ಳಿ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರಾಜಪೇಟೆ ಶಾಖೆ ವತಿಯಿಂದ ಸ್ಥಳಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ”ಶ್ರೀ ಗುರು ಪೂಜಾ ಉತ್ಸವ” ಸಭಾ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದ ದತ್ತಾತ್ರೇಯ ವಜ್ರಳ್ಳಿ ಅವರು,…
ಆ.5ರಂದು ಪತ್ರಕರ್ತರ ಸಂಘದ ಚುನಾವಣೆ
July 23, 2018ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2018-21ನೇ ಸಾಲಿನ ಆಡಳಿತ ಮಂಡಳಿ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಸಿರುವ ಸವಿತಾ ರೈ, ಚಟ್ಟಂಗಡ ರವಿ ಸುಬ್ಬಯ್ಯ, ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಜಿ.ವಿ. ರವಿ ಕುಮಾರ್ ಇವರ ನಾಮಪತ್ರ ಕ್ರಮಬದ್ಧ ವಾಗಿದೆ ಎಂದು ಚುನಾವಣಾಧಿಕಾರಿ ಚಕ್ಕೇರ ಪ್ರಮೋದ್ ಘೋಷಣೆ ಮಾಡಿದ್ದಾರೆ. ನಾಮಪತ್ರ ಹಿಂಪಡೆಯಲು ಜು.24 ರಂದು ಮಧ್ಯಾಹ್ನ 12ಗಂಟೆಗೆ ಕೊನೆಯ ದಿನವಾಗಿದ್ದು, ಆ.5ರಂದು ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಚುನಾ ವಣೆ ನಡೆಯಲಿದೆ. ಮೂರು ಕಾರ್ಯದರ್ಶಿ ಸ್ಥಾನಕ್ಕೆ…
2 ಲಕ್ಷ ಮೌಲ್ಯದ ಶ್ರೀಗಂಧ ವಶ; ಇಬ್ಬರ ಬಂಧನ
July 23, 2018ಕುಶಾಲನಗರ: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಮಾಲನ್ನು ವಶಪಡಿಸಿಕೊಂಡ ಘಟನೆ ಕೂಡ್ಲೂರು ಬಳಿ ನಡೆದಿದೆ. ಮರೂರು ಗ್ರಾಮದ ಹೆಚ್.ಡಿ.ಮಹೇಶ್, 6ನೇ ಹೊಸಕೋಟೆ ನಿವಾಸಿ ಹೆಚ್.ಎನ್. ಪ್ರಕಾಶ್ ದ್ವಿಚಕ್ರ ವಾಹನದಲ್ಲಿ (ಕೆಎ.09.ಎಚ್ಎನ್.1538) 2 ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ದೊರೆತ ಅಧಿಕಾರಿಗಳು ಆರೋಪ ಗಳನ್ನು ಬಂಧಿಸಿ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ದೊಡ್ಡಬೆಟಗೇರಿ ಗ್ರಾಮದ ಡಿ.ಎಸ್.ದೊರೆ, ಚಂದ್ರ ಅಲಿಯಾಸ್ ಗುಂಡ…
ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ, ಪ್ರಶಸ್ತಿ ಪ್ರದಾನ
July 23, 2018ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ 2017ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಹಾಗೂ ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ರಾಜ್ಯದ ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಯ ಪತ್ರಕರ್ತರು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಪತ್ರಿಕೋದ್ಯಮ ದಲ್ಲಿ ತಮ್ಮದೇ ಆದ ಛಾಪನ್ನು ಕೊಡಗಿನ ಪತ್ರಕರ್ತರು ಮೂಡಿಸಿದ್ದಾರೆ….
ಪಿಡಿಓ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ
July 23, 2018ಗೋಣಿಕೊಪ್ಪಲು: ಗ್ರಾಮಸ್ಥ ರೊಂದಿಗೆ ಸರಿಯಾಗಿ ಸ್ಪಂದಿಸದ ಪಿಡಿಒ ಶಿವನಂಜಯ್ಯ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಘಟನೆ ನಿಟ್ಟೂರು ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಯಲ್ಲಿ ನಡೆಯಿತು. ನಿಟ್ಟೂರು ಗ್ರಾಪಂ ಅಧ್ಯಕ್ಷೆ ಕಡೇಮಾಡ ಅನಿತಾ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಎಲ್ಲದಕ್ಕೂ ಹಣ ಕೇಳುತ್ತಾರೆ ಎಂಬ ಆರೋಪ ಗ್ರಾಮಸ್ಥ ರಿಂದ ವ್ಯಕ್ತವಾಯಿತು. ಇವರಿಂದ ಗ್ರಾಮದ ಅಭಿವೃದ್ಧಿ ಅಸಾಧ್ಯ, ಜನಪ್ರತಿನಿಧಿ ಹಾಗೂ ಗ್ರಾಮಸ್ಥರನ್ನು ಕಡೆಗಣಿಸಿ ಅಭಿವೃದ್ಧಿಗೆ ತೊಂದರೆ ನೀಡುತ್ತಿದ್ದಾರೆ. ಇವರನ್ನು…
ನ.1ಕ್ಕೆ ಸಿಎನ್ಸಿ ದೆಹಲಿ ಚಲೋ
July 23, 2018ಮಡಿಕೇರಿ: ಕೊಡವ ಲ್ಯಾಂಡ್ ಬೇಡಿಕೆಯೊಂದಿಗೆ ವಿವಿಧ ಹಕ್ಕುಗಳ ಈಡೇರಿಕೆಗಾಗಿ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.1 ರಂದು 24ನೇ ವರ್ಷದ ‘ದೆಹಲಿ ಚಲೋ’ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಕಾಲ ದಲ್ಲಿ ಕೊಡವರನ್ನು ಹತ್ಯೆಗೈಯಲು ದೇವಟ್ ಪರಂಬ್ ನರ ಮೇಧದಲ್ಲಿ ನೇರಭಾಗಿಯಾದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಯ ಪಾಷವೀ ಕೃತ್ಯಕ್ಕಾಗಿ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಫ್ರೆಂಚ್ ರಾಯಭಾರ ಕಛೇರಿ…
ಕುಂದು ಕೊರತೆ ನಿವಾರಣಾ ಸಭೆ
July 23, 2018ಮಡಿಕೇರಿ: ನವದೆಹಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ವತಿಯಿಂದ ರಾಜ್ಯದಲ್ಲಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯ ಕ್ಕೊಳಗಾದ ಬಗ್ಗೆ ದೂರುಗಳ ಕುರಿತು ಜುಲೈ 26 ಮತ್ತು 27 ರಂದು ಬೆಂಗಳೂರಿನಲ್ಲಿ ಕುಂದು ಕೊರತೆ ನಿವಾರಣೆ ಸಭೆ ನಡೆಯಲಿದೆ. ಆ ದಿಸೆಯಲ್ಲಿ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ತಮ್ಮ ದೂರುಗಳನ್ನು ಸಲ್ಲಿಸಲು ಜೂ.30 ರವರೆಗೆ ಅವಕಾಶ ನೀಡಿದೆ. ದೂರನ್ನು ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ ಹಕ್ಕು…