ಗೋಣಿಕೊಪ್ಪಲು, ಡಿ. 30- ಪೊನ್ನಂ ಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಎ. ಡಿವಿಜóನ್ ಹಾಕಿಲೀಗ್ ಫೈನಲ್ನಲ್ಲಿ ನಾಪೋಕ್ಲು ಶಿವಾಜಿ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ಬೇಗೂರು ಈಶ್ವರ ಯೂತ್ ಕ್ಲಬ್ ತಂಡವು ಸೋಲನುಭವಿಸಿ ರನ್ನರ್ ಅಪ್ ತಂಡವಾಗಿ ಉಳಿದುಕೊಂಡಿದೆ. ಶಿವಾಜಿ ತಂಡವು ಶೂಟೌಟ್ ಮೂಲಕ 4-2 ಗೋಲುಗಳ ಗೆಲುವು ದಾಖಲಿ ಸಿತು. ಶಿವಾಜಿ ಪರ 37 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ನ್ನು ಶುಭಂ ಚಿಟ್ಯಪ್ಪ ಗೋಲಾಗಿ ಪರಿವರ್ತಿಸಿ ಮೈದಾನ ದಲ್ಲಿ ಸಂಚಲನ ಮೂಡಿಸಿದರು….
ಕಾಡಾನೆ ದಾಳಿ: ಮೂವರಿಗೆ ಗಾಯ
December 31, 2018ಮಡಿಕೇರಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದ ಪರಿಣಾಮ 3 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಭಾಗ ಮಂಡಲ ಸಮೀಪದ ಸಣ್ಣ ಪುಲಿಕೋಟು ಎಂಬಲ್ಲಿ ನಡೆದಿದೆ. ಸಣ್ಣ ಪುಲಿಕೋಟು ನಿವಾಸಿಗಳಾದ ಹರೀಶ (38), ಈರಪ್ಪ (52) ಮತ್ತು ಚೇತನ್(22) ಎಂಬುವರೇ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಎಂದಿ ನಂತೆ ತೋಟ ಕೆಲಸಕ್ಕೆ ಹೋಗಿದ್ದ ಸಂದರ್ಭ ತೋಟದ ಒಳಗಿದ್ದ 3 ಕಾಡಾನೆ ಗಳು ಏಕಾಏಕಿ ಕಾರ್ಮಿಕರ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ…
ಟಿವಿ ಕಳವು; ಮೂವರು ಆರೋಪಿಗಳ ಬಂಧನ
December 31, 2018ವಿರಾಜಪೇಟೆ: ವಿರಾಜಪೇಟೆಯ ವಿಜಯನಗರದ ನಿವಾಸಿ ಬಿ.ಎ.ಯುಸೂಫ್ ಎಂಬುವರ ತೋಟದ ಲೈನ್ ಮನೆಯಲ್ಲಿ ರಿಸಿದ್ದ ಟಿವಿಯನ್ನು ಕಳವು ಮಾಡಿ ಪಟ್ಟಣದ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿ.ಎ.ಯುಸೂಫ್ ಅವರು ಪಂಜಾರುಪೇಟೆಯ ಲೈನ್ ಮನೆಯಲ್ಲಿ ಟಿವಿ ಕಾಣದಾದಗ ಕಾರ್ಮಿಕರಾಗಿ ತೋಟದ ಕೆಲಸಕ್ಕೆ ಬರುತ್ತಿದ್ದ ಮೂವರ ಮೇಲೆ ಸಂಶಯಗೊಂಡು ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಕಾರ್ಮಿಕರಾದ ಮುಗೇಶ್, ಬಾಬು, ಸಜನ್ ಎಂಬುವರುಗಳನ್ನು ವಿಚಾರಣೆಗೊಳಪಡಿಸಿದಾಗ ಟಿವಿ ಕಳವು ಮಾಡಿ ಮಾರಾಟ…
ಪ್ರಕೃತಿ ವಿಕೋಪದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾಯ
December 30, 2018ವಿರಾಜಪೇಟೆ: ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಬೆಳೆಸಲು ಪೋಷಕರು ಅಸಕ್ತಿ ವಹಿಸಬೇಕು. ಹಾಗೂ ಮನೆಯೇ ಗ್ರಂಥಾಲಯದಂತಿರಬೇಕು. ಇದರಿಂದ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಸಹಾಯವಾಗಲಿದೆ ಎಂದು ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶು ಪಾಲ ಡಾ. ಜೆ.