ಪೊಲೀಸ್ ಠಾಣೆ ಬಳಿಯೇ ಶ್ರೀಗಂಧ ಮರ ಕಳವು
ಕೊಡಗು

ಪೊಲೀಸ್ ಠಾಣೆ ಬಳಿಯೇ ಶ್ರೀಗಂಧ ಮರ ಕಳವು

June 30, 2018

ಗೋಣಿಕೊಪ್ಪಲು:  ಶ್ರೀಗಂಧದ ಮರವನ್ನು ಕಡಿದು ತುಂಡುಗಳನ್ನು ಕಳ್ಳತನ ಮಾಡಿರುವ ಘಟನೆ ಪಟ್ಟಣದ ಪೊಲೀಸ್ ಠಾಣೆಯ ಸಮೀಪದಲ್ಲೇ ನಡೆದಿದೆ.

ಪಟ್ಟಣದ ಜ್ಯೂಸ್ ಫ್ಯಾಕ್ಟರಿ ರಸ್ತೆಯ ಸಮೀಪ ಖಾಸಗಿ ಜಾಗದಲ್ಲಿ ಗುರುವಾರ ರಾತ್ರಿ ಕಳ್ಳರು ಈ ದುಷ್ಕತ್ಯ ಎಸಗಿದ್ದಾರೆ. ಮರವನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಪ್ರಮುಖ ಬುಡವನ್ನು ಸಾಗಿಸಿದ್ದಾರೆ ಆದರೆ 2 ಮರದ ತುಂಡುಗಳನ್ನು ಸಾರ್ವಜನಿಕರು ಬಂದ ಹಿನ್ನಲೆಯಲ್ಲಿ ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಉಳಿದಿದ್ದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Translate »