ಕೊಡಗು

ಋಷಿಮುನಿಗಳಿಂದ ಪ್ರತಿಷ್ಠಾಪಿಸಿದ ತಲಕಾವೇರಿಯ ಶಿವಲಿಂಗ ವಿಸರ್ಜನೆಗೆ ವಿರೋಧ
ಕೊಡಗು

ಋಷಿಮುನಿಗಳಿಂದ ಪ್ರತಿಷ್ಠಾಪಿಸಿದ ತಲಕಾವೇರಿಯ ಶಿವಲಿಂಗ ವಿಸರ್ಜನೆಗೆ ವಿರೋಧ

December 27, 2018

1992ರಲ್ಲಿ ಕಾಸರಗೋಡಿನ ಪರಿಣಿತ ದೈವಜ್ಞರಾದ ವಿಷ್ಣು ಹೆಬ್ಬಾರ್ ಪೆರಿಯಾರ್ ಕೂಡ ತಾಂಬೂಲ ಪ್ರಶ್ನೆ ಮೂಲಕ ಈ ವಿಚಾರವನ್ನು ವಿಮರ್ಶಿಸಿದ್ದರು. ಈ ಪ್ರಶ್ನಾ ಚಿಂತನೆಯಲ್ಲಿ ತಿಳಿದು ಬಂದ ಅಂಶದ ಪ್ರಕಾರ “ಯಾವುದೇ ಕಾರಣಕ್ಕೂ ಅಗಸ್ತ್ಯೇಶ್ವರ ಲಿಂಗವನ್ನು ಸ್ಥಳಾಂತರಿಸಬಾರದೆಂದು” ತಿಳಿಸಲಾಗಿದೆ. ಋಷಿಮುನಿಗಳು ಪ್ರತಿಷ್ಠಾಪಿಸಿದ ವಿಗ್ರಹಗಳ ಕಣಕಣವೂ ಚೈತನ್ಯಮಯವಾಗಿರುತ್ತವೆ ಎಂದೂ ಹೇಳಲಾಗಿದೆ. ಆದರೆ 1992ರ ಸಮಗ್ರ ಅಷ್ಟಮಂಗಲ ಪ್ರಶ್ನೆಗಳನ್ನು ಕಡೆಗಣಿಸಿ, ಹಿರಿಯ ದೈವಜ್ಞರ ಸೂಚನೆಗಳನ್ನು ಕಡೆಗಣಿಸಿ 2018ರ ಅಷ್ಟಮಂಗಲದ ವಿಚಾರಗಳನ್ನು ಅನುಷ್ಠಾನಗೊಳಿಸಲು ಕೆಲವರು ಮುಂದಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಹೀಗಾಗಿ…

ವಿರಾಜಪೇಟೆ: ಏಳು ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ
ಕೊಡಗು

ವಿರಾಜಪೇಟೆ: ಏಳು ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ

December 27, 2018

ವಿರಾಜಪೇಟೆ:  ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಪಶುವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಪಟ್ಟಣದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಆರ್‍ಐ ಡಿಎಫ್ ಯೋಜನೆಯಡಿಯಲ್ಲಿ ರೂ.27. 90 ಲಕ್ಷ ಅನುದಾನದಲ್ಲಿ ಕೆಆರ್‍ಐಡಿಎಲ್ ಸಂಸ್ಥೆ ಕೈಗೆತ್ತಿಕೊಂಡಿರುವ ನೂತನ ಕಟ್ಟ ಡಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಶಾಸಕ ಬೋಪಯ್ಯ, ಈಗಾಗಲೇ ಅಮ್ಮತ್ತಿ ಮತ್ತು ಪಾಲಿಬೆಟ್ಟ ದಲ್ಲಿ ಪಶು ವೈದ್ಯಕಿಯ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ…