ಸೋಮಣ್ಣ ಹೇಳಿದರು. ವಿರಾಜಪೇಟೆ ಪ್ರಗತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲೆಯ ಪ್ರಕೃತಿ ವಿಕೋಪದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾಯಹಸ್ತ’ ಹಾಗೂ ಕ್ರೀಡಾ ದಿನಾ ಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ-ಶಿಕ್ಷಕರಿಗೆ ಮತ್ತು ಪೋಷಕರಿಗೆ ಏರ್ಪ ಡಿಸಲಾಗಿದ್ದ ಕ್ರೀಡಾ ಸ್ಪರ್ಧೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ,…
ಧನಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ
December 30, 2018ಮಡಿಕೇರಿ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿ ಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸ ಬಹುದು ಎಂದು ಡಿವೈಎಸ್ಪಿ ಸುಂದರ್ ರಾಜ್ ಕಿವಿಮಾತು ಹೇಳಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರ ದಲ್ಲಿ 30ನೇ ವರ್ಷದ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾ ರಂಭದಲ್ಲಿ ಅವರು ಮಾತನಾಡಿದರು. ಜ್ಞಾನ ಯಾರೋಬ್ಬರ ಸ್ವತ್ತಲ್ಲ, ಜ್ಞಾನದ ಸಂಪಾದನೆಯನ್ನು ಯಾರು ಕೂಡ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಾಧಿಸುವ ಛಲವಿದ್ದರೆ ಏನು ಬೇಕಾದರು ಸಾಧಿಸಬ ಹುದು. ಪೋಷಕರು ಕೂಡ ಮಕ್ಕಳ ಆಸಕ್ತಿಗೆ ಅನುಗುಣವಾಗಿ…
ಕಲರ್ ಗ್ರೇಡಿಂಗ್ ಕಾರಣಕ್ಕಾಗಿ ಕೊಡವ ಚಲನಚಿತ್ರ `ಪಾರಾಣೆ’ ಸೆನ್ಸಾರ್ ಬೋರ್ಡ್ನಿಂದ ತಿರಸ್ಕಾರ
December 29, 2018ಮಡಿಕೇರಿ: ಕೊಡವ ಚಲನಚಿತ್ರ `ಪಾರಾಣೆ’ ಹಲವಾರು ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿ ದ್ದರೂ, ಮುಂಬರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಬೆಂಗಳೂರಿನ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ (ಸಿಬಿಎಫ್ಸಿ) ಪ್ರಾದೇಶಿಕ ಕಚೇರಿ ಯಲ್ಲಿ ಐವರು ಸದಸ್ಯರು ಈ ಚಲನಚಿತ್ರ ವನ್ನು ವೀಕ್ಷಣೆ ಮಾಡಿದ್ದು, ಈ ಚಿತ್ರವು ಕಲರ್ ಗ್ರೇಡಿಂಗ್ ಹಾಗೂ ಅತೀ ಉದ್ದವಾದ ಶಾಟ್ಸ್ ಅನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಲು ನಿರಾಕರಿಸಿದೆ. ಅಘಾತಕಾರಿ ವಿಷಯವೆಂದರೆ, ಈ…
ಹಕುಪತ್ರ ನೀಡಿದ ಜಾಗ ಅತಿಕ್ರಮಣ ತೆರವಿಗೆ ಆಗ್ರಹಿಸಿ ಧರಣಿ
