ಆ.5ರಂದು ಪತ್ರಕರ್ತರ ಸಂಘದ ಚುನಾವಣೆ
ಕೊಡಗು

ಆ.5ರಂದು ಪತ್ರಕರ್ತರ ಸಂಘದ ಚುನಾವಣೆ

July 23, 2018

ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2018-21ನೇ ಸಾಲಿನ ಆಡಳಿತ ಮಂಡಳಿ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಸಿರುವ ಸವಿತಾ ರೈ, ಚಟ್ಟಂಗಡ ರವಿ ಸುಬ್ಬಯ್ಯ, ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಜಿ.ವಿ. ರವಿ ಕುಮಾರ್ ಇವರ ನಾಮಪತ್ರ ಕ್ರಮಬದ್ಧ ವಾಗಿದೆ ಎಂದು ಚುನಾವಣಾಧಿಕಾರಿ ಚಕ್ಕೇರ ಪ್ರಮೋದ್ ಘೋಷಣೆ ಮಾಡಿದ್ದಾರೆ.

ನಾಮಪತ್ರ ಹಿಂಪಡೆಯಲು ಜು.24 ರಂದು ಮಧ್ಯಾಹ್ನ 12ಗಂಟೆಗೆ ಕೊನೆಯ ದಿನವಾಗಿದ್ದು, ಆ.5ರಂದು ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಚುನಾ ವಣೆ ನಡೆಯಲಿದೆ.

ಮೂರು ಕಾರ್ಯದರ್ಶಿ ಸ್ಥಾನಕ್ಕೆ ಜಿ.ವಿ. ರವಿ ಕುಮಾರ್, ಪಿ.ಎ.ಆನಂದ್, ಎ.ಎನ್.ವಾಸು, ಹೆಚ್.ಕೆ. ಜಗದೀಶ್ ನಾಲ್ವರು ಸ್ಪರ್ಧಿಸಿದ್ದು, ಇವರ ನಾಮಪತ್ರ ಕ್ರಮ ಬದ್ಧವಾಗಿದೆ.

ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿ ಸಿದ್ದ ವನಿತಾ ಚಂದ್ರಮೋಹನ್, ಟಿ.ಎನ್. ಮಂಜುನಾಥ್, ಟಿ.ಆರ್. ಪ್ರಭುದೇವ್ ನಾಮ ಪತ್ರ ಪರಿಶೀಲನೆ ಮುನ್ನವೇ ನಾಮ ಪತ್ರ ಹಿಂಪಡೆದರು. 15 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 17 ನಿರ್ದೇ ಶಕರ ನಾಮಪತ್ರ ಕ್ರಮಬದ್ಧವಾಗಿದೆ. ಟಿ.ಕೆ. ಸಂತೋಷ್, ಉದಯ್ ಮೊಣ್ಣಪ್ಪ, ಎಂ.ಎನ್. ನಾಸೀರ್, ಬಿ.ಜೆ.ಮಂಜು, ಆರ್.ಆರ್. ಮನೋಜ್, ಎಂ.ಮಲ್ಲಿಕಾರ್ಜುನ್, ಹೆಚ್.ಬಿ. ಯಶೋಧ, ನವೀನ್ ಸುವರ್ಣ, ಬಿ.ಡಿ. ರಾಜುರೈ, ಎಂ.ಎನ್. ಚಂದ್ರಮೋಹನ್, ಕುಡೆ ಕ್ಕಲ್ ಗಣೇಶ್, ಕುಪ್ಪಂಡ ಗಣಪತಿ ದತ್ತಾತ್ರಿ, ಚಟ್ಟಂಗಡ ರವಿ ಸುಬ್ಬುಯ್ಯ, ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಎಸ್.ಎಂ. ಮುಬಾ ರಕ್, ಚೆರಿಯಮನೆ ಕೆ. ಸುರೇಶ್, ಜೆ. ಪ್ರೇಮ್ ಕುಮಾರ್ ಇವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾ ಧಿಕಾರಿ ತಿಳಿಸಿದ್ದಾರೆ.

ಅವಿರೋಧ ಆಯ್ಕೆ : ಉಪಾಧ್ಯಕ್ಷ ಸ್ಥಾನಕ್ಕೆ ಪಳೆಯಂಡ ಪಾರ್ಥ ಚಿಣ್ಣಪ್ಪ, ಎಸ್. ಮಹೇಶ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅನು ಕಾರ್ಯಪ್ಪ, ಖಜಾಂಚಿ ಸ್ಥಾನಕ್ಕೆ ಎಂ.ಕೆ. ಅರುಣ್ ಕುಮಾರ್, ರಾಜ್ಯ ಸಮಿತಿ ಸದಸ್ಯರಾಗಿ ಎ.ಆರ್. ಕುಟ್ಟಪ್ಪ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.

Translate »