ದುದ್ದಗಲ್ಲು ಹೊಳೆಗೆ ಕಲುಷಿತ ನೀರು; ಕ್ರಮದ ಎಚ್ಚರಿಕೆ
ಕೊಡಗು

ದುದ್ದಗಲ್ಲು ಹೊಳೆಗೆ ಕಲುಷಿತ ನೀರು; ಕ್ರಮದ ಎಚ್ಚರಿಕೆ

December 27, 2018

ಸೋಮವಾರಪೇಟೆ:  ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನೀರು ಸರಬರಾಜು ಮಾಡುತ್ತಿರುವ ದುದ್ದಗಲ್ಲು ಹೊಳೆಗೆ ಕಾಫಿ ಪಲ್ಪಿಂಗ್ ಘಟಕದ ಕಲುಷಿತ ನೀರು ಬಿಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ಎಚ್ಚರಿಸಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಮುಖ್ಯಾಧಿಕಾರಿ, ಕಲುಷಿತ ನೀರಿನಿಂದಾಗಿ ಪಟ್ಟಣ ವ್ಯಾಪ್ತಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರು ವುದರಿಂದ ಸಂಬಂಧಿಸಿದ ಕಾಫಿ ಪಲ್ಪಿಂಗ್ ಘಟಕದ ನೀರನ್ನು ದುದ್ದಗಲ್ಲು ಹೊಳೆಗೆ ಬಿಡಬಾರದು. ಕೂಡಲೇ…

ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ ಬಗ್ಗೆ ಸಭೆ
ಕೊಡಗು

ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ ಬಗ್ಗೆ ಸಭೆ

December 27, 2018

ಮಡಿಕೇರಿ: ನೂತನ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ ಸಂಬಂಧ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಕಳೆದ ಬಾರಿಯ ಸಭೆಯಲ್ಲಿ ತೀರ್ಮಾನಿಸಿದಂತೆ ಬಸ್ ಸಂಚಾರ ಮಾರ್ಗದ ರಸ್ತೆ ಸಮೀಕ್ಷೆ ನಡೆಸಲಾಗಿದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಎಂಜಿನಿಯರ್ ವನಿತಾ ಮತ್ತು ನಗರ ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ಸರ್ವೇ ಕಾರ್ಯ ಮಾಡಲಾಗಿದೆ. ರಾಜಾ…

ಪಾದಚಾರಿ, ಸವಾರರನ್ನು ಕಾಡುತ್ತಿರುವ ಬೀಡಾಡಿ ದನಗಳು
ಕೊಡಗು

ಪಾದಚಾರಿ, ಸವಾರರನ್ನು ಕಾಡುತ್ತಿರುವ ಬೀಡಾಡಿ ದನಗಳು

December 27, 2018

ಮಡಿಕೇರಿ:  ನಗರದ ಮುಖ್ಯ ರಸ್ತೆ ಮತ್ತು ಬೀದಿಗಳಲ್ಲಿ ಬೀಡಾಡಿ ದನ ಗಳ ಹಾವಳಿ ಮಿತಿ ಮೀರಿದ್ದು, ಯಾವುದೇ ಕ್ರಮ ಕೈಗೊಳ್ಳದ ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿ ದ್ದಾರೆ. ಬೀಡಾಡಿ ದನಗಳಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ತೊಡಕಾ ಗಿದ್ದು, ಪಾದಚಾರಿಗಳು, ವಾಹನ ಸವಾ ರರು ಮತ್ತು ಪ್ರವಾಸಿಗರು ದನಗಳಿಗೆ ಹೆದರಿ ಕೊಂಡು ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಗೂಳಿಗಳ ಕಾಳಗ: ಎರಡು ಗೂಳಿಗಳ ಕಾಳಗದ ನಡುವೆ ಸಿಲುಕಿದ ವ್ಯಕ್ತಿಯೋ ರ್ವರು ಕೂದಲೆಳೆಯ ಅಂತರದಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ…