December 29, 2018ಗೋಣಿಕೊಪ್ಪ: ಹಕ್ಕುಪತ್ರ ನೀಡಿರುವ ಜಾಗದಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ, ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಕುಂದ ಗ್ರಾಮದ ಗಿರಿಜನ ನಿವಾಸಿಗಳು ನಡೆಸು ತ್ತಿರುವ ಅಹೋರಾತ್ರಿ ಧರಣಿ ಮೂರು ದಿನ ಪೂರೈಸಿದೆ. ಬುಡಕಟ್ಟು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೊನ್ನಂಪೇಟೆಯಲ್ಲಿರುವ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು 100 ಕ್ಕೂ ಹೆಚ್ಚು ನಿವಾಸಿ ಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಡಿಸೆಂಬರ್ 26 ರಿಂದ ಪ್ರತಿಭಟನೆಯಲ್ಲಿ ತೊಡಗಿರುವ ನಿವಾಸಿಗಳು, ಅಲ್ಲಿನ ಮೂಲಭೂತ ಸೌಕರ್ಯ ನೀಡಿ ಜೀವನ ಸಾಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. 2016…
ನಿರಾಶ್ರಿತರಿಗೆ ತ್ವರಿತವಾಗಿ ಮನೆ ನಿರ್ಮಿಸಲು ಸೂಚನೆ
December 28, 2018ಮಡಿಕೇರಿ: ಪ್ರಕೃತಿ ವಿಕೋಪದಿಂದ ಸಂಕ ಷ್ಟಕ್ಕೆ ತುತ್ತಾಗಿ ನಿರಾಶ್ರಿತರಾದ ಕುಟುಂಬಗಳಿಗೆ ತ್ವರಿತ ವಾಗಿ ಮನೆ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಮುಖ್ಯಮಂತ್ರಿಯವರು ಮನೆ ನಿರ್ಮಾ ಣಕ್ಕೆ ಚಾಲನೆ ನೀಡಿದ್ದು, ಮಾದಾಪುರ, ಕರ್ಣಂಗೇರಿ, ಸಂಪಾಜೆ, ಮದೆ ಮತ್ತಿತರ ಕಡೆಗಳಲ್ಲಿ ಗುರುತಿಸಲಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ತಂಡ ನಿಯೋಜಿಸಿ…
ಕೊಡಗಿನ ನೆರೆ ಸಂತ್ರಸ್ತರಿಗೆ ರೂ. 3.24 ಲಕ್ಷ ಸಹಾಯ ಧನ ವಿತರಣೆ
December 28, 2018ವೀರಾಜಪೇಟೆ: ವೀರಾಜಪೇಟೆ ವಿಕ್ಟೋರಿಯ ಕ್ಲಬ್ ವತಿಯಿಂದ ಇತ್ತೀಚೆಗೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ದಿಂದ ಮನೆ-ಆಸ್ತಿ ಕಳೆದುಕೊಂಡ 15 ಮಂದಿ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಯಿತು. ವಿಕ್ಟೋರಿಯಾ ಕ್ಲಬ್ ಸಭಾಂಗಣದಲ್ಲಿ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ಕ್ಯಾಟಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಪರಿಹಾರ ವಿತರಣಾ ಕಾರ್ಯಕ್ರಮ ಆಯೋ ಜಿಸಲಾಗಿತ್ತು. ಬೆಂಗಳೂರಿನ ಉದ್ಯಮಿ ಮುಕ್ಕಾಟ್ಟಿರ ಅಣ್ಣಯ್ಯ, ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಂಡೆಡ ರವಿ ಉತ್ತಪ್ಪ, ಮಾಕ್ಸ್ಮೆನ್ ಸಂಸ್ಥೆ ಅಧ್ಯಕ್ಷ ಡಾ, ಮುಕ್ಕಾಟ್ಟರ ಕಾರ್ಯಪ್ಪ ಅವರುಗಳು ಒಟ್ಟು 15 ಸಂತ್ರಸ್ತರಿಗೆ ರೂ….
ಸುಂಟಿಕೊಪ್ಪದಲ್ಲಿ ಶ್ರೀಅಯ್ಯಪ್ಪಸ್ವಾಮಿ ಮಂಡಲ ಪೂಜೆ
December 28, 2018ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವವು ಶ್ರದ್ಧಾಭಕ್ತಿ ಯಿಂದ ಭಕ್ತಾಧಿಗಳ ಸಮ್ಮು ಖದಲ್ಲಿ ನೆರವೇರಿತು. ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣವನ್ನು ತಳಿರು ತೋರಣ, ವಿವಿಧ ಬಗೆಯ ಹೂವಿನಿಂದ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜೋತ್ಸವದ ಅಂಗವಾಗಿ ಬೆಳಿಗ್ಗೆ 6.45 ಗಂಟೆಗೆ ಗಣಪತಿ ಹೋಮ, 7.30 ಗಂಟೆಗೆ ಚಂಡೆ ಮೇಳ,…










