ವಿರಾಜಪೇಟೆ: ವಿರಾಜಪೇಟೆಯ ಓಕಿನವ ಯುಚಿರಿಯೋ ಕರಾಟೆ ವಿದ್ಯಾರ್ಥಿ ಗಳಿಗೆ ಕೇರಳದಲ್ಲಿ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿ ದೊರಕಿದೆ. ಓಕಿನವ ಯುಚಿರಿಯೋ ಕರಾಟೆ ಸೆನ್ಸಾಯಿ ಶಿವಪ್ಪ ಅವರ ವಿದ್ಯಾರ್ಥಿಗಳಾದ ಎಂ.ಎಂ.ಕಿಲನ್, ಚಿಂತೇಶ್ ಭೀಮಯ್ಯ, ಹಾಗೂ ಕೆ.ರಾಹುಲ್ ಅವರುಗಳಿಗೆ ಕೇರಳದ ಕೂಡಳಿಯ ಕರಾಟೆ ತರಗತಿಯ ಮುಖ್ಯ ಶಿಕ್ಷಕರಾದ ಕೆ.ವಿ.ಮನೋಹರ್ ಅವರು ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿ ನೀಡಿ ಗೌರವಿಸಿದರು.
ಗೌಳಿ ಬೀದಿ ತೋಡಿನಲ್ಲಿ ಹಳೇ ನಾಣ್ಯಗಳು ಪತ್ತೆ
July 1, 2018ಮಡಿಕೇರಿ: ನಗರದ ಕೊಹಿ ನೂರು ರಸ್ತೆಯ ಗೌಳಿಬೀದಿ ತೋಡಿನಲ್ಲಿ ಚಲಾವಣೆಯಲ್ಲಿರದ ನಾಣ್ಯಗಳು ಪತ್ತೆಯಾಗಿವೆ. ಮಾತ್ರವಲ್ಲದೇ ದೇವಾ ಲಯದ ಹುಂಡಿಗೆ ಹಾಕುವ ಬೆಳ್ಳಿಯ ನಾಗನ ಪ್ರತಿಮೆಗಳು, ದೀಪಗಳು, ಮಾನವ ರೂಪದ ಬೆಳ್ಳಿಯ ಹಾಳೆಗಳು ಹಾಗು ಅಂದಾಜು ನಾಲ್ಕು ಕೆ.ಜಿ.ಗೂ ಹೆಚ್ಚಿನ ನಾಣ್ಯ ಗಳು ಪತ್ತೆಯಾಗಿವೆ. ದೇವಾಲಯದ ಹುಂಡಿ ಕದ್ದಿರುವ ಕಳ್ಳರು ಹಣ ಮತ್ತು ಇತರ ವಸ್ತುಗಳನ್ನು ದೋಚಿ, ಬೆಳ್ಳಿಯ ಆಭರಣಗಳನ್ನು ತೋಡಿಗೆ ಎಸೆದಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ತೋಡಿನಲ್ಲಿ ಕಂಡುಬಂದಿರುವ ನಾಣ್ಯ ಮತ್ತು ಬೆಳ್ಳಿಯ ಆಭರಣಗಳು…
ದಶಕದಿಂದ ನೆನೆಗುದಿಗೆ ಬಿದ್ದಿರುವ ಮಡಿಕೇರಿ, ವಿರಾಜಪೇಟೆ ವಿದ್ಯುತ್ ಸಂಪರ್ಕ ಯೋಜನೆ
July 1, 2018ಮಡಿಕೇರಿ: ವೀರಾಜಪೇಟೆ- ಮಡಿಕೇರಿ ನಡುವಿನ ಸುಮಾರು ರೂ.7 ಕೋಟಿ ವೆಚ್ಚದ 66 ಕೆ.ವಿ.ವಿದ್ಯುತ್ ಮಾರ್ಗದ ಕಾಮಗಾರಿ ಕಳೆದ 10 ವರ್ಷದಿಂದಲೂ ಆರಂಭಗೊಂಡಿಲ್ಲ. ಕೆಪಿಟಿಸಿಎಲ್ ಅಧಿಕಾರಿ ಗಳು ನೆಪ ಹೇಳುತ್ತಾ ಕಾಲಹರಣ ಮಾಡಿ ದರೇ ಹೊರತು ಹೊಸ ಟೆಂಡರ್ ಪ್ರಕ್ರಿಯೆ ಆರಂಭಕ್ಕೆ ಇಂದಿಗೂ ಮನಸ್ಸು ಮಾಡಿಲ್ಲ. ಈ ಹಿಂದೆ ಸುಮಾರು ರೂ.6.75 ಕೋಟಿ ವೆಚ್ಚದ ವೀರಾಜಪೇಟೆಯಿಂದ ಮಡಿಕೇರಿ ವರೆಗೆ ಸುಮಾರು 172 ವಿದ್ಯುತ್ ಗೋಪುರ ನಿರ್ಮಾಣಕ್ಕೆ ‘ಶಿವಮೊಗ್ಗ ಸ್ಟೀಲ್ ಕಂಪೆನಿ’ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಗೋಪುರ ನಿರ್ಮಾಣಕ್ಕೆ ಗುತ್ತಿಗೆದಾರ…
ಟಿಪ್ಪು ನೆನಪಿಸುವ ಕುಶಾಲನಗರ ಹೆಸರು ಬದಲಾವಣೆಗೆ ಸಿಎನ್ಸಿ ಆಗ್ರಹ
June 30, 2018ಮಡಿಕೇರಿ: ‘ಟಿಪ್ಪು’ ಜನಿ ಸಿದ ಸುವಾರ್ತೆ ದೊರೆತ ಹಿನ್ನೆಲೆಯಲ್ಲಿ ಕಾವೇರಿ ನದಿತಟದಲ್ಲಿರುವ ದಂಡಿನಪೇಟೆ ಯಲ್ಲಿ ತನ್ನ ಸೇನಾ ತುಕ್ಕಡಿಯೊಂದಿಗೆ ಬೀಡು ಬಿಟ್ಟಿದ್ದ ‘ಹೈದರಾಲಿ’, ಸಂಭ್ರಮ ದಿಂದ ಆ ಪ್ರದೇಶವನ್ನು ಕುಶಾಲನಗರ ವೆಂದು ನಾಮಕರಣ ಮಾಡಿದ್ದು, “ಕುಷ್” ಎಂದರೆ ಪರ್ಷಿಯನ್ ಭಾಷೆಯಲ್ಲಿ ಸಂಭ್ರಮ ಎಂದರ್ಥ ಎಂದು ಅಭಿಪ್ರಾಯ ಪಟ್ಟಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ, ಕುಶಾಲನಗರ ಪಟ್ಟಣದ ಹೆಸ ರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತ…