ಕೊಡವ ಸಂಸ್ಕೃತಿ ಗಟ್ಟಿತನಕ್ಕೆ ಮಂದ್ ನಮ್ಮೆ ಪೂರಕ
ಕೊಡಗು

ಕೊಡವ ಸಂಸ್ಕೃತಿ ಗಟ್ಟಿತನಕ್ಕೆ ಮಂದ್ ನಮ್ಮೆ ಪೂರಕ

December 26, 2018

ಪೊನ್ನಂಪೇಟೆ:  ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ್ದ ಸಂಸ್ಕೃತಿ ಯಿಂದ ನಾವು ಶಿಕ್ಷಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಕಂಡಿದ್ದೇವೆ. ಪೂರ್ವಜರು ನಮಗೆ ದಕ್ಕಿಸಿಕೊಟ್ಟಿರುವ ಸಂಸ್ಕೃತಿಯಿಂದ ನಮಗೆ ಗೌರವ ಸಿಗುತ್ತಿದೆ. ಅಂತಹ ಬೇರನ್ನು ಗಟ್ಟಿ ಮಾಡಬೇಕಾಗಿದೆ. ಇದನ್ನು ಉಳಿಸಿಕೊಳ್ಳಲು ಮಂದ್‍ನಂತಹ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡ ಬೇಕಾಗಿದೆ ಎಂದು ಯುಕೊ ಸಂಘ ಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು. ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾ ಸಂಸ್ಥೆಯಲ್ಲಿ 5ನೇ ವರ್ಷದ ಯುಕೊ ಮಂದ್ ನಮ್ಮೆಯ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕೊಡವರು…

ರಕ್ತದಾನ ಮಹತ್ವದ ಅರಿವು ಅಗತ್ಯ; ಕೆ.ಜಿ.ಬೋಪಯ್ಯ
ಕೊಡಗು

ರಕ್ತದಾನ ಮಹತ್ವದ ಅರಿವು ಅಗತ್ಯ; ಕೆ.ಜಿ.ಬೋಪಯ್ಯ

December 26, 2018

ಮಡಿಕೇರಿ:  ರಕ್ತದಾನದ ಮಹತ್ವ ವನ್ನು ತಿಳಿದುಕೊಳ್ಳುವ ಮೂಲಕ ಪ್ರತಿಯೊ ಬ್ಬರು ಜೀವ ರಕ್ಷಣೆಯ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ವಿರಾಜಪೇಟೆ ವಿಧಾ ನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ. ಮೇಕೇರಿ ಸರ್ಕಾರಿ ಮಾದರಿ ಪ್ರಾಥ ಮಿಕ ಶಾಲೆ ಆವರಣದಲ್ಲಿ ನಡೆದ ಸ್ವಾಗತ ಯುವಕ ಸಂಘ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಂಕಲ್ಪಸೇ ಸಿದ್ಧಿ ನವಭಾರತಕ್ಕಾಗಿ ಯುವ ಸಬಲೀಕರಣ ಮತ್ತು ರಾಷ್ಟ್ರೀಯ ಉತ್ತಮ ಆಡಳಿತ ದಿನದ ಪ್ರಯುಕ್ತ 7ನೇ ವರ್ಷದ ಗ್ರಾಮೀಣ ಮಟ್ಟದ ಸ್ವಯಂಪ್ರೇರಿತ ರಕ್ತದಾನ ಶಿಬಿರ…