ಸೆಲ್ಫಿ ತೆಗೆದುಕೊಳ್ಳುವಾಗ ಮಲ್ಲಳ್ಳಿ ಜಲಪಾತದಲ್ಲಿ ನೀರು ಪಾಲಾದ ಯುವಕನ ಶವ ವಾರದ ನಂತರ ಪತ್ತೆ
June 30, 2018ಸೋಮವಾರಪೇಟೆ: ಮಲ್ಲಳ್ಳಿ ಜಲಪಾತದಲ್ಲಿ ಕಳೆದ ಶುಕ್ರವಾರ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿಬಿದ್ದು, ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್(24)ನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಮಲ್ಲಳ್ಳಿ ಗ್ರಾಮದ ಕೃಷಿಕ ಮಲ್ಲಪ್ಪ ನೀಡಿದ ಮಾಹಿತಿಯ ನ್ವಯ, ಠಾಣಾಧಿಕಾರಿ ಎಂ.ಶಿವಣ್ಣ ನೇತೃತ್ವದ ತಂಡ ನದಿ ಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಲಪಾತದಿಂದ ಒಂದು ಕಿ.ಮೀ. ದೂರದಲ್ಲಿ ಕುಮಾರಧಾರ ನದಿಯ ಬದಿಯಲ್ಲಿ ಬಳ್ಳಿಯೊಂದಕ್ಕೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರ ತೆಗೆಯಲಾ ಗಿದೆ. ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಎರಡು ಕಿ.ಮೀ. ಕಾಲು ದಾರಿಯಲ್ಲಿ…
ಪೊಲೀಸ್ ಠಾಣೆ ಬಳಿಯೇ ಶ್ರೀಗಂಧ ಮರ ಕಳವು
June 30, 2018ಗೋಣಿಕೊಪ್ಪಲು: ಶ್ರೀಗಂಧದ ಮರವನ್ನು ಕಡಿದು ತುಂಡುಗಳನ್ನು ಕಳ್ಳತನ ಮಾಡಿರುವ ಘಟನೆ ಪಟ್ಟಣದ ಪೊಲೀಸ್ ಠಾಣೆಯ ಸಮೀಪದಲ್ಲೇ ನಡೆದಿದೆ. ಪಟ್ಟಣದ ಜ್ಯೂಸ್ ಫ್ಯಾಕ್ಟರಿ ರಸ್ತೆಯ ಸಮೀಪ ಖಾಸಗಿ ಜಾಗದಲ್ಲಿ ಗುರುವಾರ ರಾತ್ರಿ ಕಳ್ಳರು ಈ ದುಷ್ಕತ್ಯ ಎಸಗಿದ್ದಾರೆ. ಮರವನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಪ್ರಮುಖ ಬುಡವನ್ನು ಸಾಗಿಸಿದ್ದಾರೆ ಆದರೆ 2 ಮರದ ತುಂಡುಗಳನ್ನು ಸಾರ್ವಜನಿಕರು ಬಂದ ಹಿನ್ನಲೆಯಲ್ಲಿ ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಉಳಿದಿದ್ದ…
ಕಾರ್ಮಿಕರ ಶ್ರಮದಿಂದ ದೇಶದ ಬೆಳವಣಿಗೆ ನ್ಯಾಯಧೀಶ ಬಿ.ಕೆ.ಮನು ಅಭಿಮತ
June 30, 2018ವಿರಾಜಪೇಟೆ: ಯಾವುದೇ ದೇಶ ಬೆಳವಣಿಗೆಯಾಗಲು ಕಾರ್ಮಿಕರ ಶ್ರಮ ಮುಖ್ಯವಾಗಿದ್ದು ಕಾರ್ಮಿಕರು ಸಂಘಟನೆಗಳ ಮುಖಾಂತರ ಸರಕಾರ ದಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಮನು ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕಾರ್ಮಿಕರಿಗೆ ವಿಶೇಷ ಕಾನೂನು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿದ ಅವರು…
ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಸಾವು ಪ್ರಕರಣದ ತನಿಖೆ ಮುಂದುವರಿಕೆ