ನೆರೆ ಸಂತ್ರಸ್ತರಿಗೆ ಮಣವಟ್ಟಿರ ಕುಟುಂಬದ ನೆರವು
ಕೊಡಗು

ನೆರೆ ಸಂತ್ರಸ್ತರಿಗೆ ಮಣವಟ್ಟಿರ ಕುಟುಂಬದ ನೆರವು

December 26, 2018

ಮಡಿಕೇರಿ: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯ ಆರು ಸಂತ್ರಸ್ತ ಕುಟುಂಬಗಳಿಗೆ ಮಣ ವಟ್ಟಿರ ಕುಟುಂಬಸ್ಥರು ತಲಾ 10 ಸಾವಿರ ರೂ.ಗಳಂತೆ ಒಟ್ಟು 60 ಸಾವಿರ ರೂ. ಗಳನ್ನು ನಗರದಲ್ಲಿ ವಿತರಿಸಿದರು. ಮಣವಟ್ಟಿರ ಸುಬ್ರಮಣಿ ನೀಡಿರುವ 30 ಸಾವಿರ ರೂ.ಸೇರಿದಂತೆ ಕುಟುಂಬದ ಸದಸ್ಯರಿಂದ ಸಂಗ್ರಹಿಸಿದ ಒಟ್ಟು ಮೊತ್ತ ವನ್ನು ಕೃಷ್ಣರಾವ್, ಅಲ್ಮಚಂಡ ಪ್ರಭು ಮತ್ತು ಶೈಲ, ಚೆನ್ನಪಂಡ ಸರಸು, ಅಯ್ಯಕುಟ್ಟಿರ ಪೆಮ್ಮಯ್ಯ, ಐಮುಡಿಯಂಡ ಶಾರದ ಹಾಗೂ ಮಡ್ಲಂಡ ಲವ ಅವರಿಗೆ ವಿತರಿಸಲಾಯಿತು. ಮಣವಟ್ಟಿರ ಕುಟುಂಬದ ಪ್ರಮುಖ…

ಜೂಜು ಅಡ್ಡೆ ಮೇಲೆ ದಾಳಿ: ಪ್ರತ್ಯೇಕ ಪ್ರಕರಣದಲ್ಲಿ 14 ಮಂದಿ ಬಂಧನ
ಕೊಡಗು

ಜೂಜು ಅಡ್ಡೆ ಮೇಲೆ ದಾಳಿ: ಪ್ರತ್ಯೇಕ ಪ್ರಕರಣದಲ್ಲಿ 14 ಮಂದಿ ಬಂಧನ

December 26, 2018

ವಿರಾಜಪೇಟೆ: ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಒಟ್ಟಾರೆ 14 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟದ್ದ 28 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿಸಿದ್ದಾರೆ.ವಿರಾಜಪೇಟೆ ಪಟ್ಟಣದ ಜೈನರ ಬೀದಿಯ ಮೆಸ್‍ನ ಒಂದರ ಹಿಂಬದಿಯಲ್ಲಿ ಜೂಜಾಟ ಆಡುತ್ತಿದ್ದ 12 ಮಂದಿಯನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ 8900 ರೂ.ಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದಾರೆ. ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡ ಗಿದ್ದ…

ಸೋಮವಾರಪೇಟೆಯಲ್ಲಿ ಪರಿಸರ ಅರಿವು ಮ್ಯಾರಥಾನ್
ಕೊಡಗು

ಸೋಮವಾರಪೇಟೆಯಲ್ಲಿ ಪರಿಸರ ಅರಿವು ಮ್ಯಾರಥಾನ್

December 26, 2018

ಸೋಮವಾರಪೇಟೆ: ಇಲ್ಲಿನ ಪಯೋನಿಯರ್ಸ್ ಟೆನ್ನಿಸ್ ಕ್ಲಬ್ ಆಶ್ರಯ ದಲ್ಲಿ ವಿದ್ಯಾರ್ಥಿಗಳು ಹಾಗೂ ಕ್ಲಬ್‍ನ ಸದಸ್ಯ ರಿಗೆ “ರನ್ನಿಂಗ್ ಫಾರ್ ಎ ಬೆಟರ್ ಟುಮಾರೋ” ಹೆಸರಿನ ಮ್ಯಾರಾಥಾನ್ ನಡೆಯಿತು.ಸಮೀಪದ ಬೇಳೂರು ಬಳಿಯಲ್ಲಿ ಮ್ಯಾರಾ ಥಾನ್‍ಗೆ ಕ್ಲಬ್ ಅಧ್ಯಕ್ಷ ಪಿ.ಕೆ. ರವಿ ಚಾಲನೆ ನೀಡಿದರು. ನಂತರ ಮಾತನಾಡಿ, ಪರಿಸ ರಕ್ಕೆ ಇಂದು ಸಾಕಷ್ಟು ಹಾನಿಯಾಗುತ್ತಿದ್ದು, ಮುಂದಿನ ಪೀಳಿಗೆಗೂ ಉತ್ತಮ ಪರಿಸರ ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು. ಮ್ಯಾರಥಾನ್‍ನ ಪ್ರೌಢಶಾಲಾ ವಿಭಾಗ…

1 86 87 88 89 90 187
Translate »