June 30, 2018ಮಡಿಕೇರಿ: ಕೂಡಿಗೆ ಸೈನಿಕ ಶಾಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ 9ನೇ ತರಗತಿ ವಿದ್ಯಾರ್ಥಿ ಚಿಂಗಪ್ಪ ಪ್ರಕರಣದ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಹೆಚ್ಚಿನ ತನಿಖೆ ನಡೆಯಲಿರುವುದಾಗಿ ತಿಳಿದು ಬಂದಿದೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದ ಮೃತದೇಹ ಮರಣೋತ್ತರ ಪರೀಕ್ಷೆಯ ವರದಿಯನ್ನು ಮೈಸೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಯಕ್ಕೆ ರವಾನಿಸಲಾಗಿದ್ದು, ಈ ವರದಿ ಬಂದ ಬಳಿ ಕವೇ ತನಿಖೆ ಮತ್ತಷ್ಟು ಚುರುಕು ಪಡೆಯಲಿದೆ. ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ಕ್ಯಾತೇಗೌq,À ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಈಗಾಗಲೇ ಸೈನಿಕ…
ಸಾಲ ಯೋಜನೆ ಅನುಷ್ಠಾನದಲ್ಲಿ ನಿರಾಸಕ್ತಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ, ಶಾಸಕರ ಅಸಮಾಧಾನ
June 29, 2018ಮಡಿಕೇರಿ: ಕೇಂದ್ರ ಮತ್ತು ರಾಜ್ಯ ಸರಕಾರದ ಸಾಲದ ಯೋಜನೆಗಳ ಅನುಷ್ಠಾನದಲ್ಲಿ ನಿರಾಸಕ್ತಿ ತೋರುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ ಪ್ರತಾಪಸಿಂಹ ಹಾಗೂ ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿ ಸಿದ ಅವರು ಅಸಡ್ಡೆ ತೋರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ ಸೂಚನೆ ನೀಡಿದ್ದಾರೆ. ನಗರದ ಕಾರ್ಪೋರೇಷನ್ (ಲೀಡ್) ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕ್ಗಳ ಸಾಲ ವಿತರಣೆ ಮತ್ತು…
ಕೊಡಗಿನ ಸೌಂದರ್ಯ ಸವಿಯಲು ಲಕ್ಷಾಂತರ ಪ್ರವಾಸಿಗರ ಲಗ್ಗೆ
June 29, 2018ಮಡಿಕೇರಿ: ದಕ್ಷಿಣ ಕಾಶ್ಮೀರ ಎಂದೇ ಕರೆಯಲ್ಪಡುವ,ಹಸಿರು ಸೀಮೆಯ ಕೊಡಗು ಜಿಲ್ಲೆಯ ಸೌಂದರ್ಯ ಸವಿ ಯಲು ವಾರ್ಷಿಕವಾಗಿ ಲಕ್ಷಾಂತರ ಸಂಖ್ಯೆ ಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗುಡ್ಡಗಾಡು ಹಸಿರು ಪರಿಸರ, ತಂಪು ಹವಾಗುಣ ಪ್ರವಾಸಿಗರನ್ನು ತನ್ನೆ ಡೆಗೆ ಸೆಳೆಯುವಲ್ಲಿ ಸಫಲವಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೇಗ ವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಸರಕಾರಕ್ಕೂ ಲಾಭವಾಗುತ್ತಿದೆ. 2018ರ ಜನ ವರಿಯಿಂದ ಜೂನ್ ಮೊದಲ ವಾರದ ವರೆಗೆ ಜಿಲ್ಲೆಗೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು ಅಂದಾಜು 10 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು…